POLICE BHAVAN KALABURAGI

POLICE BHAVAN KALABURAGI

16 April 2012

GULBARGA DIST REPORTED CRIME

ಕಳ್ಳತನ ಪ್ರಕರಣ:

ಪರತಬಾದ ಪೊಲೀಸ್ ಠಾಣೆ: ಶ್ರೀ ತುಕ್ಕಪ್ಪಾ ತಂದೆ ಕಲ್ಲಪ್ಪ ಕಾಳನೂರ ಸಾ|| ಪರತಬಾದ ರವರು ನನ್ನ ಹೆಂಡತಿಯಾದ ಚಂದಮ್ಮ ಇವಳು ಮೂರು (3) ತಿಂಗಳ ಹಿಂದೆ ಮೃತ ಪಟ್ಟಿದ್ದರಿಂದ ಪ್ರತಿ ತಿಂಗಳಲ್ಲಿ 2 ದಿವಸ ಮನೆ ಬಿಡುವದು ಮಾಡುತ್ತಿದ್ದೇವೆ. ದಿನಾಂಕ:14-4-2012 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನಮ್ಮ ಮನೆಯರೆಲ್ಲರೂ ಕೂಡಿಕೊಂಡು ಮನೆಗೆ ಕೀಲಿ ಹಾಕಿ ಫರಹತಾಬಾದದಲ್ಲಿ ಇರುವ ನಮ್ಮ ಮಗಳು ಶಾರದಾಬಾಯಿ ಮನೆಯಲ್ಲಿ ಉಳಿದುಕೊಂಡಿರುತ್ತೇವೆ. ದಿನಾಂಕ: 16-4-2012 ರಂದು ಬೆಳಗ್ಗೆ 6-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸೊಸೆಯಾದ ಶರಣಮ್ಮ ಮತ್ತು ಮಗನಾದ ಮಹಾದೇವಪ್ಪ ಎಲ್ಲರೂ ಕೂಡಿಕೊಂಡು ಮನೆಗೆ ಹೋಗಿ ನೋಡಲಾಗಿ ಮನೆ ಬಾಗಿಲು ಕೀಲಿ ಮುರಿದಿದ್ದು ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಎರಡು ಅಲಮಾರಿಗಳು ಹಾಗೂ ಸಂದೂಕಗಳ ಕೀಲಿ ಮುರಿದಿದ್ದು ಅಲಮಾರಿಯಲ್ಲಿದ್ದ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದವು, ಅಲಮಾರಿಯಲ್ಲಿಟಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಒಟ್ಟು 97,000=00 ರೂ. ಮೌಲ್ಯದು ಯಾರೋ ಕಳ್ಳರು ಮನೆಯ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 53/2012 ಕಲಂ 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಜೂಜಾಟ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ. 15-4-2012 ರಂದು ಮಧ್ಯಾಹ್ನ ತಾಜಸುಲ್ತಾನಪೂರ ಗ್ರಾಮ ಸೀಮಾಂತರದ ರಾಜು ನಂದಗಾವ್ ಇವರ ಹೊಲದ ಬೇವಿನ ಗಿಡದ ಕೆಳಗಡೆ ಮಹೇಂದ್ರ ತಂದೆ ಆನಂದಪ್ಪಾ ಅಟ್ಟೂರ , ದರ್ಮಣ್ಣ ತಂದೆ ಮರಪ್ಪಾ ಕುಮಸಿ , ರಾಜು ತಂದೆ ಬಾಬುರಾವ ಸುಲ್ತಾನಪೂರ, ಅಂಬರಾಯ ತಂದೆ ಹಣಮಂತರಾಯ ಸುಲ್ತಾನಪೂರ, ಮತ್ತು ಶರಣಪ್ಪಾ ತಂದೆ ಪೀರಪ್ಪಾ ಸುಲ್ತಾನಪೂರ ರವರು ಅಂದರ ಬಾಹರ ಇಸ್ಪೇಟ ಆಡುತ್ತಿರುವಾಗ ಪಂಚರ ಸಮಕ್ಷಮ ಪಿ.ಎಸ.ಐ ಪ್ರದೀಪ ಕೊಳ್ಳಾ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿ ತೊಡಗಿಸಿದ ಹಣ 1935/- ರೂ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 113/2012 ಕಲಂ. 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 15-04-12 ರಂದು ಸಾಯಂಕಾಲ ಸುಮಾರಿಗೆ ಸೈಯ್ಯದ ಚಿಂಚೋಳಿ ಸೀಮೆಯಲ್ಲಿ ಬರುವ ಶರಣಪ್ಪ ಹೋಳಕುಂದಿ ಇವರ ಹೊಲದಲ್ಲಿ ಶರಣಬಸಪ್ಪಾ ತಂದೆ ನಾಗೇಂದ್ರ ಅಣಕಲ್ ಸಾ|| ಬ್ಯಾಂಕ ಕಾಲೋನಿ , ಪ್ರವೀಣ ತಂದೆ ಗಜಾನನ ಲುಮಟೆ ಸಾ|| ಶಹಾ ಬಜಾರ, ಮಹೇಶ ತಂದೆ ದತ್ತಾತ್ರೆಯ ಪಿಂಪಳೆ ಸಾ|| ಶಹಾ ಬಜಾರ, ಮಂಜು @ ಮಂಜುನಾಥ ತಂದೆ ಮಲ್ಲಣ್ಣ ಪಾಟೀಲ ಸಾ|| ಶಹಾ ಬಜಾರ , ಅವಿನಾಶ ತಂದೆ ಅಂಬದಾಸ ಸಾ|| ಶಹಾಬಜಾರ, ಪ್ರಶಾಂತ ತಂದೆ ಶರಣಪ್ಪಾ ದಂಡಪಗೊಳ, ವಿನಾಯಕ ತಂದೆ ವಿಠಲ್ ಶಾಲಗಾರ ಮತ್ತು ಕಿರಣ ತಂದೆ ಶಂಕರ ಬೇಲಿ ಸಾ|| ಶಹಾಬಜಾರ ರವರು ಅಂದರ ಬಾಹರ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಡಿ.ಎಸ್.ಪಿ.ಗ್ರಾಮಾಂತರ ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮತ್ತು ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿ.ಎಸ.ಐ ಗ್ರಾಮೀಣ ಠಾಣೆ ರವರು ಮತ್ತು ಠಾಣೆಯ ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 3070/- ರೂ. ಮತ್ತು ಇಸ್ಪೇಟ ಎಲೆಗಳು ಜಪ್ತ ಮಾಡಿಕೊಂಡಿದ್ದರ ಮೇರೆಗೆ ಠಾಣೆ ಗುನ್ನೆ ನಂ: 114/2012 ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.