POLICE BHAVAN KALABURAGI

POLICE BHAVAN KALABURAGI

09 October 2014

Gulbarga District Reported Crimes

ಅಪಹರಣ ಪ್ರಕರಣ :
ಸೇಡಂ ಠಾಣೆ : ದಿನಾಂಕ: 06-10-2014 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಪದ್ಮಮ್ಮಾ, ಮಕ್ಕಳಾದ, ಕಾವೇರಿ, ಶ್ರೀಧರ, ನಮ್ಮ ತಂದೆಯಾದ ಸುಭಾಷಬಾಬು ,ತಾಯಿಯಾದ ಶಕುಂತಲಬಾಯಿ ಎಲ್ಲರೂ ಊಟ ಮಾಡಿಕೊಂಡು ಮನೆಯಲ್ಲಿ ಮಗಲಗಿಕೊಂಡಾಗ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮಗಳು ಕಾವೇರಿ ಇವಳು ಬರ್ಹಿದೆಸೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದಳು.  ಸ್ವಲ್ಪ ಹೊತ್ತು ನೋಡಿದ್ದು  ಅವಳು ಬರದ ಕಾರಣ ನಾನು ಮತ್ತು ನನ್ನ ಹೆಂಡತಿ  ಮನೆಯ ಸುತ್ತ ಮುತ್ತ  ಹುಡಕಾಡಲಾಗಿ ನನ್ನ ಮಗಳು ಕಾಣಸಲಿಲ್ಲಾ. ಮತ್ತು ಬೆಳಿಗ್ಗೆ ನಮ್ಮ  ಸಂಭಂದಿಕರ ಹತ್ತಿರ ಹಾಗು ಎಲ್ಲಾ ಕಡೆಗೆ ವಿಚಾರಿಸಲಾಗಿ ನನ್ನ ಮಗಳ ಬಗ್ಗೆ ಗೊತ್ತಾಗಿರುವುದಿಲ್ಲಾ.ರಾಜಕುಮಾರ ಇತನು ಆಗಾಗ ನನ್ನ  ಮಗಳಿಗೆ ಚುಡಾಯಿಸುವುದು, ಪಿಡಿಸುವುದು  ಮಾಡಿದ್ದರಿಂದ ಆತನೇ ನನ್ನ ಮಗಳನ್ನು ರಾತ್ರಿ 10 ಗಂಟೆಯ ಸುಮಾರಿಗೆ ಬರ್ಹಿದಸೆಗೆ ಹೋದಾಗ ಯಾವುದೋ ಉದ್ದೇಶದಿಂದ  ಅಪ್ರಾಪ್ತ ವಯಸ್ಕಳಾದ ನನ್ನ ಮಗಳಾದ ಕಾವೇರಿ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರಬಹುದು  ಅಂತಾ ಶ್ರೀ ರವೀಂದ್ರ ತಂದೆ ಸುಭಾಷಬಾಬು ಮಂಡಿಗಿ  ಸಾ: ಹಾಬಾಳ(ಟಿ) ಗ್ರಾಮ ತಾ: ಸೇಡಂ   ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ರಾಮಚಂದರ ತಂದೆ ಗಣಪತಿ ಕಟಕೆ ಸಾ : ಹರಸೂರ  ರವರು ದಿನಾಂಕ: 7/10/2014 ರಂದು ರಾತ್ರಿ 08-20 ಗಂಟೆಗೆ ತನ್ನ ಟಿವಿಎಸ್ ಮೋ.ಸೈಕಲ ಮೇಲೆ ಮಹಾಗಾಂವ ಕ್ರಾಸದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ಎನ್.ಹೆಚ್.218 ನೇದ್ದರ ರೋಡಿನ ಕುರಿಕೋಟಾ ಸೀಮಾಂತರ ಗಂಡೋರಿ ನಾಲಾ ಹತ್ತಿರ ಆರೋಪಿತನು ಹಿಂದಿನಿಂದ ತನ್ನ ಹಿರೋ ಹೊಂಡಾ ಫ್ಯಾಶನ ಮೋ.ಸೈಕಲ ನಂ. ಕೆಎ:32, ಎಕ್ಸ: 790 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.