POLICE BHAVAN KALABURAGI

POLICE BHAVAN KALABURAGI

29 July 2011

GULBARGA DISTRICT REPORTED CRIMES

ಗಂಡನ ಮನೆಯವರಿಂದ ಕಿರುಕುಳ ತಾಳಲಾರದೇ ಗೃಹಿಣೆ ಆತ್ನಹತ್ಯೆ

ದೇವಲ ಗಾಣಗಾಪೂರ ಠಾಣೆ: ಶ್ರೀ ಶರಣಪ್ಪ ತಂದೆ ಅಯ್ಯಪ್ಪಗೌಡ ಪೊಲೀಸ ಪಾಟೀಲ ಸಾ|| ಮನೆ ನಂ 10/49 ಭವಾನಿ ಪೇಠ ಗೋಂಗಡೆ ವಸ್ತಿ ಸೋಲಾಪೂರ ರವರು ನನ್ನ ತಂಗಿ ಶಕುಂತಲಾ ಇವಳಿಗೆ ಅಫಜಲಪೂರ ತಾಲೂಕಿನ ಹಾವನೂರ ಗ್ರಾಮದ ನಿವೃತ್ತ ಅಬಕಾರಿ ಎ.ಎಸ್.ಐ ಜಟ್ಟೆಪ್ಪ ಪೂಜಾರಿ ರವರ ಮಗನಾದ ಅಮೀತಕುಮಾರನೊಂದಿಗೆ 2005 ಸಾಲಿನಲ್ಲಿ ಲಗ್ನ ಮಾಡಿ ಕೊಟ್ಟಿರುತ್ತೇವೆ, ಲಗ್ನದ ಸಮಯದಲ್ಲಿ ವರನಿಗೆ 2 ಲಕ್ಷ ರೂಪಾಯಿ, 4 ತೊಲಿ ಬಂಗಾರ ಮತ್ತು ಗೃಹಬಳಿಕೆ ಸಾಮಾನುಗಳೆಲ್ಲ ಕೊಟ್ಟು ಮದುವೆ ಮಾಢಿ ಕೊಟ್ಟಿರುತ್ತೇವೆ. ತಂಗಿ ಶಕುಂತಲಾಗೆ ಅವಳ ಗಂಡ, ಅತ್ತೆ :ಮಹಾದೇವಮ್ಮಾ ,ಮಾವ ಜೆಟ್ಟಪ್ಪಾ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದನ್ನು ತಾಳಲಾರದೆ ಗಂಡನ ಮನೆಯಲ್ಲಿ ಮೈಮೆಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಸ್ಟೇಷನ ಬಜಾರ ಠಾಣೆ : ಶ್ರೀ ಅಮರಯ್ಯ ಪೊಲೀಸ್ ಪೇದೆ ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ ರವರು ನಾನು ಬೆಳಿಗ್ಗೆಯಿಂದ ಪಟೇಲ್ ವೃತ್ತದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯದಲ್ಲಿ ನಿರತನಾಗಿದ್ದು 11:45 ಎ.ಎಮ್. ಕ್ಕೆ ಶಾಂತಿ ಸಾಗರ ಹೊಟೇಲ್ ಮುಂದುಗಡೆ ಸಂಚಾರ ನಿಷೇಧಿತ ಸ್ಥಳದಲ್ಲಿ ಆಟೋ ರಿಕ್ಷಾ ನಂ ಕೆ.ಎ.-32/ಎ-1072 ನೇದ್ದರ ಚಾಲಕನು ಆಟೋ ನಿಲ್ಲಿಸಿದಾಗ ನಾನು ಆಟೋ ತಗೆಯಲು ಹೇಳಿದಾಗ ಆಟೋ ಚಾಲಕ ವಿಠಲ್ ತಂದೆ ಶಿವಪ್ಪ ಧರೆನ್ನವರನು ಕರ್ತವ್ಯ ನಿರತ ನನಗೆ ಮುಂದಕ್ಕೆ ಹೋಗುವುದಿಲ್ಲ ಬೋಸಡಿ ಮಗನೆ ಅಂತಾ ಬೈದಾಗ ಆಗ ನಾನು ಸಂಗಡ ಕರ್ತವ್ಯದಲ್ಲಿದ್ದ ರಾಜೇಂದ್ರ ಪ್ರಸಾದ ಹೆಚ್.ಸಿ. ಇಬ್ಬರೂ ಕೂಡಿಕೊಂಡು ಯಾಕೆ ತೆಗೆಯುವದಿಲ್ಲ ಅಂತಾ ಕೇಳಿದಾಗ ಆಟೋ ಚಾಲಕನು ಈ ಗುಲಬರ್ಗಾದಲ್ಲಿ ಸಂಚಾರಿ ನಿಯಂತ್ರಣ ಕರ್ತವ್ಯ ಹೇಗೆ ಮಾಡುತ್ತಿ ನೋಡಿಕೊಳ್ಳುತ್ತಿನಿ ಅಂತಾ ಬೆದರಿಕೆ ಹಾಕುತ್ತಾ ಸಮವಸ್ರ್ತ ಹಿಡಿದು ಜಗ್ಗಾಡಿ ಶರ್ಟನ್ನು ಹರಿದಿದ್ದು ಅಲ್ಲದೇ ಕರ್ತವ್ಯಕ್ಕೆ ಅಡೆತಡೆಯನ್ನುಂಟು ಮಾಡಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

GULBARGA DIST REPORTED CRIMES

ಹಲ್ಲೆ ಪ್ರಕರಣ:
ಮಳಖೇಡ ಠಾಣೆ:
ದೇವಿಂದ್ರಪ್ಪ ತಂದೆ ಕರೆಪ್ಪ ಸಿಂಗೆನವರ ಸಾ|| ಹಂಗನಳ್ಳಿ ತಾ|| ಸೇಡಂ ರವರು ನಾನು ಹೊಲ ಕಡತ ಹಾಕಿಕೊಂಡ ಗುರುಲಿಂಗಪ್ಪ ಗೌಡರ ಹೊಲದಲ್ಲಿ ಕೆಲಸ ಮಾಡುತ್ತ ಇದ್ದಾಗ ಸಾಯಂಕಾಲ ಸುಮಾರಿಗೆ ಮರೆಪ್ಪ ತಂದೆ ಪೀರಪ್ಪ ಕಲಕಂಬದವರ ಸಾ|| ಹಂಗನಳ್ಳಿ ಇತನು ತನ್ನ ದನಗಳನ್ನು ಮೇಯಿಸುತ್ತಾ ಹೋಲದಲ್ಲಿ ಬಂದಾಗ ನಮ್ಮ ಹೊಲದಲ್ಲಿ ಯಾಕೆ ದನಗಳನ್ನು ಹೊಡೆದುಕೊಂಡು ಹೊರಟಿದ್ದಿ ಅಂತ ಕೆಳಿದ್ದಕ್ಕೆ ಮರೆಪ್ಪಾ ಇತನು ಅವಾಚ್ಯವಾಗಿ ಬೈದು ತನ್ನ ಹತ್ತಿರ ಇದ್ದ ಕೊಡಲಿಯಿಂದ ಎಡಗೈ ಮೊಳಕೈ ಹತ್ತಿರ ಕೊಡೆದು ರಕ್ತ ಗಾಯಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹಲ್ಲೆ ಪ್ರಕರಣ:

