POLICE BHAVAN KALABURAGI

POLICE BHAVAN KALABURAGI

23 January 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಗುರುಶರಣ ತಂದೆ ಭೀಮರಾವ ಶಿರವಾಳ ಸಾ : ಜವಳಿ (ಡಿ) ತಾ:ಆಳಂದ  ಜಿ: ಕಲಬುರಗಿ ರವರು  ದಿನಾಂಕ. 22-01-2018 ರಂದು ತನ್ನ ಖಾಸಗಿ ಕೆಲಸದ ನಿಮಿತ್ಯ ಜವಳಗಿಯಿಂದ ನಾನು ಕಲಬುರಗಿಗೆ ಬಂದಿರುತ್ತೇನೆ ನನ್ನ ಮಗ ವಿನೋದ ಶಿರವಾಳ ಕೂಡಾ ಕಲಬುರಗಿಯಲ್ಲಿದ್ದನ್ನು  ಸಂಜೆ ನನ್ನ ಮಗ ವಿನೋದನು ಜವಳಗಾಕ್ಕೆ ಹೋಗುತ್ತೆನೆ ಅಂತಾ 7-00 ಗಂಟೆ ಸುಮಾರಿಗೆ  ತನ್ನ ಯಮಹಾ ಎಫ್.ಝಡ್  ನಂ.ಕೆ.ಎ.32 ಇಡಿ.5816 ನೆದ್ದರ ಮೇಲೆ ದೇವಿನಗರನ ಮನೆಯಿಂದ ಒಬ್ಬನೆ ಹೋದನು ರಾತ್ರಿ 7-45 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿರುವಾಗ  ಶರಣಬಸಪ್ಪಾ ನರೋಣಿ ಎಂಬುವವರು ನನಗೆ ಫೋನ ಮಾಡಿ ತಿಳಿಸಿದ್ದು ಏನೆಂದರೆ   ವಿಶ್ವರಾಧ್ಯ ಗುಡಿಯನಂತರ ರೈಲ್ವೆ  ಬ್ರಿಡ್ಜ ನಂತರ ಉತಾರಿಗೆ ನನ್ನ ಮಗ ವಿನೋದ ಶಿರವಾಳ ಇತನಿಗೆ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ಭಾರಿಗಾಯವಾಗಿರುತ್ತದೆ ಬೇಗನೆ ಸ್ಥಳಕ್ಕೆ ಬರುವಂತೆ ಹೇಳಿದರು ಆಗ ನಾನು ಗಾಬರಿಗೊಂಡು ನಾನು ಮತ್ತು ನಮ್ಮ ಸಮ್ಮಂದಿಕರಾದ ಮಚೇಂದ್ರ ತಂದೆ  ಕರಬಸ್ಸಪ್ಪಾ ನರೋಣಿ ಹಾಗೂ ಶರಣಬಸ್ಸಪ್ಪಾ ತಂದೆ ಬಸವರಾಜ ಭೂಸನೂರ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಹಕೀಕತ್ ನಿಜವಿದ್ದು  ನನ್ನ ಮಗ ವಿನೋದ ಶಿರವಾಳ ಇತನಿಗೆ  ನೋಡಲಾಗಿ ತಲೆಯ ಎಡಬಾಗದಲ್ಲಿ , ಮೆಲಕಿಗೆ ಭಾರಿ ಪೆಟ್ಟಾಗಿ ರಕ್ತಗಾಯ ಮತ್ತು ಎಡಕಿವಿಯಿಂದ ಬಾಯಿಯಿಂದ ರಕ್ತಸ್ರಾವವಾಗತಿತ್ತು .