POLICE BHAVAN KALABURAGI

POLICE BHAVAN KALABURAGI

06 October 2014

Gulbarga District Reported Crimes

ಚಿತ್ತಾಪೂರ ತಾಲ್ಲೂಕಿನ ಮಂಗಲಗಿ ಗ್ರಾಮದ ಸುರೇಶ ಕಟ್ಟಿಮನಿ ಇತನ ಕೊಲೆ ಪ್ರಕರಣ ಐದು ಜನ ಆರೋಪಿತರ ಬಂಧನ,
ವಿಶ್ವವಿದ್ಯಾಲಯ ಠಾಣೆ : ದಿನಾಂಕ 29/9/2014 ರಂದು ಶ್ರೀನಿವಾಸ ಸರಡಗಿ ಕ್ರಾಸ್ ಏರಪೋರ್ಟ ರಸ್ತೆಯ ಮೂಲಕ ತಮ್ಮ ಊರಾದ ಮಂಗಲಗಿ ಗ್ರಾಮಕ್ಕೆ ಸುರೇಶ ತಂದೆ ಅಂಬಣ್ಣ ಕಟ್ಟಿಮನಿ ಹಾಗೂ ಮರೇಪ್ಪ ಇಬ್ಬರೂ ತಮ್ಮ ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಆರೋಪಿತರು ಮೋಟಾರ ಸೈಕಲಗಳ ಮೇಲೆ ಹಿಂಬಾಲಿಸಿ ಸಾಯಬಣ್ಣ ಕೊಟನೂರ ಈತನ ಮಗಳಿಗೆ ಅದೇ ಗ್ರಾಮದ ಗುಂಡಪ್ಪ ಈತನು ಓಡಿಸಿಕೊಂಡು ಹೋಗುವದಕ್ಕೆ ಸುರೇಶ ಈತನೆ ಕಾರಣ ಅಂತಾ ತಿಳಿದು ಹಳೆಯ ವೈಷಮ್ಯದಿಂದ ಸುರೇಶ ಈತನಿಗೆ ಕಲ್ಲಿನಿಂದ ಹೊಡೆದು ಚಾಕುವಿನಿಂದ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿ ಫರಾರಿಯಾಗಿದ್ದು ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಗತಿಯಲ್ಲಿತ್ತು.
ಈ ಕೊಲೆಯ ಪ್ರಕರಣದ ಗಂಭೀರ ಸ್ವರೂಪದ ಅಫರಾದ ಅಂತಾ ಪರಿಗಣಿಸಿ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಿ ದಸ್ತಗಿರಿ ಮಾಡುವಂತೆ ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗುಲಬರ್ಗಾ, ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಗುಲಬರ್ಗಾ,  ಶ್ರೀ ಸಂತೋಷ ಬಾಬು. ಐ.ಪಿ.ಎಸ್.  ಸಹಾಯಕ ಪೊಲೀಸ್ ಅಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಪಿಎಸ್ಐ ಹಸನಬಾಷಾ ಶ್ರೀ ನಾಗಭೂಷಣ ಎ.ಎಸ್.ಐ, ಹಾಗು ಸಿಬ್ಬಂದಿಯವರು  ಕೂಡಿಕೊಂಡು ಕಾರ್ಯಾಚರಣೆ ನಡೆಸಿ ಈ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ, ಇಂದು ದಿನಾಂಕ 5/10/2014 ರಂದು ಈ ಕೆಳಕಂಡ ಆರೊಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ದಸ್ತಗಿರಿ ಮಾಡಿದ ಆರೋಪಿತರ ಹೆಸರು & ವಿಳಾಸ
