POLICE BHAVAN KALABURAGI

POLICE BHAVAN KALABURAGI

09 October 2013

ಹಲ್ಲೆ ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ದಿನಾಂಕ 09/10/2013 ರಂದು 11:30 ಎ.ಎಮ್ ಕ್ಕೆ ಮಾನ್ಯ ಪ್ರಿನ್ಸಿಪಲ ಜೆ.ಎಮ್.ಎಫ್.ಸಿ ನ್ಯಾಯಾಲಯ ಪತ್ರ ನಂ. 4281/13 ದಿನಾಂಕ 05/10/2013 ಮತ್ತು ಶ್ರೀ ಭೀಮರಾವ ತಂದೆ ಹಣಮಂತರಾವ ಪಾಟೀಲ ಸಾಃ ಶಾಸ್ತ್ರಿ ನಗರ ಗುಲಬರ್ಗಾ ರವರ ಖಾಸಗಿ ಫಿರ್ಯಾದಿ ನಂ. 515/13 ನೇದ್ದು ವಸೂಲಾಗಿದ್ದು ಸಾರಂಶವೆನೆಂದರೆ, ದಿನಾಂಕ 29/05/2013 ರಂದು 09:30 ಎ.ಎಮ್ ಕ್ಕೆ ಆರೋಪಿ ಬಸವರಾಜ ಖಾನಾಪೂರ ಸಾಃ ರಾಷ್ಟ್ರಪತಿ ಚೌಕ ಜೇವರ್ಗಿ ಕ್ರಾಸ್ ಗುಲಬರ್ಗಾ ಇವನು ಬಂದು ಫಿರ್ಯಾದಿ ಭೀಮರಾವ ಇವನಿಗೆ ರಾಜಾಪೂರ ಸರ್ವೆ ನಂ.20/2 ನೇದ್ದರ ಪ್ಲಾಟ ನಂ.18 ಮತ್ತು 71 ನೇದ್ದನ್ನು 6,00,000/- ರೂ ಗೆ ಖರಿದಿ ಮಾಡಿ 21,000/- ರೂ ಮಾತ್ರ ಕೊಟ್ಟಿದ್ದು ಇನ್ನೂ ಉಳಿದ ಹಣ ಕೊಡಲಾರದೆ ಫಿರ್ಯಾದಿಗೆ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು  ಪ್ಲಾಟ ರಜಿಸ್ಟರ ಮಾಡಿಕೊಡು ಇಲ್ಲಾಂದರೆ ಖಲಾಸ ಮಾಡುತ್ತೆನೆ ಅಥವಾ 75,000/- ರೂ ಕೊಡು ಅಂತಾ ಶರ್ಟ ಹಿಡಿದು ಎಳೆದಾಡಿದ್ದು ಮತ್ತು ಫಿರ್ಯಾದಿ ಹೆಂಡತಿ ಇವರು ಬಿಡಿಸಲು ಬಂದರೆ ಅವರಿಗು ಕೂಡಾ ಬೈದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಶಾಹೀನಸಾಬ ತಂದೆ ಅಲ್ಲಿಸಾಬ ದೊಡ್ಡಮನಿ ಸಾ: ಸಿಗರಥಹಳ್ಳಿ ರವರು ಮತ್ತು ಫಿರ್ಯಾದಿ ಹೆಂಡತಿ ಮದೀನಾ ಬೇಗಂ ಇಬ್ಬರು ತಮ್ಮ ಹೊಲ ಸರ್ವೆ ನಂ 208,  8 ಎಕರೆ ಹೊಲದಲ್ಲಿ ದಿನಾಂಕ 06-10-13 ರಂದು ಸಾಯಾಂಕಾಲ  ಇದ್ದಾಗ ಗುಡುಮಾ ಗಂಡ ಅಲ್ಲಿಸಾಬ ದೊಡ್ಡಮನಿ ಸಂ 5 ಜನರು ಎಲ್ಲರೂ ಸಾ: ಸಿಗರರಥಹಳ್ಳಿ ರವು  ಅಕ್ರಮ ಕೂಟ ಕಟ್ಟಿಕೊಂಡು ಬಂದು ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಲದಲ್ಲಿನ ಸಜ್ಜಿ ಬೆಳೆ ಚೆಂಡಿ ಆಡಿ ಬೆಳೆ ನಾಶ ಮಾಡಿರುತ್ತಾರೆ ಕಾರಣ ಸದರ ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರಿಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣ :

ಸ್ಟೇಷನ ಬಜಾರ ಠಾಣೆ : ಶ್ರೀ ಶಾಂತ ಕುಮಾರ ತಂದೆ ಬಸವರಾಜ ಜವಳಗಿ ಸಾ|| ಮನೆ ನಂ; 9-953/2 B ಅಗ್ನಿ ಶ್ಯಾಮಕ ಠಾಣೆ ಹತ್ತಿರ ಶಹಾಬಜಾರ ರೋಡ ಕಲ್ಯಾಣ ನಗರ ಗುಲಬರ್ಗಾರವರು ದಿನಾಂಕ; 01/10/2013 ರಂದು 17;30 ಗಂಟೆಯ ಸಮಾರಿಗೆ ಸ್ಟೇಷನ ಹತ್ತಿರ ನನ್ನ ಹಿರೋ ಹೋಂಡಾ ಸ್ಪ್ಲೇಂಡರ ಪ್ಲಸ ಸೈಕಲ್ ಮೋಟಾರ ನಂ; ಕೆಎ 32 ಕ್ಯೂ 7042 ಚಸ್ಸಿ ನಂ; 05A16F12130  ಇಂಜಿನ ನಂ; 05A15E12239 ಅ|| ಕಿ|| 22,500/- ರೂ ನೇದ್ದು ರೆಲ್ವೇ ಸ್ಟೇಷನ ಹತ್ತಿರ ನಿಲುಗಡೆ ಮಾಡಿ ಹೊಟಲ್ ನಲ್ಲಿ ಹೊಗಿ ಚಹಾ ಕುಡಿದು 17;40 ಗಂಟೆಗೆ ಮರಳಿ ಬಂದು ನೋಡುವಸ್ಟರಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಇಲ್ಲಿಯವರೆಗೆ ಎಲ್ಲಾ ಕಡೆಗೆ ಹುಡುಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: