POLICE BHAVAN KALABURAGI

POLICE BHAVAN KALABURAGI

05 June 2016

Kalaburagi District Reported Crimes

ಮನುಷ್ಯ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀಮತಿ. ಫಾಕೀಯಾ ತಬಸ್ಸುಂ  ಗಂಡ  ಮಂಜುನಾಥ ವಾಡಿ  ಸಾ: ದತ್ತ ನಿಲಯ ಬನಶಂಕರಿ ಲೇಔಟ ದೇವಾ ನಗರ ಕಲಬುರಗಿ ರವರು ದಿನಾಂಕ 12/05/2014 ರಂದು ಸಬ್‌ ರಜಿಸ್ಟಾರ ಆಫೀಸನಲ್ಲಿ ನಾವಿಬ್ಬರು ಮದುವೆಯಾಗಿದ್ದು  ನನ್ನ ಪತಿ ಮಂಜುನಾಥ ವಾಡಿ  ಸ.ಪ.ಪೂ ಕಾಲೇಜು ಬಿ.ಗುಡಿ ನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿದ್ದಾರೆ.  ದಿನಾಂಕ 04/07/2015 ರಂದು ಪ್ಯಾರಲೈಸಿಸ್‌ ಆಗಿದ್ದು ಒಂದು ವರ್ಷದಿಂದ ಚಿಕಿತ್ಸೆ ಜರುಗುತ್ತಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು.  ಚಿಕಿತ್ಸೆಯ 4 ತಿಂಗಳು ಪೂರ್ಣಗೊಂಡು ನಂತರ ನೌಕರಿಗೆ ಹಾಜರಾಗಿದ್ದು ದಿನಾಲು ಅವರ ತಂದೆಯವರ ಜೋತೆ ಹೋಗುತ್ತಿದ್ದರು. ಇವತ್ತು ದಿನಾಂಕ 03/06/2016 ರಂದು ಯಥಾವತ್ತಾಗಿ  ಕಾಲೇಜಿಗೆ ಹೊಗಲು ಎದ್ದು 7:30 ಎಎಂ ಸುಮಾರಿಗೆ ಅಟೊ ಅಂಕಲ ಜೋತೆ ನನ್ನ ಎ.ಟಿ.ಎಂ ಹಾಗು ಅವರ ಎ.ಟಿ.ಎಂ ಎರಡನ್ನು ತೆಗೆದುಕೊಂಡು ಹೊದರು. ಇತ್ತಿಚ್ಚಿಗೆ ಅವರು ಕಾಯಿಲೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ನಾನು ನಿನ್ನ ಮೇಲೆ ಭಾರವಾಗಿದ್ದೆನೆ ಎನ್ನುವ ಮಾತನ್ನು ಹೇಳಿದರು. ಬೆಳಿಗ್ಗೆ ಕಾಲೇಜಿಗೆಂದು ಹೊದವರು ಕಾಲೇಜಿಗೂ ಮುಟ್ಟದೇ ಮನೆಗೂ ಬಂದಿರುವುದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀಪಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 04-06-2016 ರಂದು ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಎರಡು ಕ್ರೂಜರ ವಾಹನಗಳು ಮತ್ತು ಒಂದು ಕಮಾಂಡ ಜೀಪ ವಾಹನಗಳ ಚಾಲಕರು ತಮ್ಮ ತಮ್ಮ ವಾಹನಗಳನ್ನು ಬಸ್ ನಿಲ್ದಾಣದ ಎದರುಗಡೆ ಇರುವ ರಸ್ತೆಯ ಮದ್ಯದಲ್ಲಿ ನಿಲ್ಲಿಸಿಕೊಂಡಿದ್ದರು ಇದರಿಂದ ಬಸ್ ನಿಲ್ದಾಣದಲ್ಲಿ ಹೋಗಿ ಬರುವ ಕೆ.ಎಸ್.ಆರ್.ಟಿ.ಸಿ ಬಸಗಳಿಗೂ, ಸಂಚಾರಕ್ಕು ಮತ್ತು ಹೋಗಿ ಬರುವ ಸಾರ್ವಜನಿಕರಿಗೂ ಹಾಗೂ ಪ್ರಯಾಣಿಕರಿಗೂ ತೊಂದರೆ ಯಾಗುತ್ತಿತ್ತು.ಸದರಿ ವಾಹನಗಳಿಂದ ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತಿದ್ದರಿಂದ ಸದರಿ ವಾಹನಗಳನ್ನು ವಶಪಡಿಸಿಕೊಳ್ಳುವ ಕುರಿತು ಸದರಿ ವಾಹನಗಳನ್ನು ನೊಡಲಾಗಿ ಒಂದು ಕ್ರೂಜರ ವಾಹನ ನಂಬರ ಕೆಎ-22 ಎನ್-6037 ಅಂತಾ ಇದ್ದು ಸದರಿ ವಾಹನದಲ್ಲಿದ್ದ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ 1) ಮುತ್ತಪ್ಪ ತಂದೆ ಭಾಗಪ್ಪ ತೇಲಕರ ಉ: ಕ್ರೂಜರ ನಂ ಕೆಎ-22 ಎನ್-6037 ನೆದ್ದರ ಚಾಲಕ ಸಾ: ಗುಡ್ಡೆವಾಡಿ (ಗುಡ್ಡಡಗಿ) ತಾ: ಅಫಜಲಪೂರ ಅಂತಾ ತಿಳಿಸಿದ್ದು, ಹಾಗೂ ಇನ್ನೊಂದು ಕ್ರೂಜರ ವಾಹನ ನಂಬರ ನೋಡಿದ್ದು ಅದರ ನಂಬರ ಕೆಎ-32 ಎಮ್-4368 ಅಂತಾ ಇದ್ದು, ಸದರಿ ವಾಹನದಲ್ಲಿದ್ದ ಸದರ ವಾಹನದ ಚಾಲಕನ ಹೆಸರು 2) ಖಾಜಾಬಾಯ ತಂದೆ ಚಾಂದಸಾಬ ಸೌದರಿ ಉ: ಕ್ರೂಜರ ಚಾಲಕ ಸಾ: ಕರಜಗಿ ಅಂತಾ ತಿಳಿಸಿದ್ದು, ಮತ್ತೊಂದು ಕಮಾಂಡರ ಜೀಪ ಇದ್ದು ಅದರ ನಂ ಕೆಎ-29 ಎಮ್ 2326 ಅಂತಾ ಇದ್ದು, ಸದರಿ ವಾಹನದಲ್ಲಿದ್ದ ಸದರ ವಾಹನದ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು 3) ಸಿದ್ದಪ್ಪ ತಂದೆ ಶಿವರಾಯ ನಾವಿ ಉ: ಕಮಾಂಡರ ಜೀಪ ನಂಬರ ಕೆಎ-29 ಎಮ್-2326 ನೇದ್ದರ ಚಾಲಕ ಸಾ : ಘತ್ತರಗಾ ತಾ : ಅಫಜಲಪೂರ ಅಂತಾ ತಿಳಿಸಿದನು. ಸದರಿ ವಾಹನಗಳ ಜನರು ತಮ್ಮ ತಮ್ಮ ವಾಹನಗಳನ್ನು ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ರಸ್ತೆಯ ಮದ್ಯದಲ್ಲಿ  ನಿಲ್ಲಿಸಿ ಸಂಚಾರಕ್ಕೆ ಹಾಗೂ ಹೋಗಿ ಬರುವ ಜನರಿಗೆ ತೊಂದರೆ ಕೊಡುತ್ತಿದ್ದರಿಂದ ಸದರಿ ವಾಹನಗಳನ್ನು ಹಾಗೂ ಸದರಿ ವಾಹನಗಳ ಚಾಲಕರನ್ನು ವಶಕ್ಕೆ ಪಡೆದುಕೊಂಡು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 04.06.2016  ರಂದು ಮುಂಜಾನೆ ಜೇವರಗಿ ಪಟ್ಟಣದ ಅಖಂಡೇಶ್ವರ ಎ.ಪಿ.ಎಮ್.ಸಿ  ತರಕಾರಿ ಮಾರ್ಕೆಟ್ ಯಾರ್ಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರಗಿ ಪಟ್ಟಣದ ಅಖಂಡೆಶ್ವರ್ ಎ.ಪಿ.ಎಮ್.ಸಿ. ಮಾರ್ಕೇಟ್  ಕಡೆಗೆ ಹೊರಟು ಮಾರ್ಕೆಟ್ ತರಕಾರಿ ಮಾರ್ಕೆಟ್ ಯಾರ್ಡ ಕಡೆಗೆ ನಡೆದುಕೊಂಡು ಹೋಗಿ ಅಲ್ಲಿ ಅಡತ ಅಂಗಡಿಯ ಗೋಡೆಯ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ತರಕಾರಿ ಮಾರ್ಕೆಟ್  ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಹಣ ಪಣಕ್ಕೆ ಇಟ್ಟು ಅಂದರ ಬಹಾರ ಇಸ್ಪೆಟ ಜುಜಾಟ ಆಡುತ್ತಿರುವದನ್ನು ನೋಡಿ ಖಚಿತಪಡೆಸಿಕೊಂಡ ದಾಳಿ ಮಾಡಿ ಹಿಡಿದು ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ 1) ಮಹ್ಮದ್ ಗೌಸ್ ತಂದೆ ಅಲೀ ಪಟೇಲ  2) ರಾಘವೇಂದ್ರ ತಂದೆ ಹೂವಣ್ಣಾ ಹನ್ನೂರ  3)   ಬಾವಾಸಾಬ ತಂದೆ ಮಶಾಖಸಾಬ ಕಾಸರಬೊಸಗಾ  ಅಂಥಾ ತಿಳಿಸಿದ್ದು ಸದದರಿಯವರಿಂದ 2300/- ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸುಲಿಗೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಾರುತಿ ತಂದೆ ನರಸಿಂಗರಾವ ಬದಾಮಿ ಸಾ: ಮನೆ ನಂ.4-82 ಕಬೀರ ರೋಡ ಬಾವರ್ಚಿ ಗಲ್ಲಿ ಬೀದರ ಹಾ:: ಮಾಸ್ಟರ ಶಿವಶಂಕರ ಹರಸೂರ ಮನೆಯಲ್ಲಿ ಕಿರಾಯಿ ಅರ್.