POLICE BHAVAN KALABURAGI

POLICE BHAVAN KALABURAGI

30 December 2015

Kalaburagi District Reported Crimes

ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ವಿಶ್ವನಾಥ ತಂದೆ ಗುರುಲಿಂಗಪ್ಪ ನಾಯಿಕೊಂಡಿ ಸಾ : ಹಂಗನಳ್ಳಿ ರವರು  ದಿನಾಂಕ : 18-05-2015 ರಂದು ತರನಳ್ಳಿ ಗ್ರಾಮದಲ್ಲಿ ನನ್ನ ಗೆಳೆಯ ದಶರತ ಇತನ ತಾಯಿ ತಿರಿಕೊಂಡಿದ್ದರಿಂದ ಅಂತ್ಯಕ್ರಿಯೆಗೆ ನಾನು ಮತ್ತು ನನ್ನ ಅಳಿಯ ಶಿವಪ್ಪ ಜಮಾದಾರ ಇಬ್ಬರು ಮೊಟಾರ ಸೈಕಲ ನಂ ಕೆಎ-39 ಜೆ-2055 ನೇದ್ದರ ಮೇಲೆ ಹೋಗಿ ಅಂತ್ಯಕ್ರಿಯೆ ಮುಗಿಸಿಕೊಂಡು ಸಾಯಂಕಾಲ ಅಂದಾಜ 5-15 ಪಿ.ಎಂಕ್ಕೆ ಬಿಟ್ಟು ನಮ್ಮೂರ ಹಂಗನಳ್ಳಿ ಗ್ರಾಮಕ್ಕೆ ಸದರ ಮೊಟಾರ ಸೈಕಲ ಮೇಲೆ ಹೊಗುತ್ತಿದ್ದೆವು ಮೊಟಾರ ಸೈಕಲ ಶಿವಪ್ಪ ಜಮಾದಾರ ನಡೆಸುತ್ತಿದ್ದನು ತರನಳ್ಳಿ ಗ್ರಾಮ ದಾಟಿ ಸುಮಾರು 1 ವರೆ ಕಿ.ಮಿ ಬಂದು ಮಹೆಬೂಬ ಸುಬಾನಿ ದರ್ಗಾ ಹತ್ತಿರ ಮುಂದೆ ಹೊಗುತ್ತಿದ್ದಂತೆ ಶಿವಪ್ಪ ಇತನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗವಾಗಿ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಎಡಭಾಗದ ತಗ್ಗಿನಲ್ಲಿ ಮೊಟಾರ ಸೈಕಲ ಪಲ್ಟಿಮಾಡಿರುತ್ತಾನೆ ಇದರಿಂದ ನನಗೆ ಬಲಗಣ್ಣಿನ ಹತ್ತಿರ ರಕ್ತಗಾಯ, ಬಲಗಾಲ ಇಮ್ಮಡಿಗೆ ರಕ್ತಗಾಯ ಎಡಗೈ ಮೊಣಕಟ್ಟಿಗೆ ಗುಪ್ತಗಾಯವಾಗಿದ್ದು ಮತ್ತು ನನ್ನ ಅಳಿಯ ಶಿವಪ್ಪ ಜಮಾದಾರ ಇತನಿಗೆ ಬಲಭಾಗದ ಗದ್ದಕ್ಕೆ ಭಾರಿ ರಕ್ತಗಾಯ, ಮೇಲ್ಭಾಗದ ಎಡಭಾಗದ ತುಟಿಗೆ ರಕ್ತಗಾಯ ಎಡಭಾಗದ ಹಣೆಗೆ ತರಚಿದ ಗಾಯ ಎಡಗೈ ಮೊಣಕೈ ಹತ್ತಿರ ತರಚಿದ ಗಾಯ ಆಗಿರುತ್ತದೆ. ಈ ಘಟನೆ ಆಗಿದ್ದು ಹಣಮಂತ ಜಮಾದಾರ ಸಾ : ತರನಳ್ಳಿ, ಶಿವಕುಮಾರ ನಾಯಿಕೊಡಿ ಸಾ : ತರನಳ್ಳಿ ಇವರು ನೋಡಿ 108 ಅಂಬುಲೇನ್ಸದಲ್ಲಿ ತಂದು ಇಲ್ಲಿಗೆ ಸೇರಿಕೆ ಮಾಡಿದ್ದು  ದಿನಾಂಕ:30-12-2015 ರಂದು