POLICE BHAVAN KALABURAGI

POLICE BHAVAN KALABURAGI

29 June 2011

GULBARGA DISTIRICT REPORTED CRIMES

ಕಳ್ಳತನ ಪ್ರರಕಣ :
ಅಶೋಕ ನಗರ ಠಾಣೆ : ಡಾ: ಮುರುಗೇಶ ತಂದೆ ಗುರುಶಾಂತಪ್ಪ ಪಸ್ತಾಪುರ ಸಾ|| ಭಗವತಿ ನಗರ ಗುಲಬರ್ಗಾ ರವರು ನಮ್ಮ ಪಸ್ತಾಫೂರ ದವಾಖಾನೆಯ ಜನರೇಟರ್ ಕೋಣೆಯ ಬಾಗಿಲ ಕೀಲಿ ಮುರಿದು ಜನರೇಟರ ಬ್ಯಾಟರಿ ನಂ. 95ಇ01612204ಸಿ10449 ನೇದ್ದು ಅ.ಕಿ. 10,000/- ರೂ ಕಿಮ್ಮತ್ತಿನದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರರಕಣ :

ಗ್ರಾಮೀಣ ಠಾಣೆ : ಶ್ರೀ ಶ್ರೀನಿವಾಸ ತಂದೆ ಸೂರ್ಯಕಾಂತ ಚವ್ಹಾಣ ಸಾ|| ಐಯರವಾಡಿ ಹುಮನಾಬಾದ ಬೆಸ ಹತ್ತಿರ ಗುಲಬರ್ಗಾ ರವರು ನಾನು ಮತ್ತು ನಮ್ಮ ತಂದೆ ನನ್ನ ಪರಿಚಯದವರಾದ ಸಿದ್ದಾರೋಡ ಅರಳಿಮರ ಎಲ್ಲರು ಕೂಡಿಕೊಂಡು ಸ್ವಾಮಿ ಸಮರ್ಥ ಮಂದಿರಕ್ಕೆ ಹೋಗುವ ಕುರಿತು ಆಟೋದಲ್ಲಿ ಹುಮನಾಬಾದ ರಿಂಗ ರೋಡಿಗೆ ಬಂದು ಅಲ್ಲಿ ಸೋಮಶೇಖರ ದುತ್ತರಗಿ ಹಾಗೂ ಸಿದ್ದಾರೋಡ ಅರಳಿಮರ ಇವರು ನಿಂತಿದ್ದು ಅವರ ಹತ್ತಿರ ಹೋಗುವ ಕುರಿತು ರೋಡ ದಾಟಲು ಹೋಗುವಾಗ ನಮ್ಮ ತಂದೆಗೆ ಲಾರಿ ನಂ ಕೆಎ 32 ಎ-4218 ಲಾರಿ ಚಾಲಕ ಕಾಶಪ್ಪಾ ಅಲ್ದಿಹಾಳ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿ ಪಡಿಸಿದ್ದರ ಪರಿಣಾಮ ಭಾರಿ ರಕ್ತಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀಮತಿ ಗುಂಡಮ್ಮಾ ಗಂಡ ಅಂಬಾರಾಯ ಟೆಂಗಳಿ ಸಾಃ ಹಮಾಲವಾಡಿ ಗುಲಬರ್ಗಾರವರು ನಮ್ಮ ಓಣಿಯಲ್ಲಿಯ ವಿದ್ಯತ್ ಸರಭರಾಜಿನಲ್ಲಿ ತೊಂದರೆಯಾಗಿದ್ದರಿಂದ ಓಣಿಯಲ್ಲಿರುವ ಮನೆ ಮನೆಗೆ 10 ರೂ. ಅಂತೆ ಸಂಗ್ರಹಿಸುವಾಗ ನಮ್ಮ ಪಾಲಿನ ಹಣ ತೆಗೆದುಕೊಳ್ಳಿರಿ ಅಂತ ಹೇಳಿದಕ್ಕೆ ಸಿದ್ದು ಗೌಡ ಇತನು ಅವಾಚ್ಯ ಶಬ್ದಗಳಿಂದ ಬೈಯುತ್ತ ಮಾನಭಂಗ ಮಾಡಲು ಪ್ರಯತ್ನಿಸಿದ್ದು, ಬಿಡಿಸಲು ಬಂದ ನನ್ನ ಗಂಡನನ್ನು ಮತ್ತು ನನಗೆ ನಿಂಗಮ್ಮ ಜಮಾದಾರ ಮತ್ತು ಸುರೇಶ ಇವರು ಹೊಡೆಬಡೆ ಮಾಡಿರುತ್ತರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರಕರಣ :

ಮುದೋಳ ಠಾಣೆ : ಶ್ರೀಮತಿ ಮೊಗಲಮ್ಮ ಗಂಡ ದಸ್ತಪ್ಪಾ ಹಯ್ಯಾಳ ರವರು ನನ್ನ ಮಗನಾದ ಹುಸನೆಪ್ಪಾ ಇತನು ಮತ್ತು ಸಂಗಡ ಇನ್ನೂ 3 ಜನರು ಕೂಡಿಕೊಂಡು ಟ್ರಾಕ್ಟರ ನಂ: ಕೆಎ 32 ಟಿ-9104 ನೇದ್ದರಲ್ಲಿ ಕಳವಿ ಹುಲ್ಲು ತುಂಬಿಕೊಂಡು ಬುರಂಪೂರ ಗ್ರಾಮದಿಂದ ದಿಂದಮಾದ್ವಾರ ಗ್ರಾಮದ ಕಡೆಗೆ ಹೊರಟಿದ್ದಾಗ ಅಡಕಿ ಗ್ರಾಮದ ರಸ್ತೆಯಲ್ಲಿ ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ನಿಷ್ಕಾಳಜಿತನದಿಂದ ನಡೆಸುತ್ತಾ ಬರುತ್ತಿರುವಾಗ ಹುಸೆನಪ್ಪಾ ಇತನು ಟ್ರಾಕ್ಟರದಿಂದ ಬಿದ್ದಿದ್ದು ಉಪಚಾರ ಪಳಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆ ಪ್ರಕರಣ :

ಬ್ರಹ್ಮಪೂರ ಠಾಣೆ :
ಶ್ರೀ
ಅಮರಮೋದಿ ತಂದೆ ಪರಮೇಶ್ವರ ಮೋದಿ ಸಾ|| ಮಹಾಲಕ್ಷ್ಮಿ ಲೇಔಠ ಗುಲಬರ್ಗಾ ರವರು ನಾನು ಮತ್ತು ನನ್ನ ಸ್ನೇಹಿತರು ಕೂಡಿಕೊಂಡು ಎನ.ವಿ ಕಾಲೇಜು ಎದುರುಗಡೆ ನಿಲ್ಲಿಸಿದ ಪಾನಪೂರಿ ಬಂಡಿಯಲ್ಲಿ ಪಾನಿಪೂರಿ ತಿನ್ನುತ್ತಿರುವಾಗ ಯಾರೋ ಒಬ್ಬನು ಬಂದು ನಮ್ಮ ತಂಗಿಗೆ ಚುಡಾಯಿಸುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ಕೊರಳಿಗೆ ಕೈ ಹಾಕಿ ಕೊರಳಿದ್ದ 60,000-00 ಮೌಲ್ಯದ ಬಂಗಾರದ ಲಾಕೇಟ ಜಬರದಸ್ತಿಯಿಮದ ಕಸಿದುಕೊಂಡು ಕೆಎ 32 ಡಬ್ಲೂ 9436 ಅಥವಾ ಕೆಎ 32 ವಿ- 9436 ದ್ವಿ ಚಕ್ರ ವಾಹನದ ಮೇಲೆ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