POLICE BHAVAN KALABURAGI

POLICE BHAVAN KALABURAGI

17 February 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಆದ ಬಗ್ಗೆ:
ಚೌಕ ಪೊಲೀಸ್ ಠಾಣೆ:ಶ್ರೀಮತಿ ನಿರ್ಮಲಾ ಗಂಡ ಜಗದೀಶ ಡಿಗ್ಗಾಂವಕರ ಸಾ|| ವಿರೇಂದ್ರ ಪಾಟೀಲ ಬಡಾವಣೆ ಜಿಡಿಎ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ನಾದಿನಿ ಅಂಬಿಕಾ ಪಾಟೀಲ್ ಕೂಡಿಕೊಂಡು ದಿನಾಂಕ: 16-02-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅಟೋ ನಂ: ಕೆಎ-32-6508 ನೇದ್ದರಲ್ಲಿ ಓಂ ನಗರದಿಂದ ಶಹಾಬಜಾರದ್ಲಿರುವ ಸಂಬಂಧಿಕರಿಗೆ ಮಾತನಾಡಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಮಾರ್ಕೆಟ ಮಜೀದ ಹತ್ತಿರ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ನನ್ನ ಕೊರಳಲಿದ್ದ ಮಂಗಳ ಸೂತ್ರ 3 ತೊಲೆ 90,000/- ರೂಪಾಯಿಗಳದ್ದು ದೋಚಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ನಿರ್ಮಲಾ ರವರ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಎರಡು (2) ಮೋಟಾರ ಸೈಕಲುಗಳು ಜಪ್ತಿ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಮಹಾತ್ಮ ಬಸವೇಶ್ವರ ನಗರ ವೃತ್ತದ ಸಿಪಿಐ ರವರ ಮಾರ್ಗದರ್ಶದಲ್ಲಿ ದಿನಾಂಕ:16/02/2013 ರಂದು ಬೆಳಗ್ಗೆ 5-00 ಎ.ಎಮ ಕ್ಕೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಕರ್ತವ್ಯದಲ್ಲಿದ್ದಾಗ ಓಂ ನಗರ ಗೇಟ್ ಹತ್ತಿರ 3 ಜನರು ಕೂಡಿಕೊಂಡು 2 ಮೋಟಾರ ಸೈಕಲಗಳೊಂದಿಗೆ ಸಂಶಯ ರೀತಿಯಲ್ಲಿ ನಿಂತಿದ್ದು ಇನ್ನೊಬ್ಬನು ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದನ್ನು ವಿಚಾರಿಸಲು ಅವರು ನಮ್ಮಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಹಿಡಿದು ಕೂಲಂಕುಶವಾಗಿ ವಿಚಾರಿಸಲು ಅವರ ಹೆಸರು ಶೇಖ್ ಇಮ್ರಾನ್ @ ಇಮ್ರಾನ್ ತಂದೆ ಅಬ್ದುಲ ಗಫಾರ ಶೇಖ್ ವಯಃ 18 ವರ್ಷ ಉಃ ಗೌಂಡಿ ಕೆಲಸ ಜಾತಿಃ ಮುಸ್ಲಿಂ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ಕಾಳಪ್ಪ ತಂದೆ ಸುಭಾಷ ಹುಸುರ ವಯಃ23 ವರ್ಷ ಉಃ ಲಾರಿ ಡ್ರೈವರ ಜಾತಿಃ ಲಿಂಗಾಯತ ಸಾಃ ಕಾಳನೂರ ತಾಃಜಿಃ ಗುಲಬರ್ಗಾ,ಮೋಹಸೀನ ತಂದೆ ಇಮಾಮ್ ಪಟೇಲ ವಯಃ 18 ವರ್ಷ ಜಾತಿಃ ಮುಸ್ಲಿಂ ಉಃ ಗೌಂಡಿಕೆಲಸ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ನಾಗರಾಜ ತಂದೆ ಮಲ್ಲಣ್ಣಾ ಅವುಂಟಗಿ ವಯಃ 24 ವರ್ಷ ಉಃ ರಘೋಜಿ ಫೈನಾನ್ಸದಲ್ಲಿ ಕೆಲಸ ಜಾತಿಃ ಲಿಂಗಾಯತ ಸಾಃ ಶಿವಾಜಿ ನಗರ ಮಲ್ಲಿಕಾರ್ಜುನ ಗುಡಿ ಹತ್ತಿರ ಗುಲಬರ್ಗಾ ಅಂತಾ ತಿಳಿದಿದ್ದು. ಇವರ ಹತ್ತಿರವಿದ್ದ 2 ಮೋಟಾರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ 2 ಮೋಟಾರ ಸೈಕಲಗಳು ವಿಶ್ವವಿದ್ಯಾಲಯ ಮತ್ತು ರೋಜಾ ಪೊಲೀಸ ಠಾಣಾ ವ್ಯಾಪ್ತಿ ಕಳುವು ಮಾಡಿರುವುದಾಗಿ ಹೇಳಿದ್ದು, ಅವರ ಹತ್ತಿರವಿದ್ದ ಮೋಟಾರ ಸೈಕಲ್ Hero Honda Splender + Black Colour M/c No. KA 32 U 7285, Chassis No. MBLHA10EE89J32026, Engine No. HA10EA89J38209 H ಅಃಕಿಃ 25,000/- ರೂ. 