ಸುಬ್ಬಣ್ಣ ತಂದೆ ಶರಣಪ್ಪ ಜಮಾದಾರ, ಸಾ:ಹಂಗನಳ್ಳಿ ಗ್ರಾಮ, ತಾ:ಸೇಡಂ. ಜಿಲ್ಲೆ:ಕಲಬುರಗಿ. ಇವರು ನನ್ನ ಅಣ್ಣನಾದ ಶಿವಪ್ಪ ತಂದೆ ಶರಣಪ್ಪ ಜಮಾದಾರ ವಯ:28 ವರ್ಷ, ಈತ ಮೋಟಾರು ಸೈಕಲ್ ಅಪಘಾತದಲ್ಲಿ ಭಾರಿಗಾಯಹೊಂದಿ ಆಸ್ಪತ್ರೆಯಲ್ಲಿ ಉಪಚಾರ ಪಡೆದಿದ್ದು, ನಂತರ ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:30-12-2015 ರಂದು ನಮ್ಮ ಮನೆಯಲ್ಲಿ ಮೃತಪಟ್ಟಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಶ್ರೀಮತಿ ಸಂಗಮ್ಮಾ ಗಂಡ ಚಂದಣ್ಣಾ ಝಳಕಿ ಸಾ:ಅಲ್ಲಾಪುರ (ಜೆ) ತಾ: ಆಳಂದ ರವರ ಮಗ ಸಿದ್ದಾರಾಮ ಈತನು ದೊಡ್ಡವನು ವಿದ್ಯಾಬ್ಯಾಸ ಹಾಗು ನನ್ನ ಗಂಡ ಅರೆ ಹುಚ್ಚನಾಗಿದ್ದರಿಂದ 5ಏಕರೆ ಜಮಿನನ್ನು ನನ್ನ ಮಗ ಸಿದ್ದಾರಾಮ ಈತನೆ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ. ಒಕ್ಕಲುತನ ಸಲುವಾಗಿ ಸುಮಾರು 2.50 ಲಕ್ಷ ರೂಪಾಯಿ ಕೈಗಡ ರೂಪದಲ್ಲಿ ಮತ್ತು ಸಂಘ ಸಂಸ್ಥೆಗಳಿಂದ ಸಾಲ ಮಾಡಿ ವ್ಯವಸಾಯ ಮಾಡಿದ್ದು ಈ ವರ್ಷ ಮಳೆ ಬಾರದೆ ಬೆಳೆಯದ ಕಾರಣ ಸಾಲ ನನ್ನ ಮುಖಾಂತರ ಮಾಡಿದ್ದು ಈ ವರ್ಷ ಬೆಳೆ ಬೆಳೆದಿಲ್ಲಾ ಸಾಲ ಹೇಗೆ ಮುಟ್ಟಿಸಲಿ ನನ್ನ ತಂದೆ ಅರೆ ಹುಚ್ಚನಾಗಿದ್ದಾನೆ. ನಾನು ಸಾಲ ಹೇಗೆ ಮುಟ್ಟಿಸಲಿ. ನಾನು ಸತ್ತರೆ ಚನ್ನಾಗಿರುತ್ತದೆ. ಅಂತಾ ಮನನೊಂದು ನಮ್ಮ ಮನೆಯಲ್ಲಿ ನಾನು ನನ್ನ ಭಾವನಾದ ಶಿವಲಿಂಗಪ್ಪಾ ಸಾಯುದು ಪರಿಹಾರವಲ್ಲಾ ಅಂತಾ ದೈರ್ಯ ಹೇಳಿದ್ದು. ದಿನಾಂಕ:28/12/2015 ರಂದು ಸಾಯಂಕಾಲ 5 ಗಂಟೆಗೆ ನಾವೂ ನಮ್ಮ ಮನೆಯಲ್ಲಿ ಇದ್ದಾಗ ನನ್ನ ಭಾವನಾದ ಶಿವಲಿಂಗಪ್ಪಾ ಇವರು ನನಗೆ ಫೋನ ಮಾಡಿ ಸಿದ್ದಾರಾಮ ಈತನು ನಿಮ್ಮ ಹೊಲದಲ್ಲಿ ಮಾವಿನ ಗಿಡಕ್ಕ ಊರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನೀವೂ ಬೇಗ ಬರೀ ಅಂತಾ ಅಂದಿದಕ್ಕೆ ನಾವೂ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಮಗ ಊರುಲು ಹಾಕಿಕೊಂಡು ಮೃತಪಟ್ಟಿದ್ದು ನೀಜವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಮಂಗಲಾ ಗಂಡ ಗೊಪಾಲ ಹೊತಗಲ್ ಸಾ : ತೆಲ್ಕೂರ ಗ್ರಾಮ ಇವರನ್ನು  ತೆಲ್ಕೂರ ಗ್ರಾಮದ ಗೊಪಾಲ ಹೊತಗಲ್ ಇವರಿಗೆ 5 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾದಾಗಿನಿಂದ ಗಂಡನ ಮನೆಯಲ್ಲಿ ಗಂಡ ಮತ್ತು ಅತ್ತೆ ಇಬ್ಬರು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕೂಳ ಕೊಡುತ್ತಿದ್ದು ನಾನು ಈ ವಿಷಯದಲ್ಲಿ ನನ್ನ ತವರು ಮನೆಯಲ್ಲಿ ತಿಳಿಸಿದ್ದು ಅವರು ಬಂದು ಸಮಾದಾರ ಪಡಿಸಿರುತ್ತಾರೆ ಆದರು ನನ್ನ ಗಂಡ ನನಗೆ ನಿನು ಚೆನ್ನಾಗಿಲ್ಲ ಅಡುಗೆ ಮಾಡಲು ಬರುವದಿಲ್ಲ ಅಂತಾ ಬೈಯುವದು ಮಾಡಿ ನಿನಗೆ ಕೊಲೆ ಮಾಡುತ್ತೆನೆ ಅಂತಾ ಅನ್ನುತ್ತಿದ್ದನು ನಂತರ ಇಂದು ದಿನಾಂಕ : 27-12-2015 ರಂದು ಮಧ್ಯಾಹ್ನ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನ್ನ ಗಂಡನು ಒಮ್ಮೆಲೆ ಮನೆಗೆ ಬಂದು ರಂಡಿ ನೀನು ನನ್ನ ತಾಯಿಗೆ ಮತ್ತು ನನಗೆ ನೀನು ಚೆನ್ನಾಗಿ ನೊಡಿಕೊಳ್ಳುತ್ತಿಲ್ಲ ಇವತ್ತು ನಿನಗೆ ಕೊಲೆ ಮಾಡಿಯೇ ಬಿಡುತ್ತೆನೆ ಅಂತಾ ಮನೆಯಲ್ಲಿದ್ದ ಸಿಮೆಎಣ್ಣೆ ತೆಗೆದುಕೊಂಡು ನನ್ನ ಮೈಮೇಲೆ ಸುರುವಿ ಬೆಂಕಿ ಕಡ್ಡಿ ಕೊರೆದು ನನ್ನ ಮೈಗೆ ಬೆಂಕಿ ಹಚ್ಚಿ ಮನೆಹೊರಗೆ ಹೋದನು ಆಗ ನನ್ನ ಮೈಗೆ ಬೆಂಕಿ ಹತ್ತಿಕೊಂಡಿತ್ತು. ಆಗ ನಾನು ಮನೆಯಿಂದ ಹಾಗೆಯೇ ಹೊರಗೆ ಓಡಿಬಂದು ನಮ್ಮ ಮನೆಯ ಮುಂದೆ ಇದ್ದ ಕೇಲನಲ್ಲಿಯ ನೀರು ಹಾಕಿಕೊಂಡು ಬೆಂಕಿ ಆರಿಸಿಕೊಂಡೆನು ನನ್ನ ಮೈಗೆ ಬೆಂಕಿ ಹಚ್ಚಿದ್ದರಿಂದ ನನ್ನ ಎದೆ ಹೊಟ್ಟೆ ಬೆನ್ನಿಗೆ, ಎರಡು ಕೈಗಳಿಗೆ ಸುಟ್ಟ ಗಾಯಗಳಾದವು ನಂತರ ನಾನು ದವಾಖಾನೆಗೆ ಬಂದು ಸೇರಿಕೆ ಆಗಿ ಉಪಚಾರ ಪಡೆಯುತ್ತಿದ್ದೆನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ. 

No comments: