POLICE BHAVAN KALABURAGI

POLICE BHAVAN KALABURAGI

11 December 2017

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ 10/12/2017 ರಂದು ಎಂದಿನಂತೆ ನನ್ನ ತಮ್ಮ ವಿನೋದ ಈತನು ಮುಂಜಾನೆ 8 ಗಂಟೆ ಸುಮಾರಿಗೆ ಬೆನಕನಹಳ್ಳಿ ಶ್ರೀ ಸಿಮೆಂಟ ಪ್ಯಾಕ್ಟರಿಗೆ ಟ್ರಾಕ್ಟರ ನಡೆಸುವ ಕುರಿತು ಮೋಟರ್ ಸೈಕಲ ನಂಬರ ಕೆಎ-32 ಇಎಪ್-1116 ನೇದ್ದರ ಮೇಲೆ ಹೋದನು. ಮತ್ತು ಇಂದು ರವಿವಾರ ಇದೆ ಬೇಗನೆ ಮನೆಗೆ ಬರುತ್ತೇನೆ ಅಂತಾ ಹೇಳಿ ಹೋದನು.  ನಂತರ ಸಾಯಂಕಾಲ 7.00 ಗಂಟೆಯಾದರೂ ನನ್ನ ತಮ್ಮ ವಿನೋದ ಈತನು  ಮನೆಗೆ ಬರದ ಕಾರಣ ನಾನು ಅವನ ಮೋಬೈಲ ಫೋನಿಗೆ ಪೋನ ಹಚ್ಚಲಾರಂಭಿಸಿದಾಗ ಫೋನ ರಿಂಗ ಆಗುತ್ತಿದ್ದು ಎತ್ತಲಿಲ್ಲ. ನಂತರ ಸ್ವಲ್ಪ ಸಮಯದ ನಂತರ ನನಗೆ ಯಾರೋ ಒಬ್ಬರು ಫೋನ ಎತ್ತಿ ಈ ಫೋನನವರು ದಾರಿಯಲ್ಲಿ ಮೋಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವರಿಗೆ ತಲೆಗೆ ಮುಖಕ್ಕೆ ಭಾರಿ ರಕ್ತ ಗಾಯಗಳಾಗಿದ್ದು ಅವನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನಂತರ ನಾನು ಮತ್ತು ನನ್ನ ತಮ್ಮನಾದ ಮಿಧುನ ಹಾಗು ನಮ್ಮ ಸಂಬಂಧಿಕನಾದ ಗಂಗಾರಾಮ ಕೂಡಿಕೊಂಡು ಹೋಗಿ ನೋಡಲಾಗಿ ನನ್ನ ತಮ್ಮನು ಬೆನಕನಳ್ಳಿ ದಿಗ್ಗಾಂವ ರೋಡಿನಲ್ಲಿ ಮೊಟಾರ ಸೈಕಲ ಹಾಕಿಕೊಂಡು ಬಿದ್ದಿದ್ದು ಅವನಿಗೆ ಹಣೆಗೆ, ಬಾಯಿಗೆ ಭಾರಿ ರಕ್ತಗಾಯಗಳಾಗಿ, ರಕ್ತ ಸೋರುತ್ತಿತ್ತು. ಮತ್ತು ಎಡಕಿವಿಗೆ ಸಹ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು, ಬಲಗೈ ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ನನ್ನ ತಮ್ಮನಾದ ವಿನೋದ ಈತನು ಇಂದು ದಿನಾಂಕ 10-12-2017 ರಂದು ಸಾಯಂಕಾಲ 6-00 ಗಂಟೆಯಿಂದ 7-00 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ಮೋಟಾರ ಸೈಕಲ ನಂಬರ ಕೆಎ-32ಇಎಫ-1116 ನೇದ್ದನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಮೋಟಾರ ಸೈಕಲ ಅಪಘಾತಪಡಿಸಿಕೊಂಡು ಮೃತಪಟ್ಟಿರುತ್ತಾನೆ. ಅಂತಾ ಶ್ರೀ ಗೋವಿಂದ ತಂದೆ ಲಕ್ಷ್ಮಣ ಚವ್ಹಾಣ ಸಾ|| ಲಕ್ಷ್ಮಣ ತಾಂಡಾ ಮಳಖೇಡ ತಾ|| ಸೇಡಂ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-12-2017 ರಂದು ಅಫಜಲಪೂರ ಪಟ್ಟಣದ ಲಕ್ಮೀ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎದ್.ಐ. ಅಫಜಲಪೂರ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಲಕ್ಮಿಗುಡಿಯ ಹತ್ತಿರ ಹೋಗಿ ಸ್ವಲ್ಪ ದೂರು ನಮ್ಮ ಇಲಾಖಾ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಲಕ್ಮೀಗುಡಿಯ ಮುಂದಿನ ರೋಡಿನ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶೇಟ್ಟೆಪ್ಪಾ ತಂದೆ ಹಣಮಂತ ಗಾಡಿವಡ್ಡರ ಸಾ|| ವೇಂಕಟೇಶ್ವರ ನಗರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1010/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಗೃಹಿಣಿಗೆ  ಕಿರುಕಳ ಕೊಟ್ಟ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಸುಜತಾ ಗಂಡ ಸಂತೋಷ ಜಮಾದಾರ ಸಾ||ಚಿಂಚೋಳಿ ರವರನ್ನು ಈಗ 5 ವರ್ಷದ ಹಿಂದೆ ಚಿಂಚೋಳಿ ಗ್ರಾಮದ ಸಂತೋಷ ತಂದೆ ಬಸಪ್ಪ ಜಮಾದಾರ ಈತನೋಂದಿಗೆ ಮದುವೆಮಾಡಿಕೊಟ್ಟಿದ್ದು ಇರುತ್ತದೆ ನನಗೆ ಸದ್ಯ 4 ವರ್ಷದ ತನು ಅಂತ ಹೆಣ್ಣು ಮಗಳಿರುತ್ತಾಳೆ ನನ್ನ ಗಂಡ ಹಾಗು ಅತ್ತೆ ಯಾದ ಶಾಂತಾಬಾಯಿ ಮಾವನಾದ ಬಸಪ್ಪ ನನ್ನ ಸಣ್ಣತ್ತೆಯಾದ ಜಗುಬಾಯಿ ಈವರೇಲ್ಲರು ಇವರೇಲ್ಲರು ನನಗೆ ನೀನು ಸರಿಯಾಗಿಲ್ಲ ನಿನಗೆ ಅಡಿಗೆ ಮಾಡಲು ಬರುವುದಿಲ್ಲ ಅಂತ ನನಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿ ನನ್ನ ಗಂಡನಿಗೆ ಮಾಲಾಶ್ರೀ ಎಂಬುವರೊಂದಿಗೆ ಈಗ ಕೆಲವು ತಿಂಗಳಿಂದೆ ಎರಡನೇ ಮದುವೆ ಮಾಡಿರುತ್ತಾರೆ  ಈ ವಿಷಯದ ಸಂಬಂಧ ನಮ್ಮ ತಂದೆಯಾದ ಹಣಮಂತ ನಮ್ಮ ತಾಯಿಯಾದ ಶಾರದಾಬಾಯಿ ಹಾಗು ನಮ್ಮ ಸಂಬಂಧಿಕರಾದ ಅಫಜಲಪೂರ ಪಟ್ಟಣದ ಲಚ್ಚಪ್ಪ ತಂದೆ ಸಿದ್ರಾಮ ಜಮಾದಾರ, ಸಿದ್ದಪ್ಪ ತಂದೆ ಕಲ್ಲಪ್ಪ ಸಿನ್ನೂರ ಇವರೇಲ್ಲರು ಕೂಡಿ ನನ್ನ ಗಂಡನ ಮನೆಗೆ ಬಂದು ನನ್ನ ಗಂಡ ಹಾಗು ಗಂಡನ ಮನೆಯವರಿಗೆ ತಿಳುವಳಿಕೆ ಹೇಳಿ ಬಂದಿರುತ್ತಾರೆ. ದಿನಾಂಕ 09/12/2017 ರಂದು ಬೆಳಿಗ್ಗೆ ನನ್ನ ಗಂಡ ಹಾಗು ಅತ್ತೆಯರಾದ ಶಾಂತಾಬಾಯಿ, ಜಗುಬಾಯಿ ಮಾವನಾದ ಬಸಪ್ಪ ಮತ್ತು ನನ್ನ ಗಂಡನ ಎರಡನೇ ಹೆಂಡತಿಯಾದ ಮಾಲಾಶ್ರೀ ಹಾಗು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ಈವರೆಲ್ಲರು ನನಗೆ ಮಾನಸಿಕವಾಗಿ ಹೈಹಿಕವಾಗಿ ಕಿರುಕುಳ ನೀಡಿದ್ದರಿಂದ ಸದರಿಯವರ ಕಿರುಕುಳ ತಾಳಲಾರದೆ ನನ್ನ ಮಗಳೊಂದಿಗೆ ಬಡದಾಳ ಗ್ರಾಮದ ನನ್ನ ತವರು ಮನೆಗೆ ಬಂದಿದ್ದು ನನ್ನ ತವರು ಮನೆಯಲ್ಲಿ ನಮ್ಮ ತಾಯಿ ಹಾಗು ತಂದೆ ನನಗೆ ವಿಚಾರಿಸಿದ್ದು ನಾನು ನನ್ನ ಗಂಡನ ಮನೆಯವರು ನನಗೆ ನೀಡಿದ ಕಿರುಕುಳ ಬಗ್ಗೆ ತಿಳಿಸಿರುತ್ತೇನೆ ನಮ್ಮ ತಂದೆ ತಾಯಿ ಇಬ್ಬರು ನನಗೆ ನೀನು ಸಮದಾನವಾಗಿರು ನಾವು ಇನ್ನೊಮ್ಮೆ ನಿನ್ನ ಗಂಡ ಹಾಗು ಗಂಡನ ಮನೆಯವರಿಗೆ ಬುದ್ದಿವಾದ ಹೇಳುತ್ತೇವೆ.ಅಂತ ಹೇಳಿರುತ್ತಾರೆ. ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ನನ್ನ ಗಂಡ ಹಾಗು ಗಂಡನ ಮನೆಯವ ಕಿರುಕುಳ ತಾಳಲಾರದೇ ನನ್ನ ತವರು ಮನೆಯ ಕೊಣೆಯಲಿಟ್ಟಿದ್ದ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಕೊಣೆಯಲ್ಲಿ ಒದ್ದಾಡುತಿದ್ದಾಗ ಅಲ್ಲೆ ಮನೆಯ ಇನ್ನೊಂದು ಕೊಣೆಯಲಿದ್ದ ನಮ್ಮ ತಾಯಿ ಹಾಗು ತಂದೆ ನನಗೆ ನೋಡಿ ಚಿರಾಡಿ ಅಲ್ಲೆ ನಮ್ಮ ಕೋಣೆಯ ಜನರನ್ನು ಕರೆದು ನನಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ನನ್ನ ಗಂಡನಾದ ಸಂತೋಷ ಮಾವನಾದ ಬಸಪ್ಪ ಅತ್ತೆಯಂದಿರಾದ ಶಾಂತಾಬಾಯಿ, ಜಗುಬಾಯಿ ನನ್ನ ಗಂಡನ ಎರಡನೇಯ ಹೆಂಡತಿಯಾದ ಮಾಲಾಶ್ರೀ ಮತ್ತು ಮಲ್ಲಪ್ಪ ತಂದೆ ಚನ್ನಮಲ್ಲಪ್ಪ ಆನೂರ ರವರೇಲ್ಲರು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದವರ ಮೇಲೆ ಕಾನೂನಿನ ಕ್ರಮ ಜರುಗಿಸ ಬೇಕು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.