POLICE BHAVAN KALABURAGI

POLICE BHAVAN KALABURAGI

13 October 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಮಾರುತಿ ತಂದೆ ಸಿದ್ದಣ್ಣ ವಿಶ್ವಕರ್ಮ ಸಾ:ಬಸವೇಶ್ವರ ನಗರ ಜೇವರ್ಗಿ ರವರು ದಿನಾಂಕ:12-10-2012 ರಂದು ಸಾಯಂಕಾಲ ನಾನು ಅಂಗಡಿಯಲ್ಲಿ ಇದ್ದಾಗ ಅಂಬರೀಶ ಇತನು ಪೋನ ಮಾಡಿ ನಿಮ್ಮ ತಮ್ಮ ಮೌನೇಶ ಗೆ ಎಕ್ಸಿಡೆಂಟ ಆಗಿದೆ ಅಂತ ತಿಳಿಸಿದ್ದರಿಂದ ಹೋಗಿ ನೋಡಿ ಅಂಬರೀಶ ಇತನಿಗೆ ಕೇಳಲಾಗಿ ನಾವು ಮದ್ಯಾಹ್ನ 3-15 ಗಂಟೆಗೆ ಸುಮಾರಿಗೆ ನಾನು ಮತ್ತು ಮೌನೇಶ ಹಾಗೂ ಶಿವಪ್ಪ ಮೂವರು ಪಾಲಿಟೆಕ್ನೀಕ ಕಾಲೇಜ ಹತ್ತಿರ ಮಾತನಾಡುತ್ತ ನಿಂತು ಕೊಂಡಾಗ ಟಿಪ್ಪರ ನಂ:ಎಮ್ ಹೆಚ್-04 ಬಿಯು-6870 ನೇದ್ದರ ಚಾಲಕ ಶಂಕರ ಇತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಮೌನೇಶ ಇತನಿಗೆ ಡಿಕ್ಕಿ ಪಡಿಸಿದನು ಡಿಕ್ಕಿ ಪಡಿಸಿದ ರಭಸಕ್ಕೆ ಸ್ಥಳದಲ್ಲಿಯೇ ಮೃತ ಪಟ್ಟಿದನು. ಅಂಬರೀಶ ಹಾಗೂ ಶಿವಪ್ಪ ಇವರುಗಳಿಗೆ ಗಾಯ ಪೆಟ್ಟುಗಳು ಆಗಿದ್ದವು, ಕಾರಣ ಟಿಪ್ಪರ ಚಾಲಕ ಶಂಕರ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:154/2012 ಕಲಂ 279, 337, 338, 304 (ಎ) ಐ.ಪಿ.ಸಿ. ಸಂಗಡ  187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.