ಅಪಘಾತ ಪ್ರಕರಣ :
ಅಫಜಲಪೂರ ಠಾಣೆ:
ಇಂದ್ರಾಬಾಯಿ ಗಂಡ ಪರಶುರಾಮ ರಾಮಗೊಂಡ ಸಾ|| ಚಿಕ್ಕ ಸಿಂದಗಿ ಜಿ|| ಬಿಜಾಪೂರ ಹಾ|| ವ|| ಘತ್ತರಗಾ ತಾ|| ಅಫಜಲಪೂರ ರವರು ನಾನು ಮತ್ತು ನಮ್ಮ ತಂದೆಯ ಹತ್ತಿರ ಕೆಲಸ ಮಾಡುವ ಶಿವಾಜಿ ಕೂಡಿಕೊಂಡು ದಿನಾಂಕ 24-7-2011 ರಂದು ಸಾಯಂಕಾಲ ಹೀರೊ ಹೊಂಡಾ ಮೋಟರ್ ಸೈಕಲ ನಂ. ಕೆಎ-32 ಯು-2228 ನೇದ್ದರ ಮೇಲೆ ಬಗಲೂರ ಕಡೆಯಿಂದ ಘತ್ತರಗಾ ಕಡೆಗೆ ಬರುತ್ತಿರುವಾಗ ಭೀಮಾ ಬ್ರಿಜ್ ಕಡೆಯಿಂದ ಲಾರಿ ನಂ. ಕೆಎ-32 ಎ-7835 ನೇದ್ದರ ಚಾಲಕ ವೀರಶೆಟ್ಟಿ ತಂದೆ ಗುಂಡಪ್ಪ ಮಂದಕನಳ್ಳಿ ಈತನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಶಿವಾಜಿ ಈತನು ಲಾರಿಯ ಹಿಂದಿನ ಮಡಗಟ್ಟಿನಲ್ಲಿ ಸಿಕ್ಕಿಬಿದ್ದು ತಲೆಯ ಹಿಂಬಾಗ ಭಾರಿ ರಕ್ತಗಾಯ ಮತ್ತು ಮೂಗಿನಿಂದ ರಕ್ತಸ್ರಾವ ಆಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
POLICE BHAVAN KALABURAGI

25 July 2011
GULBARGA DIST REPORTED CRIME
Subscribe to:
Post Comments (Atom)
No comments:
Post a Comment