ಅಶೋಕ ನಗರ ಠಾಣೆ : ಶ್ರೀ ಮಾಣಿಕರೆಡ್ಡಿ ತಂದೆ ಗುಂಡಾರೆಡ್ಡಿ ಅನಂತರೆಡ್ಡಿ ಸಾ: ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ದಿನಾಂಕ: 28-7-2011 ರಂದು ಬೆಳಿಗ್ಗೆ ಕೇಂದ್ರ ಬಸ್ಸ ನಿಲ್ದಾಣದ ಎದುರುಗಡೆ ಇರುವ ಕಮಲ ಹೋಟಲ ಎದುರಿನ ರೋಡಿನ ಮೇಲೆ ನಿಂತಾಗ ರಾಜೇಶ ಮತ್ತು ಇನ್ನು ಇಬ್ಬರು ಬಂದು ಪ್ಲಾಟ ಮಾರಾಟದ ಹಣದ ವಿಷಯದಲ್ಲಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ತಲೆಗೆ ಮತ್ತು ನನ್ನ ಬಲಗಡೆ ಕಾಲಿನ ಟೊಂಕಿನ ಮೇಲೆ ಒದ್ದು ಗುಪ್ತ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಶೇಖರ ತಂದೆ ಸಂಗಣ್ಣಪ್ಪ ಉಪ್ಪಿನ ಗುಲಬರ್ಗಾ   ರವರು ನಾನು ದಿನಾಂಕ: 27-07-2011 ರಂದು ಬೆಳಗ್ಗೆ  ಐವಾನ ಈ ಶಾಹಿ ರೋಡಿನಲ್ಲಿರುವ ಕುವೇಂಪು ನಗರ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ:ಕೆಎ 32 ಎ 8295 ನೇದ್ದರ ಚಾಲಕ ತನ್ನ ಅಟೋವನ್ನು ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಿ.ವಿ.ಎಸ್.ಮೇಲೆ ನಂ: ಕೆಎ 32 ವಿ 2146 ನೆದ್ದರ ಮೇಲೆ ಬರುತ್ತಿದ್ದ ಸಿದ್ದಣ್ಣ ಮೇಳಕುಂದಿ ಇವರಿಗೆ ಎದುರಿನಿಂದ ಡಿಕ್ಕಿ ಪಡಿಸಿ ತನ್ನ ಅಟೊರೀಕ್ಷಾ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಹರಣ ಪ್ರಕರಣ:
ಗ್ರಾಮೀಣ ಠಾಣೆ.
ಶ್ರೀ ಶಿವಶರಣಪ್ಪಾ ತಂದೆ ಸಾಯಿಬಣ್ಣಾ ಬೆಳಕೋಟಾ ಸಾ; ಭೀಮನಗರ ರಾಮನಗರ ಕಾಲೂನಿ ರಿಂಗರೋಡ ಗುಲಬರ್ಗಾ ರವರು ನನ್ನ ಇಬ್ಬರು ಮಕ್ಕಳಾದ ಪುಷ್ಪಾ 15 ವರ್ಷ ಮತ್ತು ಅಂಬಿಕಾ 11 ವರ್ಷ ಇಬ್ಬರು ರಾಮ ನಗರದಲ್ಲಿರುವ ಶಿವಲಿಂಗೇಶ್ವರ ಹಿರಿಯ ಪ್ರಾರ್ಥಮಿಕ ಶಾಲೆಯ ಹತ್ತಿರ ಗೋಗುತ್ತಿರುವಾಗ ಶಿವಕುಮಾರ ತಂದೆ ಸಿದ್ದಪ್ಪಾ ಶಿಲ್ಡ ಇತನು ಬಂದು ನನ್ನ ಮಗಳು ಅಪ್ರಾಪ್ತ ಬಾಲಕಿ ಪುಷ್ಪಾ ಇವಳಿಗೆ ದಿನಾಂಕ. 27-07-2011 ರಂದು ಮುಂಜಾನೆ ಜಬರ ದಸ್ತಿಯಿಂದ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಪಹರಿಸಿಕೊಂಡು ಹೋಗಲು ಆತನ ಹೆಂಡತಿ ರಮಾಬಾಯಿ , ತಂದೆಯಾದ ಸಿದ್ದಪ್ಪಾ ಶಿಲ್ಡ ತಾಯಿ ಮಹಾದೇವಿ ಹಾಗು ಕಾರ ಚಾಲಕ ಇವರು ಅಪಹರಿಸುವದಕ್ಕೆ ಸಹಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ: ದಾಖಲಾಗಿದೆ.

ಅಫಘಾತ ಪ್ರಕರಣ:

ಗ್ರಾಮೀಣ ಠಾಣೆ  :   ಶ್ರೀ ಮಲ್ಲೇಶಿ ತಂದೆ ಸಾಬಣ್ಣ ಬುಡಗ ಜಂಗಮ ಸಾ: ದಂಡೋತಿ ತಾ: ಚಿತ್ತಾಪೂರ ರವರು ನಾನು ನನ್ನ ಹೆಂಡತಿ ಶಾಂತಮ್ಮ ಹಾಗು ಮಗ ಆಕಾಶ ಕೂಡಿಕೊಂಡು ದಿನಾಂಕ 28-7-11 ರಂದು ಮಧ್ಯಾಹ್ನ ಚಿಂಚೋಳಿ ಕ್ರಾಸ ಹತ್ತಿವಿರುವ ವೀರಭದ್ರಶ್ವೇರ ಗುಡಿಯ ಎದುರಿನ ರಸ್ತೆಯಲ್ಲಿ ಹೊರಟಿದ್ದು, ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಆಟೋ ಕೆಎ 32 ಎ 8502 ನೇದ್ದರ ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ಹಾಗೂ ಅಡ್ಡಾ ತಿಡ್ಡಿ ನಡೆಸುತ್ತಾ ಬಂದವನೇ ರೋಡ ಬದಿ ಹೊರಟ ನನ್ನ ಮಗ ಆಕಾಶನಿಗೆ ಡಿಕ್ಕಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.