POLICE BHAVAN KALABURAGI

POLICE BHAVAN KALABURAGI

20 January 2012

GULBARGA DIST REPORTED CRIMES

ಕೊಲೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀಶೈಲ್ ತಂದೆ ಕಲ್ಯಾಣಿ ಭಿಮಪೂರೆ ಮುಖಜೂರಿ ತಾಆಳಂದ ರವರು ನಮ್ಮ ತಂದೆ ಕಲ್ಯಾಣಿ ಭೀಮಾಪುರೆ ಇವರು ಮತ್ತು ನಾವೆಲ್ಲರೂ ಕೂಲಿ ಕೆಲಸ ಮಾಡಿಕೊಂಡು ಮನೆಗೆ ಬಂದಿದ್ದು, ನಮ್ಮ ತಂದೆಯವರು ನಾವು ಪಾಲದಿಂದ ಮಾಡಿದ ಘಾಡೆಯವರ ಹೋಲಕ್ಕೆ ಉಳ್ಳಾಗಡ್ಡಿ ಕಿತ್ತುವ ಕೆಲಸಕ್ಕೆ ಹೋಗಿ ಬಂದಿರುತ್ತಾರೆ. ರಾತ್ರಿ 8.00 ಗಂಟೆ ಸುಮಾರಿಗೆ ನಮ್ಮ ತಂದೆಯವರು ಮನೆಯಿಂದ ಹೋರಗೆ ಹೋದರು ನಾನು ಸಹ ಮನೆಯ ಹೋರಗೆ ಹೋದೆನು ರಾತ್ರಿ 9.00 ಗಂಟೆಯ ಸುಮಾರಿಗೆ ನಾನು ಹೋರಗಿನಿಂದ ಮನೆಗೆ ಬಂದಿದ್ದು ನಮ್ಮ ತಮ್ಮ ದತ್ತಾ ಇವನು ನಾನು ನಾವು ಪಾಲದಿಂದ ಮಾಡಿದ ಘಾಡೆಯವರ ಹೋಲಕ್ಕೆ ಹೋಗಿದ್ದು ನಮ್ಮ ತಂದೆಯವರು ಹೋರಗೆ ಹೋದವರು ಮನೆಗ ಬಂದಿಲ್ಲ ನಾನು ಬರಬಹುದು ಅಂತಾ ತಿಳಿದು ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದೆನು, ಇಂದು ದಿನಾಂಕ 20/01/2012 ರಂದು ಮುಂಜಾನೆ ನಮ್ಮ ತಂದೆ ನಿನ್ನೆ ರಾತ್ರಿ ಮನೆಗೆ ಬರದೆ ಇರುವದರಿಂದ ಅವರ ಮೋಬೈಲ ಪೋನ ನಂಬರ
9739107677 ಕ್ಕೆ ಪೋನ ಮಾಡಿದೆನು ಪೋನ ಹತ್ತಿಲ್ಲಿಲ್ಲ, ಬೀಮರಾಯ ಡಗೆ ಇವರು ನನಗೆ ಕರೆದು ನಿಮ್ಮ ತಂದೆಯವರಿಗೆ ತಳವಾರ ಹೋಲದಲ್ಲಿ ಹೊಡೆದು ಬಿಸಾಡಿದ್ದಾರೆ ಅಂತಾ ಹೇಳಿದ್ದರಿಂದ ನಾನು ಮತ್ತು ಶರಣಪ್ಪ ಹೋಸಮನಿ ಹಾಗೂ ಇತರರೊಂದಿಗೆ ತಳವಾರ ಹೊಲಕ್ಕೆ ಹೋಗಿ ನೋಡಲು ಹೋಲದ ಬಂದಾರಿ ಹತ್ತಿರ ಶವ ಬಿದಿದ್ದು ಅವರಿಗೆ ನೋಡಲು ದೇಹದ ಭಾಗದಲ್ಲಿ ಭಾರಿ ರಕ್ತಗಾಯವಾಗಿರುತ್ತವೆ, ನಮ್ಮ ತಂದೆಯವರಿಗೆ ಯಾರೋ ಅಪರಿಚಿತರು ದಿನಾಂಕ:19/01/2012 ರ ರಾತ್ರಿ 8.00 ಗಂಟೆಯಿಂದ ದಿನಾಂಕ 20/01/2012 ರ ಮುಂಜಾನೆ ಅವಧಿಯಲ್ಲಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಶಹಾಬಾದ ನಗರ ಪೊಲೀಸ ಠಾಣೆ:
ದಿನಾಂಕ:20/01/2012 ರಂದು ಶ್ರೀ ಬಸವರಾಜ ಸಿಪಿಸಿ ಶಹಾಬಾದ ನಗರ ಠಾಣೆರವರು ಸ್ವತ್ತಿನ ಪ್ರಕರಣದಲ್ಲಿ ಆರೋಪಿತರ ಪತ್ತೆ ಕುರಿತು ಮಾಹಿತಿ ಸಂಗ್ರಹಿಸಲು ಶಹಾಬಾದ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಭಂಕೂರ, ದೇವನ ತೆಗನೂರ ಕಡೆಗೆ ಹೋಗುವಾಗ ದೇವನ ತೆಗನೂರ ಬಸಸ್ಟಾಂಡ ಹತ್ತಿರ ಒಬ್ಬನು ಸರಾಯಿ ಕುಡಿದ ಅಮಲಿನಲ್ಲಿ ಚಿರಾಡುವದು, ಬೈಯುವದು, ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿದದ್ದನ್ನು ನೋಡಿ ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಚಾರಿಸಲು ವಿಠ್ಠಲ ತಂದೆ ಖೂಬು ಚವ್ಹಾಣ ಸಾ:ದೇವನತೆಗನೂರ ಅಂತಾ ಹೇಳಿದನು. ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಶಾಂತತೆ ಭಂಗವನ್ನುಂಟು ಮಾಡಬಹುದೆಂದು ತಿಳಿದು ವರದಿ ಸಲ್ಲಿಸಿದ ಮೇರೆಗೆ ಠಾನೆ ಗುನ್ನೆ ನಮ: 8/2012 ಕಲಂ 110 (ಇ) & (ಜಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗಿ ಅಪಹರಣ ಪ್ರಕರಣ:
ಸೇಡಂ ಠಾಣೆ:
ಶ್ರೀ ಈರಣ್ಣ ತಂದೆ ಚಂದ್ರಶೇಖರ ಕಲಕಂಬಾ ಸಾ: ಊಡಗಿ ರವರು ನನ್ನ ಮಗಳಾದ ಸಂಗಿತಾ ಇವಳಿಗೆ ಗ್ರಾಮದ ಭಾಗೇಶ ತಂದೆ ಪರಮೇಶ್ವರ ಬಡಿಗೇರ ಇತನು 6 ತಿಂಗಳ ಹಿಂದೆ ನನ್ನ ಮಗಳಾದ ಸಂಗಿತಾ ಇವಳಿಗೆ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ದಿನಾಲು ಪಿಡಿಸುವುದು ಮಾಡುತ್ತಿದ್ದು ಈ ಬಗ್ಗೆ ಅವಳ ತಲೆ ಕೆಡಸಬೇಡ ಅಂತಾ ಭಾಗೇಶ ಇತನಿಗೆ ಎಚ್ಚರಿಕೆ ನೀಡಿದರೂ ಕೂಡ ಅವನು ಒಂದಿಲ್ಲ ಒಂದು ದಿವಸ ಸಂಗೀತ ಇವಳಿಗೆ ಓಡಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ತಕರಾರು ಮಾಡಿದನು ದಿನಾಂಕ:12-01-2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಂಗಿತಾ ಇವಳಿಗೆ ಭಾಗೇಶ ಮತ್ತು ಅವನ ಅಣ್ಣ ಗಣೇಶ ಅಲ್ಲದೆ ರಜಾಕ ನಾಯ್ಕೋಡಿ 3 ಜನರು ಕೂಡಿ ಸಂಗಿತಾ ಇವಳಿಗೆ ಕೈ ಹಿಡಿದು ಎಳೆದುಕೊಂಡು ದಿಗ್ಗಾವಂ ರಸ್ತೆ ಕಡೆಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ 19/2012 ಕಲಂ 366(ಎ) ಸಂಗಡ 34 ಐಪಿಸಿ ನ್ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಾನನಷ್ಟ ಮೊಖದೊಮ್ಮೆ ಪ್ರಕರಣ:
ಆಳಂದ ಪೊಲೀಸ ಠಾಣೆ:
ಆಳಂದ ತಾಲೂಕಾ ಪಂಚಾಯಿತ ಅಧ್ಯಕ್ಷರ ಚುನಾವಣೆ ನಡೆದ ನಂತರದ ಸಂದರ್ಭದಲ್ಲಿ ಆಳಂದ ತಾಲುಕಿನ ತೀರ್ಥ ಗ್ರಾಮದ ಶ್ರೀ ಗೋಪಿನಾಥ ತಂದೆ ರೇವಣಪ್ಪ ಸಿಂಗೆ ಮತ್ತು ನಸಿರವಾಡಿ ಗ್ರಾಮ, ಬಾಬು ತಂದೆ ಅಂಬರಾಯ ಬೇಮಣಗೆ, ಶಾಂತಪ್ಪ ತಂದೆ ಹಣಮಂತ ಹುಲ್ಲೆ ಇವರುಗಳು ಸಾರ್ವಜನಿಕರ ಎದುರುಗಡೆ ನನ್ನ ವೈಯಕ್ತಿಕ ಹೆಸರಿನಿಂದ ಅವಾಚ್ಯೆ ಶಬ್ದಗಳಿಂದ ಮಾನ ಹಾನಿಯಾಗುವಂತೆ ಬೈಯ್ದಾಡಿರುತ್ತಾರೆ. ಅಂತಾ ಕೆಲವರು ನನ್ನ ಗಮನಕ್ಕೆ ತಿಂದಿರುವದರಿಂದ ಸುಭಾಷ ಆರ್ ಗುತ್ತೆದಾರ ಸಾ:ಆಳಂದರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2012 ಕಲಂ 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ:
ಮಹೇಶ ತಂದೆ ಗುಂಡಪ್ಪಾ ಸಾಹು ಸಾ:ಕುರಿಕೋಟಾ ತಾ;ಜಿ: ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣನಾದ ರಮೇಶ ಈತನು ನಮ್ಮೂರಲ್ಲಿ ಸಾರ್ವಜನಿಕರೊಂದಿಗೆ ಬೆರೆತು ನ್ಯಾಯ ಪಂಚಾಯತಿ ಹಾಗೂ ಸಮಾಜದಲ್ಲಿಯ ಆಗುಹೋಗುವ ಸಮಸ್ಯೆ ಬಗೆಹರಿಸುವುದು ಮಾಡುತ್ತಾನೆ.ಅಲ್ಲದೇ ಈಗ ಎರಡು-ಮೂರು ದಿವಸಗಳಿಂದ ನಮ್ಮ ಗ್ರಾಮದ ಹರಿಜನ ಓಣಿಯ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಎಂಬುವವನು ಸಾರ್ವಜನಿಕರಿಗೆ ಬೈಯುವುದು, ಹೊಡೆಯಲಿಕ್ಕೆ ಹೋಗುವುದು ಮಾಡುತ್ತಾ ಸಿಕ್ಕ ಸಿಕ್ಕವರಿಗೆ ತೊಂದರೆ ಕೊಡುವುದು ಮಾಡುತ್ತಿದ್ದು., ಆದ್ದರಿಂದ ಆತನಿಗೆ ನನ್ನ ಅಣ್ಣ ರಮೇಶ ಈತನು ಈ ರೀತಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಸರಿ ಅಲ್ಲ ಅಂತಾ ಬುದ್ದಿವಾದ ಹೇಳಿದ್ದರಿಂದ ಆತನು ನನ್ನ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನಗೆ ನೋಡಿಯೇ ಬಿಡುತ್ತೇನೆ ಅಂತಾ ಅಂದು ತಕರಾರು ಮಾಡಿರುತ್ತಾನೆ ದಿನಾಂಕ: 19/01/2012 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಮತ್ತೆ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಈತನು ಪುನಃ ಅದೇ ರೀತಿ ಸಾರ್ವಜನಿಕರಿಗೆ ಹೊಡೆಯುವುದು ಮಾಡುತ್ತಿದ್ದರಿಂದ ನನ್ನ ಅಣ್ಣ ರಮೇಶ ಮತ್ತು ನಮ್ಮೂರ ಪ್ರಮುಖರು ಸಮಕ್ಷಮದಲ್ಲಿ ಬುದ್ದಿವಾದ ಹೇಳಬೇಕೆಂದು ನಮ್ಮೂರ ಬಸ್ ನಿಲ್ಲುವ ಸ್ಥಳದ ಹತ್ತಿರ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಹಾಗೂ ತಮ್ಮ ಮಲ್ಲು ತಂದೆ ತಿಪ್ಪಣ್ಣ ಕಲ್ಲಾ ಹಾಗೂ ಆತನ ತಂದೆ ತಿಪ್ಪಣ್ಣ ತಂದೆ ಭೀಮಶ್ಯಾ ಕಲ್ಲಾ ಇವರುಗಳಿಗೆ ಕರೆಯಿಸಿ ಮಲ್ಲು ಹಾಗೂ ತಿಪ್ಪಣ್ಣನಿಗೆ ಈ ರೀತಿ ಮಾಡುವುದು ಸರಿ ಅಲ್ಲ ಅಂತಾ ಹೇಳಿರಿ ಅಂತಾ ಹೇಳುವಾಗ ಮಲ್ಲು ಹಾಗೂ ತಿಪ್ಪಣ್ಣ ಇವರು ಈ ಭೋಸಡಿ ಮಗನದು ಬಹಳ ಆಗಿದೆ ನೋಡಿಯೇ ಬಿಡು, ಖಲಾಸ ಮಾಡು ಅಂತಾ ಅಂದಾಗ ಕೈಲಾಸ ತಂದೆ ತಿಪ್ಪಣ್ಣ ಕಲ್ಲಾ ಇತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನ್ನ ಅಣ್ಣ ರಮೇಶ ಈತನ ತೆಲೆಯ ಬಲಗಡೆ ಹೊಡೆದು ಭಾರಿ ರಕ್ತಗಾಯ ಮಾಡಿ ನನ್ನ ಅಣ್ಣನಿಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 04/2012 ಕಲಂ 307.504.114. ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.