POLICE BHAVAN KALABURAGI

POLICE BHAVAN KALABURAGI

03 August 2012

GULBARGA DIST REPORTED CRIME

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ. ಶಿವಕುಮಾರ ತಂದೆ ಗುರಪ್ಪಾ ಲಸ್ಕರ ಸಾ: ಮನೆ ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ  ರವರು ನ್ನ ಹೆಂಡತಿಯಾದ ಅನಿತಾ ಇವಳು ರಾಖಿ ಹುಣ್ಣಿಗೆ ಸಲುವಾಗಿ ತವರು ಮನೆ ಅಫಜಲಪೂರಕ್ಕೆ ಹೋಗಿದ್ದು, ನಾನು ಗೌಂಡಿ ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ಮನೆಗೆ ಬಂದು ಬಿಗ ಹಾಕಿಕೊಂಡು  ಅಣ್ಣತಮ್ಮಕಿಯ ಮನೆ ಶಾಂತಿಗೆ ಹೋಗಿರುತ್ತೆನೆ. ದಿನಾಂಕ;02-03/08/2012 ರಂದು ರಾತ್ರಿ ನಾವು ಮನೆಯಲ್ಲಿ ಇಲ್ಲದ  ವೇಳೆಯಲ್ಲಿ ಯಾರೋ ಕಳ್ಳರು  ಮನೆಯ ಬಾಗಿಲು ಮುರಿದು ಅತಿಕ್ರಮ ಪ್ರವೇಶ ಮಾಡಿ ಅಲಮಾರಿಯಲ್ಲಿಟ್ಟಿದ್ದ  ಬಂಗಾರದ ಆಭರಣಗಳು ಮತ್ತು ನಗದು ಹಣ 2000/- ರೂಪಾಯಿಗಳು ಹೀಗೆ  ಒಟ್ಟು  ಅಂದಾಜು ಕಿಮ್ಮತ್ತು 60,000/- ರೂಪಾಯಿ ಬೆಲೆ ಬಾಳುವ  ಬಂಗಾರದ ಮತ್ತು ಬೆಳ್ಳಿ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.64/2012 ಕಲಂ. 457, 380  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: