POLICE BHAVAN KALABURAGI

POLICE BHAVAN KALABURAGI

07 November 2013

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ರೇಣುಕಾ ಗಂಡ ಪ್ರವೀಣಕುಮಾರ ಕೋಲಾರ ಸಾ; ಮನೆ ನಂ 1-867/3/1 ವೇಂಕಟೇಶ ನಗರ ಗುಲಬರ್ಗಾ ಇವರ ತಂದೆ ತಾಯಿಯವರು ದಿನಾಂಕ 27.12.2012 ರಂದು ಪ್ರವೀಣಕುಮಾರ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಮಾತನಾಡಿದ ಪ್ರಕಾರ ವರನಿಗೆ 25 ತೊಲೆ ಬಂಗಾರ 1 ಕೆಜಿ ಬೆಳ್ಳಿ ನಮ್ಮ ತಂದೆಯವರು ಕೊಟ್ಟಿರುತ್ತಾರೆ. ನನ್ನ ಗಂಡ ಎಲ್.ಐ.ಸಿ ಆಫೀಸದಲ್ಲಿ ಡೆವಲಪರ ಆಫೀಸರ ಅಂತಾ ಕೆಲಸ ಮಾಡುತ್ತಾರೆ. ಮದುವೆಯಾದ ಒಂದು ವರ್ಷದವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು ನಂತರ ಕುಡಿದು ಬಂದು ನನ್ನ ಜೊತೆ ಜಗಳ ತೆಗೆಯಲು ಪ್ರಾರಂಭಿಸಿ ಮಾನಸಿಕ ದೈಹಿಕ ಕಿರುಕುಳ ಕೊಡುತ್ತಿದ್ದನು. ಪ್ರವೀಣಕುಮಾರ ಇತನಿಗೆ ಸಾಲವಾಗಿದೆ ನಿಮ್ಮ ತಂದೆಯಿಂದ 5 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡಲು ಪ್ರಾರಂಬಿಸಿದರು. ನನ್ನ ವೇತನವೆಲ್ಲಾ ಅವರೆ ತೆಗೆದುಕೊಳ್ಳುತ್ತಿದ್ದರು. ಒಂದು ಸಲ ನನ್ನ ಗಂಡ ನಮ್ಮ ಅಣ್ಣನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿದ್ದು ಇರುತ್ತದೆ. ದಿನಾಂಕ 06.11.2013 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನಮ್ಮ ತಂದೆಯವರು ನನಗೆ ನನ್ನ ಗಂಡನ  ಮನೆಗೆ ಕರೆದುಕೊಂಡು ಬಂದಾಗ ನಮ್ಮ ಅತ್ತೆ ಮಾವ ನೀವು ತಂದೆ ಮಗಳು ನಮ್ಮ ಮನೆಯಲ್ಲಿ ಕಾಲು ಇಡಬೇಡಿರಿ ಎಂದು ಬೈಯಹತ್ತಿದರು. ಆಗ ನನ್ನ ಗಂಡ ಪ್ರವೀಣಕುಮಾರ ಇತನು ಬಂದು ಎ ರಂಡಿ ಖಾಲಿ ಕೈಯಿಂದ ಬಂದಿದ್ದಿಯಾ ದುಡ್ಡು ತಂದಿದ್ದಿಯಾ ದುಡ್ಡು ತೆಗೆದುಕೊಂಡು ಬಂದರೆ ಮಾತ್ರ ನನ್ನ ಮನೆಯಲ್ಲಿ ಪ್ರವೇಶ ಇಲ್ಲದಿದ್ದರೆ ನಿನಗೆ ಈ ಮನೆಯಲ್ಲಿ ಜಾಗ ಇಲ್ಲವೆಂದು ನನ್ನ ತಂದೆಯನ್ನು ನೂಕಿಸಿ ನನಗೆ ಮನೆಯಿಂದ ಹೊರಗೆ ಹಾಕಿದರು. ಕಾರಣ ನನಗೆ ತವರು ಮನೆಯಿಂದ 5 