POLICE BHAVAN KALABURAGI

POLICE BHAVAN KALABURAGI

09 October 2017

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ದತ್ತಪ್ಪಾ ತಂದೆ ನಾಗಪ್ಪ ಅತನುರೇ ಸಾ:ಯಳಸಂಗಿ ತಾ:ಆಳಂದ ಜಿ:ಕಲಬುರಗಿ ಹಾ:ವ: ಖಾದ್ರಿ ಚೌಕ ಹತ್ತಿರ ಸಂತೋಷ ಕಾಲೋನಿ ಕ್ರಾಸ ಕಲಬುರಗಿ ರವರ ತಮ್ಮನಾದ ದಾನಪ್ಪಾ ತಂದೆ ನಾಗಪ್ಪ ಅತನೂರೇ ಇತನು ವಿದ್ಯಾಬ್ಯಾಸ ಮಾಡಿಕೊಂಡಿರುತ್ತಾನೆ. ಈಗ 8 ತಿಂಗಳ ಹಿಂದೆ ನನ್ನ ತಮ್ಮನಾದ ದಾನಪ್ಪ ಇತನು ಪೊಲೀಸ ಸಿ.ಇ.ಟಿ ಪರೀಕ್ಷೆ ಕೊಚಿಂಗ ಕ್ಲಾಸಗೆ ಹೋಗುವ ಕುರಿತು ಕಲಬುರಗಿ ನಗರದ ಶಾಹಾ ಬಜಾರದಲ್ಲಿ ಇರುವ ಆರಾಧನಾ ಕಾಲೇಜ ಹತ್ತಿರ ಒಂದು ಬಾಡಿಗೆ ಕೋಣೆ ಮಾಡಿಕೊಂಡು ಇದ್ದನು ಆ ಕೋಣೆಯಲ್ಲಿ ನನ್ನ ತಮ್ಮ ಹಾಗು ನಮ್ಮ ಗ್ರಾಮದ ಸಿದ್ದಲಿಂಗಯ್ಯಾ ತಂದೆ ಸಿದ್ರಾಮಯ್ಯಾ ಮಠಪತಿ, ಮತ್ತು ಸಂದೀಫ ತಂದೆ ಗುಂಡು ಚವ್ಹಾಣ ಮು:ಮಾಡ್ಯಾಳ ತಾಂಡಾ 03 ಜನ ಇರುತ್ತಾರೆ. ನನ್ನ ತಮ್ಮ ಕಲಬುರಗಿ ನಗರದ ರಾಜ ಕೊಚಿಂಗ ಸೆಂಟರಕ್ಕೆ ದಿನಾಲು ಹೋಗಿ ಬರುವುದು ಮಾಡುತ್ತಿದ್ದನು. ಊಟಕ್ಕೆ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದನು.ಈಗ 8 ದಿವಸಗಳ ಹಿಂದೆ ನಮ್ಮೂರಿನ ಪ್ರದೀಪ ತಂದೆ ಬಸವರಾಜ ಕಲಶೆಟ್ಟಿ ಇತನು ನಮ್ಮೂರಿನಿಂದ ಬಂದು ನಮ್ಮ ತಮ್ಮನ ರೂಮಿನಲ್ಲಿಯೇ ಇದ್ದನು. ದಿನಾಂಕ 05/10/2017 ರಂದು ಬೆಳಿಗ್ಗೆ ನಮ್ಮೂರ ಪ್ರದೀಪ ಕಲಶೆಟ್ಟಿ ಇತನು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ನಿನ್ನೆ ದಿನಾಂಕ 04/10/2017 ರಂದು ಮದ್ಯಾಹ್ನ 02:00 ಗಂಟೆ ಸುಮಾರಿಗೆ ನಿಮ್ಮ ತಮ್ಮನಾದ ದಾನಪ್ಪ ಇತನು ರಾಜ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ರೂಮಿಗೆ ಬಂದಿರುವುದಿಲ್ಲಾ. ನಿಮ್ಮ ಮನೆಗೆ ಅಥವಾ ಊರಿಗೆ ಬಂದಿದ್ದಾನೆ ಅಂತಾ ಕೇಳಿದನು ಆಗ ನಾನು ನಮ್ಮ ಮನೆಗೆ ಮತ್ತು ಊರಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತೇನೆ ನಂತರ ನಮ್ಮ ತಮ್ಮನ ಮೋಬೈಲಿಗೆ ಪೋನ ಮಾಡಲಾಗಿ ಸ್ವೀಚ್ ಆಪ್ ಅಂತಾ ಬಂದಿರುತ್ತದೆ ದಿನಾಂಕ:- 05/10/2017 ರಿಂದ ನಿನ್ನೆ ದಿನಾಂಕ: 07/10/2017 ರವರೆಗೆ ನಮ್ಮ ಸಂಬಂದಿಕರ ಮನೆಗಳಲ್ಲಿ ಇತರೇ ಕಡೆಗಳಲ್ಲಿ ಹಾಗು ಆತನ ಗೆಳಯರಿಗೆ ಪೋನ ಮಾಡಿ ವಿಚಾರಿಸಲಾಗಿ ನಮ್ಮ ತಮ್ಮ ಎಲ್ಲಿಯೂ ಬಂದಿರುವುದಿಲ್ಲಾ ಅಂತಾ ತಿಳಿಸಿರುತ್ತಾರೆ. ನಂತರ ದಿನಾಂಕ:- 07/10/2017 ರಂದು ಮದ್ಯಾಹ್ನ ನಾನು ಮತ್ತು ನನ್ನ ತಮ್ಮನಾದ ಈರಣ್ಣಾ ಕೂಡಿಕೊಂಡು ಕಲಬುರಗಿ ನಗರದ ಚೌಕ ಪೊಲೀಸ ಠಾಣೆಗೆ ಹೋಗಿ ನನ್ನ ತಮ್ಮ ದಾನಪ್ಪ ಅತನೂರೆ ಇತನು ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಗೆ ಶಹಾ ಬಜಾರದಲ್ಲಿರುವ ತನ್ನ ರೂಮಿನಿಂದ ಕೊಚಿಂಗ ಕ್ಲಾಸಗೆ ಹೋಗುತ್ತೇನೆ ಅಂತಾ ಹೋದವನು  ಇಲ್ಲಿಯವರೆಗೆ ಮರಳಿ ಬಂದಿರುವುದಿಲ್ಲಾ ಅಂತಾ ಈ ಬಗ್ಗೆ ಕೇಸು ದಾಖಲು ಮಾಡಲು ಹೇಳಿರುತ್ತೇವೆ. ಚೌಕ ಪೊಲೀಸ ಠಾಣೆ ಪೊಲೀಸರು ನಿಮ್ಮ ತಮ್ಮನ ಭಾವಚಿತ್ರಗಳನ್ನು ತೆಗೆದುಕೊಂಡು ಬನ್ನಿರಿ ಅಂತಾ ಹೇಳಿದ್ದರಿಂದ್ದ ನಾವು ಮರಳಿ ಬಂದಿದ್ದು  ದಿನಾಂಕ:- 08/10/2017 ರಂದು ಮದ್ಯಾಹ್ನ ಚೌಕ ಪೊಲೀಸ ಠಾಣೆಗೆ ಹೋಗಬೇಕು ಅಂತಾ ಮನೆಯಲ್ಲಿದ್ದಾಗ ಯಾರೋ ಜನರು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಅಪರಿಚಿತ ಶವ ಬಿದ್ದಿರುತ್ತದೆ ಅಂತಾ ಮಾತನಾಡುತ್ತಿರುವುದು ಕೇಳಿ ನಾನು ಮತ್ತು ನಮ್ಮಗೆ ಪರಿಚಿಯದ ಶ್ರೀಶೈಲ್ ಮೇಲಶೆಟ್ಟಿ ಇಬ್ಬರು ಕೂಡಿಕೊಂಡು ಆಳಂದ ಚೆಕ್ಕ ಪೊಸ್ಟ ಹತ್ತಿರ ಇರುವ ಕೃಷಿ ವಿಶ್ವವಿದ್ಯಾಲಯ ಕಂಪೌಂಡ ಹಿಂದುಗಡೆ ಬಂದು ತೊಗರಿ ಹೋಲದಲ್ಲಿ ನೋಡಲಾಗಿ ಕೊಳೆತ ಸ್ಥಿತಿಯಲ್ಲಿ ಶವ ಬಿದಿದ್ದು ಸದರಿ ಶವದ ಮೈಮೇಲೆ ಇರುವ ಶರ್ಟ ಮತ್ತು ಬೆಲ್ಟ್ ಹಾಗು ಶವ ನೋಡಲಾಗಿ ಸದರಿ ಶವ ನಮ್ಮ ತಮ್ಮ ದಾನಪ್ಪ ಇತನೆದೇ ಇರುತ್ತದೆ ಅಂತಾ ಗುರ್ತಿಸಿರುತ್ತೇನೆ. ಆತನ ಹೊಟ್ಟೆಯ ಮೇಲಭಾಗದಲ್ಲಿ ಹಾಗು ತಲೆಗೆ ಇತರೇ ಕಡೆಗಳಲ್ಲಿ ಯಾವುದೋ ಹರಿತವಾದ ವಸ್ತುವಿನಿಂದ ಅಥವಾ ಭಾರವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿರುತ್ತಾರೆ.          