POLICE BHAVAN KALABURAGI

POLICE BHAVAN KALABURAGI

08 December 2012

GULBARGA DISTRICT



ಸಿಪಿಐ ಎಂ.ಬಿ.ನಗರ ವೃತ್ತದ ಅಧಿಕಾರಿಗಳಿಂದ
ಅತ್ಯಚಾರವೆಸಗಿದ ಆರೋಪಿಗಳ ಬಂದನ:
ಶ್ರೀ.ಎನ್. ಸತೀಶಕುಮಾರ ಐ.ಪಿ.ಎಸ್.,ಪೊಲೀಸ ಅಧೀಕ್ಷಕರು, ಗುಲಬರ್ಗಾರವರು, ಮತ್ತು  ಹೆಚ್ಚುವರಿ ಎಸ್.ಪಿ ಶ್ರೀ.ಕಾಶಿನಾಥ ತಳಕೇರಿ ರವರು, ಶ್ರೀ ಎಚ್,ತಿಮ್ಮಪ್ಪಾ  ಡಿ.ಎಸ.ಪಿ ಗ್ರಾಮಾಂತರ ವಿಭಾಗ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಬಿ.ನಗರ ವೃತ್ತದ ಪೊಲೀಸ್ ಇನ್ಸಪೇಕ್ಟರ ಅಸ್ಲಾಂ ಬಾಶಾ ರವರು ಮತ್ತು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯ ಪಿ.ಎಸ.ಐ ರವರಾದ ಶ್ರೀಮಂತ ಇಲ್ಲಾಳ ಮತ್ತು ಸಿಬ್ಬಂದಿಯವರ ನೇತ್ರತ್ವದ ತಂಡವು ದಿನಾಂಕ:05-12-2012 ರಂದು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರೂಗಿದ ಅತ್ಯಾಚಾರ ಪ್ರಕರಣ ಆರೋಪಿಗಳ ಬಂದನ ಕುರಿತು ತನಿಖೆ ಕೈಕೊಂಡು,  ಸಾ|| ವೆಂಕಟ ಬೇನೂರ ಗ್ರಾಮದ ಯುವತಿಯ ಅದೇ ಊರಿನ ಅಯ್ಯಪ್ಪ ತಳವಾರ, ದುರ್ಗಪ್ಪ ಮೋಯಿ ಮತ್ತು ಗುರಪ್ಪ ಪೂಜಾರಿ ಇವರುಗಳು ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ಅಯ್ಯಪ್ಪನು ಇತನು  ಬಲತ್ಕಾರವಾಗಿ ಸಂಭೋಗ ಮಾಡಿದ್ದು ಮತ್ತು ಗುರಪ್ಪ ಮತ್ತು ದುರ್ಗಪ್ಪ ಇವರು ಕೂದಲು ಹಿಡಿದು ಎಳೆದಾಡಿ ನನಗೆ ಚೀರಾಡದಂತೆ ಓಡನಿಯನ್ನು ಬಾಯಿಗೆ ತುರುಕಿರುತ್ತಾರೆ ಅಂತಾ ದೂರು ನೀಡಿದ್ದರಿಂದ ಸದರಿ ಪ್ರಕರಣದ ಆರೋಪಿಗಳ ಪತ್ತೆ ಮಾಡಿ ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.