POLICE BHAVAN KALABURAGI

POLICE BHAVAN KALABURAGI

21 November 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಚೌಕ ಠಾಣೆ : ಶ್ರೀ ಆಕಾಶ ತಂದೆ ನಾಗಪ್ಪಾ ಧಮ್ಮೂರಕರ್ ಸಾಃ ಬೆಳಕೋಟಾ (ಆರ್.ಸಿ) ಕಮಲಾಪೂರ ತಾಃಜಿಃ ಕಲಬುರಗಿ ಇವರ ಗೆಳೆಯ ಜಗದೀಶ ತಂದೆ ಪ್ರಕಾಶ ಕುಲಕರ್ಣಿ ಇಬ್ಬರು ಮನೆಯಲ್ಲಿ ದಿನಾಂಕ 18.11.2017 ರಂದು ಶನಿವಾರ ರಾತ್ರಿ ಸುಮಾರು 11.00 ಗಂಟೆ ಸುಮಾರಿಗೆಗೆ ಮಲಗಿಕೊಂಡ ವೇಳೆಯಲ್ಲಿ ಬೆಳಕೋಟಾ ಗ್ರಾಮದವರೆ ಆದ ವಿವೇಕ ಪಾಟೀಲ್ ಅವರು ನನ್ನ ಗೆಳೆಯ ಜಗದೀಶ ಈತನಿಗೆ ಫೋನ ಮಾಡಿದನುನಿಮ್ಮ ಜೊತೆ 02 ನಿಮಿಷ ಮಾತಾಡುವುದಿದೆ ಎಂದರು. ಆವಾಗ ನನ್ನ ಗೆಳೆಯ ಜಗದೀಶ ಇವರು 'ನಾವು ಬೇಳಿಗ್ಗೆ ಮಾತಾಡೋಣಾ ಅಂತಾಹೇಳಿದರು. ಇದಾದ ಸ್ವಲ್ಪ ಸಮಯದ ನಂತರ 15-20 ನಿಮಿಷ ನಂತರ ಅವರೆ ನಮ್ಮ ರೂಂಗೆ ಬಂದರು. 'ನಮಗೆ ನೀವು ಬೈದಿರುವಿರಿ' ಅಂತಾ ಅಂದಾಗ, ನಾವು ಬೈದಿಲ್ಲಾ ಅಂತಾ ಹೇಳಿದೆವು. ಆವಾಗ ಅವರು ನಮ್ಮ ಹತ್ತೀರ ಸಾಕ್ಷಿಗಳು ಇವೆ ಅಂತಾ ಹೇಳಿ ನಮಗೆ ಒತ್ತಾಯಪೂರ್ವಕ ನಮ್ಮ ಮನೆಯಿಂದ ಹಳೆ ಬೇಳಕೋಟ ರೋಡಿಗೆ ರೇಲ್ವೆ ಬ್ರೀಜ್ ಹತ್ತೀರ ಕರೆದುಕೊಂಡು ಬಂದು ಆಮೇಲೆ ವಿವೇಕ ಪಾಟೀಲ ಈತನು ' ಆಕಾಶ ನಿನ್ನವನ ತುಲ್ ಬೋಸಡಿ ಮಗನೆ' ಬೈದು ಹಾಗೆ ಮುಖದ ಮೇಲೆ ನನಗೆ ಹೊಡೆದರು. ಆಮೇಲೆ ನನ್ನ ಗೆಳೆಯ ಜಗದೀಶ ಬಿಡಿಸಲು ಬಂದಾಗ ಅವನಿಗೂ ಹೊಡೆಯಲು ಶುರು ಮಾಡಿದರು. ನನಗೆ ಇಬ್ಬರು ಮೂರು ಜನ ಹಿಡಿದಿದ್ದರು. ಅವನಿಗೆ ಬಿರ್ ಬಾಟಲಿಯಿಂದ ಹೊಡೆದರು. ಅವನಿಗೆ ವಿವೇಕ ಪಾಟೀಲ್ ಹಾಗೂ ಅವನ ಜೊತೆಗೆ ಇದ್ದವರು ಮುಖದ ಮೇಲೆ ಹೊಡೆದರು. ನನಗೆ 'ನಿನು ಕೀಳು ಜ್ಯಾತಿಯವ ಗೌಡ್ರ ಸಮನಾ ಎನು' ಎಂದು ಬೈದ್ರು.. 'ನೀವು ಬೇಳಿಗ್ಗೆ ಹಾಕಿದ ಅಂಗಿ ರಾತ್ರಿ ಒಗೆದು ಹಾಕುತ್ತೀರಿ' ನಾವು ಗೌಡ್ರು ಅಂದ್ರೆ ನಮ್ಮ ಹಾಗೆ ಇರುತ್ತಾರೆ ಅಂತಾ ಬೈದು ಇಬ್ಬರಿಗೂ ಹೊಡೆದು ಕೂಡಿಸಿದರು. ನಾವು ಸಮಯ ನೋಡಿ ಅವರಿಗೆ ಸಿಗಲಾರದೆ ಮನೆಗೆ ಬಂದು ಸೇರಿದೇವು. ಮತ್ತೆ ಅವರು ನಮಗೆ ಹುಡುಕುತ್ತಾ ಉರೋಳಗೆ ಬಂದ್ರು, ನಾವು ಅವರಿಗೆ ಸಿಗಲಿಲ್ಲಾ ಅವರು ಹುಡುಕಾಡುತ್ತಾ ಹೋದರು. ನಂತರ ನಾವು ಮನೆಗೆ ಬಂದು ಮಲಗಿದೆವು. ದಿಃ 19.11.2017 ರಂದು ಬೇಳಿಗ್ಗೆ 8.30 ಎದ್ದು ಆಸ್ಪತ್ರೆಗೆ ಬರಲು 120 ಗಂಟೆಗೆ ಊರಿಂದ ಕಲಬುರ್ಗಿಗೆ ಬರಲು ರಡಿಯಾಗಿದ್ದೇವು. ನಾವು ಕಲಬುರ್ಗಿಗೆ ದಿಃ 19.11.2017 ರಂದು ಅಂದಾಜು 3.00 ಪಿ.ಎಂಕ್ಕೆ ಬಂದು ಜಗದೀಶ ಅವರ ಅತ್ತೇಯ ಮನೆಗೆ ಹೋಗುವ ಕುರಿತು ಲಂಗೋಟಿಫೀರ ದರ್ಗಾ ಹತ್ತೀರ 03 ಬೈಕಗಳು ಬಂದವು. ಒಂದು ಬೈಕ್ ನಮ್ಮ ಗಾಡಿಗೆ ಅಡ್ಡ ಹಚ್ಚಿದರು. ಯಾರು ಅಂತಾ ಕೇಳುವ ಸಮಯದಲ್ಲಿ ಇನ್ನು 02 ಬೈಕ ಮೇಲಿದ್ದ ಜನರು ಕೆಳಗಿಳಿದು ಜಗದೀಶಗೆ ಎಳೆದು ಹೊಡೆಯಲು ಶುರು ಮಾಡಿದರು. ಆವಾಗ ಜಗದೀಶಗೆ ತೆಲೆಗೆ ರಾಡದಿಂದ ಹೊಡೆದರು. ಅವನು ಬೈಕನಿಂದ ಕೆಳಗೆ  ಬಿದ್ದಿನು. ಆವಾಗ ನನಗೂ ತೆಲೆಗೆ ಹೊಡೆದರು. ಮತ್ತೆ ಅವರು ' ವಿವೇಕ ಗೌಡ್ರಿಗೆ ಎದುರಾಗಿ ಬದುಕುತ್ತೀರಿ ಎನು' ಅಂತಾ ಅವಾಚ್ಯ ಶಬ್ದಗಳಿಂದ ಬೈದರು. ಜೀವಂತ ಇರಬೇಕೆಂದರೆ ಸುಮ್ನೆ ಇರಬೇಕು ಅಂತಾ ಹೇಳಿದರು. ನಂತರ ಅವರು ಅಲ್ಲಿಂದ ಹೋದರು. ನಂತರ ನಾನು ನನ್ನ ಗೆಳೆಯನಿಗೆ ಫೋನ ಮಾಡಿದೆ ಅವನು ಬಂದನು ಅವನು ಆಸ್ಪತ್ರೆಗೆ ಸೇರಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಟರ ಬಡ್ಡಿ ವ್ಯವಾಹರ ಮಾಡುತ್ತಿದ್ದವನ ವಿರುದ್ಧ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 20.11.2017 ರಂದು ಅಂಬರೀಶ @ ಅಂಬು ತಂದೆ ರಾಯಪ್ಪ ಮಸ್ಕಿ ಸಾ: ಯಲ್ಲಮನ ಗುಡಿ ಹತ್ತಿರ ಗಂಗಾ ನಗರ ಬ್ರಹ್ಮಪೂರ ಕಲಬುರಗಿ ಇತನು ಸರಕಾರ ದಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಹಣಕಾಸಿನ ವ್ಯವಹಾರ ಮಾಡುತ್ತಿದ್ದು ಸದರಿಯವನು ಸರಕಾರ ಮತ್ತು ರಿಜರ್ವ ಬ್ಯಾಂಕ ನಿಗದಿ ಮಾಡಿದ ಬಡ್ಡಿ ದರಕಿಂತಲು ಹೆಚ್ಚಿನ ಬಡ್ಡಿದರಲ್ಲಿ ಮೀಟರ ಬಡ್ಡಿ ವ್ಯವಹಾರ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದಿದ್ದು. ಸದರಿಯವನ ಮನೆ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳಲು ಮಾನ್ಯ ಸಹಾಯಕ ಅಧಿಕ್ಷಕರು (ಎ) ಉಪ ವಿಭಾಗ ಕಲಬುರಗಿ ರವರು ಪರವಾನಿಗೆ ನೀಡಿದ್ದು ಅದರಂತೆ ಮಾನ್ಯ ಎ.ಎಸ್.ಪಿ. ಸಾಹೇಬರು (ಎ) ಉಪ ವಿಭಾಗ ಕಲಬುರಗಿ ಇವರ ಮಾರ್ಗದರ್ಶನದಲ್ಲಿ, ಪ[ಇ.ಎಸ್.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಗಂಗಾ ನಗರದಲ್ಲಿರುವ ಅಂಬರೀಶ ತಂದೆ ರಾಯಪ್ಪ ಮಸ್ಕಿ ಇತನ ಮನೆಯ ಮೇಲೆ ಮಧ್ಯಾನ ದಾಳಿ ಮಾಡಿದ್ದು ಮನೆಯಲ್ಲಿ ಅಂಬರೀಶ ಇತನು ಹಾಜರ ಇದ್ದಿರುವದಿಲ್ಲ ನಂತರ ಸದರಿಯವನ ಮನೆಯನ್ನು ಪರಿಶೀಲಿಸಿ ನೋಡಲು ಮನೆಯಲ್ಲಿ ಲೆಕ್ಕ ಪತ್ರ ಬರೆದ ಲಕ್ಷ್ಮಿ ದೇವರ ಭಾವ ಚಿತ್ರ ಉಳ್ಳ 3 ನೋಟ ಪುಸ್ತಕಗಳು ದೊರೆತಿದ್ದು ಮತ್ತು ನಗದು ಹಣ 80,550/- ರೂ (ಎಂಬತ್ತು ಸಾವೀರ ಐದು ನೂರಾ ಐವತ್ತು ರೂಪಾಯಿ) ದೊರೆತಿದ್ದು ಸದರಿ ಹಣದ ಬಗ್ಗೆ ಮನೆಯಲ್ಲಿದ್ದು ಅಂಬರೇಶನ ಹೆಂಡತಿಯಾದ ಗೀತಾ ಇವಳಿಗೆ ವಿಚಾರಿಸಲು ಸದರಿಯವಳು ಹಣದ ಬಗ್ಗೆ ಯಾವುದೆ ಮಾಹಿತಿಯನ್ನು ನೀಡಿರುವದಿಲ್ಲ. ಸದರಿ ಹಣ ಮತ್ತು ನೋಟ ಪುಸ್ತಕಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಜಪ್ತಿ ಮಾಡಿದ ಮುದ್ದೆ ಮಾಲಿನೊಂದಿಗೆ ಠಾಣೆಗೆ ಹಾಜರಾಗಿದ್ದು ಸದರಿ ಅಂಬರೀಶ ತಂದೆ ರಾಯಪ್ಪ ಮಸ್ಕಿ ಇತನ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

