POLICE BHAVAN KALABURAGI

POLICE BHAVAN KALABURAGI

03 August 2012

GULBARGA DIST REPORTED CRIME

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ. ಶಿವಕುಮಾರ ತಂದೆ ಗುರಪ್ಪಾ ಲಸ್ಕರ ಸಾ: ಮನೆ ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ  ರವರು ನ್ನ ಹೆಂಡತಿಯಾದ ಅನಿತಾ ಇವಳು ರಾಖಿ ಹುಣ್ಣಿಗೆ ಸಲುವಾಗಿ ತವರು ಮನೆ ಅಫಜಲಪೂರಕ್ಕೆ ಹೋಗಿದ್ದು, ನಾನು ಗೌಂಡಿ ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ಮನೆಗೆ ಬಂದು ಬಿಗ ಹಾಕಿಕೊಂಡು  ಅಣ್ಣತಮ್ಮಕಿಯ ಮನೆ ಶಾಂತಿಗೆ ಹೋಗಿರುತ್ತೆನೆ. ದಿನಾಂಕ;02-03/08/2012 ರಂದು ರಾತ್ರಿ ನಾವು ಮನೆಯಲ್ಲಿ ಇಲ್ಲದ  ವೇಳೆಯಲ್ಲಿ ಯಾರೋ ಕಳ್ಳರು  ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟಿದ್ದ  ಬಂಗಾರದ ಆಭರಣಗಳು ಮತ್ತು ನಗದು ಹಣ 2000/- ರೂಪಾಯಿಗಳು ಹೀಗೆ  ಒಟ್ಟು  ಅಂದಾಜು ಕಿಮ್ಮತ್ತು 60,000/- ರೂಪಾಯಿ ಬೆಲೆ ಬಾಳುವ  ಬಂಗಾರದ ಮತ್ತು ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.64/2012 ಕಲಂ. 457, 380  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIME

ಜಾತಿ ನಿಂದನೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :ಶ್ರೀ ಅಶೋಕ ತಂದೆ ಶಿವರಾಯ ಸಿಂಗ್ಗೆ ಸಾ|| ಮೊಘಾ (ಬಿ) ತಾ||ಆಳಂದ ರವರು ನಾನು ದಿನಾಂಕ:02/08/2012 ರಂದು ಮುಜಾಂನೆ 8:30 ಕ್ಕೆ ನಮ್ಮ  ಗ್ರಾಮದಲ್ಲಿರುವ ಸ್ಮಶಾನದಲ್ಲಿ ನನ್ನ ಮುತ್ತಜ್ಜನವರ ಸಮಾಧಿಗೆ ಹುಣ್ಣಿಮೆ ದಿನ ಇರುವದರಿಂದ ಪೂಜಾ ಸಲ್ಲಿಸಲು ಹೋಗಿದ್ದಾಗ, ಆ ಸಮಯದಲ್ಲಿ ನಮ್ಮ ಗ್ರಾಮದ ಚಾಂದಸಾಬ ತಂದೆ ಮೈಹಿಬೂಬಸಾಬ ಮುಜಾವರ, ಅಜಮುದ್ದಿನ್ ತಂದೆ ಮೈಹಿಬೂಬಸಾಬ ಮುಜಾವರ,ಗಪುರಸಾಬ ತಂದೆ ಮೈಹಿಬೂಬಸಾಬ ಮುಜಾವರ,ಮಕಬುಲಸಾಬ ತಂದೆ ಮೈಹಿಬೂಬಸಾಬ ಮುಜಾವರ, ಮನಸೂರ ತಂದೆ ಅಜಮುದ್ದಿನ್ ಮುಜಾವರ, ಶೌಕತಲಿ ತಂದೆ ಅಜಮುದ್ದಿನ್ ಮುಜಾವರ ಹಾಗೂ ಇತರರು ಕೊಡಿಕೊಂಡು ಜಾತಿ ನಿಂದನೆ ಮಾಡಿ ಚಾಂದಸಾಬ ಮುಜಾವರ ಇತನು ನನ್ನ ಕಪಾಳಕ್ಕೆ ಹೊಡೆದನ್ನು ಅಜಮುದ್ದಿನ ಮತ್ತು ಇತರರು ಕೂಡಿಕೊಂಡು ನನ್ನ ಕೈಯಲ್ಲಿದ ಪೂಜಾ ಸಾಮಾನುಗಳನ್ನು ಚೆಲ್ಲಾಪೀಲಿಯಾಗಿ ಹಾರು ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂ:41/2012ಕಲಂ 143,147,323,504,506 ಸಂಗಡ 149 ಐ.ಪಿ.ಸಿ ಮತ್ತು 3(1) (10) ಎಸ್.ಸಿ ಮತ್ತು ಎಸ್.ಟಿ ಪಿ.ಎ ಆಕ್ಟ್ 1989 ನೇದ್ದರ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.   

