POLICE BHAVAN KALABURAGI

POLICE BHAVAN KALABURAGI

27 April 2019

KALABURAGI DISTRICT REPORTED CRIMES


ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ದೇವಿಂದ್ರಪ್ಪಾ ಜವರಕರ್ ಸಾ|| ತಾಜಸುಲ್ತಾನಪೂರ ತಾ||ಜಿಲ್ಲಾ|| ಕಲಬುರಗಿ ರವರು ಕಲಬುರಗಿ ತಾಲ್ಲೂಕಿನ ತಾಜಸುಲ್ತಾನಪೂರ ಗ್ರಾಮದ  ಉನ್ನೀಪೀರ ದರ್ಗಾ ಹತ್ತಿರ ನಿನ್ನೆ ರಾತ್ರಿ 10-45 ಗಂಟೆ ದಿನಾಂಕ 25-04-2019 ರಂದು ಕಲಬುರಗಿ ಯಿಂದ ತಾಜಸುಲ್ತಾನಪೂರ ಗ್ರಾಮಕೆ ಹೋಗುವ ಸಂದರ್ಭದಲ್ಲಿ ನನ್ನ ವಾಹನ ತಡೆದು ಇದೇ ಗ್ರಾಮದ ನಿವಾಸಿಗಳಾದ ಜೊತೆಗೆ ರೌಡಿ ಶೀಟರಗಳಾದ ವಿನೋದ ತಂದೆ ವಿಠಲ ಸಂಘ ಮತ್ತು ಇವನ ಗೆಳೆಯ ಮೇಲ್ವರ್ಗದ ಕಲ್ಯಾಣಿ ತಂದೆ ಅಣ್ಣಪ್ಪಾ ಬಾಗೋಡಿ ಇಬ್ಬರೂ ಕೂಡಿಕೊಂಡು ಕುಡಿತದ ಅಮಲಿನಲ್ಲಿ ಕೈಯಿಂದ ತಲೆಗೆ ಹೊಡೆದದ್ದು ಇದರಿಂದ ತಲೆಯಿಂದ ರಕ್ತ ಸೋರಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತೆ ನನ್ನಲ್ಲಿದ್ದ ಮೊಬೈಲ್ ಜೊತೆಗೆ ಜೇಬಿನಲ್ಲಿದ್ದ 3500/- ರೂ ಕಸಿದುಕೊಂಡು ಕೇಳಲು ಹೋದರೆ ನನ್ನ ಹೊಟ್ಟೆಗೆ ಹತ್ತು ಹದುನೈದು ಬಾರಿ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಜೊತೆಗೆ ಕಲ್ಯಾಣಿ ಎಂಬುವವನು ಇವನ ಕಾರಿನಿಂದ ಬಡಿಗೆ ತೆಗೆದು ಹೊಡೆದಿರುತ್ತಾರೆ ಜೊತೆಗೆ ಯಾರಿಗಾದರೂ ಹೇಳಿದರೆ ನಿನ್ನ ಜೀವ ತೆಗೆಯುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಜೊತೆಗೆ ಕಲ್ಯಾಣಿ ಎಂಬುವವನು ಜಾತಿ ನಿಂದನೆ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣಗಳು :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ಬಸಮ್ಮ@ಪಾರ್ವತಿ ಗಂಡ ಈರಯ್ಯಾ ಗುಡ್ಡದಮಠ ಸಾ|| ಚಿಣಮಗೇರಾ ತಾ|| ಅಫಜಲಪೂರ ರವರ ಅಣ್ಣ ಕಲ್ಲಯ್ಯಾ ಇವರು ಉಪಜೀವನಕ್ಕಾಗಿ ಸೋಲಾಪೂರಕ್ಕೆ ಹೋಗಿ ವಾಸವಾಗಿದ್ದು ನನಗೆ ಚಿಣಮಗೇರಾ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದು ಮತ್ತು ನನ್ನ ತಾಯಿ ಸುಮಾರು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು ನನ್ನ ತಂದೆ ಒಬ್ಬಂಟಿಯಾಗಿದ್ದರಿಂದ ನಮ್ಮ ಅಕ್ಕತಂಗಿಯರಲ್ಲಿ ಬಂದು ಇರುತ್ತಿದ್ದು ಅದೇ ರೀತಿ ನನ್ನ ಹತ್ತಿರ ಸಿದ್ರಾಮಯ್ಯ ಇವರು ಸುಮಾರು ನಾಲ್ಕು ತಿಂಗಳಿಂದ ನನ್ನ ಹತ್ತಿರ ಬಂದು ವಾಸವಾಗಿದ್ದು ಇರುತ್ತದೆ. ಹೀಗಿದ್ದು ನನ್ನ ತಂದೆ ಸ್ವಲ್ಪ ದಿವಸಗಳಿಂದ ತನ್ನಿಂದತಾನೆ ಮಾನಸಿಕ ಮಾಡಿಕೊಂಡಿದ್ದು ಮತ್ತು ಒಂದು ವರ್ಷದ ಹಿಂದೆ ಅವರ ಕಾಲು ಮುರಿದಿದ್ದು ಅದರ ತ್ರಾಸದಿಂದ ಮನನೊಂದು ನಾನು ಸತ್ತರ ಸರಿಯಾಗಿ ಆಗುತ್ತದೆ ಅಂತ ನನ್ನ ಮುಂದೆ ಅಂದಿದ್ದರಿಂದ ನಾವು ಅವರಿಗೆ ದೈರ್ಯ ಹೇಳಿದ್ದು ಇತ್ತು ಮತ್ತು ಇಂದು ದಿನಾಂಕ 25-04-2019 ರಂದು ನಮ್ಮೂರಲ್ಲಿ ಜಾತ್ರೆ ಇರುವುದರಿಂದ ನಾನು ಬೆಳಿಗ್ಗೆ 04-00 ಗಂಟೆಗೆ ಬೇಗನೆ ಎದ್ದು ದೇವರಿಗೆ ಹೋಗುವಾಗ ನನ್ನ ಮನೆಯಿಂದ ಉಸುಕಿನಲ್ಲಿ ನಮ್ಮ ತಂದೆ ಮಲಗಿದ್ದು ಅವರಿಗೆ ನಾನು ಎಬ್ಬಿಸಲು ಅವರು ಅರೇ ಪ್ರಜ್ಞಾ ಸ್ಥಿತಿಯಲ್ಲಿದ್ದು ನಾನು ನನ್ನ ಗಂಡ ಹಾಗೂ ನನ್ನ ತಂಗಿಯಾದ ಮಹಾನಂದ ಇವರೆಲ್ಲ ಕೂಡಿ ನೋಡಲಾಗಿ ನಮ್ಮ ತಂದೆ ಮಾತನಾಡಲಿಲ್ಲ ಅವರ ಬಾಯಿಂದ ಕ್ರಿಮಿನಾಶಕ ಔಷದಿ ವಾಸನೆ ಬಂದಿದ್ದರಿಂದ ನಾವು ಅವರನ್ನು 108 ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸ್ವಲ್ಪ ಸಮಯದಲ್ಲಿ ನನ್ನ ತಂದೆ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 25-04-2019 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾರೆ. ಕಾರಣ ನನ್ನ ತಂದೆಯ ಕಾಲು ಮುರಿದಿದ್ದರಿಂದ ದಿನನಿತ್ಯದ ಕೆಲಸ ನಿರ್ವಹಿಸಲು ತೊಂದರೆಯಾಗಿದ್ದರಿಂದ ಅದೆ ನೋವಿನಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 24-04-2019 ರಾತ್ರಿ 8-00 ಗಂಟೆಯಿಂದ ದಿನಾಂಕ 25-04-2019 ರ ಬೆಳಗಿನ 04-00 ಗಂಟೆ ಮದ್ಯದ ಅವಧಿಯಲ್ಲಿ ಯಾವುದೋ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತ ಪಟ್ಟಿದ್ರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಶೋಕ ನಗರ ಠಾಣೆ : ದಿನಾಂಕ; 26.04.2019 ರಂದು ಶ್ರೀ ಶಿವರಾಯ ತಂದೆ ಮಲ್ಕಪ್ಪ ಶೇಳ್ಳಗಿಕರ ಸಾ: ಅಶೋಕ ನಗರ ಕಲಬುರಗಿ ರವರಿಗೆ 3 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳು ಇದ್ದು, ಗಂಡು ಮಕ್ಕಳ ಪೈಕಿ ಮಲ್ಲಿಕಾರ್ಜುನ ಇತನಿಗೆ ಕಳೆದ 3-4 ವರ್ಷಗಳಿಂದ ಸಕ್ಕರೆ ಕಾಯಿಲೆ ಬಂದಿದ್ದು ಇದರಿಂದ ಆತನಿಗೆ ಕಣ್ಣುಗಳು ಸರಿಯಾಗಿ ಕಾಣುತಿರಲಿಲ್ಲಾ, ಮತ್ತು ಎರಡು ಕಾಲುಗಳ ಪಾದಗಳಿಗೆ ಗಾಯವಾಗಿದರಿಂದ ಕಾಲುಗಳಿಗೆ ಹುಳಬಿದ್ದಿದ್ದು ಈ ಬಗ್ಗೆ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದರು ಕೂಡಾ ಕಾಲು ನೊವು ಕಡಿಮೆಯಾಗಿರುವುದಿಲ್ಲಾ. ದಿನಾಂಕ: 26.04.2019 ರಂದು ಮದ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನಮ್ಮ ಮಗನಿಗೆ ಮಾತ್ರೆಗಳು ತೆಗೆದುಕೊಂಡು ಬರುವ ಸಲುವಾಗಿ ಔಷದ ಅಂಗಡಿಗೆ ಹೋಗಿ ಮಾತ್ರೆಯನ್ನು ತೆಗೆದುಕೊಂಡು ಮದ್ಯಾಹ್ನ 01.30 ಗಂಟೆಗೆ ಮನೆಗೆ ಹೋದಾಗ ನಮ್ಮ ಮಗ ಮಲ್ಲಿಕಾರ್ಜುನ ಇತನು ಮೈಗೆ ಬೆಂಕಿ ಹಚ್ಚಿಕೊಂಡು ಚಿರಾಡುತ್ತಿದನು. ನಂತರ ನಾನು ಅವನಿಗೆ ಬೆಂಕಿ ಆರಿಸಲು ಪ್ರಯತ್ನಿಸಿ ಅವನನ್ನು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಘಟನೆ ಬಗ್ಗೆ ವಿಚಾರಿಸಲು ಅವನು ತಿಳಿಸಿದೆನೆಂದರೆ, ಇಂದು ಮದ್ಯಾಹ್ನ 01.15 ಗಂಟೆಗೆ ನನಗೆ ಎರಡು ಕಾಲುಗಳು ವೀಪರಿತ ನೋವು ಆಗಲು ಪ್ರಾರಂಬವಾಗಿದ್ದರಿಂದ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಕಾಲುಗಳ ಮೇಲೆ ಹಾಕಿದ್ದು ನಂತರ ನಾನು ಬೀಡಿ ಸೇದುವ ಸಲುವಾಗಿ ಕಡ್ಡಿ ಗೀಚಿದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದು ಇದರಿಂದ ನನ್ನ ಎರಡು ಕೈಕಾಲುಗಳಿಗೆ, ಮುಖಕ್ಕೆ ಗಾಗು ದೇಹದ ಇತರೆಡೆಗೆ ಬೆಂಕಿ ಹತ್ತಿದ್ದು ಇರುತ್ತದೆ. ಅಂತ ತಿಳಿಸಿದ್ದು ತಿಳಿಸಿರುತ್ತಾನೆ. ಇಲ್ಲಿ ಬಂದ ನಂತರ ನಮ್ಮ ಮಗ ಮಲ್ಲಿಕಾರ್ಜುನ ಇತನು ಉಪಚಾರ ಫಲಕಾರಿಯಾಗದೆ ಸಾಯಂಕಾಲ 06.00 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಧೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮನೋಜಕುಮಾರ ತಂದೆ ಮೈಲಾರಿ ನಾಟಿಕರ ಸಾ:ಬಸವಣಗುಡಿ ಕಟ್ಟೆ ಹತ್ತಿರ ಬೋರಾಬಾಯಿ ನಗರ ಕಲಬುರಗಿ ರವರು 7 ತಿಂಗಳ ಹಿಂದೆ ಚಂದಮ್ಮಾ ಗಂಡ ಶಂಕರ ಹರಗೆನವರ ಇವರ ಒಬ್ಬಳೆ ಮಗಳಾದ ಶರಣಮ್ಮಳ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ನನ್ನ ಅತ್ತೆಯವರಾದ ಚಂದಮ್ಮಾ ಹಾಗೂ ಅವರ ಅಣ್ಣ ನಮ್ಮ ಜನಾಂಗದ ರಾಣಪ್ಪ ಇತನ ಮಕ್ಕಳಾದ ಅನೀಲ ಹಾಗೂ ಶಿವಕುಮಾರ ಶ್ರೀಮಂತ ಇವರ ಅಳಿಯನಾದ ಆಕಾಶ ಇವರ ನಡುವೆ ಬೋರಾಬಾಯಿ ನಗರದಲ್ಲಿ ಬರುವ 15*30 ಖುಲ್ಲಾ ಜಾಗದಲ್ಲಿ ಅಂಗಡಿಯಿದ್ದು ಈ ಜಾಗಕ್ಕಾಗಿ ಆಗಾಗ ಅವರ ಮಧ್ಯೆ ಜಗಳವಾಗುತ್ತಿತ್ತು ನಾನು ಶರಣಮ್ಮಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ಅವರು ವಿನಾಕಾರಣ ನನಗೆ ಜೀವ ಬೆದರಿಕೆ ಹಾಕುವದು ಹಾಗೂ ಜಗಳ ತೆಗೆಯುವದು ಮಾಡುತ್ತಿದ್ದರು ದಿನಾಂಕ:26/04/2019 ರಂದು 1.30 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಅನೀಲ, ಆಕಾಶ ಹಾಗೂ ಶಿವಕುಮಾರ ಮೂರು ಜನ ಬಂದವರೆ ಹೊಡಿರಲೇ ಈ ರಂಡಿ ಮಗನಿಗೆ ಅಂತಾ ಅನೀಲ ಇವನು ತನ್ನ ಕೈಯಲ್ಲಿದ್ದ ರಾಡದಿಂದ ನನ್ನ ತಲೆಗೆ ಹೊಡೆದನು. ಶಿವಕುಮಾರ ಇವನು ಕೈಯಿಂದ ನನ್ನ ಭುಜಕ್ಕೆ ಬೆನ್ನಿಗೆ ಹೊಡೆದನು. ಇವರಿಂದ ನಾನು ತಪ್ಪಿಸಿಕೊಂಡು ಓಡಿ ಹೋಗುವಾಗ ಆಕಾಶ ಇತನು ನನಗೆ ಗಟ್ಟಿಯಾಗಿ ಹಿಡಿದು ಓಡಿ ಹೋಗಲು ಬಿಡದೆ ಹೊಟ್ಟೆಗೆ ಬೆನ್ನಿಗೆ ಹೊಡೆದನು. ನನಗೆ ತಲೆಗೆ ಗಾಯವಾಗಿ ಮೂರ್ಛೇ ಹೋಗಿ ಬಿದ್ದಿದ್ದರಿಂದ ಸದರಿಯವರಿಂದ ನನ್ನ ತಾಯಿಯಾದ ಶಾರದಾಬಾಯಿ ಅಣ್ಣನಾದ ಅನೀಲ ನನ್ನ ಅತ್ತಿಗೆಯಾದ ರೇಶ್ಮಾ ಇವರು ಬಿಡಿಸಿದ್ದರಿಂದ ಅನೀಲ ಆಕಾಶ ಶಿವಕುಮಾರ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಸೇಡಂ ಠಾಣೆ : ದಿನಾಂಕ 25/04/2019 ರಂದು ಸೇಡಂ ಪಟ್ಟಣದ ಛೋಟಿಗಿರಣಿ ಭಾಗ್ಯವಂತಿ ಗುಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಸುನೀಲ್ ಕುಮಾರ ಮೂಲಿಮನಿ ಪಿ.ಎಸ.ಐ (ಕಾಸೂ) ಸೇಡಂ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಒಬ್ಬನನ್ನು ಹಿಡಿದು ಅವನ ಹೆಸರು ವಿಳಾ ವಿಚಾರಿಸಲು ಸಂತೋಷ ತಂದೆ ಬಸವರಾಜ ಅಳ್ಳೊಳ್ಳಿ ಸಾ|| ಛೋಟಿಗಿರಣಿ ಸೇಡಂ ಅಂತಾ ತಿಸಿದ್ದು ಸದರಿಯವನಿಂದ ಜೂಜಾಟಕ್ಕೆ ಬಳಸಿದ ನಗರು ಹಣ 620/- ರೂ ಹಾಗು ಒಂದು ಮಟಕಾ ಚೀಟಿ , ಬಾಲಪೆನ್ನ ವಶಕ್ಕೆ ಪಡೆದು ಸದರಿಯವನೊಂದಿಗೆ  ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 02 : ದಿನಾಂಕ-26/04/2019 ರಂದು ರಾತ್ರಿ 10-00 ಗಂಟೆಯಿಂದ 10-15 ಗಂಟೆಯ ಸುಮಾರಿಗೆ ಶ್ರೀಮತಿ ಅಂಬಮ್ಮ ತಂದೆ ಅಂಬಪ್ಪ @ ತುಳಜಪ್ಪ ಉರಕೂನ ಸಾ : ಚಿಂಚನಸೂರ  ಮಗ ರುದ್ರಪ್ಪ ಮತ್ತು ಸುನೀಲ ಪೂಜಾರಿ ತನ್ನ ಮೋಟಾರ ಸೈಕಲ ನಂ ಕೆಎ- 32 ಇಟಿ 5248 ನೇದ್ದರ ಮೇಲೆ ಮಾಡಬೂಳ ದಿಂದ ಕಲಬುರಗಿ ಕಡೆಗೆ ಹೋಗುತ್ತಿದ್ದಾಗ ಗೀತಾ ನಗರ ಕ್ರಾಸ್ ಹತ್ತಿರ ರೋಡ ಮೇಲೆ  ಎದುರಿನಿಂದ ಯಾವುದೋ  ಒಂದು  ವಾಹನದ ಚಾಲಕ  ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗ ರುದ್ರಪ್ಪ ಮತ್ತು ಸನೀಲ ಪೂಜಾರಿ ಇವರು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸುನೀಲ ಪೂಜಾರಿ ಇತನಿಗೆ ಭಾರಿಗಾಯಗೊಳಿಸಿ ಫಿರ್ಯಾದಿ ಮಗನಾದ ರುದ್ರಪ್ಪ ಈತನಿಗೆ ಭಾರಿಗಾಯಗೊಳಿಸಿದರಿಂದ ಆತನು ಸ್ಥಳದಲ್ಲಿ ಮೃತ ಪಟ್ಟಿದ್ದು ವಾಹನ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ  02 : ದಿನಾಂಕ 26.04.2019 ರಂದು ಬೆಳಿಗ್ಗೆ ಶಶಿಕಾಂತ ಚೌಧ್ರಿ ಈತನು ಕಾರ್ ನಂಬರ ಕೆಎ 32 ಎನ್ 4604 ನೇದ್ದರಲ್ಲಿ ಶ್ರೀಮತಿ ವಿಜಯಲಕ್ಷ್ಮೀ ಕುಲಕರ್ಣಿ & ಅಶೊಕ ಕುಲಕರ್ಣಿ ಇವರಿಗೆ ಕೂಡಿಸಿಕೊಂಡು ಹುಮನಾಬಾದ ರಿಂಗ್ ರೋಡಿದಿಂದ ಮಹಾಗಾಂವ್ ರೋಡಕಡೆಗೆ ಹೋಗುವ ಕುರಿತು ಕಾರನ್ನು ಅತೀವೇಗವಾಗಿ & ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಕಾರನ್ನು ಬಲಕ್ಕೆ ಚಲಾಯಿಸಿ ಅವರಾದ (ಬಿ) ಗ್ರಾಮದ ಹತ್ತಿರ ರಸ್ತೆ ಬದಿಯಲ್ಲಿ ನಿಂತಿರುವ ಲಾರಿ ನಂಬರ ಎಂಹೆಚ್ 26 ಇಡಿ 2198ನೇದ್ದಕ್ಕೆ ಡಿಕ್ಕಿಪಡಿಸಿ ಶ್ರೀಮತಿ ವಿಜಯಲಕ್ಷ್ಮೀ ಕುಲಕರ್ಣಿ & ಅಶೊಕ ಕುಲಕರ್ಣಿ ಇವರಿಗೆ ಭಾರಿಗಾಯಗೊಳಿಸಿ ತಾನೂ ಕೂಡಾ ಭಾರಿಗಾಯ ಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ ಅಂತಾ ಶ್ರೀ ರಮೇಶ ತಂದೆ ಗೋಪಿನಾಥ ಚೌದರಿ ಸಾ : ಅರಣಕಲ್ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 02 ರಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ರವೀಂದ್ರ ತಂದೆ ಸಂಗಯ್ಯ ಸ್ವಾಮಿ  ಸಾ|| ಮಳಖೇಡ ತಾ|| ಸೇಡಂ  ರವರ ತಮ್ಮನಾದ ಭೀಮರಾಯ ತಂದೆ ಬಸವರಾಜ ಕೋಲ್ಲೂರ ಸಾ|| ಮಳಖೇಡ  ಇತನು ದಿನಾಂಕ 23/04/2019 ರಂದು 5-30 ಗಂಟೆಗೆ ಲಾರಿ ನಂ ಕೆಎ-32 ಬಿ-2698 ನ್ನೇದ್ದರಲ್ಲಿ ಮಣ್ಣು ತುಂಬಿಕೊಂಡು   ಚಿಂಚೋಳಿ ಸೇಡಂ ರೋಡಿನಲ್ಲಿ ಹೊರಟಾಗ ಸುರವಾರ ಗೇಟ ಸ್ವಲ್ಪ ಮುಂದೆ ತನ್ನ ಲಾರಿ ಚಾಲಕನು ಲಾರಿಯನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿ ರೋಡಿನ ತಗ್ಗಿನಲ್ಲಿ ಒಮ್ಮೆಲೆ ಅಪಘಾತ ಪಡೆಸಿ ಲಾರಿಪಲ್ಟಿ ಮಾಡಿದ್ದು ಇರುತ್ತದೆ. 
ಅತ್ಯಾಚಾರ ಮಾಡಲು ಪ್ರಯತ್ನಿಸಿದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ-25/04/2019 ರಂದು 6-00 ಪಿಎಮ್ ಕ್ಕೆ ಕುಮಾರಿ ಇವರು ತಮ್ಮ ಗ್ರಾಮದಲ್ಲಿ ವಾಸವಾಗಿರುವ ವೀರಭದ್ರ ತಂದೆ ರಾಚಯ್ಯಾ ಸ್ವಾಮಿ ವಯ|| 20 ಜಾ|| ಜಂಗಮ, ಈತನು ಒಂದು ವರ್ಷದ ಹಿಂದೆ ಪರಿಚಯವಾಗಿದ್ದು. ಇಬ್ಬರೂ ಫೋನಿನಲ್ಲಿ ಮಾತನಾಡುತ್ತಿದ್ದೇವು. ನಂತರ ಈಗ 10 ತಿಂಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡತೊಡಗಿದೇವು. ನಾನು ಆಗಾಗ ಫೋನಿನಲ್ಲಿ ನಮ್ಮ ಮನೆಯವರಿಗ ಗೊತ್ತಾಗದ ಹಾಗೆ ಮಾತನಾಡುತ್ತಿದ್ದೇವು. ಆತನು ನನಗೆ 21 ವರ್ಷ ನಿನಗೆ 18 ವರ್ಷ ತುಂಬಿದ ನಂತರ ಮನೆಯವರಿಗೆ ಹೇಳಿ ಮದುವೆ ಮಾಡಿಕೊಳ್ಳೋಣ ಅಂತಾ ಹೇಳಿದರಿಂದ ನಾವು ಪ್ರೀತಿಸುವ ವಿಷಯವನ್ನು ಯಾರಿಗೂ ತಿಳಿಸದೇ ಗುಪ್ತವಾಗಿಟ್ಟಿರುತ್ತೇವೆ. ಹಾಗೆ ನಾವು ಮಾತನಾಡುತ್ತಾ ಬರುತ್ತಿದ್ದೆವು. ಹೀಗಿದ್ದು, ಹೋದ ತಿಂಗಳ ದಿನಾಂಕ: 07/03/2019 ರಂದು ಸಾಯಂಕಾಲ 4;00 ಪಿ.ಎಮ್ ಕ್ಕೆ ಮೂತ್ರ ವಿಸರ್ಜನೆಗೆ ಹೋಗಿ ಮರಳಿ ನಾನು ನಮ್ಮ ಮನೆ ಕಡೆಗೆ ಬರುತ್ತಿದ್ದಾಗ ವೀರಭದ್ರಯ್ಯ ಇತನು ರಸ್ತೆಯಲ್ಲಿ ಬೇಟಿಯಾಗಿ ನನಗೆ ನಿನ್ನ ಹತ್ತಿರ ಮಾತನಾಡುವದಿದೆ ಸಾಯಂಕಾಲ 6:00 ಗಂಟೆಗೆ ನಲಂದ ಶಾಲೆಯ ಹಿಂದಿರುವ ಖುಲ್ಲಾ ಜಾಗೆಯ ಕಡೆಗೆ ಬಾ ಅಂತಾ ಹೇಳಿದನು. ನಾನು ಮನೆಯಲ್ಲಿ ನನ್ನ ಗೆಳತಿಯ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ನಾನು 6:00 ಪಿ.ಎಮ್ ಕ್ಕೆ ನಲಂದ ಶಾಲೆಯ ಹಿಂದೆ ಇರುವ ಖುಲ್ಲಾ ಜಾಗದಲ್ಲಿ ಹೋದಾಗ ಅಲ್ಲಿ ವೀರಭದ್ರನು ಇದ್ದನು. ನಾವು ಮಾತನಾಡುತ್ತಿದ್ದಾಗ ವೀರಭದ್ರಯ್ಯನು ನನ್ನ ಮೈ ಕೈ ಮುಟ್ಟತೊಡಗಿದನು ಆಗ ನಾನು ಆತನಿಗೆ ಈ ರೀತಿ ಮಾಡುವುದು ಬೇಡ ಅಂತಾ ಅಂದಾಗ ಆತನು ನಾವು ಪ್ರೀತಿಸುತ್ತಿದ್ದು ಮದುವೆ ಮಾಡಿಕೊಳ್ಳುವವರಿದ್ದು ಏನಾಗುತ್ತದೆ ಅಂತಾ ಹೇಳಿ ನನ್ನ ಮೇಲೆ ಒತ್ತಾಯ ಪೂರ್ವಕವಾಗಿ ಕೈ ಹಿಡಿದು ಬಲತ್ಕಾರ ಮಾಡಲು ಪ್ರಯತ್ನಿಸಿದನು. ಆಗ ನಾನು ಜೋರಾಗಿ ಚೀರಿಕೊಂಡು, ಅವನಿಂದ ಕೈ ಬಿಡಿಸಿಕೊಂಡು ಮರಳಿ ಮನೆಗೆ ಬಂದಿರುತ್ತೇನೆ. ಈ ವಿಷಯವನ್ನು ನಾನು ನಮ್ಮ ಮನೆಯ ಮರ್ಯಾದೆಗೆ  ಅಂಜಿ ನಮ್ಮ ತಂದೆತಾಯಿ ರವರ ಮುಂದೆ ಹೇಳಿರುವದಿಲ್ಲ. ನಿನ್ನೆ ದಿನಾಂಕ 24/04/2019 ರಂದು ಸಾಯಂಕಾಲ 5-00 ಪಿಎಮ್ ಕ್ಕೆ ನಮ್ಮ ಮನೆಯ ಕಡೆಗೆ ಬರುತ್ತಿರುವಾಗ, ರಸ್ತೆಯ ಮೇಲೆ ವೀರಭದ್ರನು ಸಿಕ್ಕು, ನಿನಗೆ ನಾನು ಪ್ರೀತಿ ಮಾಡುತ್ತಾ ಬರುತ್ತಿರುತ್ತೇನೆ. ನೀನು ಹೋದ ತಿಂಗಳು ಶಾಲೆಯ ಹತ್ತಿರ ಬಂದು ಮಾತನಾಡುವಾಗ, ನನಗೆ ಸಪೋರ್ಟ ಮಾಡಿರುವುದಿಲ್ಲ, ಈಗ ಮುಂದೆ ಸಿಕ್ಕಾಗಲಾದರು ನಾನು ಹೇಳಿದಂತೆ ನನಗೆ ಸಪೋರ್ಟ ಮಾಡು, ಇಲ್ಲದಿದ್ದರೆ ನಿನಗೆ ನೋಡು ಹೇಗೆ ಮಾಡುತ್ತೇನೆ, ನಿನ್ನ ಜೀವನ ಸುಗಮವಾಗಿ ಸಾಗಲು ಬಿಡುವುದಿಲ್ಲ. ಅಲ್ಲದೆ ನಿನ್ನ ತಂದೆ, ತಾಯಿಯವರ ಮರ್ಯಾದೆಯಿಂದ ಬೇರೆಯವರಿಗೆ ಮುಖ ತೋರಿಸದಂತೆ ಮಾಡುತ್ತೇನೆ ಅಂತ ಹೆದರಿಸಿ ಹೋದನು. ನಿನ್ನೆಯಿಂದ ನಾನು ದುಃಖದಲ್ಲಿಯೆ ಇದ್ದು, ಇಂದು ನನಗೆ ದುಃಖ ತಾಳದೆ ಮನೆಯಲ್ಲಿ ಅಳುತ್ತಾ ಕುಳಿತುಕೊಂಡಾಗ, ನಮ್ಮ ತಂದೆತಾಯಿರವರು ನೋಡಿ, ಯಾಕೆ ಅಳುತ್ತಿದ್ದಿ ಅಂತಾ ಕೇಳಿದಾಗ, ನಾನು ಅಳುತ್ತಲೆ ಆದ ಘಟನೆಗಳ ವಿಷಯವನ್ನು ಅವರಿಗೆ ತಿಳಿಸಿರುತ್ತೇನೆ. ಆಗ ನಮ್ಮ ತಂದೆ-ತಾಯಿರವರು ನನಗೆ ದೈರ್ಯ ತುಂಬಿದ್ದರಿಂದ ನಾನು ಆತನ ಮೇಲೆ ಕೇಸು ಮಾಡಲು, ನಮ್ಮ ತಂದೆ ತಾಯಿಯವರೊಂದಿಗೆ ಬಂದು ದೂರು ನೀಡುತ್ತಿದ್ದು. ನನ್ನ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿ, ಜೀವ ಬೆದರಿಕೆ ಹಾಕಿರುವ ವೀರಭದ್ರ ತಂದೆ ರಾಚಯ್ಯಾ ಸ್ವಾಮಿ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.