1) ಲಕ್ಷ್ಮಣ @ ಲಕ್ಷ್ಮಿಕಾಂತ ತಂದೆ ಬಸಣ್ಣ ಗಡ್ಡದವರ  ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ  2) ಬಸವರಾಜ ತಂದೆ ಜಗನ್ನಾಥ ಹೊಸಮನಿ ಸಾ : ಸಾವತಖೇಡ ಹಾಲಿ ವಸ್ತಿ ಹೆಬ್ಬಾಳ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ  3) ಮನೋಹರ ತಂದೆ ಬಸಣ್ಣ ಗಡ್ಡದವರ  ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ 4) ಸಂತೋಷ ತಂದೆ ದ್ಯಾವಣ್ಣ ಗಡ್ಡದವರ  ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ 5) ಸಾಯಬಣ್ಣ ತಂದೆ ಮರೇಪ್ಪ ಕೊಟನೂರ ಸಾ : ಮಂಗಲಗಿ ತಾ : ಚಿತ್ತಾಪುರ ಜಿಲ್ಲಾ : ಗುಲಬರ್ಗಾ ಸದರಿ ಪ್ರಕರಣದಲ್ಲಿ ತನಿಖೆಕೈಕೊಂಡು ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಚಾಕು ಮೋಟಾರ ಸೈಕಲಗಳನ್ನು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಹಾಗೂ ಫರಾರಿ ಇರುವ ಇನ್ನೂ 2 ಜನ ಆರೋಪಿತರ ಪತ್ತೆಗಾಗಿ ಜಾಲ ಬಿಸಲಾಗಿದೆ, ಸದರಿ ಆರೋಪಿತರನ್ನು ಪತ್ತೆ ಮಾಡಿ ಪ್ರಕರಣ ಭೇದಿಸಿ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಪತ್ತೆ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.
ಇಸ್ಪೀಟ ಜೂಜಾಟ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ: 05/10/2014  ರಂದು ರೋಡಕಿಣ್ಣಿ  ಗ್ರಾಮದ ವಾಟರ ಟ್ಯಾಂಕ ಹತ್ತಿರ ರತ್ನಮ್ಮ ಇವರ ಹೊಲದ ಹತ್ತಿರ ಸಾರ್ವಜನಿಕರು ತಿರುಗಾಡುವ ರಸ್ತೆಯ ಮೇಲೆ  ಹಣವನ್ನು ಪಣಕಿಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದ  ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದು ವಿಚಾರಿಸಲು 1) ರಾಜಕುಮಾರ ತಂದೆ ರೇವಣಸಿದ್ದಪ್ಪಪಾಟೀಲ್ ಸಾ; ರೋಡಕಿಣ್ಣಿ , 2) ಈರಣ್ಣ ತಂದೆ ಶಿವಬಸಪ್ಪ ಪೊಲೀಸ ಬಿರಾದಾರ  ಸಾ; ನೇಳಕೂಡ ,3) ಮನಹೋರ ತಂದೆ ವೀರಣ್ಣ ಕುಂಬಾರ  ಸಾ;  ರೋಡಕಿಣ್ಣಿ 4) ಶಾಂತಕುಮಾರ ತಂದೆ ಬಸವಣ್ಣಪ್ಪ ಬಿರಾದಾರ ಸಾ; ಧನ್ನೂರ(ಆರ್) ತಾ; ಬಸವಕಲ್ಯಾಣ ಜಿ; ಬೀದರ 5) ವಿಜಯಕುಮಾರ ತಂದೆ ಭೀಮಣ್ಣ ಖಾಸಂಪೂರ ಸಾ: ರೋಡಕಿಣ್ಣಿ , 6) ಶ್ಯಾಮರಾವ ತಂದೆ ಚಂದ್ರಪ್ಪ ರಟಕಲ್ ಸಾ, ಹಳ್ಳಿಖೇಡ್ (ಕೆ) ತಾ; ಹುಮನಾಬಾದ ಜಿ ಬೀದರ, 7) ಕಲ್ಯಾಣರಾವ ತಂದೆ ಶ್ರೀಮಂತರಾವ ಮಾಲಿ ಬಿರಾದಾರ ಸಾ; ರೋಡಕಿಣ್ಣಿ ಇವರನ್ನು ದಸ್ತಗಿರಿ ಮಾಡಿ ನಗದು ರೂ 14, 500  ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಸದರಿಯವರೊಂದಿಗೆ ಮರಳಿ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ದ್ವೀಚಕ್ರ ವಾಹನ ಕಳವು ಮಾಡಲು ಪ್ರಯತ್ತಿಸುತ್ತಿದ್ದವನ ಬಂಧನ  :
ಮಳಖೇಡ ಠಾಣೆ : ಶ್ರೀ ದೇವಿಂದ್ರಪ್ಪ ಏವೂರ ಸಾ: ಮಳಖೇಡ ಇವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಮೊ/ಸೈ ನಂ ಕೆಎ/32-ಈಬಿ-4486 ನೇದ್ದನ್ನು ಆರೋಪಿ ತೌಶೀಫ ತಂದೆ ಮುನೀರ ಶೇಕ್ ಸಾ: ಮದಿನಾಕಾಲೋನಿ ಗುಲಬರ್ಗಾ ಇತನು ಕಳ್ಳತನ ಮಾಡಲು ಪ್ರಯತ್ನಿಸುತ್ತಿರುವಾಗ ಹಿಡಿದಿದ್ದು, ಅವನ ಹತ್ತಿರ ಇನ್ನೊಂದು ಮೊ/ಸೈ ನಂ  ಕೆಎ/32-ವೈ-3452 ನೇದ್ದು ಸಿಕ್ಕಿದ್ದು, ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಸೀಮ ತಂದೆ ಇಬ್ರಾಹಿಮ ಇನಾಮದಾರ ಸಾ: ಮಳಖೇಢ ತಾ: ಸೇಡಂ  ರವರು ದಿನಾಂಕ 05-10-2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ನನ್ನ ಮೋ/ಸೈಕಲ ನಂಬರ ಕೆಎ-37 ವಿ-5872 ನೇದ್ದರ ಹಿಂದುಗಡೆ ಸಯ್ಯದ ಇಮ್ರಾನ ಇತನನ್ನು ಕೂಡಿಸಿಕೊಂಡು ಜಗತ ಸರ್ಕಲ ಮುಖಾಂತರ ಎಸ್.ವಿ.ಪಿ. ಸರ್ಕಲ ಕಡೆಗೆ ನನ್ನ ಕೆಲಸದ ಸಂಬಂದ ನಾನು ಮೋ/ಸೈಕಲ ಚಲಾಯಿಸಿಕೊಂಡು ಹೋಗುವಾಗ ಸಿದ್ದಿಪಾಷಾ ದರ್ಗಾ ಎದುರಿನ ರೋಡ ಮೇಲೆ ಮೋ/ಸೈಕಲ ನಂಬರ ಕೆಎ-32 ಇಬಿ-3229 ರ ಸವಾರ ಎಸ್.ವಿ.ಪಿ. ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸನ್ನೆ ಮಾಡದೆ ಇಂಡಿಕೇಟರ ಹಾಕದೆ ವಾಪಸ್ಸ ಎಸ್.ವಿ.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ಒಮ್ಮೇಲೆ ರೋಡ ಬಲಗಡೆ ತಿರುಗಿಸಿ ನನ್ನ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಬಲಹಣೆಯ ಮೇಲೆ ರಕ್ತಗಾಯ, ಬಲಕಣ್ಣಿನ ಕೆಳಗಡೆ ರಕ್ತಗಾಯ, ಎಡ ಗಲ್ಲದ ಮೇಲೆ ತರಚಿದಗಾಯ, ಎಡ ಮೊಳಕಾಲಿಗೆ ರಕ್ತಗಾಯ, ಹಾಗು ಮುಗಿನ ಕೆಳಗಡೆ ತರಚಿದಗಾಯ ಪಡಿಸಿ ತನ್ನ ಮೋ/ಸೈಕಲ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.