2) Bajaj Company M/c No. KA 32 G 9065, Chassis No. MD2DDDZZZNWJ71396, Engine No. DUMBNJ27434 ಅಃಕಿಃ 25,000/- ನೇದ್ದವುಗಳನ್ನು ಜಪ್ತಿ  ಮಾಡಿಕೊಂಡು ಠಾಣೆ ಗುನ್ನೆ ನಂ: 25/2013 ಕಲಂ.41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರಿಮತಿ ಗಂಗಮ್ಮ ಗಂಡ ತಿಪ್ಪಣ್ಣಾ ಹುಚ್ಚನ ವ: 70 ವರ್ಷ ಸಾ||ಫರಹತಾಬಾದ ರವರು ನಾನು ಮತ್ತು ನನ್ನ ಗಂಡ ದಿನಾಂಕ 15/2/2013 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಮನೆಯಲ್ಲಿರುವಾಗ ನಮ್ಮ ಅಣ್ಣತಮ್ಮಕಿಯವರಾದ ಶಾರದಾಬಾಯಿ ಗಂಡ ಮಲಕಪ್ಪಾ ಹುಚ್ಚನ ಇವಳೊಂದಿಗೆ ನಳದ ನೀರಿನ ಸಂಬಂವಾಗಿ ಬಾಯಿ ಮಾತಿನ ಜಗಳ ವಾಗಿತ್ತು. ರಾತ್ರಿ 10:00 ಗಂಟೆಯ ಸುಮಾರಿಗೆ ಉಟ ಮಾಡಿಕೊಂಡು ಮಲಗಿಕೊಂಡಿದ್ದಾಗ ನಮ್ಮ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಯಾಕೆ ಬೈಯುತ್ತಿದ್ದಿರಿ ಅಂತಾ ಕೇಳಿದಕ್ಕೆ ಕಟ್ಟಿಗೆಯಿಂದ ಹೋಡೆದು ಗಾಯ ಮಾಡಿರುತ್ತಾಳೆ. ಸೋನುಬಾಯಿ ಇವಳು ಸಹ ಹೋಡೆದಿರುತ್ತಾಳೆ. ಜಗಳ ಬಿಡಿಸಲು ಬಂದ ನನ್ನ ಗಂಡನಿಗೆ ಮಲಕಪ್ಪ ಹುಚ್ಚನ ಇತನು ನೂಕಿ ಕೊಟ್ಟು ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ, 323, 324, 504, 506 ಸಂಗಡ 14 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸಚಿನ ತಂದೆ ಸೋಮಣ್ಣ ಸಂಬಿನೂರ ವ|| 19 ವರ್ಷ, ಉ|| ವಿದ್ಯಾರ್ಥಿ,ಸಾ|| ವಿಜಯ ನಗರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ 16-02-2013 ರಂದು ಸಾಯಂಕಾಲ 6-30 ಗಂಟೆಗೆ ಮನೆಯ ಮುಂದೆ ಕುಳಿತಾಗ ಪ್ರಶಾಂತ ತಂದೆ ರಜನಿಕಾಂತ, ಗಜ ತಂದೆ ರಾಜಕುಮಾರ ಬಂದು ನನಗೆ ಕರೆದು ನಿನ್ನ ಮೊಬೈಲ್ ಕೊಡು ಅಂತ ಅಂದಾಗ, ನನ್ನ ಮೊಬೈಲ್ ನಿಮಗೇಕೆ ಕೊಡಬೇಕು ಅಂತ ಅಂದಾಗ ಇಬ್ಬರೂ ಕೂಡಿ ಅವಾಚ್ಯದಿಂದ ಬೈಯುತ್ತಾ ಹೊಡೆಯ ಹತ್ತಿದರು. ನಾನು ಚೀರಾಡುತ್ತಿದ್ದಾಗ, ನನ್ನ ಎಡಗೈ ತಿರುವಿ, ಓಡಿ ಹೋಗಿದ್ದರು. ರಾತ್ರಿ 8-15 ಗಂಟೆಯ ಸುಮಾರಿಗೆ ಮತ್ತೆ ಅವರಿಬ್ಬರು ಮನೆಯ ಹತ್ತಿರ ಬಂದು, ಮನೆಯ ಮೇಲೆ ಕಲ್ಲು ತೂರಾಡಿ ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ;17/2013 ಕಲಂ 341, 323, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ತಂದೆಯ ಮೇಲೆ ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಹಾಜಿ ಕರೀಮ ತಂದೆ ಅಲಿಸಾಬ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ನಾನು ದಿನಾಂಕ:15/02/2013 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮನೆಗೆ ಬರುತ್ತಿದ್ದಾಗ ನನ್ನ ಮಗನಾದ ಮಹ್ಮದ ಫಿರೋಜ ಇತನು ನೀನು ಮನೆಗೆ ಬರಬೇಡ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದನು, ಮಹ್ಮದ ಅಮಜದ, ಫೀರೋಜ, ಶಾಹೀನ ಗಂಡ ಅಮಜದ, ಫರಜಾನ ಬೇಗಂ ಗಂಡ ಮಹ್ಮದ ಫಿರೋಜ ಇವರು ಬಂದು ನೀನು ಮನೆಗೆ ಬರುವದು ಬೇಡ ಅಂತಾ ಹೊಟ್ಟೆಗೆ ಹೊಡೆದು ಕೈಯಿಂದ ಕುತ್ತಿಗೆಗೆ ಒತ್ತಿದನು. ಆಗ  ಜಗಳ ಜಗಳದ ಸಪ್ಪಳ ಕೇಳಿ ಮಹ್ಮದ ರೀಯಾಜ, ಮಹ್ಮದ ಸಿದ್ದಿಕ ಇವರು ಬಿಡಿಸಲು ಬಂದಾಗ ಮಹ್ಮದ ರಿಯಾಜನಿಗೆ ಮಹ್ಮದ,  ಮಹ್ಮದ ಸಿದ್ದಿಕ ಇವರಿಗೆ ಬಡಿಗೆಯಿಂದ ತಲೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ:147,148,341,323,324,504,506,307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.