POLICE BHAVAN KALABURAGI

POLICE BHAVAN KALABURAGI

31 March 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಫರತಬಾದ ಪೊಲೀಸ ಠಾಣೆ: ಶ್ರೀ, ಬಾಪುಗೌಡ ತಂದೆ ಶಾಂತಗೌಡ ಪೊಲೀಸ್ ಪಾಟೀಲ ಸಾ: ದಂಡ ಸೊಲಾಪೂರ ತಾ: ಸುರಪೂರ ಜಿ: ಯಾದಗಿರ ರವರು ನಾನು ಜೇವರ್ಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಮೈಹಿಬೂಬ ಶೇಖ ಇವರ ಮೋಟಾರ ಸೈಕಲ ಖರೀಸಿದ್ದು, ಮೋಟಾರ ಸೈಕಲ್ ಕಾಗದ ಪತ್ರಗಳನ್ನು ನನ್ನ ಹೆಸರಿಗೆ ಮಾಡಿಕೊಳ್ಳುವ ಸಲುವಾಗಿ ಗುಲಬರ್ಗಾಕ್ಕೆ ದಿನಾಂಕ:30-3-2013 ರಂದು ಬೆಳಿಗ್ಗೆ 7-00 ಗಂಟೆಗೆ ನಮ್ಮೂರಿನಿಂದ ನಾಗರಹಳ್ಳಿ ಗ್ರಾಮಕ್ಕೆ ಬಂದು ಮೈಹಿಬೂಬ ಇತನಿಗೆ ನನ್ನ ಸ್ವಂತ ಮೊಟಾರ ಸೈಕಲ ನಂ: ಕೆಎ-33 ಕೆ-4094 ನೇದ್ದರ ಮೇಲೆ ಗುಲಬರ್ಗಾಕ್ಕೆ ಕರೆದುಕೊಂಡು ಬಂದು ಕೆಲಸ ಮುಗಿಸಿಕೊಂಡು ಮರಳಿ 4-30 ಪಿ,ಎಮಕ್ಕೆ ನಮ್ಮೂರಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಂ.218 ರಸ್ತೆಯ ಗಣೇಶ ಪೆಟ್ರೋಲ ಪಂಪ ದಾಟಿ ಸ್ವಲ್ಪ ಮುಂದೆ ಹೋಗುತ್ತಿರುವಾಗ ಎದುರಿನಿಂದ ಜೇವರ್ಗಿ ಕಡೆಯಿಂದ ಲಾರಿ ನಂ ಕೆಎ-32 ಎ-9380  ನೇದ್ದರ ಚಾಲಕ ಸುಭಾಷ ಇತನು  ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಮೊಟಾರ ಸೈಕಲ ನಡೆಸುತ್ತಿದ್ದ ಮೈಹಿಬೂಬು ಶೇಖ ಇತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:40/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ, ಮಹಾದೇವಪ್ಪ ತಂದೆ ಅಣಪ್ಪಾ ಟೆಂಗಳಿ ಬೇಲೂರ ಗ್ರಾಮ ತಾ||ಜಿ|| ಗುಲಬರ್ಗಾ ರವರು ನಾನು ದಿನಾಂಕ:30-03-13 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಗುಲಬರ್ಗಾ-ಹುಮನಾಬಾದ ರೋಡಿಗೆ ಇರುವ ತಾವರಗೇರಾ ಕ್ರಾಸಿನ ಸಮೀಪ ಇರುವ ಬಸವಣ್ಣ ದೇವರ  ಕಮಾನದ ಹತ್ತಿರ ಗುಲಬರ್ಗಾ  ರೋಡ ಕಡೆಯಿಂದ ಲಾರಿ ನಂಬರ ಕೆಎ 32 ಎ 0596 ಚಾಲಕನು ತನ್ನ ಲಾರಿಯನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು  ರೋಡಿನ ಮಧ್ಯದಲ್ಲಿ  ನಡೆಸುತ್ತಾ ಹೊರಟಾಗ ಜೀಪ ನಂಬರ ಕೆಎ 28 ಎಂ 5005 ಚಾಲಕ ವಿಠಲ ತಂದೆ ಶರಣಪ್ಪ ಗೊಲ್ಲರ ಇತನು ತನ್ನ ಜೀಪ ಅತಿವೇಗದಿಂದ  ರೋಡಿನ ಮಧ್ಯದಲ್ಲಿ ನಡೆಯಿಸಿದ್ದರಿಂದ ಲಾರಿ  ಮತ್ತು ಜೀಪಿನ  ಚಾಲಕರು ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದರಿಂದ ಜೀಪ ಚಾಲಕ ಜೀಪಿನಲ್ಲಿ ಸಿಕ್ಕಿ ಬಿದ್ದು ಭಾರಿ ಗಾಯಹೊಂದಿರುತ್ತಾನೆ. ಇದನ್ನು ನೋಡಿ  ಲಾರಿ ಚಾಲಕನು ತನ್ನ  ಲಾರಿ ಬಿಟ್ಟು  ಓಡಿ ಹೋಗಿರುತ್ತಾನೆ. ಹಿಂದೆ ಬರುತ್ತಿರುವ ಕಾರಿನವರು ತಮ್ಮ ಕಾರಿನಲ್ಲಿ ನನಗೆ ಮತ್ತು ರವಿಕುಮಾರ ಇವರಿಬ್ಬರು ನೋಡಿ ಜೀಪಿನಲ್ಲಿದ್ದ ಸಿಕ್ಕಿ ಬಿದ್ದ ವಿಠಲನಿಗೆ ಹೊರೆಗೆ ತೆಗೆದು ಅವನಿಗೆ ಉಪಚಾರ ಕುರಿತು  108 ಅಂಬುಲೈನ್ಸದಲ್ಲಿ  ಹಾಕಿಕೊಂಡು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತರುವ ಕಾಲಕ್ಕೆ ಹುಮನಾಬಾದ ರಿಂಗ ರೋಡಿನ ಹತ್ತಿರ ರಾತ್ರಿ 9-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಇಬ್ಬರು ವಾಹನ ಚಾಲಕರು ತಮ್ಮ ವಾಹನಗಳನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿಕೊಂಡಿದ್ದರಿಂದ ಈ ಘಟನೆ ಜರೂಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ: 164/2013 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

30 March 2013

GULBARGA DISTRICT



:: ಎಮ್.ಬಿ ನಗರ ವೃತ್ತ ಪೊಲೀಸರ ಕಾರ್ಯಾಚರಣೆ ::
:: ಶರಣಬಸಪ್ಪ ಚಕ್ಕಿ ಪೊಲೀಸ ಕಾನ್ಸಟೇಬಲ್ ಕೊಲೆಗಾರರ ಬಂಧನ ::

          ದಿನಾಂಕ:23-24/10/2012 ರಂದು ರಾತ್ರಿ ವೇಳೆಯಲ್ಲಿ ಅಬಕಾರಿ ಮತ್ತು ಲಾಟರಿ ನಿಷೇದ ದಳದ ವಿಶೇಷ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಬಸಪ್ಪ ಚಕ್ಕಿ ಪೊಲೀಸ ಕಾನ್ಸಟೇಬಲ್ ಇವನನ್ನು ಬ್ರಹ್ಮಪುರ ಪೊಲಿಸ ಠಾಣೆಯ ಹಿಂಭಾಗದಲ್ಲಿ ಮಾರಾಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಗಂಭಿರತೆ ಮತ್ತು ಪತ್ತೆ ಮಾಡಲು ಶ್ರೀ ಎನ್.