ನನ್ನ ತಮ್ಮನಾದ ದಾನಪ್ಪ ಇತನಿಗೆ ದಿನಾಂಕ:- 04/10/2017 ರಂದು ಮದ್ಯಾಹ್ನ 02:00 ಗಂಟೆಯಿಂದ ದಿನಾಂಕ:- 08/10/2017 ರಂದು ಮದ್ಯಾಹ್ನ 04:00 ಗಂಟೆಯ ಮದ್ಯದ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಯಾವುದೋ ಕಾರಣಕ್ಕೆ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಶವವು ತೊಗರಿ ಹೋಲದಲ್ಲಿ ಬಿಸಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾರಣಾಂತಿಕ ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿದ ರೌಟಿಗಳ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 08-10-2017 ರಂದು ಬೆಳಿಗ್ಗೆ 04:00 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣಾ ಗುನ್ನೆ ನಂ:162/2016 ಕಲಂ 363, 323,506, 392 ಸಂಗಡ 34 ಐಪಿಸಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 46/2017 ಕಲಂ 143,147,323,504, 307 ಸಂಗಡ 149 ಐಪಿಸಿ, ರಾಘವೇಂದ್ರ ನಗರ ಪೊಲೀಸ್ ಠಾಣೆ ಗುನ್ನೆ ನಂ 82/2017 ಕಲಂ 143, 147, 148, 323, 324, 307, 504, 506 ಸಂ/ 149 ಐಪಿಸಿ ಮತ್ತು ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ: 55/2017 ಕಲಂ 143, 147, 148, 307, 324 ಐಪಿಸಿ ಹಾಗೂ ಈ ಪ್ರಸ್ತುತ ಅಶೋಕ ನಗರ ಗುನ್ನೆ ನಂ; 181/2017 ಕಲಂ 143,147,148,323,324, 307 ಸಂಗಡ 149 ಐಪಿಸಿ  ಮತ್ತು ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ 394 ಐಪಿಸಿ, 44/2017 ಕಲಂ 394 ಐಪಿಸಿ ನೆದ್ದರ ಪ್ರಕರಣದ ಆರೋಪಿತರಾದ 1]ಚೇತನ ತಂದೆ ಚಂದ್ರಕಾಂತ ಹೈಬತ್ತಿ 2] ಡೂಗ ಶಿವ್ಯಾ @ ಶಿವಕುಮಾರ ತಂದೆ ರಾಜು ಹೈಬತ್ತಿ ಇವರು ಕಲಬುರಗಿ ನಗರದ ರಿಂಗ್ ರೋಡ ಹತ್ತಿರ ಇರುವ ಡಬ್ರಾಬಾದ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಮೇಲಿನ ಆರೋಪಿತರು ಅರ್ಧ ಮರ್ಧ ಕಟ್ಟಿದ ಮನೆಯಲ್ಲಿ ವಾಸವಾಗಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಪ್ರಯುಕ್ತ ಪಿಐ ಅಶೋಕ ನಗರವರು ನನಗೆ ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಬರುವಂತೆ ನಿರ್ದೇಶನದ ನೀಡಿದ ಪ್ರಯುಕ್ತ ನಾನು ಮತ್ತು ನಮ್ಮ ಸಿಬ್ಬಂದಿಯೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ಪಿಐ ಅಶೋಕ ನಗರ ಮತ್ತು ಅವರ ಸಿಬ್ಬಂದಿಯವರು ಹಾಜರಿದ್ದು ಆರೋಪಿತರು ಇರುವಿಕೆಯ ಬಗ್ಗೆ ಪಿಐ ಅಶೋಕ ನಗರ ಠಾಣೆರವರು ನಮಗೆ ಮನವರಿಕೆ ಮಾಡಿಕೊಟ್ಟು ಬೆಳಿಗ್ಗೆ 05:00 ಗಂಟೆಗೆ ಠಾಣೆಯಿಂದ ಹೊರಟು 5:30 ಎಎಂಕ್ಕೆ ಡಬ್ರಾಬಾದ ಕ್ರಾಸಕ್ಕೆ ಹೋಗಿ ಎರಡು ತಂಡಗಳಾಗಿ ವಿಂಗಡಿಸಿ ಒಂದು ಮಾರ್ಗದಿಂದ ನಾನು ಮತ್ತು ಇನ್ನೊಂದು ಮಾರ್ಗದಿಂದ ಪಿಐ ಅಶೋಕ ನಗರರವರು ಹೋರಟೇವು, ನಾನು ಮತ್ತು ನಮ್ಮ ಸಿಬ್ಬಂದಿ ಆಶ್ರಯ ಕಾಲೋನಿಯಲ್ಲಿ ಆರೋಪಿತರ ಬಗ್ಗೆ ಹುಡುಕಾಡಲಾಗಿ ಸುಮಾರು 7 ಎಎಂಕ್ಕೆ ನಮ್ಮ ಜೀಪು ರೈಲ್ವೆ ಟ್ರ್ಯಾಕ ಬಳಿ ಇರುವ ಆಶ್ರಯ ಕಾಲೋನಿಯ ಒಂದು ಮನೆಯ ಹತ್ತಿರ ನಿಂತಾಗ ಶಿವುಕುಮಾರ @ ಡೂಗಶಿವ್ಯಾ@ಸೈಂಟಿಸ್ಟ್ ತಂದೆ ರಾಜು ಹೈಬತ್ತಿ ಈತನು ಮನೆಯ ಬಲಕ್ಕೆ ಇರುವ ರಸ್ತೆಯಿಂದ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಕುರಿತು ತನ್ನ ಕೈಯಲ್ಲಿರುವ ಮಚ್ಚಿನಿಂದ ನಾನು ಕುಳಿತಿರುವ ಭಾಗದ ಕಡೆಗೆ ಜೀಪಿನ ಮುಂಭಾಗದ ಗ್ಲಾಸಿಗೆ ಬಿಸಿ ಹೊಡೆದಿದ್ದರಿಂದ ಅದರ ರಭಸಕ್ಕೆ ಗ್ಲಾಸ್ ಒಡೆದು ಮಚ್ಚಿನ ಏಟು ನನ್ನ ಎಡಗೈಗೆ ಬಡೆದು ಗಾಯವಾಗಿದ್ದರಿಂದ ನಾನು ಜೀಪಿನ ಬಾಗೀಲು ತೆಗೆದು ಸರ್ವಿಸ ಪಿಸ್ತೂಲದೊಂದಿಗೆ ಕೆಳಗೆ ಇಳಿದು ಅವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ಜೋರಾಗಿ ತಿಳಿಸಿದರು ಸಹ ಅವನು ನನಗೆ ನೂಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುತ್ತಾನೆ. ಆಗ ನಾನು ಅವನಿಗೆ ಶರಣಾಗು ಎಂದು ಎಚ್ಚರಿಕೆ ನೀಡಿದರೂ ಸಹ ಅವನು ನಿಲ್ಲದಿದ್ದಾಗ ನನ್ನ ಸರ್ವಿಸ ಪಿಸ್ತೂಲದಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದೆನು. ಆದರೂ ಅವನು ನಿಲ್ಲದೆ ಓಡಿ ಹೋಗಲು ಪ್ರಯತ್ನಿಸಿದ ಆಗ ನಾನು ಅವನನ್ನು ವಶಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಅವನ ಎಡಗಾಲಿಗೆ ಎರಡು ಸುತ್ತು ಗುಂಡು ಹೊಡೆದು ಅವನನ್ನು ವಶಕ್ಕೆ ಪಡೆದುಕೊಂಡಿರುತ್ತೇನೆ, ಅದೇ ಕಾಲಕ್ಕೆ ಆಶ್ರಯ ಕಾಲೋನಿಯ ಎಡಗಡೆ ರಸ್ತೆಯಿಂದ ಪಿಐ ಅಶೋಕ ನಗರ ಮತ್ತು ಅವರ ತಂಡ ಬಂದಿದ್ದು ಅವರು ಬರುವಾಗ ಚೇತನ ಈತನು ಮನೆಯಿಂದ ಹೊರಬಂದು ಸಿಪಿಸಿ ಪ್ರಹ್ಲಾದ ಕುಲಕರ್ಣಿ ಅವರ ಮೇಲೆ ಲಾಂಗ್(ತಲವಾರ) ಬಿಸಿ ಆತನ ಎಡಗೈಗೆ ಹೊಡೆದು ಮಾರಣಾಂತಿಕವಾಗಿ ಭಾರಿ ರಕ್ತಗಾಯ ಪಡಿಸಿ ಅವರಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಪಿಐ ಅಶೋಕ ನಗರರವರು ಸದರಿಯವನಿಗೆ ನೀನು ಪ್ರವೀಣನಿಗೆ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿತನು ಇರುತ್ತಿ ನಿನ್ನನ್ನು ದಸ್ತಗಿರಿ ಮಾಡಲು ಬಂದಿರುತ್ತೇವೆ ಅಂತ ತಿಳಿಸಿದರೂ ಸಹ ಕಿಮ್ಮತ್ತು ಕೊಡದೇ ಆರೋಪಿತನು ತಪ್ಪಿಸಿಕೊಳ್ಳಲು ಮುಂದಾದಾಗ ಅವನ ಮೇಲೆ ತಮ್ಮ ಸರ್ವಿಸ ಪಿಸ್ತೂಲದಿಂದ ಚೇತನ ಇತನ ಬಲಗಾಲಿಗೆ ಎರಡು ಗುಂಡು ಹೊಡೆದು ವಶಕ್ಕೆ ಪಡೆದುಕೊಂಡು  ನಾವು ಸಕರಕಾರಿ ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಹಲ್ಲೆ ಮತ್ತು ಬಲ ಪ್ರಯೋಗ ಮಾಡಿ ಗಂಭೀರ ಸ್ವರೂಪದ ಗಾಯ ಮಾಡಿ ಮಾರಣಾಂತಿಕ ಹಲ್ಲೆ ಮಾಡಿ ಕಾನೂನು ಬದ್ದವಾದ ದಸ್ತಗಿರಿಯನ್ನು ತಪ್ಪಿಸುವ ಸಲುವಾಗಿ ನನ್ನ ಮೇಲೆ ಮತ್ತು ಪ್ರಹ್ಲಾದ ಕುಲಕರ್ಣಿ ಪಿಸಿ ಮೇಲೆ ಹಲ್ಲೆ ಮಾಡಿದ ಆರೋಪಿತರಾದ ಶಿವುಕುಮಾರ@ ಡೂಗಶಿವ್ಯಾ@ಸೈಂಟಿಸ್ಟ್ ಹೈಬತ್ತಿ ಮತ್ತು ಚೇತನ ಹೈಬತ್ತಿ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಶ್ರೀಮತಿ ಅಕ್ಕಮಾಹಾದೇವಿ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಲ್ಲಮ ಪ್ರಭು ತಂದೆ ಕರಿಘೋಳೆಪ್ಪ ಸಾ: ತೊನಸನಳ್ಳಿ (ಎಸ್ ) ಇವರು ತೊನಸನಹಳ್ಳಿ ಗ್ರಾಮದಲ್ಲಿ ಈಗ್ಗೆ ಸುಮಾರು 6-7 ವರ್ಷಗಳಿಂದ ಶ್ರೀ  ಸಾಯಿ ಎಂಬ ಹೆಸರಿನ ಮೇಲೆ ಫೈನಾನ್ಸ ನಡೆಸಿಕೊಂಡು ಬಂದಿದ್ದು ಅದಕ್ಕೆ ಮ್ಯಾನೆಜರ ಅಂತಾ ನಮ್ಮೂರಿನ ಶ್ರೀಶೈಲ ತಂದೆ ಶರಣಪ್ಪಾ ರಾಮಶೆಟ್ಟಿ ಇವರು ನಿರ್ವಹಿಸಿಕೊಂಡು ಬಂದಿರುತ್ತಾರೆ.  ದಿನಾಂಕ 06/10/2017 ರಂದು ಎಂದಿನಂತೆ ಬೆಳಗ್ಗೆ  10.00 ಗಂಟೆಗೆ ಶ್ರೀಶೈಲ ಇತನು ಫೈನಾನ್ಸಕೆ ಹೋಗಿ ಹಣ ಸಂಗ್ರಹ ಮಾಡಿಕೊಂಡು ರಾತ್ರಿ 8.30 ಪಿ ಎಂ ಕ್ಕೆ ಫೈನಾನ್ಸ ಲೆಕ್ಕ ಪತ್ರಗಳನ್ನು ಮುಗಿಸಿ ಫೈನಾನ್ಸದ ಅಲಮಾರದಲ್ಲಿ ನಗದು ಹಣ-75,000/- ರೂ, ಇಟ್ಟು  ಬಾಗಿಲು ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದರು. ದಿನಾಂಕ 07/10/2017 ರಂದು ಬೆಳಗ್ಗೆ 10.00 ಗಂಟೆಗೆ ಎಂದಿನಂತೆ ಶ್ರೀಶೈಲ ಇವರು ಫೈನಾನ್ಸಗೆ ಬಂದು ನೋಡಿದಾಗ ರಾತ್ರಿ ವೇಳೆ ಯಾರೋ ಕಳ್ಳರು ಫೈನಾನ್ಸದ ಬಾಗಿಲ ಕೀಲಿ ಮುರಿದು  ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಪೋನಮಾಡಿ ತಿಳಿಸಿದರಿಂದ ನಾನು & ಶಿವಕುಮಾರ ತಂದೆ ಶಂಕ್ರೆಪ್ಪಾ ಕಟ್ಟಿಮನಿ , ಸಿದ್ದಪ್ಪಾ ತಂ ಬರಗಾಲ ಸಿದ್ದ ಪೂಜಾರಿ ಹಾಗೂ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಕೂಡಿ ಎಲ್ಲರೂ ಕೂಡಿ ಫೈನಾನ್ಸಗೆ ಬಂದು ನೋಡಲಾಗಿ ಅಲ್ಲಿಯೇ ಇದ್ದ ಶ್ರೀಶೈಲ ತಿಳಿಸಿದ್ದೇನೆಂದರೆ, ನಾನು ನಿನ್ನೆ ಹಣ ಸಂಗ್ರಹ ಮಾಡಿದ 75,000/- ರೂ ಅಲಮಾರದಲ್ಲಿ ಇಟ್ಟಿರುತ್ತೇನೆ ಅಂತಾ ತಿಳಿಸಿದ್ದು, ಎಲ್ಲರೂ ಕೂಡಿ ಒಳಗೆ ಹೋಗಿ ನೋಡಿದಾಗ ಫೈನಾನ್ಸದಲ್ಲಿದ್ದ ಅಲಮಾರಿ ಮುರಿದು ಅದರಲ್ಲಿದ್ದ ನಗದು ಹಣ 75,000/- ರೂ ಹಾಗೂ ರೂಮಿನಲ್ಲಿದ್ದ 1] ಒಂದು ಮಾನಿಟರ ಮತ್ತು ಹಾರ್ಡ ಡಿಸ್ಕ (ಸಿ.ಸಿ. ಟಿ.ವಿಗೆ ಸಂಬಂಧಿಸಿದ್ದು) ಅ.ಕಿ 5000/-ಒಂದು 2] ಇನ್ವಟರ ಅ.ಕಿ 1000/-, 3] ಇನ ಕೇಬಲ ಸೆಟ್ ಆಫ್ ಬಾಕ್ಸ ಅ.ಕಿ 600/- ಹಾಗೂ 4] ಫೈನಾನ್ಸದಲ್ಲಿ ಅಳವಡಿಸಿದ 3 ಸಿಸಿ ಕ್ಯಾಮೆರಾಗಳು ಅ ಕಿ 5,000 / ಹಾಗೂ ಸಿಸಿ ಟಿ.ವಿ ಅಳವಡಿಸಿದ ಎಲ್ಲಾ ಕೇಬಲ ವೈರಗಳನ್ನು ಕತ್ತರಿಸಿ ಲುಕ್ಸಾನ ಮಾಡಿರುತ್ತಾರೆ.  ಹೀಗೆ ಒಟ್ಟು 86,600/- ರೂ. ವಸ್ತಗಳು ಹಾಗೂ ನಗದು  ಹಣ ರಾತ್ರಿ ವೇಳೆ ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.