POLICE BHAVAN KALABURAGI

POLICE BHAVAN KALABURAGI

17 August 2015

Kalaburagi District Reported Crimes

ನಿಂಬರ್ಗಾ ಪೊಲೀಸ ಠಾಣೆ : ದಿನಾಂಕ 17/08/2015 ರಂದು 1600 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಣವೀರಪ್ಪ ತಂದೆ ಮಹಾದೇವಪ್ಪ ಉಮದಿ ವ|| 35 ವರ್ಷ, ಜಾ|| ಲಿಂಗಾಯತ|| ಡ್ರೈವರ ಕೆಲಸ, ಸಾ|| ಮಾಡಿಯಾಳ ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ನನಗೆ 2001 ರಲ್ಲಿ ಅತನೂರ ಗ್ರಾಮದ ಸಿದ್ದಾರಾಮ ತಂದೆ ವೀರುಪಾಕ್ಷಪ್ಪ ಬಳೂರ್ಗಿ ಇವರ ಮಗಳಾದ ಶೋಭಾ ಇವಳೊಂದಿಗೆ ವಿವಾಹವಾಗಿರುತ್ತದೆ. ನಮ್ಮಿಬ್ಬರಿಗೂ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳಿದ್ದು ಕೊನೆಯ ಮಗು ಮೇಘಾಶ್ರೀ ಇವಳು ಜನಿಸಿ 3 ವರ್ಷಗಳಾಗಿದ್ದು, ಮೇಘಾಶ್ರೀ ಹುಟ್ಟಿದ 2-3 ತಿಂಗಳ ನಂತರ ನನ್ನ ಹೆಂಡತಿಯು ಮಾನಸಿಕವಾಗಿ ಅಶ್ವಸ್ಥಳಂತೆ ವರ್ತಿಸುತ್ತಿದ್ದು, ಮಾತು ಬಿಟ್ಟು ಮಾತನಾಡುವದು, ಯಾವುದೊ ಒಂದು ವಿಷಯ ತಲೆಯಲ್ಲಿಟ್ಟುಕೊಂಡು ದಿನಾಲೂ ನನ್ನೊಂದಿಗೆ ಮತ್ತು ನನ್ನ ಮನೆಯವರೊಂದಿಗೆ ರೇಗಾಡುವದು ಮಾಡುತ್ತಿದ್ದಳು ಊರಲ್ಲಿ ನನ್ನ ಮಗಳಾದ ಮೇಘಾಶ್ರೀ ಇವಳನ್ನು ಹೊತ್ತುಕೊಂಡು ತಿರುಗಾಡುವದು, ತನಗೆ ಹಸಿವಾದಾಗ ಹೊಟೇಲ ಹತ್ತಿರ ಅವರಿವರ ಹತ್ತಿರ ಬೇಡಿ ಊಟ ಮಾಡುತ್ತಿದ್ದಳು, ಅವಳಿಗೆ ತಾನು ಏನು ಮಾಡುತ್ತಿದ್ದೇನೆ ಅನ್ನುವದರ ಬಗ್ಗೆ ಅರಿವು ಇರುತ್ತಿರಲಿಲ್ಲ, ಇದರ ಬಗ್ಗೆ ನಾನು , ನನ್ನ ಹೆಂಡತಿಯ ತವರು ಮನೆಯವರು ಕೂಡಿಕೊಂಡು ಧಾರವಾಡ, ಕಲಬುರಗಿ, ಪುಣೆಯ ಮಾನಸಿಕ ಆಸ್ಪತ್ರೆಗಳಿಗೆ ತೋರಿಸಿರುತ್ತೇವೆ ಆದರೂ ಸಹ ಪ್ರಯೋಜನವಾಗಿಲ್ಲ, ಅವಳಿಗೆ ನಾವೆಲ್ಲರೂ ಒಂದು ಮಗುವಿನಂತೆ ಸಂಬಾಳಿಸುತ್ತಾ ಬಂದಿರುತ್ತೇವೆ. ತಾನೋಬ್ಬಳೆ ಯಾರಿಗೂ ಹೇಳದೆ ಕೇಳದೆ ಮಗುವನ್ನು ತೆಗೆದುಕೊಂಡು ಹೋಗುವದು ಮತ್ತೆ 2-3 ದಿವಸಗಳ ನಂತರ ಮರಳಿ ಮನೆಗೆ ಬರುವದು ಮಾಡುತ್ತಾ ಬಂದಿರುತ್ತಾಳೆ. ಇದರ ಬಗ್ಗೆ ನಾವು ಅಷ್ಟೊಂದ್ದು ತಲೆ ಕೆಡಿಸಿಕೊಂಡಿರುವದಿಲ್ಲ, ಆದರೆ ದಿನಾಂಕ 16/06/2015 ರಂದು ಅಂದಾಜ ಮಧ್ಯಾಹ್ನ 0200 ಪಿ.ಎಮಕ್ಕೆ ಮಗಳಾದ ಮೇಘಶ್ರೀ ಇವಳೊಂದಿಗೆ ನನ್ನ ಹೆಂಡತಿಯಾದ ಶೋಭಾ ಇವಳು ಮನೆಯಿಂದ ಹೊರಗಡೆ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ದಿನಾಂಕ 16/06/2015 ರಿಂದ ಇಲ್ಲಿಯತನಕ ನಾವು ಅತನೂರ, ಕಲಬುರಗಿ, ಅಕ್ಕಲಕೋಟ,ಸೊಲ್ಲಾಪೂರ,ಶಹಾಪೂರ, ಆಳಂದ, ಉಮ್ಮರ್ಗಾ, ಸೇಡಂ ಅಫಜಲಪೂರ, ವಿಜಯಪೂರ ಹೀಗೆ ಅನೇಕ ಕಡೆ ತಿರುಗಾಡಿ ಹುಡುಕಲಾಗಿ ನನ್ನ ಹೆಂಡತಿ ಮತ್ತು ಮಗು ಸಿಕ್ಕಿರುವದಿಲ್ಲ ಕಾಣೆಯಾಗಿರುತ್ತಾರೆ. ನನ್ನ ಹೆಂಡತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಅವಳಿಗೆ ತಿಳಿಯದೆ ದಾರಿ ತಪ್ಪಿ ಎಲ್ಲೊ ಹೋಗಿ ಕಾಣೆಯಾಗಿರುತ್ತಾಳೆ. ನನ್ನ ಹೆಂಡತಿ ಮತ್ತು ಮಗಳನ್ನು ಯಾರು ಅಪಹರಣ ವಗೈರೆ ಮಾಡಿರುವದಿಲ್ಲ, ಕಾರಣ ಕಾಣೆಯಾದ ಹೆಂಡತಿ ಮತ್ತು ಮಗಳನ್ನು ಪತ್ತೆ ಹಚ್ಚಿ ಕೊಡಲು ವಿನಂತಿ ಅಂತ ಕೊಟ್ಟ ಲೀಖಿತ ಫಿರ್ಯಾದಿ ಸಾರಾಂಶದ ಮೇಲಿಂದ  ನಿಂಬರ್ಗಾ ಪೊಲೀಸ್ ಠಾಣೆಯ ಗುನ್ನೆ ನಂ 97/2015 ಕಲಂ ಮಹಿಳೆ ಮತ್ತು ಮಗು ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. 

Kalaburagi District Reported Crimes.