ಎಡಗೈಭುಜಕ್ಕೆ ಮೋಳಕೈಗೆ ಭಾರಿ  ಪೆಟ್ಟಾಗಿತ್ತು ಆಗ ಅಲ್ಲಿಯೇ ಹಾಜರಿದ್ದ ಶರಣಬಸ್ಸಪ್ಪ ನರೋಣಿ ಮತ್ತು ಚಿದಾನಂದ ಡೊಳ್ಳಿ ಎಂಬುವವರಿಗೆ ವಿಚಾರಿಸಲಾಗಿ 7-30 ಪಿ.ಎಂ.ದ ಸುಮಾರಿಗೆ ಆಳಂದರೋಡಿನ ವಿಶ್ವರಾಧ್ಯ ಗುಡಿಯ ನಂತರ ರೈಲ್ವೆ ಬ್ರಿಡ್ಜ ಉತಾರಿಗೆ ಸ್ವಲ್ಪ ಅಂತರದಲ್ಲಿ ತಮ್ಮಿಂದ ಮುಂದೆ ನನ್ನ ಮಗ ವಿನೋದನು ತನ್ನ ಮೋಟಾರ ಸೈಕಲ್ ಮೇಲೆ ಆಳಂದ ಕಡೆಗೆ ಹೋಗುತ್ತಿರುವಾಗ  ಅದೇ ವೇಳಗೆ ಆಳಂದ ಕಡೆಯಿಂದ ಒಂದು ಮೋಟರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾ ದಿಡ್ಡಿಯಾಗಿ ಓಡಿಸಿಕೊಂಡು ಬಂದು ವಿನೋದನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ವಿನೋದನು ಜೋರಾಗಿ ಕೆಳಗೆ ಬಿದ್ದು ತಲೆಗೆ , ಮೆಲಕಿಗೆ ಬಾರಿಗಾಯಗೊಂಡಿದ್ದು ಇರುತ್ತದೆ ಅಂತಾ ತಿಳಿಸಿದ್ದರು  ಆಗ ರೋಡಿಗೆ ಹೋಗುವ ವಾಹನಗಳ ಬೆಳಕಿನಲ್ಲಿ ಡಿಕ್ಕಿ ಹೊಡೆದ ಮೋಟಾರ ಸೈಕಲ್ ನಂಬರ ನೋಡಲಾಗಿ ಹೀರೋ ಸ್ಪ್ಲೆಂಡರ ನಂ.ಕೆ.ಎ.39 ಜೆ. 0733 ನೆದ್ದು  ಅದರ ಚಾಲಕನು ಕೂಡಾ ಗಾಯಗೊಂಡು ಸೈಡಿಗೆ ಕುಳಿತಿದ್ದು ಆತನ ವಿಚಾರಿಸಲಾಗಿ ಸೈಬಣ್ಣಾ ತಂದೆ ಗುಂಡಪ್ಪಾ ಆಳಂದ ಸಾಚ ದುತ್ತರಗಾಂವ ತಾ/ಆಳಂದ  ಅಂತಾ ತಿಳಿಸಿದು ಅವನಿಗೆ ಹಣೆಯ ಮೇಲೆ ರಕ್ತಗಾಯ, ಬಲಗಣ್ಣಿ ಪಕ್ಕದಲ್ಲಿ ರಕ್ತಗಾಯ , ತುಟಿಯ ಕೆಳಗೆ ಗದಕ್ಕೆ ರಕ್ತಗಾಯ, ಬಲಗೈ ಮೋಳಕಯಗೆ ಗುಪ್ತ ಪೆಟ್ಟಾಗಿದ್ದು ಎಡಗಾಲು ಮೋಳಕಾಲು ಕೆಳಗೆ ರಕ್ತಗಾಯವಾಗಿರುತ್ತದೆ. ನಂತರ ಯಾರೋ ಅಂಬುಲೆನ್ಸಿಗೆ ಫೋನ ಮಾಡಿದರಿಂದ ಸ್ವಲ್ಪ ಹೊತ್ತಿನಲ್ಲಿ 108 ಅಂಬುಲೆನ್ಸ ಬಂದಿದ್ದು ಅವರು ವಿನೋದನನ್ನು ಪರೀಶಿಲಿಸಲಾಗಿ ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.         
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22.01.18 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೃತ ಶರಣಪ್ಪಾ ಇತನು ಮೋಟಾರ ಸೈಕಲ ನಂ ಕೆಎ-32-ಇಎ-5109 ನೇದ್ದನ್ನು ಚಲಾಯಿಸಿಕೊಂಡು ವೆಂಕಟೇಶ್ವರ ನಗರದೊಳಗಡೆಯಿಂದ ಹೋಗುವಾಗ ಗುರುನಾಥ ಇತನು ಮೋಟಾರ ಸೈಕಲ ನಂ ಕೆಎ-32-ವಾಯ್-2496 ನೇದ್ದನ್ನು ಎಸವಿಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೃತ ಶರಣಪ್ಪ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಶರಣಪ್ಪ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ ಅಂತಾ ಶ್ರೀಮತಿ ಶಂಕುತಾಲ ಗಂಡ ಶರಣಪ್ಪಾ ಕೋಲಾರ ವ: 58 ವರ್ಷ ಉ: ಮನೆ ಕೆಲಸ ಸಾ: ಸಕರ್ಾರಿ ಕಾಲೇಜ್ ಹಿಂದುಗಡೆ ವೆಂಕಟೇಶ ನಗರ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಕೇದಾರನಾಥ ತಂದೆ ಶರಣಬಸಪ್ಪಾ ಪಾಟೀಲ ಸಾಃ ಕೋರಳ್ಳಿ ಗ್ರಾಮ ತಾಃ ಆಳಂದ ಹಾಃವಾಃ ಗದಲೆಗಾಂವ್ ಕಲ್ಯಾಣ ಮಂಟಪದ ಹತ್ತಿರ ಕೈಲಾಸ ನಗರ ಕಲಬುರಗಿ ರವರು ದಿನಾಂಕ  21.01.2018 ರಂದು ತನ್ನ ವಯಕ್ತಿಕ ಕೆಲಸದ ಸಲುವಾಗಿ ನಾನು ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ತೆಗೆದುಕೊಂಡು ಊರಲ್ಲಿ ಕಬ್ಬು ಹಚ್ಚಿದ ಲೇಬರಗಳ & ರಸಗೊಬ್ಬರ ಇತ್ಯಾದಿ ಸಲುವಾಗಿ ಸಂಬಳ ಮಾಡಬೇಕಾಗಿದ್ದರಿಂದ ನಾನು ಮನೆಯಿಂದ 2,50,000/- ನಗದು ಹಣವನ್ನು ನನ್ನ ಬಳಿ ಇದ್ದ ನೀಲಿ ಬಣ್ಣದ ಬ್ಯಾಗಿನಲ್ಲಿ ಹಾಕಿಕೊಂಡು ಸದರಿ ಬ್ಯಾಗನ್ನು ಟವೇರಾ ವಾಹನದಲ್ಲಿನ ಬಾಕ್ಸಿನಲ್ಲಿ ಹಾಕಿಕೊಂಡು ಮಧ್ಯಾಹ್ನ ಅಂದಾಜು 2.30 ಗಂಟೆ ಸುಮಾರಿಗೆ ಮನೆಯಿಂದ ಬಂದು, ಸೂಪರ ಮಾರ್ಕೆಟದಲ್ಲಿ ನನ್ನ ಗೆಳೆಯನಾದ ಸಿದ್ದಲಿಂಗ ಡೊಲೆ ಇವರಿಗೆ ಭೇಟಿ ಮಾಡುವ ಸಲುವಾಗಿ ನನ್ನ ವಾಹನವನ್ನು ಹೆಡ್ ಪೋಸ್ಟ ಆಫೀಸ್ ಹತ್ತಿರ ನಿಲ್ಲಿಸಿ ನನ್ನ ವಾಹನಕ್ಕೆ ಲಾಕ್ ಮಾಡಿ ಹೋಗಿದ್ದು, ನಂತರ ಕೆಲಸ ಮುಗಿಸಿಕೊಂಡು ಸಾಯಂಕಾಲ 4.00 ಗಂಟೆ ಸುಮಾರಿಗೆ ಮರಳಿ ನಾನು ಕಾರ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ, ನನ್ನ ಕಾರಿನ್ ಡೋರ್ ಒಪನ್ ಆಗಿದ್ದು, ಪರೀಶಿಲಿಸಿ ನೋಡಿದಾಗ ಕಾರಿನಲ್ಲಿದ್ದ ಬಾಕ್ಸಿನ ಲಾಕ್ ಮುರಿದ್ದು, ಬಾಕ್ಸಿನಲ್ಲಿಟ್ಟ 2,50,000/- ಹಣದ ಬ್ಯಾಗ್ ಇರಲಿಲ್ಲಾ. ನಾನು ಗಾಭರಿಯಾಗಿ ಕೂಡಲೆ ಈ ವಿಷಯವನ್ನು ನನ್ನ ಗೆಳೆಯಂದಿರಾದ ಸಿದ್ದಲಿಂಗ್ ಡೋಲೆ, ಗುರಪ್ಪಾ ನೀಲಾ, ಮಹೇಶ ಹೂಲಸೂರಕರ್ ಇವರಗಳಿಗೆ ಫೋನ ಮಾಡಿ ವಿಷಯ ತಿಳಿಸಿದ್ದು ಅವರು ಸಹಃ ನಾನು ಕಾರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಸಹಃ ಹಣದ ಬ್ಯಾಗ್ ಪತ್ತೆ ಆಗಿರುವುದಿಲ್ಲಾ  ನಿನ್ನೆ ದಿಃ 21.01.2018 ರಂದು ಮಧ್ಯಾಹ್ನ 2.30 ರಿಂದ 4.00 ಗಂಟೆಯ ಅವಧಿಯಲ್ಲಿ ಹೆಡ್ ಪೋಸ್ಟ ಆಫೀಸ್ ಹತ್ತಿರ ನನ್ನ ಟವೇರಾ ವಾಹನ ನಂ ಕೆಎ17 ಎಂ8439 ನೇದ್ದನ್ನು ನಿಲ್ಲಿಸಿದ್ದು, ಆ ಕಾರಿನ ಬಾಕ್ಸಿನಲ್ಲಿಟ್ಟಿದ 2,50,000/- ಹಣದ ಬ್ಯಾಗ್ನ್ನು ಯಾರೋ ಕಳ್ಳರು ಕಾರಿನ ಡೋರ್ ಲಾಕನ್ನು ತೆಗೆದು ಕಾರಿನಲ್ಲಿಟ್ಟ ಬಾಕ್ಸಿನ ಲಾಕ್ ಮುರಿದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ: 21/01/2018 ರಂದು ಮಾಹಾಗಾಂವ ಠಾಣಾ ಹದ್ದಿಯ ಸಿರಗಾಪೂರ ಸಿಮಾಂತರದ ಬಬಲಾದಕ್ಕೆ ಹೊಗುವ ರಸ್ತೆ ಬದಿ 500 ಮೀಟರ ಅಂತರದಲ್ಲಿ ಸರಕಾರಿ ಗೈರಾಣಿ ಹೊಲದಲ್ಲಿನ ಮರದ ಕೆಳಗೆ ಇಸ್ಪೀಟ ಜೂಜಾಟ ಆಡುತ್ತಿದ್ದರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 6 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಗೈರೆ ವಿಚಾರಿಸಲು 1) ರೇವಣಸಿದ್ದಪ್ಪ ತಂದೆ ಮಲ್ಲಿಕಾರ್ಜುನ ಅಂಬಲಿ ಸಾ: ಕುರಿಕೊಟಾ 2) ಗುರುನಾಥ ತಂದೆ ಶರಣಪ್ಪ ಸಿಂಗೆ ಸಾ|| ಡೊಂಗರಗಾಂವ 3) ಸಾಯಿಬಣ್ಣ ತಂದೆ ಮೈಲಾರಿ ಹೊಳಕುಂದಾ ಸಾ|| ಜಗತ ಕಲಬುರಗಿ 4) ರವಿಂದ್ರ ತಂದೆ ಅಣ್ಣಪ್ಪ ಪಾಟೀಲ್ ಸಾ|| ಉದಯ ನಗರ ಕಲಬುರಗಿ 5) ಮಲ್ಲಿಕಾರ್ಜುನ ತಂದೆ ಶರಣಪ್ಪ ಸಾಗರ ಸಾ|| ಭಾಗ್ಯ ನಗರ ಕಲಬುರಗಿ 6) ಸಾಯಿಬಣ್ಣ ತಂದೆ ಅಣ್ಣಪ್ಪ ಮಿಂಚನಾಕರ ಸಾ|| ಎಸ್.ಬಿ. ಕಾಲೇಜ ಹತ್ತಿರ ರಾಮನಗರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52  ಇಸ್ಪೀಟ ಎಲೆಗಳು ನಗದು ಹಣ 10120-00 ರೂ. ಗಳನ್ನು ಜಪ್ತಿಪಡಿಸಿಕೊಂಡು ಸದರಿಯವರೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.