POLICE BHAVAN KALABURAGI

POLICE BHAVAN KALABURAGI

13 July 2011

GULBARGA DIST REPORTED CRIMES

ಕಾಣೆಯಾದ ಮನುಷ್ಯನ ಪ್ರಕರಣ:
ಆಳಂದ ಠಾಣೆ
:
ಶ್ರೀ ಬಸವಣಪ್ಪಾ ತಂದೆ ಶಿವರಾಯ ಪೊಲೀಸ್ ಪಾಟೀಲ್ ಮು|| ಶಕಾಪೂರ ರವರು ನನ್ನ ಮಗನಾದ ನಾಗಶೇಟ್ಟಿ ತಂದೆ ಬಸವಣಪ್ಪಾ ಪಾಟಿಳ್ ಇತನು ದಿನಾಂಕ: 11-07-2011 ರಂದು ಶುಕ್ರವಾರ ಶಕಾಪೂರ ಗ್ರಾಮದಿಂದ ಗುಲಬರ್ಗಾ ಆಸ್ಪತ್ರೆಗೆ ಹೋಗುತ್ತೆನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ . ಕಾಣೆಯಾದ ಮನುಷ್ಯನ ಚಹರೆ ಪಟ್ಟಿ ಸಾದರಣ ಮೈಕಟ್ಟು ಕಪ್ಪು ಬಣ್ಣ , ಬದಾಮ ಕಲರ್ ಶರ್ಟ ಲೈನಿಂಗ ಪ್ಯಾಂಟ ಕನ್ನಡ ಭಾಷೆ ಮಾತನಾಡುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕಾಣೆಯಾದ ಮನುಷ್ಯನ ಸುಳಿವು ದೊರೆತಲ್ಲಿ ಕಂಟ್ರೊಲ್ ರೂಮ ಗುಲಬರ್ಗಾ 08472-263608, 263604 ಸಿಪಿಐ ಆಳಂದ 94808083539 ಪಿ.ಎಸ.ಐ ಆಳಂದ 94808083563 ಅಥವಾ 08477 202222 ಅಳಂದ ಠಾಣೆ ರವರಿಗೆ ಸಂಪರ್ಕಿಸಲು ಕೋರಲಾಗಿದೆ.)

ಹಲ್ಲೆ ಪ್ರಕರಣ :
ಮಾಡಬೂಳ ಠಾಣೆ :
ಶ್ರೀ ಶಂಕ್ರಯ್ಯ ಸ್ವಾಮಿ ತಂದೆ ವೀರಯ್ಯ ಸ್ವಾಮಿ ಸಾ:ಶಹಾಬಾಜಾರ ಗುಲ್ಬರ್ಗಾ ರವರು ನಾನು

ನಿನ್ನೆ ದಿನಾಂಕ:-12/07/2011 ರಂದು ರಾತ್ರಿ ಕೆಲಸ ಮುಗಿಸಿ ಆಫೀಸ್ ಕೋಣೆಯಲ್ಲಿ ನಾನು ಮತ್ತ ನನ್ನ ಜೊತೆ ಹೆಲ್ಪರ ಕೆಲಸ ಮಾಡುತ್ತಿದ್ದ ಬಾಬು ತಂದೆ ಭೀಮಶಾ ಕಟ್ಟಿಮನಿ ಇಬ್ಬರು ಕೂಡಿ ಮಲಗುತ್ತಿದ್ದೇವು. ಆಗ ಪಪ್ಪು ಪಟೇಲ್ ತಂದೆ ಮಹಿಬೂಬ ಪಟೇಲ್ ಸಾ:ಮುಗಟಾ ಈತನು ಮಧ್ಯರಾತ್ರಿ 2 ಗಂಟೆಗೆ ಬಂದು ಮಲಗಿದ ಕೋಣೆಯ ಬಾಗಿಲಿಗೆ ಬಡೆಯುತ್ತಿದ್ದಾಗ ನಾವು ನಿದ್ರೆಯಲ್ಲಿ ಬಾಗಿಲು ತೆರೆದಾಗ ಅವಾಚ್ಯವಾಗಿ ಬೈದು ಕ್ರಶರ ಮಶೀನ ಯಾಕೆ ಚಾಲು ಮಾಡಿದ್ದಿ. ನಿನ್ನ ಮಾಲಿಕನು ನನಗೆ ಕೊಡ ತೊಗೊಳ್ಳುವ ವ್ಯವಹಾರ ಇನ್ನು ಮುಗದಿಲ್ಲ ಅಂತ ಸಿಕ್ಕಪಟ್ಟಿ ಒದ್ದು, ಹೊಡೆದು ತನ್ನಲ್ಲಿದ್ದ ಚಾಕು ತೆಗೆದು ಕಕ್ಕಾಬಿಕ್ಕಿ ತಿವಿದನು. ಆಗ ಶರೀರ ರಕ್ತಗಾಯವಾಗಿರುತ್ತದೆ. ಖಾಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿ, ನನ್ನನ್ನು ಹಿಡಿದು ಆಫೀಸ ಕೋಣೆಯ ಒಳಗೆ ಕಟ್ಟಿ ಹಾಕಿ ಲಾಕ ಮಾಡಿ ಹೋಗಿದ್ದು. ಎನಾದರೂ ಕ್ರಶರ ಮಶೀನ ಚಾಲು ಮಾಡಿದರೆ ನಿನಗೆ ಮತ್ತು ನಿನ್ನ ಮಾಲಿಕನಿಗೆ ಖಾಲಾಸ ಮಾಡುತ್ತೇನೆ ಅಂತ ಜೀವ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:

