ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀಮತಿ ರೇಖಾ ಗಂಡ ರಾಜಕುಮಾರ ತಾಂದಳೆ ವ:30
ವರ್ಷ ಉ: ಮನೆಗೆಲಸ ಜಾತಿ ಭಾವಸರ ಕ್ಷತ್ರಿಯ ಸಾ:ರಾಮ
ನಗರ ವಿಠಲ ರುಕ್ಮಣಿ ಗುಡಿ ಹತ್ತಿರ ಗುಲಬರ್ಗಾರವರು ನಾನು ಮತ್ತು ನನ್ನ ತಾಯಿ ಕಲಾವತಿ ಇಬ್ಬರೂ
ಕೂಡಿಕೊಂಡು ದಿನಾಂಕ 17-7-12 ರಂದು 12-30 ಗಂಟೆ ಸುಮಾರಿಗೆ ಮನೆ ಹತ್ತಿರುವ
ವಿಠಲ ರುಕ್ಮಣಿ ಗುಡಿಗೆ ಹೊರಟಾಗ ರಮಾಕಾಂತ @
ರಮ್ಮ , ಯುವರಾಜ, ಚಂದ್ರಕಾಂತ @ ಚಂದ್ರ್ಯಾ ಸಾ||ಎಲ್ಲರೂ ರಾಮ ನಗರ ಗುಲಬರ್ಗಾರವರು ನಿಮ್ಮ ಮನೆ
ಎದುರು ಹುಡುಗುರು ಗುಂಪು ಕಟ್ಟಿಕೊಂಡು ನಿಂತು ಮಾತನಾಡಬೇಡಾ ಅಂತಾ ಹೇಳುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಸೀರೆ ಹಿಡಿದು
ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 233/2012 ಕಲಂ 341 504 354 323
506 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.