POLICE BHAVAN KALABURAGI

POLICE BHAVAN KALABURAGI

17 February 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಬಸವರಾಜ ತಂದೆ ಮಲಕಪ್ಪ ಹರಸೂರ ಸಾ||ಗ್ರಾಮೀಣ ಠಾಣೆ : ಶ್ರೀ ಬಸವರಾಜ ತಂದೆ ಮಲಕಪ್ಪ ಹರಸೂರ ಸಾ- ಮನೆ ನಂ ಎಲ್.ಐ.ಜಿ 248/9 ಅಕ್ಕಮಾಹಾದೇವಿ ಕಾಲೋನಿ ಕಲಬುರಗಿ ರವರು ದಿನಾಂಕ 12-02-2018 ರಂದು ತಮ್ಮ ಮಗನ ಮದುವೆ ಕಾರ್ಯಕ್ರಮ ಹಾಗೂ ರಾತ್ರಿಯೆಲ್ಲಾ  ಮೆರವಣಿಗೆ  ಮುಗಿಸಿಕೊಂಡು ಮನೆಗೆ ಬಂದು ದಿನಾಂಕ 13-02-2018 ರಂದು 2 -00 ಎ.ಎಮ್.ಕ್ಕೆ  ಬಂದು ಮಲಗಿಕೊಂಡಿದ್ದು ಬೆಳಿಗ್ಗೆ 08-00 ಎ.ಎಮ ಕ್ಕೆ ಎದ್ದು ನೋಡಲು ಫಿರ್ಯಾಧಿಯವರ ಮನೆಯಿಂದ ಎರಡು ಮೊಮೈಲಗಳು ಹಾಗೂ ನಗದು ಹಣ 3500/- ಮತ್ತು ಲೇಡಿಜ್ ಹ್ಯಾಂಡ ಬ್ಯಾಗ್  ಮತ್ತು ಅದರಲ್ಲಿದ್ದ ಡೆಬಿಟ್  ಕ್ರೆಡಿಟ್ ಕಾರ್ಡಗಳು ಮತ್ತು ಮನೆಯಲ್ಲಿಟ್ಟಿದ್ದ 310.511 ಗ್ರಾಂ  ಬಂಗಾರದ ಆಭರಣಗಳು ಒಟ್ಟು ಎಲ್ಲಾ ಸೇರಿ 9,95,887=00 ರೂಗಳ ಕಿಮ್ಮತ್ತಿನ ಆಭರಣಗಳು ಮನೆಯಿಂದ ಕಳ್ಳತನವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ಅವಿನಾಶ ತಂದೆ ಪರಮೇಶ್ವರ ಬಿರಾದರ ಸಾ : ಕಮಲಾನಗರ  ರವರು  ದಿನಾಂಕ:15-02-2018 ರಂದು ಗುರುವಾರ ದಿವಸ ಶಿವರಾತ್ರಿ ಅಮವಾಸೆ ಇದ್ದುದ್ದರಿಂದ ನಮ್ಮ ಮನೆಯ ದೇವರಾದ ಬಸವನ ಸಂಗೋಳಗಿ ಗ್ರಾಮದ ಬಸವಣ್ಣನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬರಬೇಕೆಂದು ನಾನು ಮತ್ತು ನನ್ನ ತಾಯಿಯಾದ ಸಾವಿತ್ರಿ ಇಬ್ಬರು ಕೂಡಿ ನಮ್ಮ ಮೊಟಾರ್ ಸೈಕಲ್ ನಂ ಕೆಎ38-ಕೆ0564 ನೇದ್ದರ ಮೇಲೆ ಹೋಗುತ್ತಿರುವಾಗ ಕಡಗಂಚಿ ಕ್ರಾಸ ದಾಟಿ ನೆಲ್ಲೂರ ಕ್ರಾಸಿನಲ್ಲಿ ನಾನು ಮೋಟಾರ್ ಸೈಕಲ್ ಟರ್ನ ಮಾಡುತ್ತಿರುವಾಗ ಹಿಂದಿನಿಂದ ಒಬ್ಬ ಕಾರ್ ಚಾಲಕನು ತನ್ನ ಅಧಿನದಲ್ಲಿಯ ಕಾರನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ನನ್ನ ತಾಯಿಗೆ ಕೂಡಿಸಿಕೊಂಡು ಹೋಗುತ್ತಿದ್ದ ನಮ್ಮ ಮೊಟಾರ್ ಸೈಕಲಗೆ ಡಿಕ್ಕಿ ಪಡಿಸಿದನು. ಆದ್ದರಿಂದ ನಾನು ಮತ್ತು ನನ್ನ ತಾಯಿ ಇಬ್ಬರು ಮೋಟಾರ್ ಸೈಕಲ್ ಸಮೇತವಾಗಿ ಕೇಳಗೆ ಬಿದ್ದಿದ್ದು ಇದರಿಂದ ನನಗೆ ಹಣೆಯ ಎಡಗಡೆ ರಕ್ತಗಾಯ ಎಡಗಡೆ ಕಪಾಳಕ್ಕೆ, ಎರಡು ಮೊಳಕಾಲಿಗೆ, ಬಲಗಾಲು ಹೆಬ್ಬರಳಿಗೆ ತರಚಿದ ಗಾಯಗಳು ಆಗಿರುತ್ತವೆ. ನಮ್ಮ ತಾಯಿ ತಲೆಗೆ ಕೈಗೆ ಹಾಗೂ ಬಲಗಾಲಿಗೆ ತರಚಿದ ಗಾಯಗಳಾಗಿ ಬೇಹುಶ ಆಗಿದ್ದರು ಸದರಿ ಕಾರ್ ಚಾಲಕನು ಕಾರನ್ನು ಅಲ್ಲಿಯೇ ಬಿಟ್ಟಿ ಓಡಿಹೋಗಿದ್ದು ಸದರಿ ಕಾರು ಗ್ರೇ ಕಲರದಾಗಿದ್ದು ಹೊಸಕಾರ ಆಗಿತ್ತು ಅದರ ಟಿಪಿ ನಂ ಎಂಹೆಚ್14-ಟಿಸಿ72/ಎಫ್ ಅಂತಾ ಇತ್ತು ಅಸ್ಟೊತ್ತಿಗೆ ಲಾಡಚಿಂಚೋಳಿ ಕ್ರಾಸ ಕಡೆಯಿಂದ ಜನ ಬಂದು ಸೇರಿದ್ದು ಅವರಲ್ಲಿ ಯಾರೋ ಅಂಬ್ಯೂಲೆನ್ಸಗೆ ಫೋನಮಾಡಿ ಕರೆಸಿದ್ದು ಅದರಲ್ಲಿ ನಾನು ಮತ್ತು ನನ್ನ ತಾಯಿ ಉಪಚಾರ ಕುರಿತು ಕಲಬುರಗಿಯ ಎ.ಎಸ್.ಎಂ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಈಗ ಸದ್ಯ ಉಪಚಾರ ಪಡೆಯುತ್ತಿದ್ದೇವೆ. ಸದರಿ ಕಾರ್ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ನಾನು ಅವನನ್ನು ನೋಡಿದಲ್ಲಿ ಗುರುತ್ತಿಸುತ್ತೇನೆ. ಸದರಿ ಕಾರ್ ಚಾಲಕನ ಮೇಲೆ ಸೂಕ್ತ ಕಾನೂನು ರಿತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.