ಸ್ಟೇಶನ ಬಜಾರ ಠಾಣೆ: ಶ್ರೀ ಆರ್.ರವಿಂದ್ರನಾಥ ಪಿಎಸ್ಐ[ಕಾ.ಸು] ಸ್ಟೇಷನ ಬಜಾರ ಪೊಲೀಸ ಠಾಣೆ ಗುಲಬರ್ಗಾ ರವರು ಠಾಣೆ ಸರಹದ್ದಿನಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಮಹಲ-ಇ-ಶಾಹಿ ಅಥಿತಿ ಗೃಹ ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಥತಿ ಗೃಹದ ಒಳ ಅವರಣದಲ್ಲಿ ಕೆಲವು ಜನರು ಅಪರಿಚಿತ ಗಂಡು ಮನುಷ್ಯನ ಶವ ವಯಸ್ಸು ಅಂದಾಜು 55-60 ವರ್ಷ ಇದ್ದಿದ್ದು ಕಂಡು ಬರುತಿದ್ದು ಆತನ ಮೈ ಮೇಲೆ ಧರಿಸಿದ ಒಂದು ಬಿಳಿ ಬಣ್ಣದ ಫುಲ್ ಶರ್ಟ & ಒಂದು ಬಿಳಿ ಬಣ್ಣದ ಫುಲ್ ಬನಿಯಾನ ಹಾಗೂ ಕಂಪನಿಯ ಹಸಿರು ಬಣ್ಣದ ಒಂದು ಅಂಡರ್ ವೇರ್ ಇದ್ದು ಅಲ್ಲದೆ ಒಂದು ಬಿಳಿ ಬಣ್ಣದ ಪ್ಯಾಂಟ ಇದ್ದು ಟೊಂಕದಲ್ಲಿ ಕರಿ ಉಡದಾರ ಕೊರಳಲ್ಲಿ ಕೆಂಪು ದಾರದಲ್ಲಿ ಒಂದು ರುದ್ರಾಕ್ಷಿ ಮತ್ತು ಕೊರಳಲ್ಲಿ ನೀಲಿ ಮತ್ತು ಬಿಳಿ ಮಣಿ ಸರ ಇದ್ದು ಇದರಲ್ಲಿ ಗೋಲಾಕಾರವಾದ ಚಿಕ್ಕದಾದ ಅಂಬೇಡ್ಕರ ಭಾವಚಿತ್ರ ಉಳ್ಳದ್ದು ಇದ್ದು ಮೃತನ ಶವವನ್ನು ನೋಡಲಾಗಿ ಇತನ ತಲೆಯ ಎಡ ಭಾಗದಕ್ಕೆ ಭಾರಿ ರಕ್ತಗಾಯವಾಗಿ ಮಾಂಸ ಕಾಣುತಿದ್ದು ಅಲ್ಲದೆ ಸ್ಥಳದಲ್ಲಿ ಮಣ್ಣಿನ ಮೆಲೆ ರಕ್ತ ಬಿದ್ದಿದ್ದು ಇತನ ಬಲಗೈ ಹೆಬ್ಬರಳ ಸಂದಿಯಲ್ಲಿ ರಕ್ತಗಾಯವಾಗಿದ್ದು ಅಲ್ಲದೆ ಇತನ ಎಡಗೈಯಲ್ಲಿ ಕೈ ಗಡಿಯಾರ ಇದ್ದು ಮತ್ತು ಇತನು ಧರಿಸಿದ ಶರ್ಟನ ಪಾಕಿನಲ್ಲಿ ಜೇಸ್ಕಾಂ ಕಂಪನಿಯ ವಿದ್ಯೂತ್ ಬಿಲ್ ಆರ.ಆರ. ನಂ 55972 ನೇದ್ದು ಸಿಕ್ಕಿದ್ದು ಅಲ್ಲದೆ ಶವದ ಪಕ್ಕದಲ್ಲಿ ಎರಡು ಸಿಮೆಂಟಿನ ಕಲ್ಲುಗಳು ಬಿದ್ದು ಇರುತ್ತದೆ ಕಾರಣ ಅಪರಿಚಿತ ವ್ಯೆಕ್ತಿಗೆ ಯಾರೋ ದುಶರ್ಕ್ಮಿಗಳು ಇತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು ಕಂಡು ಬರುತ್ತಿದ್ದು ಈ ಘಟನೆಯು ದಿನಾಂಕ 12.07.2011 ರಂದು 7.30 ರಿಂದ 13.07.2011 ರ ಬೆಳಗಿನ ಅವಧಿಯಲ್ಲಿ ಮಧ್ಯದಲ್ಲಿ ಈ ಕೊಲೆ ಜರುಗಿದ್ದು ಕಂಡು ಬರುತ್ತದೆ ಕೊಲೆಗೀಡಾದ ವ್ಯೆಕ್ತಿ ಅಪರಿಚಿತ ವ್ಯೆಕ್ತಿ ಇದ್ದು , ಈ ಕೊಲೆ ಮಾಡಿದವರು ಯಾರು ಮತ್ತು ಎತಕ್ಕಾಗಿ ಕೊಲೆ ಮಾಡಿದ್ದಾರೆ ಅಂತ ಸದ್ಯಕ್ಕೆ ತಿಳಿದು ಬಂದಿರುವದಿಲ್ಲಾ ಅದ್ದರಿಂದ ಮುಂದಿನ ಕ್ರಮ ಜರುಗಿಸುವ ಕುರಿತು ಕೊಟ್ಟ ಸರ್ಕಾರಿ ತರ್ಪೆಯಾಗಿ ಪಿರ್ಯಾದಿ ಸಲ್ಲಿಸಿದದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 


 

No comments: