POLICE BHAVAN KALABURAGI

POLICE BHAVAN KALABURAGI

25 March 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 24/03/2017 ರಂದು ಸಾಯಂಕಾಲ ಶಹಾಬಾದ ಪಟ್ಟಣದ ಮಿಲತ್ ನಗರ ಮಜೀದ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಬಾಷ ಪಿ ಐ ಶಹಾಬಾದ ನಗರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ಶ್ರೀಧರ ತಂದೆ ನಾಗಪ್ಪಾ ಅಲಬನೂರು ಈತನಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1820 - 00 ರೂ,  ಒಂದು ಮಟಕಾ ನಂಬರ್ ಬರೆದ ಚೀಟಿ , ಒಂದು ಬಾಲ್ ಪೆನ್ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಲಕ್ಷ್ಮಣ ಮಾಲಿಪಾಟೀಲ ಸಾ|| ಮೋಗನಟಗಾ ಇವರ ಅಣ್ಣತಮ್ಮಕಿಯ ಸಿದ್ದಪ್ಪ ತಂದೆ ಪಂಡೆಪ್ಪ ಮಾಲಿ ಪಾಟೀಲ ಇವರ ಹೊಲ ಹೋಳೆಗೆ ಹೋಗುವ ದಾರಿಯಲ್ಲಿ ಇರುತ್ತದೆ ಅವರ ಹೊಲದಲ್ಲಿ ಕೆನಲ ಹಾಯಿದಿದ್ದು ಅದರ ಪಕ್ಕದಲ್ಲಿ ರಸ್ತೆಯ ಮೇಲೆ ನಮ್ಮೂರ ಹೊಳೆಯಿಂದ ಉಸುಕು ತುಂಬಿದ ವಾಹನಗಳು ಹಾಯಿದು ಹೋಗುತ್ತಿದ್ದರಿಂದ ಕಾಲುವೆ ಮುಚ್ಚಿದ್ದು ನಂತರ ಆ ಕಾಲುವೆ ರಿಪೇರಿ ಮಾಡಿದ್ದು ಇರುತ್ತದೆ. ಆದರೆ ಅದೇ ದಾರಿಯಲ್ಲಿ ಪೈಪಲೈನ ಪೈಪಗಳು ಹಾಳಾಗಿದ್ದು ಅದಕ್ಕೆ ರಿಪೇರಿ ಮಾಡಿಸಿರುದಿಲ್ಲಾ ಈ ವಿಚಾರದಲ್ಲಿ ನಾನು ಊರಲ್ಲಿ ಉಸುಕು ಹೊಡೆವರಿಗೆ ಪೈಪು ರಿಪೇರಿ ಮಾಡಿಸಿರಿ ಅಂದಿದಕ್ಕೆ ದಿನಾಂಕ: 22/03/2017 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಮ್ಮೂರ ಕನಕದಾಸ ಚೌಕ ಹತ್ತಿರ ನಿಂತಾಗ ನಮ್ಮೂರ ದ್ಯಾವಪ್ಪ ತಂದೆ ಶಿವರಾಯ ಮಾಲಿಪಾಟೀಲ, ಚಂದ್ರಶ್ಯಾ ತಂದೆ ಶಿವರಾಯ ಮಾಲಿಪಾಟೀಲ, ಹಣಮಂತ ತಂದೆ ದ್ಯಾವಪ್ಪ ಮಾಲಿಪಾಟೀಲ ಇವರೆಲ್ಲರೂ ನನ್ನ ಹತ್ತಿರ ಬಂದು ಏ ರಂಡಿ ಮಗನೆ ಏ ಲಚ್ಯಾ ಊರ ಮುಸಾಬರಿ ಮಾಡಬೇಕಲೆ ಅಂತ ಬೈದು ಹಣಮಂತನು ಬಡಿಗೆಯಿಂದ ಹೊಟ್ಟೆಗೆ ಹೋಡೆದನು ದ್ಯಾವಪ್ಪ ಬೆನ್ನ ಮೇಲೆ ಕೈಯಿಂದ ಹೋಡೆದನು. ಕಾಲಿನಿಂದ ಟೊಂಕಕ್ಕೆ ಒದ್ದನು. ಚಂದ್ರಶ್ಯಾ ಇವನು ನನಗೆ ಈ ರಂಡಿ ಮಗನಿಗೆ ಬಿಡಬ್ಯಾಡ್ರಿ ಹೋಡೆದು ಖಲಾಸ ಮಾಡಿರಿ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಸಿದ್ದಪ್ಪ ಪೊಲೀಸ್ ಬಿರಾದರ ಸಾ|| ಕೂಕನೂರ ತಾ|| ಜೆವರ್ಗಿ ರವರ ಮಗಳಾದ ದೇವಕ್ಕಿ ವಯಸ್ಸು 22 ವರ್ಷ ಇವಳಿಗೆ ಅರಳಗುಂಡಗಿ ಗ್ರಾಮದ ಶಂಕ್ರೆಪ್ಪ ಮುದಬಸಪ್ಪಗೋಳ ಇವರ ಮಗನಾದ ಮಲ್ಲು @ ಮಲ್ಲಿನಾಥ ಇವನಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಊರಿನ ಹಿರಿಯರ ಪ್ರಕಾರ ಮಾತುಕತೆ ಮಾಡಿ 9 .1/2 ಬಂಗಾರ ಮಾತಾಡಿ ಮದುವೆಯ ಕಾಲಕ್ಕೆ 9.1/2 ಬಂಗಾರ , ಹಾಗು ಗೃಹ ಬಳಕೆ ಸಾಮಾನುಗಳು ಮತ್ತು ಬಟ್ಟೆ-ಬರೆ ಇತ್ಯಾದಿ  ಕೊಟ್ಟು ಮದುವೆಯನ್ನು ದಿನಾಂಕ 01-05-2014 ರಲ್ಲಿ ಅರಳಗುಂಡಗಿ ಗ್ರಾಮದ ವರನ ಮನೆಯ ಮುಂದೆ ಮದುವೆ ಮಾಡಿಕೊಟ್ಟಿರುತ್ತೆವೆ. ನಂತರ ನನ್ನ ಮಗಳಾದ ದೇವಕ್ಕಿ ಇವಳಿಗೆ ಮದುವೆಯಾದ 1 ವರ್ಷದ ವರೆಗೆ ಆಕೆಯ ಗಂಡ ಮತ್ತು ಮನೆಯವರೆಲ್ಲರೂ ಅನ್ಯೋನ್ಯವಾಗಿದ್ದರು. ತದನಂತರ ನನ್ನ ಮಗಳಾದ ದೇವಕ್ಕಿ ಇವಳಿಗೆ 1) ಮಲ್ಲಿನಾಥ @ ಮಲ್ಲು ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 2) ಭಾವ ಧರೆಪ್ಪ ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 3) ಮಾವ ಶೆಂಕ್ರೆಪ್ಪ ತಂದೆ ಧರೆಪ್ಪ ಮುದಬಸಪ್ಪಗೋಳ, 4) ಅತ್ತೆ ಕಸ್ತೂರಿಬಾಯಿ ಗಂಡ ಶೇಂಕ್ರೆಪ್ಪ ಮುದಬಸಪ್ಪಗೋಳ, 5) ನೇಗೆಣಿ ಮಲ್ಲಮ್ಮ ಗಂಡ ಧರೆಪ್ಪ ಮುದಬಸಪ್ಪಗೋಳ ಹೀಗೆಲ್ಲರೂನಾವು ಹೊಲದಲ್ಲಿ ಬಾವಿ ಹೊಡಿಸಬೇಕಾಗಿದೆ ನೀನು ನಿನ್ನ ತವರು ಮನೆಯಿಂದ 5 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ”  ಅಂತಾ ಎಲ್ಲರೂ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದ ಬಗ್ಗೆ ನನ್ನ ಮಗಳು ಊರಿಗೆ ಬಂದಾಗ ನನಗೂ ನನ್ನ ಹೆಂಡಿತಿಯಾದ ಮಹಾಂತಮ್ಮ, ಹಾಗು ನನ್ನ ಮಕ್ಕಳಾದ ಶರಣಗೌಡ, ನಾನಾಗೌಡ ಹೀಗೆಲ್ಲರ ಎದುರಿಗೆ ನೆಡೆದ ಘಟನೆಯ ಬಗ್ಗೆ ಹೇಳುತ್ತಿದ್ದಾಗ ನಾನು ನನ್ನ ಮಗಳಿಗೆ ಈಗಾಗಲೆ ಎಲ್ಲ ಮಕ್ಕಳಿಗೆ ಮದುವೆ ಮಾಡಿಕೊಟ್ಟು ಖಾಲಿಯಾಗಿದ್ದೆನೆ ಅವರೂ ಕೆಳಿದಷ್ಟು ಹಣ ನಾನು ಎಲ್ಲಿಂದ ತಂದು ಕೊಡಲಿ ಅಂತಾ ಸಮಾಧಾನ ಪಡಿಸಿದೆನು ಈ ಬಗ್ಗೆ ಕೊಣಸಿರಸಗಿ ಗ್ರಾಮದ ಚೆಂದಪ್ಪಗೌಡ ಹಾಗು ಅರಳಗುಂಡಗಿ ಗ್ರಾಮದ ಹುಲಿಕಂಠರಾಯಗೌಡ ಮತ್ತು ನಾನು, ನನ್ನ ಮಗಳಾದ ದೇವಕ್ಕಿ ಹಿಗೇಲ್ಲರೂ ಕೂಡಿಕೊಂಡು ಬೀಗರ ಮನೆಗೆ ಹೋಗಿ ಆಕೆಯ ಗಂಡ ಹಾಗು ಮನೆಯವರೆಲ್ಲರಿಗೂ ಇನ್ನು ಮುಂದೆ ದೇವಕ್ಕಿ ಇವಳಿಗೆ ಸರಿಯಾಗಿ ನೆಡೆಸಿಕೊಂಡು ಹೋಗುವಂತೆ ತಿಳುವಳಿಕೆ ಹೇಳಿ ನನ್ನ ಮಗಳಿಗೆ ಅಲ್ಲಿಯೇ ಬಿಟ್ಟು ಬಂದಿರುತ್ತೆವೆ. ದಿನಾಂಕ 23-03-2017 ರಂದು ನಾನು ನನ್ನ ಹೆಂಡತಿ ಮಕ್ಕಳು  ಮದ್ಯಾನ 2 ಗಂಟೆಗೆ ಮನೆಯಲ್ಲಿದ್ದಾಗ, ನಮ್ಮ ಅಣ್ಣ ತಮ್ಮಕೀಯಾ ಬಾಪುಗೌಡ ತಂದೆ ಸಾಯಬಣ್ಣಗೌಡ ಪೊಲೀಸ್ ಪಾಟೀಲ್ ಇತನು ನಮ್ಮ ಮನಗೆ ಬಂದು ಹೇಳಿದ್ದೆನೆಂದರೆ ನಿಮ್ಮ ಮಗಳಾದ ದೇವಕ್ಕಿ ಇವಳು ಶರಣಗೌಡ ಹಿರೇಗೌಡರ ಇವರ ಹೊಲದ ಬಾವಿಯಲ್ಲಿ ಬಿದ್ದಿರುತ್ತಾಳೆ ಅಂತಾ ಹೇಳಿದ ಕೂಡಲೆ ಗಾಭರಿಗೊಂಡು ನಾನು, ನನ್ನ ಹೆಂಡಿತಿಯಾದ ಮಹಾಂತಮ್ಮ, ಹಾಗು ನನ್ನ ಮಗನಾದ ನಾನಾಗೌಡ ಮತ್ತು ನನ್ನ ಅಣ್ಣತಮ್ಮಕೀಯಾ ಶರಣಗೌಡ, ಊರಿನ ಜನರೊಂದಿಗೆ ಅರಳಗುಂಡಗಿ ಗ್ರಾಮದ ಶರಣಗೌಡ ಹಿರೇಗೌಡ ಇವರ ಹೊಲದ ಬಾವಿ ಹತ್ತಿರ ಹೋಗಿ ನೋಡಲಾಗಿ ಬಾವಿಯ ನೀರಲ್ಲಿ ಶವವು ಮುಳಿಗಿದ್ದು ನನ್ನ ಮಗನಾದ ನಾನಾಗೌಡ ಹಾಗು ಕೊಣಶಿರಸಗಿ ಗ್ರಾಮದ ಮಡಿವಾಳಪ್ಪಗೌಡ ತಂದೆ ಚೆಂದಪ್ಪಗೌಡ ಮಾಲಿ ಪಾಟೀಲ್ ಇಬ್ಬರು ಕೂಡಿಕೊಂಡು ಬಾವಿಯಿಂದ ಶವವನ್ನು ಮೇಲೆ ತಂದು ಹಾಕಿದರು. ಆಗ ನಾನು ನೋಡಲಾಗಿ ನನ್ನ ಮಗಳಿಗೆ ಮುಖಕ್ಕೆ ಗುದ್ದಿದ್ದರಿಂದ ಅಲ್ಲಲ್ಲಿ ಗಾಯಗಳಾಗಿ ಹಲ್ಲಿನಿಂದ ರಕ್ತ ಸೊರುತ್ತಿತ್ತು, ಕೀವಿಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು, ತೆಲೆಯ ಮೇಲೆ ಭಾವು ಬಂದಿತ್ತು. ನನ್ನ ಮಗಳಿಗೆ ಮೇಲ್ಕಂಡ 1) ಮಲ್ಲಿನಾಥ @ ಮಲ್ಲು ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 2) ಭಾವ ಧರೆಪ್ಪ ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 3) ಮಾವ ಶೆಂಕ್ರೆಪ್ಪ ತಂದೆ ಧರೆಪ್ಪ ಮುದಬಸಪ್ಪಗೋಳ, 4) ಅತ್ತೆ ಕಸ್ತೂರಿಬಾಯಿ ಗಂಡ ಶೇಂಕ್ರೆಪ್ಪ ಮುದಬಸಪ್ಪಗೋಳ, 5) ನೇಗೆಣಿ ಮಲ್ಲಮ್ಮ ಗಂಡ ಧರೆಪ್ಪ ಮುದಬಸಪ್ಪ ಗೋಳ ಹೀಗೆಲ್ಲರೂ ವರದಕ್ಷಣೆ ರೂಪದಲ್ಲಿ ಹಣ ತರುವಂತೆ ಪೀಡಿಸಿ ನನ್ನ ಮಗಳಿಗೆ ಈಜು ಬರುತ್ತಿದ್ದು ಅವರಿಗೆ ಗೊತ್ತಿದ್ದರಿಂದ ಅವಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೈಯಿಂದ ಮತ್ತು ಯಾವುದೋ ವಸ್ತುವಿನಿಂದ ಎಲ್ಲಿಯೋ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಬಾವಿಯಲ್ಲಿ ಒಗೆದಿರುತ್ತಾರೆ. ಸದರಿ ಘಟನೆಯು ಬೆಳ್ಳಿಗ್ಗೆ 10 ಗಂಟೆಯಿಂದ 11 ಗಂಟೆಯ ಅವಧಿಯಲ್ಲಿ ಆಗಿರಬಹುದು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.