ಸತೀಶಕುಮಾರ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಈ ತನಿಖಾ ತಂಡದಲ್ಲಿ ಶ್ರೀ ಎಸ್.ಅಸ್ಲಂ ಭಾಷ ಸಿಪಿಐ ಎಂ.ಬಿ ನಗರ ವೃತ್ತ ಗುಲಬರ್ಗಾ, ಶ್ರೀ ಶರಣಬಸವೇಶ್ವರ ಭಜಂತ್ರಿ ಪಿಐ ಬ್ರಹ್ಮಪುರ ಪೊಲೀಸ ಠಾಣೆ, ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವವಿದ್ಯಾಲಯ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ವೇದರತ್ನಂ, ಶಿವಪ್ಪ ಕಮಾಂಡೋ, ಪ್ರಭಾಕರ, ಬಲರಾಮ, ಅರ್ಜುನ, ಮಸೂದ, ಶ್ರೀನಿವಾಸರೆಡ್ಡಿ, ಸಿದ್ರಾಮಯ್ಯಸ್ವಾಮಿ, ಗಂಗಾಧರ ಸ್ವಾಮಿ, ಶಿವಶರಣಪ್ಪ, ಮಶಾಕ, ಅಶೋಕ, ರಾಜಕುಮಾರ, ಸುಭಾಷ, ವೀರಶೇಟ್ಟಿ ರವರು ಕಾರ್ಯಚರಣೆ ನಡೆಸಿದ್ದು ರಹಸ್ಯವಾಗಿದ್ದ ಈ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತರಾದ        1) ಲಕ್ಷ್ಮಣ ತಂದೆ ಮಲ್ಲಪ್ಪ ಇಂಡಿ ಸಾಃ ಕರಜಗಿ ತಾಃ ಅಕ್ಕಲಕೊಟ, 2) ಶಿವಪ್ಪಾ ತಂದೆ ಗುರುಶಾಂತಪ್ಪಾ ಇಂಡಿ ಸಾಃ ಗುಲಬರ್ಗಾ, 3)  ನಾಗರಾಜ @ ನಾಗಪ್ಪಾ ಇಂಡಿ, 4)  ಚನ್ನಮಲ್ಲಪ್ಪ ತಂದೆ ಶಿವಶರಣಪ್ಪ ಕಿರಣಗಿ ಸಾಃ ಗುಲಬರ್ಗಾ ಇವರನ್ನು ಗುಲಬರ್ಗಾ ಮತ್ತು ಅಕ್ಕಲಕೊಟ ತಾಲೂಕಿನ ಕರಜಗಿ ಗ್ರಾಮ ಕಡೆ ದಾಳಿ ಮಾಡಿ ದಸ್ತಗಿರಿ ಮಾಡಿರುತ್ತಾರೆ.
          ಈ ಕೊಲೆಗೆ ಕಾರಣ ಕೊಲೆಯಾದ ಶರಣಬಸಪ್ಪ ಚಕ್ಕಿ ಪೊಲಿಸ ಕಾನ್ಸಟೇಬಲ್ ಇವನು 2001 ನೇ ಸಾಲಿನಲ್ಲಿ ಮಂಜುಳಾ ಸಾಃಸೇಡಂ ಎಂಬುವವಳೊಂದಿಗೆ ವಿವಾಹವಾಗಿದ್ದು, ತದನಂತರ 2003 ನೇ ಇಸವಿಯಲ್ಲಿ ತನ್ನ ಸೊದರ ಮಾವನಾದ ಮಲ್ಲಪ್ಪ ಇಂಡಿ ಮಗಳಾದ ಕವಿತಾಳೊಂದಿಗೆ ಗುಡ್ಡಾಪುರ ಗ್ರಾಮದ ಧಾನಮ್ಮ ದೇವಸ್ಥಾನದಲ್ಲಿ 2 ನೇ ಮದುವೆಯಾಗಿದ್ದು, 2 ತಿಂಗಳ ಕಾಲ ಕವಿತಾಳೊಂದಿಗೆ ಸಂಸಾರ ಮಾಡಿ ನಂತರ ಒಬ್ಬರಿಗೊಬ್ಬರಿಗೆ ಕಲಹ ಉಂಟಾಗಿ ತನ್ನ ತವರು ಮನೆಗೆ ಹೋಗಿದ್ದು, ನಂತರ ಅವಳು, ಕವಿತಾಳ ತಂದೆ ಹಾಗೂ ಕರಜಗಿ ಗ್ರಾಮದವರು ಹಲವಾರು ಸಲ ಶರಣಬಸಪ್ಪ ಚಕ್ಕಿ ಮತ್ತು ಅವನ ತಾಯಿ ಇತರರೊಂದಿಗೆ ಮಾತುಕತೆ ಮಾಡಿ ಕವಿತಾಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿ ಹೇಳಿದರು ಸಹಿತ ಶರಣಬಸಪ್ಪ ಚಕ್ಕಿ ಕವಿತಾಳನ್ನು ಕರೆದುಕೊಂಡಿರುವದಿಲ್ಲ. ಇದೇ ದ್ವೇಷವನ್ನು ಸಾಧಿಸುತ್ತಾ ಮಲ್ಲಪ್ಪ ಇಂಡಿ ಇತನು ತನ್ನ ಮನೆಯ ಸದಸ್ಯರೊಂದಿಗೆ ಈ ವಿಷಯವನ್ನು ಚರ್ಚಿಸುತ್ತಾ ನನ್ನ ಮಗಳ ಜೀವನ ಹಾಳು ಮಾಡಿ ಮೊಸ ಮಾಡಿ ಮದುವೆ ಮಾಡಿಕೊಂಡು ಮೊದಲನೇಯ ಹೆಂಡತಿಯನ್ನು ಬಿಟ್ಟು ತನ್ನ ಮಗಳನ್ನು ಇಟ್ಟುಕೊಂಡು ಸಂಸಾರ ಮಾಡಿಕೊಂಡು ಹೋಗುತ್ತೇನೆ ಅಂತಾ ಹೇಳಿ ಮೊಸ ಮಾಡಿರುತ್ತಾನೆ. ಇದಕ್ಕೆ ಹೇಗಾದರೂ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ದ್ವೇಷ ಸಾಧಿಸುತ್ತಾ ಬಂದು ಮಲ್ಲಪ್ಪ ಇಂಡಿ ಮತ್ತು ಇತನ ಅಣ್ಣನಾದ ಶಿವಪ್ಪ ಇಂಡಿ, ಅಣ್ಣನ  ಮಗನಾದ ನಾಗರಾಜ @ ನಾಗಪ್ಪ ಇಂಡಿ ಮತ್ತು ಶರಣಬಸಪ್ಪ ಚಕ್ಕಿಯ ಆತ್ಮಿಯ ಗೆಳೆಯನಾದ ಚನ್ನಮಲ್ಲಪ್ಪ ಇವನನ್ನು ಸೇರಿಸಿಕೊಂಡು ಮಲ್ಲಪ್ಪಾ ತಂದೆ ಗುರುಶಾಂತಪ್ಪಾ ಇಂಡಿ, ಶಿವಪ್ಪಾ ತಂದೆ ಗುರುಶಾಂತಪ್ಪಾ ಇಂಡಿ, ನಾಗರಾಜ @ ನಾಗಪ್ಪಾ ಇಂಡಿ ಇವರು ಅಪರಾಧಿಕ ಒಳ ಸಂಚನ್ನು ರಚಿಸಿ ಮಲ್ಲಪ್ಪ ಇಂಡಿ ಮಗನಾದ ಲಕ್ಷ್ಮಣ ಇಂಡಿಯು ಇವರ ಮಾರ್ಗದರ್ಶನ ಮತ್ತು ಸೂಚನೆಯಂತೆ ಹಾಗು ಸಹಾಯದೊಂದಿಗೆ ಶರಣಬಸಪ್ಪ ಚಕ್ಕಿಯನ್ನು ಮಾರಕಾಸ್ತ್ರದಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ.           ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೋಪಿತರನ್ನು ಮೇಲ್ಕಂಡ ತನಿಖಾ ತಂಡವು ಬೇಧಿಸುವಲ್ಲಿ ಮತ್ತು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡವು ಶ್ರೀ ಎನ್.ಸತೀಶಕುಮಾರ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು, ಶ್ರೀ ಕಾಶಿನಾಥ ತಳಕೇರಿ ಅಪರ ಎಸ್.ಪಿ, ಶ್ರೀ ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಿಣ, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ (ಬಿ) ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪತ್ತೆ ಮಾಡಲಾಗಿದೆ.  

