POLICE BHAVAN KALABURAGI

POLICE BHAVAN KALABURAGI

19 November 2017

KALABURAGI DISTRICT REPORTED CRIMES

ಕೊಲೆ ಪ್ರಕರಣಗಳು :
ಅಫಜಲಪೂರ ಠಾಣೆ :  ಶ್ರೀಮತಿ ನರಸಮ್ಮ ಗಂಡ ದೇವಿಂದ್ರ @ ಪಾಂಡು ಭಜಂತ್ರಿ (ಪಂಡಿತ) ಸಾ||ಆಶ್ರಯ ಕಾಲೋನಿ ಡಿಗ್ರಿ ಕಾಲೇಜ ಹತ್ತಿರ  ಅಫಜಲಪೂರ ರವರ ದೊಡ್ಡಮಗನಾದ ಅರ್ಜುನನ ಕಾಲೇಜ ರಜೆ ಇದ್ದುದ್ದರಿಂದ ಅಫಜಲಪೂರಕ್ಕೆ ಬಂದಿದ್ದು ನನ್ನ ಎಲ್ಲಾ ಮಕ್ಕಳ ಆದಾಯ ಪ್ರಮಾಣ ಪತ್ರಗಳು ಕೊಟ್ಟು ಬರಲು ದಿನಾಂಕ 12/11/2017 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಕಲಬುರಗಿಗೆ ಹೋಗಿ ರೈಲ್ವೆ ನಿಲ್ದಾಣದಲಿದ್ದಾಗ ನನ್ನ ಗಂಡನು ನನ್ನ ಮೊಬೈಲ ಪೋನಿಗೆ ಕರೆ ಮಾಡಿ ರೈಲು ಸಿಕ್ಕಿರುತ್ತದೆ ಹೇಗೆ ಅಂತ ಕೇಳಿದನು ಆಗ ನಾನು ರೈಲು ಸ್ಟೇಷನನಲ್ಲಿ  ಬರುತ್ತಿರುವ ಬಗ್ಗೆ ಧ್ವನಿ ವರ್ಧಕದಲ್ಲಿ ಸೂಚನೆ ನೀಡುತಿದ್ದಾರೆ ಸ್ವಲ್ಪ ಸಮಯದಲ್ಲಿ ರೈಲು ಬರಬಹುದು ಅಂತ ತಿಳಿಸಿದೆನು ನಂತರ ರಾತ್ರಿ 9.00 ಗಂಟೆಗೆ ಸೋಲಾಪೂರ-ಯಶ್ವಂತಪೂರ ರೈಲು ಬಂದ ನಂತರ ಸದರಿ ರೈಲಿನಲ್ಲಿ ಹತ್ತಿಕೊಂಡು ಬೆಂಗಳೂರಿಗೆ ಹೋಗಿರುತ್ತೇವೆ. ದಿನಾಂಕ 14/11/2017 ರಂದು ರಾತ್ರಿ ಯಶ್ವಂತಪೂರ- ಸೋಲಾಪೂರ ರೈಲಿನಲ್ಲಿ ಬೆಂಗಳೂರಿನಿಂದ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಹೊರಟು ದಿನಾಂಕ 15/11/2017 ರಂದು ಬೆಳಿಗ್ಗೆ ಕಲಬುರಗಿಗೆ ಬಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಮರಳಿ ಅಫಜಲಪೂರ ಪಟ್ಟಣದಲ್ಲಿರುವ ನಮ್ಮ ಮನೆಗೆ ಬಂದಿರುತ್ತೇವೆ. ನಮ್ಮ ಮನೆಗೆ ಹಾಕುವ ಕೀಲಿಗೆ ಎರಡು ಚಾವಿಗಳಿದ್ದು ಒಂದು ನನ್ನ ಹತ್ತಿರ ಇನೊಂದು ನನ್ನ ಗಂಡನ ಹತ್ತಿರ ಇರುತ್ತದೆ. ನಾನು ಬೆಂಗಳೂರಿನಿಂದ ನಮ್ಮ ಮನೆಗೆ ಬಂದಾಗ ನಮ್ಮ ಮನೆಯ ಬಾಗಿಲಿಗೆ  ಕೀಲಿ ಹಾಕಿದ್ದು ನಾನು ಮತ್ತು ನನ್ನ ಮಗ ಇಬ್ಬರು ಕೀಲಿ ತಗೆದು ಮನೆಯ ಒಳಗೆ ಹೋಗಿ ನೋಡಲು ಬಟ್ಟೆ ಹೊಲೆಯುವ ಮಶಿನ್ ಮೇಲೆ ನನ್ನ ಗಂಡನ ಒಂದು ಮೊಬೈಲ್ ಪೋನ್  ಮತ್ತು ಪರ್ಸ ಇತ್ತು. ಇನ್ನೊಂದು ಮೋಬೈಲ ಪೋನ ಇದ್ದಿರಲಿಲ್ಲ ನಂತರ ನಾನು ನನ್ನ ಗಂಡನಿಗಾಗಿ ಓಣಿಯಲ್ಲಿ ಮತ್ತು ನನ್ನ ಗಂಡನು ಕೆಲಸ ಮಾಡುವ ಹೊಟೇಲಗಳಲ್ಲಿ ವಿಚಾರಿಸಿದರು ನನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಲ್ಲಿಗಾದರು ಹೋಗಿರಬಹುದು ನಂತರ ತಾನೇ ಮರಳಿ ಮನೆಗೆ ಬರಬಹುದೆಂದು ಸುಮ್ಮನಿದ್ದೆನು.