ಲಕ್ಷ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಕೈಯಿಂದ ಹೊಡೆಬಡೆ ಮಾಡಿ  ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟ ನನ್ನ ಗಂಡ ಪ್ರವೀಣಕುಮಾರ ಅತ್ತೆ ಶಕುಂತಲಾ, ಮಾವ ಶರಣಪ್ಪಾ ಮೈದುನರಾದ ಪ್ರಸನ್ನ ಮತ್ತು ಪ್ರಶಾಂತ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ  ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ರಾಧಾ  ಗಂಡ ಸುರೇಶ ಪಂಚಾಳ ಸಾ: ವಡ್ಡರಗಲ್ಲಿ ಕೃಷ್ಣಾ ನಗರ ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 06-11-2013 ರಂದು ತವರುಮೆಯಿಂದ ಗುಲಬರ್ಗಾಕ್ಕೆ ಬಂದು ಕೇಂದ್ರ ಬಸ್ಸ ನಿಲ್ದಣದಲ್ಲಿ ಇಳಿದು ಗಂಡೆನಿಗೆ ಪೋನ ಮಾಡಿ ತಿಳಿಸಿದ್ದು ನನಗೆ  ಮನೆಗೆ ಕರೆದುಕೊಂಡು ಹೋಗಲು ಆಳಂದ ಚೆಕ್ಕ ಪೋಸ್ಟ ರೋಡ ಕಡೆಯಿಂದ ತನ್ನ ಮೋಟಾರ ಸೈಕಲ ಕೆಎ 32 ಜೆ 9326 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹುಸೇನಿ ಗಾರ್ಡನ ಎದುರಿನ ರೋಡಿನ  ಜಂಪ ಗಮನಿಸದೇ ವೇಗದಲ್ಲಿ ಜಂಪ ಆಗಿದ್ದರಿಂದ ವೇಗದ ಆಯ ತಪ್ಪಿ ರೋಡಿನ ಮೇಲೆ ಬಿದ್ದು  ಅವನ ತಲೆ ಹಿಂದೆ ಭಾರಿ ರಕ್ತಗಾಯವಾಗಿದ್ದು ಸ್ವಲ್ಪ ಸಮಯದ ನಂತರ ನಾನು ನನ್ನ ಗಂಡನ ಮೋಬಾಯಿಲ ಪೋನ ಮಾಡಿದಾಗ ಯಾರೋ ಒಬ್ಬರು ಮಾತಾಡಿ ನಿನ್ನ ಗಂಡ ಅಪಘಾತ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ವಿಷಯ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

06 November 2013

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪ್ರೇಮಾ @ ಪ್ರೇಮಿಲಾ ಗಂಡ ಶರಣಬಸಪ್ಪ ಸಾ:ಆಲಗೂಡ ರವರ ಲಗ್ನ ಈಗ ಸುಮಾರು 1 ½ ವರ್ಷದ ಹಿಂದೆ ಆಲಗೂಡ ಗ್ರಾಮದ ಶರಣಬಸಪ್ಪ ಬಿರಾದಾರ ಇವರೊಂದಿಗೆ ಆಗಿದ್ದು ಲಗ್ನವಾದ ನಂತರ ಒಂದು ತಿಂಗಳ ವರೆಗೆ ಗಂಡನ ಮನೆಯವರು ಚೆನ್ನಾಗಿ ನೊಂಡಿಕೊಂಡು ತದನಂತರ ಜಗಳ ತೆಗದು ಮದುವೆ ಕಾಲಕ್ಕೆ ತವರು ಮನೆಯವರು ಕಡಿಮೆ ವರದಕ್ಷೀಣೆ ಕೊಟ್ಟಿರತ್ತಾರೆ ಇನ್ನು ಹಣ , ಬಂಗಾರ ಮತ್ತು ಆಸ್ತಿಯಲ್ಲಿ ಪಾಲು ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಾ ಬಂದು ನಿನ್ನೆ ದಿನಾಂಕ 04-11-2013 ರಂದು ಸಾಯಾಂಕಾಲ 06-00 ಗಂಟೆ ಸುಮಾರಿಗೆ ಗಂಡ ಶರಣಬಸಪ್ಪ ಅತ್ತೆ ಪ್ರಭುಲಿಂಗಮ್ಮಾ, ಮಾವ ಗುರುಬಸಪ್ಪ, ನಾದಿನಿ ಶೋಭಾ ಇವರೆಲ್ಲರೂ ಸೇರಿ ಜಗಳ ತೆಗದು ಅವಾಶ್ಚ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಾಗು ವರದಕ್ಷೀಣೆ ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ 05-11-2013 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಶ್ರೀ.ಸುಬಣ್ಣ ಎ.ಎಸ್.ಐ. ಬ್ರಹ್ಮಪೂರ ಪೊಲಿಸ್ ಠಾಣೆ ರವರು  ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯ ಮುಗಿಸಿಕೊಂಡು ಹಳೆಯ ಎಸ್.ಪಿ. ಆಫೀಸ್ ರೋಡಿನ ಮುಖಾಂತರ ಕುಳಗೇರಿ ಕ್ರಾಸ್ ಕಡೆ ಬರುತ್ತಿದ್ದಾಗ ಹಳೆಯ ಎಸ್.ಪಿ.ಆಫೀಸದ್ ಹತ್ತಿರ ಕುಳಗೇರಿ ಕ್ರಾಸ್ ಕಡೆಗೆ ಬರುವ ರೋಡಿನ ಬದಿಗೆ ಹಳೆಯ ಮುತ್ರಾಲಯದ ಹತ್ತಿರ ಒಬ್ಬ ಅಪರಿಚಿತ ವಯೋವೃದ್ದ ಅಂದಾಜು ವಯಸ್ಸು 65-70 ವರ್ಷದ ವ್ಯಕ್ತಿ ಮರಣ ಹೊಂದಿ ಬಿದ್ದಿದ್ದು ಸದರಿ ಶವವನ್ನು ನೋಡಲು ಎಡಗಾಲ ಪಾದ ಪೂರ್ತಿಯಾಗಿ ಕೊಳೆತ ಸ್ಥೀತಿಯಲ್ಲಿ ಇದ್ದು ಮತ್ತು ಬಲ ಕಾಲಿನ ಪಾದದ ಮೇಲೆ ಕೂಡಾ ಹಳೆಯ ಗಾಯಗಳು ಆಗಿದ್ದು ಇರುತ್ತವೆ. ಸದರಿ ಶವದ ಮೈ ಮೇಲೆ ಒಂದು ಬಿಳಿ ಬಣ್ಣದ ಗೇರೆಯುಳ್ಳ ಶರ್ಟ ಮತ್ತು ಬಿಳಿ ಬಣ್ಣದ ದೋತ್ತರ ಇದ್ದು ಯಾವದೋ ಒಂದು ಕಾಯಿಲೆಯಿಂದ ಮರಣ ಹೊಂದಿದು ಕಂಡು ಬರುತ್ತದೆ. ಮತ್ತು ಅಕ್ಕಪಕ್ಕದ ಜನರಿಗೆ ಸದರಿ ಮೃತನ ಬಗ್ಗೆ ವಿಚಾರಿಸಲು ಯಾವುದೇ ಮಾಹಿತಿ ನೀಡಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಬಸವರಾಜ ತಂದೆ ಚಂದ್ರಶೇಖರ ಬಾಳಿ ವ: 18 ಸಾ: ಭೀಮರಾಯನ ಗುಡಿ ತಾ: ಶಹಾಪುರ ಜಿ: ಯಾದಗಿರಿ ಹಾ.ವ: ಡಾ: ಸಿ.ಹೆಚ್. ಪಾಟೀಲ ರವರ ಮನೆಯಲ್ಲಿ ಬಾಡಿಗೆ 3 ನೇ ಕ್ರಾಸ್ ಗೊದುತಾಯಿ ನಗರ ಗುಲಬರ್ಗಾ ರವರು ದಿನಾಂಕ 04-11-2013 ರಂದು 9:00 ಪಿಎಮ್ ಕ್ಕೆ ತಾನು ಸೆಂಟ್ರಲ್ ಪಾರ್ಕದಲ್ಲಿ  ಕೆಲಸ ಮುಗಿಸಿಕೊಂಡು ಮನೆಗೆ ಸೈಕಲ ಮೇಲೆ ಬರುತ್ತಿರುವಾಗ ಗೋದುತಾಯಿ ಕಾಲೋನಿಯ ಹತ್ತಿರ ಇರುವ ಶಮ್ಸ್ ಫಂಕ್ಷನ ಹಾಲ ಗೇಟ ಎದುರಿಗೆ 3 ಜನ ಹುಡುಗರು ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ಅದರಲ್ಲಿ ಒಬ್ಬ ಒಮ್ಮೆಲೆ ಶರ್ಟ ಜೇಬದಲ್ಲಿ ಕೈಹಾಕಿ ಕಾರ್ಬನ್ ಮೋಬೈಲ್ ಅ.ಕಿ. 1650/- ರೂ ನಗದು ಹಣ 100/- ರೂ ಕಸಿದುಕೊಂಡನು ಆಗ ನಾನು ತಡೆದಾಗ ಇನ್ನೊಬ್ಬ ನನಗೆ ಕಪಾಳ ಮೇಲೆ ಹೊಡೆದು ಚಲ್ ಬೇ ಅಂತಾ ಬೈದನು ಇನ್ನೊಬ್ಬನು  ಯಾರಿಗಾದರು ಹೇಳಿದ್ರೆ ನಿನಗೆ ಜೀವ ಸಹಿತ ಬಿಡಲ್ಲ ಅಂತಾ ಅಂದು ಅಲ್ಲಿಂದ ಆ ಮೂರು ಜನರು ಹೋದರು. ಆಗ ನಾನು ಜೇವರ್ಗಿ ಕ್ರಾಸ ವರೆಗೆ ಬೆನ್ನತ್ತಿ ಹೋಗಿದ್ದು ಅಲ್ಲಿ ನಿಂತ ಒಬ್ಬನಿಗೆ ಆ ಹುಡುಗರ ಹೆಸರು ಕೇಳಲು ಅಮ್ಲೇಟ್ ಬಂಡಿ ಸಮೀರಮತ್ತು ಇನ್ನೂ ಇಬ್ಬರು ಅವನ ಗೆಳೆಯರು ಇರುತ್ತಾರೆ. ಅಂತಾ ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

05 November 2013

Gulbarga District Reported Crimes

ಹಲ್ಲೆ ಪ್ರಕರಣ:
ಚಿಂಚೋಳಿ ಠಾಣೆ : ಶ್ರೀ ದಯಾನಂದ ತಂದೆ ಕೇಶವರಾವ ಸಾ; ಐನಾಪೂರ ತಾ|| ಚಿಂಚೋಳಿ ರವರು ಐನಾಪೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ನನಗೆ ಸಂಬಂಧಪಟ್ಟಂತೆ ಅಂಗಡಿ ಇದ್ದು  ನನ್ನ ಅಂಗಡಿಯ ಪಕ್ಕದಲ್ಲಿ ಶ್ರೀ ಶಂಕರ ತಂದೆ ರಾಮಚಂದ್ರ ವಗ್ಗೆ ರವರ ಹೋಟೆಲ ಪೂಜಾ ಇದ್ದುದ್ದರಿಂದ ಸದರ ಹೊಟೆಲ ಕಡೆಗೆ ಹೋದೆನು ಪೂಜಾ ಮುಗಿದ ನಂತರ ನನ್ನ ಮನೆಕಡೆಗೆ ಹೋರಟಾಗ ಅಷ್ಟರಲ್ಲಿಯೇ ಸದರ ಹೋಟೆಲ ಹತ್ತಿದಲ್ಲಿದ್ದ ನಮ್ಮೂರಿನವನಾದ ಸಂತೋಷ ತಂದೆ ವೆಂಕಟರಾವ ಇವನು ನಿನ್ನೆ ದಿನಾಂಕ 04.11.2013 ರಂದು ರಾತ್ರಿ 10.30 ಗಂಟೆಗೆ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ತಡೆದು ನಿಲ್ಲಿಸಿ ತನ್ನ ಕೈಮುಷ್ಟಿಯಿಂದ ಕಪಾಳಕ್ಕೆ, ಎದೆಯಮೇಲೆ ಹೊಡೆದಿದ್ದಲ್ಲದೇ ಯಾವೂದೇ ಒಂದು ಚೂಪಾದ ಆಯುಧದಿಂದ ನನ್ನ ಮೂಗಿನ ಬಲ ಹೋಳ್ಳೆಯನ್ನು ಕೊಯ್ದು ಭಾರಿ ರಕ್ತಗಾಯಪಡಿ ಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಚಿಂಚೋಳಿ ಠಣೆ : ಶ್ರೀಮತಿ ರತ್ನಮ್ಮಾ ಗಂಡ ಸಿದ್ದಪ್ಪ ನಾಯಿಕೊಡಿ ಸಾ : ದೆಗಲ್ಮಡಿ  ತಾ: ಚಿಂಚೋಳಿ  ರವರು ದಿನಾಂಕ 03-11-2013 ರಂದು  ಬೆಳೆಗ್ಗೆ ಸಮಯದಲ್ಲಿ  ತನ್ನ ಖಾಸಗಿ ಕೆಲಸದ ಸಲುವಾಗಿ ತಾನು ತನ್ನ ಮಗನಾದ ಜಗನ್ನಾಥ ಹಾಗೂ ತನ್ನ ಗಂಡನಾದ ಸಿದ್ದಪ್ಪ ಮೂರು ಜನರು ಕೂಡಿಕೊಂಡು ಮನೆಯಿಂದ ರಸ್ತೆಯ ಮುಖಾಂತರ ಚಿಂಚೋಳಿಗೆ ಬರುತ್ತಿದ್ದಾಗ ನಮ್ಮೂರಿನಿಂದ ಚಿಂಚೋಳಿಗೆ ಬರುವ ರಸ್ತೆಯ ಎಡ ಬದಿಯಲ್ಲಿಯೇ  ನಡೆದುಕೊಂಡು ಬರುತ್ತಿರುವಾಗ ಆದಿ ಬಸವಣ್ಣ ಗುಡಿಯ ಹತ್ತಿರ ಹಿಂದಿನಿಂದ ತಮ್ಮ ಊರಿನವನೇ ಆದ ಸುನಿಲ್ ತಂಧೆ ಸಿದ್ದಪ್ಪ ಇವನು ತನ್ನ ಮೋಟಾರ ಸೈಕಲ್ ನಂ ಕೆ ಎ 32 ಇ ಸಿ 9684 ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಿಜೀತನದಿಂದ  ಮಾನವ ಜೀವಕ್ಕೆ ಅಪಾಯವಾಗುಂತೆ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ ಗಾಯಪಡಿಸಿತನ್ನ ಮೋಟಾರ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಡಾ || ರಾಜೇಶ ತಂದೆ ಸಂಗ್ರಾಮ ಉದಗಿರಿ  ಸಾ|| ಮನೆ ನಂ; 1-867/22/ಎ ಮಹಾವೀರ ನಗರ ಗುಲಬರ್ಗಾ ರವರು  ದಿನಾಂಕ; 31-10-2013 ರಂದು ಬೆಳಗ್ಗೆ 06 ಗಂಟೆಗೆ ನಾನು ಮನೆಗೆ ಕಿಲಿ ಹಾಕಿಕೊಂಡು ರಾಯಚೂರಿಗೆ ಹೊಗಿ ಅಲ್ಲಿಂದ ಬೆಂಗಳೂರಿಗೆ ಹೋಗಿದ್ದು ದಿನಾಂಕ; 04-11-2013 ರಂದು ಸಾಯಂಕಾಲ 06;00 ಗಂಟೆಯ ಸುಮಾರಿಗೆ ನಮ್ಮ ಕಂಪೌಂಡರ ಮರೆಪ್ಪ ಕುಂಬಾರ ನನಗೆ ಪೊನ ಮಾಡಿ ತಿಳಿಸಿದ್ದೇನಂದರೆ ಯಾರೋ ಕಳ್ಳರು ಮನೆಯ ಕೀಲಿ ಮುರಿದಿರುತ್ತಾರೆ  ಅಂತಾ ತಿಳಿಸಿದ್ದು ನಾವು ಇಂದು ದಿನಾಂಕ; 05-11-2013 ರಂದು ಬೆಳಗ್ಗೆ 07;00 ಗಂಟೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲಿಗೆ ಹಾಕಿರು ಕೀಲಿ ಮುರಿದು ಮನೆಯಲ್ಲಿಯ ಬಂಗಾರದ ಆಭರಣಗಳು ಹಾಗು ನಗದು ಹಣ ಹೀಗೆ ಒಟ್ಟು 2,07,000/- ರೂ ಕಿಮ್ಮತ್ತಿನ ಮಾಲು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.