POLICE BHAVAN KALABURAGI

POLICE BHAVAN KALABURAGI

02 January 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-01-2018 ರಂದು ಸುಧಾರಿತ ಗಸ್ತು ಸಂ 19 ಬಡದಾಳ ಗ್ರಾಮದ ಬೀಟ್ ಸಿಬ್ಬಂದಿಯಾದ ಭಾಗಣ್ಣ ಸಿಪಿಸಿ-167 ರವರು ಬಡದಾಳ ಗ್ರಾಮದ ದರ್ಗಾ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಊ. ಅಫಜಲಪೂರ ಠಾಣೆ ಹಾಗು  ಸಿಬ್ಬಂದಿ ಮತ್ತು ಪಂಚರೊಂದಿಗೆ ಬಡದಾಳ ಗ್ರಾಮದ ದರ್ಗಾ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು, ದರ್ಗಾ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾನಂದ ತಂದೆ ಮಹಾದೇವಪ್ಪ ಶಿರೂರ ಸಾ||ಬಡದಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2050/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 01-01-2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ನೋಡಲು ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರದಲ್ಲಿ ಇರುವ ಪಾನ ಶ್ಯಾಪ ಮುಂದೆ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಬಾಟಲಿಗಳು ಮತ್ತು ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯ ದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಸವರಾಜ ತಂದೆ ರಾಮಚಂದ್ರಪ್ಪ ಕೊಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 525/-ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 1) 180 ಎಮ್.ಎಲ್. 4 ಇಂಪಿರಿಯಲ್ ಬ್ಲೂ ವಿಸ್ಕಿ ಬಾಟಲಗಳು ಒಂದು ಬಾಟಲಕ್ಕೆ 148 ರೂ 26 ಪೈಸೆ ಒಟ್ಟು 593 ರೂ 04 ಪೈಸೆ 2) 180 ಎಮ್.ಎಲ್. 10 ಆಪೀಸರ್ ಚೌಯಿಸ್ ವಿಸ್ಕಿ ಒಂದು ಬಾಟಲಕ್ಕೆ 82 ರೂ 85 ಪೈಸೆ ಒಟ್ಟು 828 ರೂ 50 ಪೈಸೆ 3) ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 50 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 1406. 50 ಪೈಸೆ. ಹೀಗೆ ಒಟ್ಟು 2828 ರೂ 04 ಪೈಸೆ ಕಿಮ್ಮತ್ತಿನ ಮಾಲು ಮತ್ತು ನಗದು ಹಣ 525/-ರೂ ಇದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-01-2018 ರಂದು ಸಾಯಂಕಾಲ ನಾನು ನಮ್ಮೂರಿನಲ್ಲಿದ್ದಾಗ ನಮ್ಮ ಮೌಸಿಯ ಮಗನಾದ ಕಲ್ಯಾಣಿ ದೊಡ್ಡಮನಿ ಸಾ|| ಮೈಂದರ್ಗಿ ಇವರು ನನಗೆ ಪೋನ ಮಾಡಿ ತಮ್ಮ ಮಗಳಾದ ಮಹಾಲಕ್ಷ್ಮೀ ಇವಳಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಅವಳನ್ನು ಅವಳ ಗಂಡನಾದ ಅಮರ ಮೇತ್ರೆ ಈತನು ಕಲಬುರಗಿಯ ದನ್ವಂತ್ರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೆನೆ ನೀವು ಬನ್ನಿ ಅಂತಾ ನನಗೆ ಪೋನ್ ಮಾಡಿದ್ದಾನೆ, ಈಗ ನಾನು ಮೈಂದರ್ಗಿಯಿಂದ ಮೋಟರ ಸೈಕಲ ಮೇಲೆ ಕಲಬುರಗಿಗೆ ಹೊರಟಿದ್ದೆನೆ, ನೀನು ಕಲಬುರಗಿಗೆ ಬಾ ಅಂತಾ ತಿಳಿಸಿದನು. ಆಗ ನಾನು ಈಗ ನನಗೆ ಕೆಲಸ ಇದೆ ಬೆಳಿಗ್ಗೆ ಬರುತ್ತೇನೆ ಅಂತಾ ತಿಳಿಸಿರುತ್ತೇನೆ, ಸಂಜೆ 6:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಸದರಿ ನನ್ನ ಮೌಸಿಯ ಮಗನಾದ ಕಲ್ಯಾಣಿ ದೊಡ್ಡಮನಿ ಈತನ ಮೋಬೈಲನಿಂದ ಯಾರೊ ಅಪರಿಚಿತರೊಬ್ಬರು ನನ್ನ ಮೋಬೈಲಿಗೆ ಕರೆ ಮಾಡಿ, ನಾವು ಮಾತಾಡುತ್ತಿರುವ ಮೋಬೈಲ ಫೋನಿನವರು ದುಧನಿ ಕಡೆಯಿಂದ ಸಾಯಂಕಾಲ 06:30 ಗಂಟೆಯ ಸುಮಾರಿಗೆ ಮೋಟರ ಸೈಕಲ ಮೇಲೆ ಅಫಜಲಪೂರ ಕಡೆಗೆ ಬರುತ್ತಿದ್ದಾಗ ಅಫಜಲಪೂರ ದುಧನಿ ರಸ್ತೆಗೆ ಇರುವ ಮಾದಾಬಾಳ ತಾಂಡಾದ ಕ್ಯಾನಾಲಿನ ಬ್ರೀಜ್ ಹತ್ತಿರ, ಕ್ಯಾನಾಲ ರೋಡಿನ ಕಡೆಯಿಂದ ಒಂದು ಜೆ.ಸಿ.ಬಿ ಚಾಲಕ ಜೆಸಿಬಿಯನ್ನು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಮೇನ್ ರೋಡಿನ ಮೇಲೆ ಬರುತ್ತಿದ್ದ ಮೋಟರ ಸೈಕಲ ಮೇಲೆ ಬರುತ್ತಿದ್ದವರಿಗೆ ಡಿಕ್ಕಿ ಪಡಿಸಿದ್ದರಿಂದ, ಸದರಿ ಮೋಟರ ಸೈಕಲ ಸವಾರನು ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಸದರಿ ಮೃತ ಪಟ್ಟ ವ್ಯೆಕ್ತಿಯ ಗುರುತು ಗೊತ್ತಾಗದ ಕಾರಣ ಸದರಿ ಮೃತನ ಜೇಬಿನಿಂದ ಕೆಳಗಡೆ ಬಿದ್ದ ಮೋಬೈಲನ್ನು ತಗೆದು ನೋಡಲಾಗಿ ಮೃತನು ಕೋನೆಯದಾಗಿ ನಿಮ್ಮ ನಂಬರಗೆ ಪೋನ್ ಮಾಡಿದ್ದರಿಂದ ವಿಷಯ ತಿಳಿಸಲು ಪೋನ ಮಾಡಿರುತ್ತೇವೆ ಎಂದು ತಿಳಿಸಿದರು. ಆಗ ನಾನು ಸದರಿ ನನಗೆ ಪೋನ್ ಮಾಡಿದವರಗೆ ಸದರಿ ವ್ಯೆಕ್ತಿ ನಮ್ಮ ಮೌಸಿಯ ಮಗನಾದ ಕಲ್ಯಾಣಿ ಇರುತ್ತಾನೆ ನಾವು ಈಗಲೆ ಬರುತ್ತೇವೆ, ನಾವು ಬರುವವರೆಗೆ ಶವವನ್ನು ತಗೆಯಬೇಡಿ ಅಲ್ಲೆ ಬಿಡಿ ಎಂದು ತಿಳಿಸಿರುತ್ತೇನೆ. ನಂತರ ಸದರಿ ವಿಷಯವನ್ನು ಮೈಂದರ್ಗಿಯ ನಮ್ಮ ಸಂಭಂದಿಕರಿಗೆ ಪೋನ್ ಮಾಡಿ ಎಕ್ಸಿಡೆಂಟ್ ಆದ ಜಾಗಕ್ಕೆ ಬರಲು ತಿಳಿಸಿರುತ್ತೇನೆ. ರಾತ್ರಿ 8:00 ಗಂಟೆಗೆ ಸುಮಾರಿಗೆ ಎಕ್ಸಿಡೆಂಟ ಆದ ಜಾಗಕ್ಕೆ ಬಂದು ನೋಡಲಾಗಿ, ನಮ್ಮ ಮೌಸಿಯ ಮಗನಾದ ಕಲ್ಯಾಣಿಯ ಶವ ಇದ್ದು, ಅವನ ಮುಖಕ್ಕೆ ಬಲ ಕಪಾಳಿನಿಂದ ಗದ್ದದ ಒರೆಗೆ ಭಾರಿ ರಕ್ತಗಾಯ ಹಾಗೂ  ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ನಮ್ಮ ಅಣ್ಣನು ಚಲಾಯಿಸಿಕೊಂಡು ಬರುತ್ತಿದ್ದ ಹಿರೋ ಹೊಂಡಾ ಸಿಡಿ ಡಿಲೆಕ್ಸ ಮೋಟರ ಸೈಕಲ ನಂ ಕೆಎ-32 ಟಿಆರ್-9739 ಇದ್ದು, ಡಿಕ್ಕಿ ಪಡಿಸಿದ ಜೆ.ಸಿ,ಬಿ ಸ್ಥಳದಲ್ಲೆ ಇದ್ದು, ಅದರ ಚೆಸ್ಸಿ ನಂ 5602200 ಇಂಜೆನ್ ನಂ 336/40106/0/195683 ಅಂತಾ ಇರುತ್ತದೆ. ಸದರಿ ಡಿಕ್ಕಿಪಡಿಸಿದ ಜೆ.ಸಿ.ಬಿ ಚಾಲಕನ ಬಗ್ಗೆ ವಿಚಾರಿಸಲಾಗಿ, ಜೆ.ಸಿ.ಬಿ ಚಾಲಕನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಅಂತಾ ಶ್ರೀ ರವಿಕುಮಾರ ತಂದೆ ಶರಣಬಸಪ್ಪ ಯಳಸಂಗಿ ಸಾ|| ನಿಂಬರ್ಗಾ ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.