ದಿನಾಂಕ 18/11/2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಅಫಜಲಪೂರದಿಂದ ಘತ್ತರಗಾ ಕಡೆಗೆ ಹೋಗುವ ರೋಡಿನ ಹತ್ತಿರ ಇರುವ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬಿದ್ದಿದೆ ಅಂತ ಮಾತಾಡುವದನ್ನು ಕೇಳಿ ನಾನು ಮತ್ತು ನನ್ನ ಮಗ ಅರ್ಜುನ ಇಬ್ಬರು ಹೋಗಿ ನೋಡಲು ಕೊಲೆಯಾಗಿ ಬಿದ್ದಿರುವ ವ್ಯಕ್ತಿ ಶವ ಪೂರ್ತಿ ಕೊಳೆತಿದ್ದು ಶವದ ಮೇಲಿನ ಬಟ್ಟೆಗಳು ಮತ್ತು ಕೊಲೆಯಾದ ಸ್ಥಳದಲ್ಲಿ  ಬಿದ್ದಿರುವ ಚಪ್ಪಲಿಗಳು ಹಾಗು  ಪ್ಯಾಂಟಿಗೆ ಕಟ್ಟುವ ಬೆಲ್ಟನೇದ್ದವುಗಳನ್ನು ನೋಡಿ ಗುರುತಿಸಿದ್ದು ಕೊಲೆಯಾಗಿ ಬಿದ್ದ ವ್ಯಕ್ತಿ ನನ್ನ ಗಂಡ ದೇವಿಂದ್ರ@ ಪಾಂಡು ತಂದೆ ಶಂಕರ ಪಂಡಿತ(ಭಜಂತ್ರಿ) ಇರುತ್ತಾನೆ. ನನ್ನ ಗಂಡನಿಗೆ ದಿನಾಂಕ 12/11/2017 ರಿಂದ ದಿನಾಂಕ 18/11/2017 ರ ಬೆಳಗ್ಗಿನ 10.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿನ ತೊಗರಿ ಬೆಳೆ ಇದ್ದ ಹೊಲದ ಬಾಂದಾರಿ ಮೇಲೆ ಇರುವ ಬೇವಿನ ಗಿಡದ ಪಕ್ಕದಲ್ಲಿ ತಲೆಯ ಮೇಲೆ ದೊಡ್ಡ ಬಂಡೆಗಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ಕೊಲೆ ಮಾಡಿದ ಸ್ಥಳದಿಂದ ಎಳೆದುಕೊಂಡು ಹೋಗಿ ತೊಗರಿ ಬೆಳೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಭಗವಂತ್ರಾಯ ತಂದೆ ಸಿದ್ದಪ್ಪ ಗುಜಗೊಂಡ ಸಾ : ನೆಲೋಗಿ ತಾ : ಜೇವರಗಿ ರವರು ದಿನಾಂಕ:18/11/2017 ರಂದು ಸಾಯಂಕಾಲ 4:30 ಘಂಟೆ ಸುಮಾರಿಗೆ ನಮ್ಮ ಹೊಲ ಸರ್ವೇ ನಂ: 165 ನೇದ್ದರಲ್ಲಿ ಕೆಲಸ ಮಾಡುತ್ತಿದ್ದ ಎಂ.