02 August 2012

GULBAARGA DIST REPORTED CRIMES


ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ಶ್ರೀ ಪ್ರಭಾಕರ ತಂದೆ ವಿಠಲರಾವ ನಾಯಕ ಸಾ|| ಕೋಬ್ರಾ ಕಾಲನಿ ಹೀರಾಪೂರರವರು  ದಿನಾಂಕ: 01/08/2012 ರಂದು ಮುಂಜಾನೆ  10:05 ಎಎಮ ದಿಂದ 10:45 ಎಎಮ ಮಧ್ಯದಲ್ಲಿ  ಕುಮಾರಿ ಪುಷ್ಪಾ ತಂದೆ ವಿಠಲರಾವ ನಾಯಕ ವ: 25 ವರ್ಷ ಜಾ: ಬ್ರಾಹ್ಮಣ ಸಾ: ಕೋಬ್ರಾ ಕಾಲನಿ ರವರು ಹೀರಾಪೂರ ತಾ: ಜಿ: ಗುಲಬರ್ಗಾ ಮೃತಳು  ತಾನು ಹೋದ ವರ್ಷ 1 ಲಕ್ಷ ರೂಪಾಯಗಳು ಕೊಟ್ಟು ಬಿ.ಎಸಿ ನರ್ಸಿಂಗ ಕೋರ್ಸ ಮಾಡಿದ್ದು ಹಾಗು ತಾನು ಹೊರದೇಶಕ್ಕೆ ಹೋಗುವ ಕುರಿತು 1 ಲಕ್ಷ ರೂಪಾಯಿಗಳು ಅವಶ್ಯಕತೆ ಇದ್ದ ಕಾರಣ ಅದನ್ನು ಹೇಗೆ ಜೋಡಿಸಬೇಕು ಮತ್ತು ಅದರಿಂದ ತನ್ನ ಕುಟುಂಬಕ್ಕೆ ಆರ್ಥಿಕ ಬಾರ ಹೆಚ್ಚಾಗಬಹುದು ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತಾ  ಶ್ರೀ ಪ್ರಭಾಕರ ತಂದೆ ವಿಠಲರಾವ ನಾಯಕ ಸಾ|| ಕೋಬ್ರಾ ಕಾಲನಿ ಹೀರಾಪೂರರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.ಡಿ.ಅರ್. ನಂ: 21/2012 ಕಲಂ 174 ಸಿಅರ.ಪಿಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ  
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಪೀರಪ್ಪ ತಂದೆ ರಾಣಪ್ಪ ಕಡೋಳ್ಳಿ ಉ: ಚಾಲಕ ಕಮ್‌ ನಿರ್ವಾಹಕ ಸಾ: ಚಿಂಚನಸೂರ ರವರು ನಾನು ಮತ್ತು ವಿವೇಕಾನಂದ ಕೂಡಿಕೊಂಡು ದಿನಾಂಕ:01-08-2012 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಕಲ್ಲಹಂಗರಗಾ ಗ್ರಾಮದ ಸರಕಾರಿ ಶಾಲೆಯ ಮುಂದಿನ ಬ್ರೀಡ್ಜಿನ ಮೇಲೆ ಕೆಎ 32 ವಾಯ್ -3697 ಮೋಟಾರ ಸೈಕಲ ಮೇಲೆ ಹೋಗುತ್ತಿರುವಾಗ ಬ್ರೀಡ್ಜಿನ ಮೇಲೆ ಎಮ್ಮೆಗಳು ಹೋಗುತ್ತಿದ್ದು. ಒಮ್ಮೆಲೆ ಕಟ ಮಾಡಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬಾರಿ ರಕ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 248/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.