ಎಸ್. ಕಾಲನಿ ಕಲಬುರಗಿ ರವರು ದಿನಾಂಕ 03/06/16 ರಂದು ಮಧ್ಯಾಹ್ನ ನಮ್ಮ ಸಂಬಂಧಿಕರಾದ ಕೊಪ್ಪಣ್ಣಾ ಇವರ ಬಾಬರ ಅಂಗಡಿಗೆ ಹೋಗಿ ಅವರೊಂದಿಗೆ ಸಂಜೆ 07-30 ಗಂಟೆಯವರೆಗೆ ಮಾತಾಡಿದ ನಂತರ ಅಲ್ಲಿಂದ ಒಬ್ಬನೇ ಅಲ್ಲೇ ಪಕ್ಕದಲ್ಲಿ ಇರುವ ರಾಮಕೃಷ್ಣ ಹೋಟಲಕ್ಕೆ ಹೋಗಿ  ಊಟ ಮಾಡಿಕೊಂಡು ಮನೆಗೆ ಹೋಗುವ ಕುರಿತು ಸಿಟಿ ಬಸ್ಟು ಹಿಡಿದುಕೊಂಡು ಹುಮನಾಬಾದ ರಿಂಗ ರೋಡ ಕಲಬುರಗಿ  ವರೆಗೆ ಬಂದು ಸಿಟಿ ಬಸ್ಸಿನಿಂದ ಇಳಿದುಅಲ್ಲಿಂದ ಒಬ್ಬನೇ ನಡೆದುಕೊಂಡು ಅರ್.ಎಸ್. ಕಾಲನಿ ಕಡೆ ಹೊರಟಿದ್ದು. ರಾತ್ರಿ 08-30  ಗಂಟೆ ಸುಮಾರಿಗೆ ಟಿ.ವಿ.ಸ್ಟೇಷನ ಕ್ವಾರ್ಟರ್ಸ  ಹತ್ತಿರ ಬಂದಾಗ ಆಗ ನನ್ನ ಹಿಂದಿನಿಂದ ಒಂದು ಆಟೋದಲ್ಲಿ ಮೂರು ಜನರು ಹುಡುಗುರು ಕುಳಿತುಕೊಂಡು ಬಂದು ನನ್ನ  ಎದುರುಗಡೆ ಆಟೋ ತೆಗೆದುಕೊಂಡು ಬಂದು ಆಟೋದಿಂದ ನನಗೆ ಅಡ್ಡಗಟ್ಟಿ ನಿಲ್ಲಿಸಿ, ಮೂವರು ಆಟೋದಿಂದ ಇಳಿದು ಬಂದವರೇ ನನಗೆ ಸ್ವಲ್ಪ ಮುಂದೆ ಕತ್ತಲಿಲ್ಲಿ ಕರೆದುಕೊಂಡು ಹೋಗಿ, ಅವರಲ್ಲಿ ಒಬ್ಬನು ಹಿಂದಿ ಭಾಷೆಯಲ್ಲಿ ನನಗೆ ನಮ್ಮ ತಮ್ಮನ ಹಣ ಯಾಕೇ ಕಸಿದುಕೊಂಡಿದ್ದೀ ಅಂತಾ ಕೇಳಿದನು. ಅದಕ್ಕೆ ನಾನು ನನಗೇನು ಗೊತ್ತಿಲ್ಲಾ ಅಂತಾ ಹೇಳಿದಾಗ ಅವರಲ್ಲಿ ಇಬ್ಬರು ನನಗೆ ಒತ್ತಿಯಾಗಿ ಹಿಡಿಯಲು ಹಿಂದಿ ಭಾಷೆಯಲ್ಲಿ ಮಾತನಾಡಿದವನು ನನ್ನ ಎದೆಯ ಮೇಲಿನ ಕಿಸೆ ಚಕ್ಕ ಮಾಡಲು ಕಿಸೆಯಲ್ಲಿದ್ದ ನೋಕಿಯಾ ಮೋಬಾಯಿಲ :ಕಿ:  2000/- ರೂ. ಜಬರದಸ್ತಿಯಿಂದ ಕಸಿದುಕೊಂಡನು. ಮತ್ತು ಪ್ಯಾಂಟಿನ ಜೇಬಿನ ಎರಡು ಕಿಸೆಗಳನ್ನು ಚಕ್ಕ ಮಾಡಲಾಗಿ ಎನೋ  ಸಿಗಲಿಲ್ಲಾ. ತದನಂತರ ನನ್ನ ವಾಚ ಪಾಕೇಟದಲ್ಲಿದ್ದ ನಗದು ಹಣ 3500/- ರೂ.ಜಬರದಸ್ತಿಯಿಂದ ಕಸಿದುಕೊಂಡು ನನ್ನ ಪ್ಯಾಂಟು ಹರಿದು ತಾವು ತಂದಿದ್ದ ಆಟೋದಲ್ಲಿ ಮೂರು ಜನರು ಕುಳಿತುಕೊಂಡು ಅಲ್ಲಿಂದ ಹುಮನಾಬಾದ ರೋಡ ಕಡೆ ಓಡಿ ಹೋದರು. ಕತ್ತಲಿಲ್ಲಿ ಆಟೋ ನಂಬರ ನೋಡಲು ಆಗಿರುವುದಿಲ್ಲಾ. ಸದರಿ ಮೂರು  ಜನರು 18-24 ವರ್ಷ ವಯಸ್ಸಿನವರು ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.