ವೀರಾಂಜನೇಯ ಯವರು ನನಗೆ ತಿಳಿಸಿದ್ದೇನೆಂದರೆ. ನೇಲೋಗಿಯಿಂದ ಸೋನ್ನ ಕ್ರಾಸ ಕಡೆಗೆ ಹೋಗುವ ಮಾರ್ಗದಲ್ಲಿ ನಮ್ಮ ಹೋಲದ ಬದಿಗೆ ಯಾವದೋ ಒಂದು ಅಪರಿಚಿತ ಶವ ಕಂಡು ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಹೋಲಕ್ಕೆ ಹೋಗಿ ನೋಡಲಾಗಿ ಒಂದು ಅಪರಚಿತ ಶವ ಸುಮಾರು ಅಂದಾಜು 25-30 ವರ್ಷದ ಗಂಡು ವ್ಯೆಕ್ತಿಯ ಶವ ಇತ್ತು . ನಾನು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ವ್ಯೆಕ್ತಿಗಳು ಕೂಡಿ ಶವವನ್ನು ನೋಡಲಾಗಿ ದೇಹದ ಮೇಲೆ ಸಣ್ಣ ಪುಟ್ಟಗಾಯಗಳು ಕಂಡು ಬಂದಿರುತ್ತದೆ. ಬಲಗಣ್ಣಿನ ಮೇಲೆ ಬಲವಾಗಿ ಹೋಡೆದು ಗಾಯ ಮಾಡಿದ್ದು ಕಂಡು ಬಂದಿರುತ್ತದೆ. ಯಾವದೋ ಒಂದು ವಸ್ತುವಿನಿಂದ ಕುತ್ತಿಗೆಗೆ ಬಿಗಿದ್ದಿದ್ದು ಕುತ್ತಿಗೆ ಮೇಲೆ ಕಂದು ಬಣ್ಣದ ಗುರುತು ಕಂಡು ಬಂದಿರುತ್ತದೆ, ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಹಾಗೂ ಕಂದುಗಟ್ಟಿದ ಗಾಯಗಳು ಕಂಡು ಬಂದಿರುತ್ತದೆ, ಬಲ ಭುಜದ ಮೇಲೆ ಸೂರ್ಯನ ಆಕಾರಮಚ್ಚೆ ಗುರುತು ಇದ್ದು ಮದ್ಯದಲ್ಲಿ ಓಂ ಅಂತ ಹಣಚೆ ಬಟ್ಟು ಹಾಕಿದ್ದು ಇರುತ್ತದೆ. ಬಲಗೈ ಮೇಲೆ ಬಿರಾದಾರ ಅಂತ ಇಂಗ್ಲೀಷನಲ್ಲಿ ಹಣಚೆ ಬೋಟ್ಟು ಹಾಕಿದ್ದು ಅದೆ. ಎಡ ಭೂಜದ ಮೇಲೆ ಓಂ ಅದರ ಮೇಲೆ ಡಮರುಗದ ಹಣಚೆ ಬೋಟ್ಟು ಹಾಕಿದ್ದು ಇರುತ್ತದೆ. ಮೈಮೇಲೆ ಹಳದಿ ಬಣ್ಣದ ಟೀ ಶರ್ಟ ಹಾಗೂ ಭೂದಿ ಬಣ್ಣದ 1.4 ಭೋರ್ಮಡಾ ಧರಸಿದ್ದು ಇರುತ್ತದೆ,  ಮೃತ ದೇಹವನ್ನು ನೋಡಿದವರು ಯಾರೂ ಕೂಡಾ ಶವವನ್ನು ಗುರುತಿಸಿರುವದಿಲ್ಲಾ. ಯಾರೋ ದುಷ್ಕರ್ಮಿಗಳು ಯಾವದೋ ದುರುದ್ವೇಶದಿಂದ ಕೋಲೆ ಮಾಡಿ ಸಾಕ್ಷಿ ನಾಶ ಮಾಡುವ ಸಲುವಾಗಿ ಈ ಸ್ಥಳದಲ್ಲಿ ಮೃತ ದೇಹವನ್ನು ಎಸೆದು ಹೋಗಿರುತ್ತಾರೆ.ಸದರಿ ಘಟನೆಯು ದಿನಾಂಕ:18/11/2017 ಮದ್ಯ ರಾತ್ರಿಯಿಂದ ಇಲ್ಲಿಯವರೆಗೆ ಜರಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಂಕರ ಕಜಾಳೆ ಸಾ : ಪಡಸಾವಳಿ ತಾ : ಆಳಂದ ರವರ ಗಂಡ ಶಂಕರ ತಂದೆ ಬಾಬು ಕಾಜಳೆ ಇವರು ಇಂದು ದಿನಾಂಕ 18/11/2017 ರಂದು ಬೆಳಿಗ್ಗೆ ಉಮರ್ಗಾ ತಾಲೂಕಿನ ಸಾವಳೇಶ್ವರ್ ಗ್ರಾಮದಲ್ಲಿರುವ ಅಕ್ಕಳಾದ ಸುಭಾಬಾಯಿ ಹತ್ತಿರ ಹೋಗಿ ಬರುತ್ತೆನೆ ಅಂತಾ ಹೇಳಿ ನಮ್ಮ ಮೋಟಾರ ಸೈಕಲ್ ನಂಬರ ಕೆಎ 32 ಇಜಿ 2069 ನೆದ್ದರ ಮೇಲೆ ಕುಳಿತು ಚಾಲು ಮಾಡಿಕೊಂಡು ಮನೆಯಿಂದ ಹೋದರು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ನಮ್ಮ ಅಳಿಯ ಶ್ರೀಶೈಲ್ ಘಾಳೆ ಇವರು ಬಂದು ನನಗೆ ವಿಷಯ ತಿಳಿಸಿದ್ದೆನೆಂದರೆ ತಡೋಳಾ ಗ್ರಾಮದ ಪರಿಚಯದ ಬಾಬುರಾವ ತಂದೆ ಉದ್ದರವರಾವ ಪಾಟೀಲ್ ಇವರು ನನಗೆ ಫೋನ್ ಮಾಡಿ ಮಾಮನಾದ ಶಂಕರ ಕಾಜಳೆ ಇವರು ಮೋಟಾರ ಸೈಕಲ್ ಮೇಲೆ ತಡೋಲಾ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ರೋಡಿನಲ್ಲಿ ಅವರ ಎದುರುಗಡೆಯಿಂದ ಖಜೂರಿ ಬಾರಡರ ಕಡೆಯಿಂದ ಒಂದು ಮೋಟಾರ ಸೈಕಲ್ ನಂ ಎಮ್‌ಹೆಚ್‌ 06 ಎಜೆ 4269 ನೇದ್ದರ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮಾಮಾನ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದು ಮಾಮಾನ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ, ಡಿಕ್ಕಿ ಪಡಿಸಿದವನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಡಿಕ್ಕಿಪಡಿಸಿದವನ ಹೆಸರು ವಿಚಾರಿಸಲಾಗಿ ನಾರಾಯಣ ತಂದೆ ರಾಮ ವಾಗಮೋಡೆ ಸಾ : ಕುನ್ನಳ್ಳಿ ತಾ : ಉಮರಗಾ ಜಿ : ಉಸ್ಮಾನಾಬಾದ ಅಂತಾ ತಿಳಿದು ಬಂದಿರುತ್ತದೆ, ಅಂತಾ ತಿಳಿಸಿದ್ದು ಆಗ ನಾನು ಗಾಬರಿಯಾಗಿ ನಮ್ಮ ಅಳಿಯ ಶ್ರೀಶೈಲ್ ಘಾಳೆ ಹಾಗೂ ನಮ್ಮೂರಿನ ಮಹಿಬೂಬ ಗುಂಜೋಟಿ, ಮತ್ತು ಇಮಾಮ ಶೇಕ್, ಹಾಗೂ ಇತರರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ಗಂಡನಿಗೆ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಹಾಗೂ ಇತರ ಕಡೆಗೆ ಭಾರಿ ರಕ್ತ ಮತ್ತು  ಗುಪ್ತ ಗಾಯಗಳಾಗಿದ್ದು ನಾವೆಲ್ಲರೂ ಕೂಡಿ ನನ್ನ ಗಂಡನಿಗೆ ಎತ್ತಿ ನಮ್ಮ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಉಮರ್ಗಾ ದವಾಖಾನೆಗೆ ತೆಗೆದುಕೊಂಡು ಹೋಗುತ್ತಿರುವಾಗ ಉಮರ್ಗಾ ಹತ್ತಿರ ನನ್ನ ಗಂಡ ಶಂಕರ ಕಾಜಳೆ ಇವರು ಅಪಘಾತದಲ್ಲಿ ಹೊಂದಿದ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ,  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಜೇವರಗಿ ಠಾಣೆ :  ಶ್ರೀ ಸಿದ್ದನಗೌಡ ತಂದೆ ಬಸವಂತರಾಯ ಮಾಲಿ ಪಾಟೀಲ ಸಾ|| ಚನ್ನೂರ ಹಾ:ವ: ಓಂ ನಗರ ಜೇವರಗಿ ಇವರು ಠಾಣೆಗೆ ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ನನ್ನ ಹೆಸರಿನಿಂದ ಬ್ಯಾಂಕ ಖಾತೆ ನಂ 62291009973 ನೇದ್ದು ಇರುತ್ತದೆ.  