POLICE BHAVAN KALABURAGI

POLICE BHAVAN KALABURAGI

30 October 2016

KALABURAGI DISTRICT REPORTED CRIMES

ಗ್ರಾಮೀಣ ಪೊಲೀಸ್ ಠಾಣೆ:
ಅಪರಿಚಿತ ಶಪ ಪತ್ತೆ: ದಿನಾಂಕ. 29-10-2016 ರಂದು ಶ್ರೀ. ಮಹಮ್ಮದ ರಫೀಕ ತಂದೆ ಮಹಮ್ಮದ ಮಹಿಬೂಬಸಾಬ ಸಾ;ಬುಲಂದ ಪರ್ವೆಜ ಕಾಲೂನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ.28-10-2016 ರಂದು ರಾತ್ರಿಯಿಂದ ದಿನಾಂಕ 29-10-2016 ರಂದು ಬೆಳಗಿನ ಜಾವದ ಮಧ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಫಯೂಮ ಸೌದಿ ಇವರ ಕಟ್ಟಡ ಮನೆಯ ಎದರುಗಡೆ ಸಿಟೌಟ ತರಹ ಇರುವ ರೂಮಿನ ಜಾಗೆಯಲ್ಲಿ ಸದರಿ ಅಪರಿಚಿತ ವ್ಯಕ್ತಿಗೆ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹರಿತವಾದ ಚಾಕುದಿಂದ ಹೊಡೆದು ಭಾರಿ ಗಾಯಗೊಳಿಸಿ ಕೊಲೆ ಮಾಡಿ  ಆತನ ಹತ್ತಿರ ಯಾವುದೆ ಸಾಕ್ಷಿಗಳನ್ನು ಇಡದಂತೆ ಸಾಕ್ಷಿ ನಾಶ ಪಡಿಸಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಕೊಲೆಯಾದ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಮತ್ತು ರಕ್ತ ಸಮ್ಮಂದಿಕರ ಪತ್ತೆ ಹಾಗೂ ಕೊಲೆ ಮಾಡಿದ ಆಪಾದಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ  ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊರ್ಳಳಲಾಗಿದೆ.
ಚೌಕ ಪೊಲೀಸ್ ಠಾಣೆ:
ಬಾಲಕ ಕಾಣೆ ಪ್ರಕರಣ: ದಿನಾಂಕ 29.10.2016 ರಂದು ಶ್ರೀಮತಿ ದ್ರೌಪತಿ ಗಂಡ ಅನಿಲಕುಮಾರ ದಾಸರ ಸಾಃ ಬೇಳಕೋಟಾ ತಾಃಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಾನು ಪಿನ್ನು, ಹಣಗಿ ವ್ಯಾಪಾರ ಮಾಡಿಕೊಂಡು ಗಂಡ ಹಾಗೂ ಮಕ್ಕಳೊಂದಿಗೆ ಬೇಲಕೋಟಾ ಗ್ರಾಮದಲ್ಲಿ ವಾಸವಾಗಿದ್ದು. ತನ್ನ ಗಂಡ ಅನಿಲ ಕುಮಾರ ಇವರು ಡ್ರೈವರ್ ಕೆಲಸ ಮಾಡಿಕೊಂಡು ಇರುತ್ತಾರೆ. ನನ್ನ ಸೋಹದರ ಮಾವ ವೆಂಕಪ್ಪ ಇವರ ಮಗಳಾದ ಕಮಲಾಬಾಯಿ ಅವರ ಮಗನಾದ ಸಾಯಿರಾಮ ತಂದೆ ನರಸಿಂಹಲು ದಾಸರ ನಮ್ಮ ಹತ್ತಿರವೆ ಇದ್ದು ವಿಧ್ಯಾಬ್ಯಾಸ ಮಾಡುತ್ತಿದ್ದು. ದಿಃ 26.10.2016 ರಂದು ಸಾಮಾನು ಖರಿದಿ ಮಾಡುವ ಸಲುವಾಗಿ ತರಕಾರಿ ಮಾಕೆðಟ ಹತ್ತಿರ ಇರುವ ಚೈನಾ ಕಾಂಪ್ಲೆಕ್ಸಗೆ ಬಂದು ನಾನು ಸಾಮಾನು ಖರಿದಿ ಮಾಡುತ್ತಿದ್ದಾಗ ನನ್ನ ಸಂಗಡ ಬಂದಿದ್ದ ಸಾಯಿರಾಮನು ಅಂದಾಜು 04.00 ಗಂಟೆ ಸುಮಾರಿಗೆ ಚೈನಾ ಕಾಂಪ್ಲೇಕ್ಸ ಹತ್ತೀರದಿಂದ ತಪ್ಪಿಸಿಕೊಂಡಿದ್ದು ಹುಡುಕಾಡಿದರೂ ಸಹಃ ಸಿಕ್ಕಿರುವುದಿಲ್ಲಾ, ನಂತರ ಈ ವಿಷಯವನ್ನು ನನ್ನ ಗಂಡನಿಗೆ ತಿಳಿಸಿದ್ದು ಅವರು ಸಹಃ ಕಲಬುರಗಿ ಬಂದು ಏಲ್ಲಾ ಕಡೆಗಳಲ್ಲಿ, ನಮ್ಮ ಬಂಧು ಬಳಗದಲ್ಲಿ, ದೇವಸ್ಥಾನಗಳಲ್ಲಿ, ಸಿಟಿ ಬಸ್ ಸ್ಟ್ಯಾಂಡ ಹತ್ತೀರ, ಸೂಪರ ಮಾಕೆðಟದ ಮುಂತಾದ ಕಡೆಗಳಲ್ಲಿ ಇಬ್ಬರೂ ಸೇರಿ ಇಂದಿನವರೆಗೂ ಹುಡುಕಾಟ ಮಾಡಿದರೂ ಸಹಃ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ಸೋದರಳಿಯನ ಪತ್ತೆ ಮಾಡಿಕೊಡುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.