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಗಂಗೂಬಾಯಿ ಗಂಡ ಚಂದ್ರಕಾಂತ ಟೆಳ್ಳೆ ಸಾ|| ಬೆಣ್ಣೆಶಿರೂರ ರವರು ದಿನಾಂಕ:27-03-2013 ರಂದು 23-00  ಗಂಟೆ ಸುಮಾರಿಗೆ ನಮಗೆ  ಮತ್ತು ಲಕ್ಷ್ಮಣ ಚವ್ಹಾಣ ಇಬ್ಬರ ಮಧ್ಯ ಜಗಳವಾಗಿದ್ದು, ನಂತರ 23-30 ಗಂಟೆಗೆ ಲಕ್ಷ್ಮಣ ತಂದೆ ಹೊನ್ನು ಚವ್ಹಾಣ ಸಾ|| ಮಾಡಿಯಾಳ ತಾಂಡಾ, ರಾಜಶೇಖರ ತಂದೆ ಚಂದ್ರಶಾ ಉಪ್ಪಿನ ಸಾ|| ಮಾಡಿಯಾಳಸುನೀಲ ತಂದೆ ರಾಜಶೇಖರ ಉಪ್ಪಿನ ಸಾ|| ಮಾಡಿಯಾಳಅಶೋಕ ತಂದೆ ಹಣಮಂತ ಕೊಂಡಕುಳೆ ಸಾ|| ಮಾಡಿಯಾಳ ನಿರ್ಮಲಾ ಗಂಡ ರಾಜಶೇಖರ ಉಪ್ಪಿನ ಸಾ|| ಮಾಡಿಯಾಳ ಇವರೆಲ್ಲರೂ ದತ್ತಾ ತಂದೆ ತುಕಾರಾಮ ಬಂಡಗಾರಅನ್ನಪೂರ್ಣ ಗಂಡ ದತ್ತಾ ಬಂಡಗಾರ ಮತ್ತು ಭೀಮರಾಯ ತಂದೆ ದತ್ತಾ ಬಂಡಗಾರ  ಇವರ ಪ್ರಚೋದನೆಯಿಂದ ಎಲ್ಲೂರ ನಮ್ಮ ತೋಟದ ಮನೆಯ ಮುಂದೆ ಬಂದು ಅಚಾಚ್ಯ ಶಬ್ದಗಳಿಂದ ಬೈದು ಅವಮಾನಿಸಿ ನನ್ನ ಗಂಡ ಮತ್ತು ಮಕ್ಕಳಿಗೆ ಹೊಡೆ ಬಡೆ ಮಾಡಿ ಸಾದಾ ಮತ್ತು ಗುಪ್ತಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:25/2013 ಕಲಂ, 143, 147, 323, 341, 447, 109, 354, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಮಹ್ಮದ ಆಸೀಫ ತಂದೆ ಅಬ್ದುಲ ರಹೀಮ ಉ:ಜೆಪಿ ಕಂಪನಿಯಲ್ಲಿ ಡ್ರಾಪಮೇನ ಕೆಲಸ ಸಾ:ಮಜೀದ ಚೌಕ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಬೆಳಿಗ್ಗೆ 10.30 ಗಂಟೆಗೆ ಸುಮಾರಿಗೆ ನಾನು ರೇಲ್ವೆ ಸ್ಟೇಶನದಿಂದ ಮೊಟಾರ ಸೈಕಲ್  ನಂ.ಕೆಎ-49 ಇ-007 ನೇದ್ದರ ಮೇಲೆ ಮನೆ ಕಡೆಗೆ ಬರುತ್ತಿರುವಾಗ ಶಹಾಬಾದದ ಸರಕಾರಿ ಅಸ್ಪತ್ರೆ ಎದರುಗಡೆ ಸೈಯ್ಯದ ಜಹೀರ ವ:35 ಸಾ:ಮಜೀದ ಚೌಕ ಶಹಾಬಾದ ಇತನು ಅವಾಚ್ಯ ಶಬ್ದಗಳಿಂದ ಬೈದು ಕೈಮುಷ್ಟಿ ಮಾಡಿ ಮುಖಕ್ಕೆ ಹೊಡೆದನು. ಇನ್ನೊಮ್ಮೆ ನನಗೆ ಸಿಟ್ಟಿನಿಂದ ನೋಡಿದರೆ ಜೀವಸಹಿತ ಬಿಡುವದಿಲ್ಲಾ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 45/2013 ಕಲಂ, 341, 323, 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದೌಲಸಾಬ ತಂದೆ ಸೂಫಿಸಾಬ ಮುಲ್ಲಾ ವ:70 ಸಾ:ಬಸವೇಶ್ವರ ಚೌಕ ಹತ್ತಿರ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಶಮ್ಮು ತಂದೆ ಮಹಿಬೂಬ, ಮೌಲನಬಿ ರವರು ಕೂಡಿಕೊಂಡು ಬಂದು ನಮ್ಮ ಅಜ್ಜಿ ನಿನ್ನ ಹತ್ತಿರ ಇಟ್ಟಿರುವ ಹಣ ಕೊಡು ಅಂದನು, ನಾನು ನಿಮ್ಮ ಅಜ್ಜಿಯ ಹಣ ನನ್ನ ಹತ್ತಿರ ಇಲ್ಲಾ ಅಂದಿದ್ದಕ್ಕೆ ಸದರಿಯವರು ಹಣ ಇಲ್ಲಾ ಅಂತಿಯಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ತಲೆಗೆ ಹೊಡೆದರು ಮತ್ತು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:46/2013 ಕಲಂ:323,324,504,506 ಸಂ:34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಮೌಲನಬಿ ಗಂಡ ಮಹಿಬೂಬ ಸಾ:ಮೇಸ್ತ್ರೀ ನಗರ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮ ಅತ್ತೆ ಮಹಿಬೂಬಿ ಮಗನಾದ ಶಮ್ಮು ಕೂಡಿ ದೌಲಸಾಬ ಇತನ ಮನೆಗೆ ಮಾತನಾಡಲು ಹೋದಾಗ, ದೌಲಸಾಬ ಇತನು ನಮ್ಮ ಮನೆಗೆ ಯಾಕೆ ಬಂದಿದ್ದಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ನಮ್ಮ ಅತ್ತೆ ಮಹಿಬೂಬ ಇವಳ ಎಡಕಣ್ಣಿನ ಪಕ್ಕಕ್ಕೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 47/2013 ಕಲಂ:323,324,504 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ನವಾಬ ತಂದೆ ಸೈಯ್ಯದಸಾಬ ಉ:ಲಾರಿ ಕ್ಲಿನರ್‌  ಸಾ:ಮನೆ ನಂ. 80 ಜಬ್ಬಾರ ಬಿಲ್ಡಿಂಗ್‌ 4ನೇ ಬ್ಲಾಕ್‌ 8ನೇ ಕ್ರಾಸ್‌ ಜಯನಗರ ಬೆಂಗಳೂರ ರವರು ನಾನು ದಿನಾಂಕ:28-03-2013 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮ ಬಿಜಿಟಿ ಕಂಪನಿ ನೆಹರು ಗಂಜ ಗುಲಬರ್ಗಾದಿಂದ ಬೆಂಗಳೂರಿಗೆ ಲಾರಿ ನಂ. ಕೆಎ 01 ಎ-2448 ನೇದ್ದರಲ್ಲಿ  ಹೊರಟಿದ್ದು, ಲಾರಿಯನ್ನು ರಾಜೇಂದ್ರ ಇತನು ಚಲಾಯಿಸುತ್ತಿದ್ದನು. ರಾತ್ರಿ 9:30 ಗಂಟೆಯ ಸುಮಾರಿಗೆ ಫರಹತಾಬಾದ ಕ್ರಾಸ್‌ ಹತ್ತಿರ ಹೊಗುತ್ತಿರುವಾಗ ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೆಕ್‌ ಹಾಕಿದ್ದರಿಂದ ಹಿಂದಿನಿಂದ ಒಂದು ಪಿಕಪ್ ಗಾಡಿ ಚಾಲಕನು ತನ್ನ ಪಿಕ್ ಅಪ್ ವಾಹನವನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ  ಲಾರಿಯ ಹಿಂದಗಡೆ ಡಿಕ್ಕಿ ಪಡಿಸಿದನು. ನಮಗೆ ಮತ್ತು ನಮ್ಮ ಲಾರಿಯ ಚಾಲಕನಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. ಆದರೆ, ಪಿಕ್ ಅಪ್ ಚಾಲಕ ಮಹ್ಮದ ಮಜೀದ ಸಾ:ಜಹೀರಾಬಾದ ಆತನಿಗೆ ಹಣೆಯ ಮೇಲೆ ಮತ್ತು ಗದ್ದಕ್ಕೆ ಬಾರಿ ಮತ್ತು ಸಾದಾ, ರಕ್ತಗಾಯವಾಗಿರುತ್ತದೆ. ಪಿಕ್ ಅಪ್ ನಂಬರ ನೊಡಲಾಗಿ ಹೊಸ ಪಿಕ್ ಅಪ್ ವಾಹನವಿದ್ದು ಅದಕ್ಕೆ ನಂಬರ ಇದ್ದಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 38/2013 ಕಲಂ, 279, 337, 338 ಐಪಿಸಿ ಸಂಗಡ 187 ಐ,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ದೇವಿಂದ್ರಪ್ಪ ತಂದೆ ಧೂಳಪ್ಪ ಪೂಜಾರಿ ವಯಾ||55 ಸಾ|| ಭೀಮಳ್ಳಿ ರವರು ನಮ್ಮ ಅಣ್ಣ ತಮ್ಮಕ್ಕಿಯ ಮಗಳಾದ ಪ್ರಭಾವತಿ ಇವಳು ತಮ್ಮ ಮನೆಯ ಎದುರಿಗೆ ಇರುವ ತಿಪ್ಪೆ ಜಾಗೆಯಲ್ಲಿ ದಿನಾಂಕ 29-03-13 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ  ಫಿರ್ಯಾದಿ ಕಸ ಚೆಲ್ಲುಲ್ಲು ಹೋದಾಗ ಸಾತಪ್ಪ ತಂದೆ ತಿಪ್ಪಣಾ ಸಂಗಡ ಇನ್ನೂ 4 ಜನರು ನಮ್ಮ ಜಾಗದಲ್ಲಿ ಯಾಕೇ ಕಸ ಚೆಲ್ಲುತ್ತೀ ಅಂತಾ ಅವಾಚ್ಯ ಬೈಯ್ಯುತ್ತಿದ್ದಾಗ ನಾನು ಮತ್ತು ನನ್ನ ಮಗ ರವಿ,  ವಿಶ್ವನಾಥ ಕೇಳಲು ಹೋದಾಗ ರಾಡಿನಿಂದ, ಕಲ್ಲಿನಿಂದ, ಕೈಯಿಂದ ಕಾಲಿನಿಂದ ಒದ್ದು ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 159/2013 ಕಲಂ 143, 147, 148, 504, 323, 324, 506 (2) ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ತಿಪ್ಪಣ್ಣಾ ತಂದೆ ಪೀರಪ್ಪ ಪೂಜಾರಿ ಸಾ|| ಭೀಮಳ್ಳಿ ರವರ  ನಮ್ಮ ಮನೆ ಎದುರು ಇರುವ ತಿಪ್ಪೆ ಜಾಗದಲ್ಲಿ  ಪ್ರಭಾವತಿ ಇವಳಿಗೆ ಇಲ್ಲಿ ಯ್ಯಾಕೆ ಕಸ ಚೆಲ್ಲುತ್ತಿ ಅಂತಾ ಕೇಳಿದ್ದಕ್ಕೆ ರಾಜಪ್ಪ ತಂದೆ ಮಹಾದೇವಪ್ಪ ಸಮಗಡ ಇನ್ನೂ 5 ಜನರೂ ನಮ್ಮ ತಿಪ್ಪೆ ಜಾಗೆಯಲ್ಲಿ ಕಸ ಹಾಕಬೇಡಾ ಅನ್ನುವವರು ನೀವ್ಯಾರು ಅಂತಾ ಜಗಳಾ ತೆಗೆದು ಅವಾಚ್ಯ ಬೈದು ನನಗೆ ಮತ್ತು ನನ್ನ ಮಕ್ಕಳಾದ ಸಾತಪ್ಪ ಪೀರಪ್ಪ ಅಣ್ಣೆಪ್ಪ  ರವರಿಗೆ ರಾಡಿನಿಂದ, ಕಲ್ಲಿನಿಂದ, ಕೈಯಿಂದ ಹೊಡೆದು  ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 160/2013 ಕಲಂ 143, 147, 148, 504, 323, 324, 506 (2) ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.