ನಾನು ಇಂದು ದಿನಾಂಕ 18.11.2017 ರಂದು ಮುಂಜಾನೆ ಮನೆಯಿಂದ ಹಣ ಡ್ರಾಮಾಡಿಕೊಂಡು ಬರಲು ಬ್ಯಾಂಕಿಗೆ  ಬಂದು ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ಮೇಲೆ ನಮೂದಿಸಿದ ನನ್ನ ಖಾತೆಯಿಂದ ಒಟ್ಟು 80,000/- ( ಎಂಭತ್ತು ಸಾವಿರ ರೂಪಾಯಿ) ಹಣ ಡ್ರಾ ಮಾಡಿಕೊಂಡು ಹಣವನ್ನು ಒಂದು ಪ್ಲಾಸ್ಟೀಕ್ ಕೈ ಚೀಲದಲ್ಲಿ ಹಾಕಿಕೊಂಡು ನನ್ನ ಕೈಯಲ್ಲಿ ಹಿಡಿದುಕೊಂಡು ಬ್ಯಾಂಕಿನಿಂದ ಹೊರಗೆ ಬಂದು,  ಮನೆಗೆ ಹೋಗಲು ನಡೆದುಕೊಂಡು ರೊಡಿನಲ್ಲಿ ಬರುತ್ತಿದ್ದೆನು, ಮುಂಜಾನೆ 11.45 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹಳೆಯ ಬಿ.ಇ.ಓ ಕಚೇರಿಯ ಹತ್ತಿರ ರೋಡಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಎದುರಿನಿಂದ ಒಂದು ಕಪ್ಪು ಬಣ್ಣದ ಅಪ್ಪಾಚಿ ಮೊಟಾರ್ ಸೈಕಲ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂದಾಜು 25-30 ವರ್ಷ ವಯಸ್ಸಿನವರು ಕುಳಿತುಕೊಂಡು ಬಂದು ನನ್ನ ಕೈಯಲ್ಲಿನ ಹಣ ಇದ್ದ ಪ್ಲಾಷ್ಟೀಕ ಕೈ ಚೀಲ ಹಣ ಸಮೇತ ಜಬರದಸ್ತಿಯಿಂದ ಕಸಿದುಕೊಂಡು ಹೋದರು, ನಾನು ಚಿರ್ಯಾಡುತ್ತಾ ಅವರ ಹಿಂದೆ ಬೇನ್ನು ಹತ್ತಿದ್ದರು ಅವರು ಸಿಕ್ಕಿರುವುದಿಲ್ಲಾ, ಅವರು ತಮ್ಮ ಮೊಟಾರ್ ಸೈಕಲನ್ನು ಜೊರಾಗಿ ನಡೆಯಿಸಿಕೊಂಡು ಹೋದರು ಮೊಟಾರ್ ಸೈಕಲ್ ನಂಬರ ಗುರುತು ಸಿಕ್ಕಿರುವುದಿಲ್ಲಾ. &  ಮೊಟಾರ್ ಸೈಕಲ ನಡೆಯಿಸುತ್ತಿದ್ದವನ ಬಟ್ಟೆಗಳು ಸರಿಯಾಗಿ ಕಂಡಿರುವುದಿಲ್ಲಾ ಅವನು ಕನ್ನಡಕ ಹಾಕಿಕೊಂಡಿದನು,  ಹಿಂದೆ ಕುಳಿತವನು ಬಿಳಿ ಬಣ್ಣದ ಪೂಲ್ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ನಂತರ ನಾನು ನನ್ನ ಗೆಳೆಯರಾದ ನಾಡಗೌಡ ತಂದೆ ಅಪ್ಪಾಸಾಹೇಬಗೌಡ ಮಾಲಿ ಪಾಟೀಲ, ಭೀಮರಾಯ ತಂದೆ ಮಲ್ಲಪ್ಪ ಸೂರಪೂರ ಇವರನ್ನು ಬರಮಾಡಿಕೊಂಡು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.