ಗ್ರಾಮೀಣ ಪೊಲೀಸ್ ಠಾಣೆ : ದಿನಾಂಕ: 16/08/2015 ರಂದು ಅರ್ಜಿದಾರರು 11-30 ಪಿ.ಎಮ್ ಕ್ಕೆ ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ದೂರಿನ ಸಾರಾಂಶವೆನೆಂದರೆ, ಇಂದು ರಾತ್ರಿ 10-00 ಗಂಟೆ ಸುಮಾರಿಗೆ ಅರ್ಜಿದಾರನು ತನ್ನ ಮಾವನಿಗೆ ಊಟ ಕೊಡುವ ಸಂಬಂಧ ಮನೆಯಿಂದ ಹೊರಟು ರಾಮನಗರ ಕ್ರಾಸಗೆ ಬಂದು ಆದರ್ಶ ನಗರಕ್ಕೆ ಹೋಗುವ ಸಂಬಂಧ ಆಟೋದಲ್ಲಿ ಹೋಗುವಾಗ ಆಟೋದಲ್ಲಿದ್ದ 4 ಜನ ಅಪರಿಚಿತ 22 ರಿಂದ 28 ವಯಸ್ಸಿನವರು ಆದರ್ಶನಗರಕ್ಕೆ ತೆಗೆದುಕೊಂಡು ಹೋಗದೇ ಕಪನೂರದ ಮಾಸಪ್ತಿ ದರ್ಗಾದ ಯೂಟರ್ನದಲ್ಲಿ 10-15 ಪಿಎಮ್ ಕ್ಕೆ ಒಯ್ದು ಅವನ ಹತ್ತಿರ ಇದ್ದ 2000/-ರೂ ನಗದು ಹಣ ಹಾಗೂ ಒಂದು ವಾಯ್ ಎಕ್ಸಟೆಲ್ ಮೋಬೈಲ್ ಅ.ಕಿ= 1800/-ರೂ ಹೀಗೆ ಒಟ್ಟು 3800/-ರೂ ಕಿಮ್ಮತ್ತಿನದ್ದನ್ನು ಚಾಕು ತೋರಿಸಿ ಕೈಯಿಂದ ಹೊಡೆದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆಂತ ವಗೈರೆ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 323/15 ಕಲಂ 392ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಚೌಕ ಪೊಲೀಸ್ ಠಾಣೆ : ದಿನಾಂಕ 16/08/2015 ರಂದು 19-45 ಪಿ.ಎಂ.ಕ್ಕೆ ಮಾನ್ಯ ಪಿ.ಐ ಚೌಕ ರವರು ಜ್ಞಾಪನಾ ಪತ್ರದ ಮೂಲಕ 4 ಜನ ಇಸ್ಟೇಟ ಜೂಜಾಟ ನಿರತ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆ ಮುದ್ದೆ ಮಾಲು ಹಾಜರ ಪಡಿಸಿದ್ದು  ಸಂಕ್ಷಿಪ್ರ ಸಾರಾಂಶವೆನೆಂದರೆ ದಿನಾಂಕ 16.08.2015 ರಂದು ಸಾಯಂಕಾಲ 17-30 ಪಿ.ಎಂ.ಕ್ಕೆ ನಾನು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಠಾಣಾ ವ್ಯಾಪ್ತಿಯ ಶಿವಾಜಿ ನಗರದ ಶಿವಲಿಂಗೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಧೈವಲೀಲೆ (ನಶೀಬಿನ) ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು, ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಉಭಯ  ಪಂಚರಾದ 1) ಅಜರ್ುನ ತಂದೆ ಮಾಣಿಕಪ್ಪ ಮಕ್ಕಳಕರ ವ: 32 ಉ: ಗುತ್ತೆದಾರ ಜಾತಿ: ವಡ್ಡರ ಸಾ: ಪ್ಲಾಟ ನಂ. 222 ಗಾರ್ಡನ ಖುಲ್ಲಾ ಜಾಗೆಯ ಹತ್ತಿರ ಜಿಡಿಎ ಕಾಲೋನಿ ಶಹಾಬಜಾರ ಕಲಬುರಗಿ 2) ಬಲರಾಜ ತಂದೆ ಕರಣಪ್ರಸಾದ ತಿವಾರಿ ವ: 42 ಉ: ವ್ಯಾಪಾರ ಜಾತಿ: ಮರಾಠ ಸಾ: ಮನೆ ನಂ. 9-284 ನಿಯರ ಪಂಚಮುಖಿ ಹನುಮಾನ ಗುಡಿಯ ಹತ್ತಿರ ಶಹಾಬಜಾರ ಕಲಬುರಗಿ ರವರನ್ನು ಬರಮಾಡಿಕೊಂಡು ಅವರು ಬಂದ ನಂತರ ನಾವು ಮಾಡುವ ದಾಳಿಯ ಕಾಲಕ್ಕೆ ಹಾಜರ ಇದ್ದು ಪಂಚನಾಮೆ ಬರೆಸಿಕೊಡಲು ವಿನಂತಿಸಿಕೊಂಡು ಅವರು ಒಪ್ಪಿಕೊಂಡಿದ್ದು ನಂತರ ಪಂಚರು ನಾನು ಮತ್ತು ಸಿಬ್ಬಂದಿ ಜನರಾದ ಬಂದೇನವಾಜ ಪಿಸಿ 429, ಕರಣಸಿಂಗ ಪಿಸಿ 422, ಪ್ರಕಾಶ ಪಿಸಿ 1132, ಕೂಡಿಕೊಂಡು ಠಾಣೆಗೆ ಒದಗಿಸಿ ಜೀಪ ನಂ ಕೆಎ-32-ಜಿ-639 ನೇದ್ದರಲ್ಲಿ ಕುಳಿತು 17-45 ಪಿ.ಎಂ.ಕ್ಕೆ ಠಾಣೆಯಿಂದ ಹೊರೆಟ್ಟು ಶಿವಾಜಿ ನಗರದ ಶಿವಲಿಂಗೇಶ್ವರ ಗುಡಿಯ ಹತ್ತಿರ ಸಾಯಂಕಾಲ 18-15 ಪಿ.ಎಂ.ಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲು ಶಿವಾಜಿ ನಗರದ ಶಿವಲಿಂಗೇಶ್ವರ ಗುಡಿಯ ಹತ್ತಿರ ಖುಲ್ಲಾ ಬಯಲು ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ 4 ಜನರು ಗುಂಪಾಗಿ ಕುಳಿತ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜೂಜಾಟ ನಿರತರ ಮೇಲೆ ದಾಳಿಮಾಡಿ ಅವರನ್ನು ಹಿಡಿದುಕೊಂಡು ವಿಚಾರಿಸಲು 1) ಈರಣ್ಣಾ ತಂದೆ ಮಲ್ಲೇಶಿ ಪೂಜಾರಿ ವ ಯಃ 45 ವರ್ಷ ಉಃ ಟೇಲರ ಕೆಲಸ ಜಾಃ ಕುರಬ ಸಾಃ ಶಿವಲಿಂಗೇಶ್ವರ ಗುಡಿಯ ಹತ್ತಿರ ಶಿವಾಜಿ ನಗರ ಕಲಬುರಗಿ  ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 2300 ರೂ. ನಗದು ಹಣ, 20 ಇಸ್ಪೇಟ ಎಲೆಗಳು ದೊರೆತಿದ್ದು 2) ರವಿ ತಂದೆ ದೇವಿಂದ್ರಪ್ಪ ಬೂಸನೂರ ವಯಃ 38 ವರ್ಷ ಉಃ ಅಟೋ ಚಾಲಕ ಜಾಃ ಲಿಂಗಾಯಿತ ಉಃ ಲಕ್ಷ್ಮೀ ಗುಡಿ ಹತ್ತಿರ ಶಿವಾಜಿ ನಗರ ಕಲಬುರಗಿಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1100 ರೂ. ನಗದು ಹಣ, 25 ಇಸ್ಪೇಟ ಎಲೆಗಳು ದೊರೆತಿದ್ದು 3) ಸಂತೋಷ ತಂದೆ ರಾಮಚಂದ್ರ ಜಿಂಗಾಡೆ  ವ: 34 ಉ: ಅಟೋ ಚಾಲಕ  ಜಾತಿ: ಕ್ಷತ್ರೀಯ  ಸಾ: ಶಿವಲಿಂಗೇಶ್ವರ ಗುಡಿ ಹತ್ತಿರ ಶಿವಾಜಿ ನಗರ  ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1500 ರೂ. ನಗದು ಹಣ ದೊರೆತಿದ್ದು 4) ಶರಣಪ್ಪ ತಂದೆ ಕಾಶಿರಾಯ ಟೆಂಗಳಿ ವಯಃ 40 ವರ್ಷ ಉಃ ವ್ಯಾಪರ ಜಾಃ ಲಿಂಗಾಯಿತ ಸಃ ಓಂ ನಗರ ಸೇಡಂ ರೋಡ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗ ಶೋಧನೆ ಮಾಡಲು ಸದರಿಯವನ ಹತ್ತಿರ 1200 ರೂ. ನಗದು ಹಣ ದೊರೆತಿದ್ದು ಸ್ಥಳದಲ್ಲಿ ನಗದು ಹಣ 950 ರೂಪಾಯಿ, 7 ಎಲೆಗಳು ಹೀಗೆ ಒಟ್ಟು ಹಣ 7,050 ರೂ. ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ 18-15 ಪಿ.ಎಂ.ದಿಂದ 19-15 ಪಿ.ಎಂ.ದ ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿ ಮಾಡಿದ ಮುದ್ದೇಮಾಲಿಗೆ ಪಂಚರು ಸಹಿಮಾಡಿದ ಚೀಟಿ ಅಂಟಿಸಿ ಕೇಸಿನ ಸಾಕ್ಷಿ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ ಆರೋಪಿತರನ್ನು ಠಾಣೆಗೆ 19-45 ಪಿ.ಎಂ.ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸುತ್ತಿದ್ದು ಸದರಿಯವರ ವಿರುಧ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಆದೇಶದಂತೆ ಠಾಣೆ ಗುನ್ನೆ ನಂ. 133/2015 ಕಲಂ. 87 ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ: 16.08.2015 ರಂದು  ರಂದು 2.30 ಪಿ.ಎಮ್. ಕ್ಕೆ ಫಿರ್ಯಾದಿದಾರ ಶ್ರೀ ಸಂದೀಪ ತಂದೆ  ಬಾಲಕೃಷ್ನಾ  ಸಾಃ ಚಾಂದಬಡಾ  ಶಹಾಬಾದ ರವರು  ಠಾಣೆಗೆ ಹಾಜರಾಗಿ  ಒಂದು  ಕಂಪ್ಯೂಟರ ಮಾಡಿಸಿದ  ಅರ್ಜಿ ಹಾಜರುಪಡಿಸಿದ್ದು ಸಾರಂಶವೆನೆಂದರೆ, ನನ್ನದ್ದು ಶಹಾಬಾದ ಪಟ್ಟಣದ ಮಜ್ಜಿದ ಚೌಕ ಹತ್ತಿರ ಬೆಂಗಳೂರ ಅಯ್ಯಂಗಾರ ಬೇಕರಿ ಇದ್ದು ನನ್ನ ಹತ್ತಿರ ಲಕ್ಷ್ಮಿ ಗಂಡ ಚಂದ್ರಕಾಂತ ಸನಾದಿ ವಯಾ: 35 ವರ್ಷ ಜಾ: ಹೊಲೇಯ ಸಾ: ಮಿಲತ ನಗರ ಶಹಾಬಾದ ಇವರು  ಸುಮಾರು ಎರಡು ವರ್ಷಗಳಿಂದ ನನ್ನ ಬೇಕರೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಇರುತ್ತಾರೆ. ಅವರಂತೆ ಬೇಕರಿಯಲ್ಲಿ ರಾಹುಲ ಇತನು ಕೆಲಸ ಮಾಡಿಕೊಂಡು ಇರುತ್ತಾನೆ.  ಹೀಗಿದ್ದು ದಿನಾಂಕ: 15/08/2015 ರಂದು ಪ್ರತಿ ದಿನದಂತೆ ಮುಂಜಾನೆ ಬೇಕರಿ ಅಂಗಡಿಯನ್ನು ನಾನು ತೆಗೆದಿದ್ದು ಕೆಲಸಕ್ಕಾಗಿ ಪ್ರತಿದಿನದಂತೆ ಶ್ರೀಮತಿ ಲಕ್ಷ್ಮಿ ಹಾಗೂ ರಾಹುಲು ಇವರುಗಳು ಕೆಲಸಕ್ಕೆ ಬಂದು ಕೆಲಸ ಮಾಡುತ್ತಿದ್ದಾಗ ಮದ್ಯಾಹ್ನ ನಾನು ಊಟಕ್ಕೆ ಮನೆಗೆ ಹೋಗಿದಾಗ ಲಕ್ಷ್ಮಿ ಮತ್ತು ರಾಹುಲ ಇಬ್ಬರು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಇದ್ದರು. ನಾನು ಮರಳಿ ಮದ್ಯಾಹ್ನ 3-30 ಗಂಟೆಗೆ ನಾನು ಅಂಗಡಿಗೆ ಬಂದಾಗ ಅಂಗಡಿಯ ಮುಂದೆ ಸುಮಾರು ಜನರು ಸೇರಿದ್ದು ನೋಡಿ ಲಕ್ಷ್ಮಿ ಕೈಗೆ ರಕ್ತಗಾಯಾವಾಗಿದ್ದು ನೋಡಿ ವಿಚಾರಿಸಲಾಗಿ.  ಅವಳು ತಿಳಿಸಿದ್ದೇನೆಂದರೆ  ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ  ಮದ್ಯಾಹ್ನ 3-00 ಗಂಟೆಗೆಯ ಸುಮಾರಿಗೆ ಬೇಕರಿ ಅಂಗಡಿಯ ಎದುರುಗಡೆ ಇದ್ದ ಚಹಾ ಹೊಟೇಲದಲ್ಲಿ ಕೆಲಸ ಮಾಡುವ ಮಹ್ಮದ ಗೌಸ  ಇತನು ಬೇಕರಿ ಅಂಗಡಿಗೆ ಬಂದು ಒಂದು ತತ್ತಿ ಸಮೋಸ (Egg Pops )  ಕೇಳಿದ್ದು ನಾನು ಅವನಿಗೆ ಒಂದು ತತ್ತಿ ಸಮೋಸ ಕೊಟ್ಟಿದ್ದು ಅವನು ಅದಕ್ಕೆ ಸಾಸ ಕೊಡು ಅಂತಾ ಕೇಳಿದನು ನಾನು ಸಾಸ ಕೂಡ ಕೊಟ್ಟಿದ್ದು ನಂತರ ಅವನು ನನಗೆ ಸಮೋಸ ಕೈಯಿಂದ ಬಾಯಿಯಲ್ಲಿ ಇಡು ಅಂತಾ ಅಂದಿದಕ್ಕೆ ನಾನು ನಾನೇಕೆ ಇಡಲಿ ಬೇಕಾದರೆ ತಿನ್ನು ಇಲ್ಲದಿದ್ದರೆ ಹೋಗು ಅಂತಾ ಅಂದಿದಕ್ಕೆ ಅವನು ಒಮ್ಮೇಲೆ ಸಿಟ್ಟಿಗೆ ಬಂದು ನನ್ನಗೆ ನಿನಗೆ ಸೊಕ್ಕು ಬಂದಿದೆ ನನಗೆ ಸಮೋಸ ಬಾಯಿಯಲ್ಲಿ ಇಡು ಅಂದರೆ ಇಡುವುದಿಲ್ಲಾ ಅಂತಾ ಅಂದವನೆ ಕೌಂಟರ ಮೇಲೆ ಇದ್ದ ಚಾಕು ತೆಗೆದುಕೊಂಡು ನನ್ನ ಬಲ ಕೈಗೆ ಹಸ್ತದ ಹತ್ತಿರ ಹೊಡೆದು ರಕ್ತಗಾಯಾ ಮಾಡಿದನು ನಂತರ ನಾನು ಕೌಂಟರದಿಂದ ಹೊರಗೆ ಬಂದು ಯಾಕೆ ಹೊಡೆಯುತ್ತಿ ಅಂತಾ ಕೇಳಿದಕ್ಕೆ ಅವನು ನನಗೆ ಧೇಡ್ ರಾಂಡ ಮೇರೆಕೊ ಉಲ್ಟಾ ಬಾತ್ ಕರೆತೆ ಅಂತಾ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಗುಪ್ತಗಾಯಾ ಪಡಿಸಿರುತ್ತಾನೆ. ಆಗ ಅಲ್ಲೆ ಅಂಗಡಿಯ ಒಳಗಡೆ ಇದ್ದ ರಾಹುಲ ಮತ್ತ ಅಲ್ಲಿಯೇ ಇದ್ದ ವಿಠಲ ಚೌದರಿ ರವರು ಜಗಳ  ನೋಡಿ ನನಗೆ ಹೊಡೆಯುದನ್ನು ಬಿಡಿಸಿರುತ್ತಾರೆ. ಸದರಿ ಮಹ್ಮದ ಗೌಸ ಇತನು ನನಗೆ ಸಮೋಸ ತ್ತಿನ್ನುವ ವಿಷಯದಲ್ಲಿ ವಿನಾ: ಕಾರಣ ಜಗಳ ತೆಗೆದು ಅವಾಚ್ಯವಾಗಿ ಬೈದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನ  ಮಾಡಿರುತ್ತಾನೆ ಅಂತಾ ತಿಳಿಸಿರುತ್ತಾರೆ.  ನಾನು ಜಗಳದ ವಿಷಯವನ್ನು ಲಕ್ಷ್ಮಿ ಇವರ ಸಂಬಂಧಿಕರಿಗೆ ವಿಚಾರಿಸಿಕೊಂಡು ಪಿರ್ಯಾದಿ ನೀಡಲು ತಡವಾಗಿರುತ್ತದೆ. ಕಾರಣ ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಲಕ್ಷ್ಮಿ ಗಂಡ ಚಂದ್ರಕಾತ ಸನಾದಿ ಜಾ:ಹೊಲೇಯ ಸಾ: ಮಿಲತ ನಗರ ಶಹಾಬಾದ ಇವರಿಗೆ ಸಮೋಸ ತಿನ್ನುವ ವಿಷಯದಲ್ಲಿ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹೊಡೆದು ಕಾಲಿನಿಂದ ಒದ್ದು ಕೊಲೆ ಮಾಡಲು ಪ್ರಯತ್ನಿಸಿದ ಮಹ್ಮದ ಗೌಸ ಇತನ ವಿರುದ್ದ  ಸೂಕ್ತ ಕಾನೂನು ಕ್ರಮ ಜರುಗಿಸಿ   ಲಕ್ಷ್ಮಿ ಇವರಿಗೆ ಉಪಚಾರಕ್ಕಾಗಿ ಆಸ್ಪತ್ರೆಗೆ ಕಳುಹಿಸಿ ಕೊಡಬೇಕು  ಅಂತಾ ವಿನಂತಿ ಇರುತ್ತದೆ. ಅಂತಾ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ 120/2015 ಕಲಂ 323, 324, 504, 354, 307, ಐಪಿಸಿ ಮತ್ತು  ಕಲಂ 3( I )( X ), 3( 2 )(V), 3(XI) ಎಸ್.ಸಿ/ಎಸ್.ಸಿ. ಪಿ.ಎ  ಯಾಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮಹಾಗಾಂವ ಪೊಲೀಸ ಠಾಣೆ : ಇಂದು ದಿನಾಂಕ:16/08/2015 ರಂದು ಮದ್ಯಾಹ್ನ 03-00 ಗಂಟೆಗೆ ಬಸವೇಶ್ವರ ಆಸ್ಪತ್ರೆಯಿಂದ ಲಲೀತಾಬಾಯಿ ಗಂಡ ಲಕ್ಷ್ಮಣ ಸಾ:ಮಹಾಗಾಂವ ತಾಂಡಾ ಎಂಬುವವರು ವಾಹನ ಅಪಘಾತದಿಂದ ದು:ಖಪತ ಹೊಂದಿ ಉಪಚಾರ ಕುರಿತು ಸೇರಿಕೆಯಾದ ಬಗ್ಗೆ ಎಮ್.ಎಲ್.ಸಿ ವಸೂಲಾಗಿರುತ್ತದೆ ಅಂತಾ ತಿಳಿಸಿದ ಕೂಡಲೇ ಸಿಬ್ಬಂದಿಯವರೊಂದಿಗೆ ಕೂಡಲೇ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫೀರ್ಯಾದಿ ಶ್ರೀಮತಿ ಲಲೀತಾಬಾಯಿ ಗಂಡ ಲಕ್ಷ್ಮಣ ರಾಠೋಡ ವಯ-35 ವರ್ಷ ಜಾ-ಲಂಬಾಣಿ ಸಾ:ಮಹಾಗಾಂವ ತಾಂಡಾ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು ಸದರಿಯವರು ತಮ್ಮ ಹೇಳಿಕೆಯಲ್ಲಿ ಇಂದು ದಿನಾಮಕ:16/08/2015 ರಂದು ಮದ್ಯಾಹ್ನ 01-15 ಗಂಟೆ ಸುಮಾರಿಗೆ ತಾನು ಮನೆ ಸಾಮಾನುಗಳನ್ನು ಖರೀದಿ ಮಾಡುವಗೊಸ್ಕರ ಕಮಲಾಪೂರಕ್ಕೆ ಹೋಗುವ ಕುರಿತು ಅಳಂದ ತಾಲೂಕಿನ ಮುರಡಿಯಿಂದ ಮಹಾಗಾಂವ ಕ್ರಾಸ್ ಕಡೆಗೆ ಹೊರಟ ಕಮಾಂಡರ್ ಜೀಪ್ ನಂ:ಕೆಎ-32-ಎಮ್-7786 ನೇದ್ದರಲ್ಲಿ ಕುಳಿತು ಹೋರಟಾಗ ತಹಶಿಲ್ದಾರ ತೋಟದ ಎದುರಿನ ರಸ್ತೆಯಲ್ಲಿ ಬರುತ್ತಿರುವಾಗ ಸದರಿ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ಒಮ್ಮೇಲ್ಲೇ ಬ್ರೇಕ್ ಹೊಡೆದಿದ್ದರಿಂದ ವಾಹನ ನಿಯಂತ್ರಣ ತಪ್ಪಿ ವಾಹನವು ರಸ್ತೆಯಿಂದ ಕೆಳಗಿಳಿದು ಅಂದುಜು 30-40 ಮೀಟರ್ ಚಲಿಸಿ ಮುಂದೆ ಪಲ್ಟಿಯಾಗಿದ್ದರಿಂದ ಜೀಪಿನಲ್ಲಿದ್ದ ಒಬ್ಬ ಮಹಿಳೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು ನನಗು ಎಡಗೈ ಮೊಳಕೈ ಹತ್ತಿರ ರಕ್ತ ಗಾಯ, ಬಲಗೈ, ಹೊಟ್ಟೆ ಹತ್ತಿರ, ಎರಡು ಮೋಳಕೈ ಹತ್ತಿರ ತರಚಿದ ಗಾಯಗಳಾಗಿದ್ದು ಇನ್ನುಳಿದ ಪ್ರಯಾಣಿಕರಿಗು ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಉಪಚಾರ ಕುರಿತು ತನಗೆ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆ ಹೆಸರು ಜೈನಾಬಿ ಗಂಡ ಖಾಜಾ ಪಟೇಲ್ ಮುಲ್ಲಾ ಸಾ:ಇಲ್ಲಾಳ ಹಾ.ವ:ಮುರಡಿ ಅಂತಾ ಗೊತ್ತಾಗಿದ್ದು ಚಾಲಕನ ಹೆಸರು ಫತ್ರು ಪಟೇಲ ಅಂತಾ ಗೊತ್ತಾಗಿರುತ್ತದೆ. ವಾಹನ ಚಾಲಕನು ವಾಹನ ಪಲ್ಟಿಯಾದ ಕೂಡಲೇ ಸ್ಥಳದಲ್ಲಿ ವಾಹ ಬಿಟ್ಟು ಓಡಿ ಹೋಗಿರುತ್ತಾನೆ. ಘಟನೆ ಜರುಗಿದಾಗ ಅಂದಾಜು 01-30 ಪಿ.ಎಮ್ ಆಗಿದ್ದು ಈ ಘಟನೆಗೆ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗು ನಿರ್ಲಷ್ಯತನದಿಂದ ನಡೆಸಿದ್ದರಿಂದ ಸಂಭವಿಸಿದ್ದು ಈ ಬಗ್ಗೆ ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ವಗೈರೆ ನೀಡಿ ಹೇಳಿಕೆ ಫೀರ್ಯಾದಿ ಸಾರಾಂಶ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:108/2015 ಕಲಂ:279,337,338,304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.