19 November 2017

KALABURAGI DISTRICT REPORTED CRIMES

ಕೊಲೆ ಪ್ರಕರಣಗಳು :
ಅಫಜಲಪೂರ ಠಾಣೆ :  ಶ್ರೀಮತಿ ನರಸಮ್ಮ ಗಂಡ ದೇವಿಂದ್ರ @ ಪಾಂಡು ಭಜಂತ್ರಿ (ಪಂಡಿತ) ಸಾ||ಆಶ್ರಯ ಕಾಲೋನಿ ಡಿಗ್ರಿ ಕಾಲೇಜ ಹತ್ತಿರ  ಅಫಜಲಪೂರ ರವರ ದೊಡ್ಡಮಗನಾದ ಅರ್ಜುನನ ಕಾಲೇಜ ರಜೆ ಇದ್ದುದ್ದರಿಂದ ಅಫಜಲಪೂರಕ್ಕೆ ಬಂದಿದ್ದು ನನ್ನ ಎಲ್ಲಾ ಮಕ್ಕಳ ಆದಾಯ ಪ್ರಮಾಣ ಪತ್ರಗಳು ಕೊಟ್ಟು ಬರಲು ದಿನಾಂಕ 12/11/2017 ರಂದು ಸಾಯಂಕಾಲ 5.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಕಲಬುರಗಿಗೆ ಹೋಗಿ ರೈಲ್ವೆ ನಿಲ್ದಾಣದಲಿದ್ದಾಗ ನನ್ನ ಗಂಡನು ನನ್ನ ಮೊಬೈಲ ಪೋನಿಗೆ ಕರೆ ಮಾಡಿ ರೈಲು ಸಿಕ್ಕಿರುತ್ತದೆ ಹೇಗೆ ಅಂತ ಕೇಳಿದನು ಆಗ ನಾನು ರೈಲು ಸ್ಟೇಷನನಲ್ಲಿ  ಬರುತ್ತಿರುವ ಬಗ್ಗೆ ಧ್ವನಿ ವರ್ಧಕದಲ್ಲಿ ಸೂಚನೆ ನೀಡುತಿದ್ದಾರೆ ಸ್ವಲ್ಪ ಸಮಯದಲ್ಲಿ ರೈಲು ಬರಬಹುದು ಅಂತ ತಿಳಿಸಿದೆನು ನಂತರ ರಾತ್ರಿ 9.00 ಗಂಟೆಗೆ ಸೋಲಾಪೂರ-ಯಶ್ವಂತಪೂರ ರೈಲು ಬಂದ ನಂತರ ಸದರಿ ರೈಲಿನಲ್ಲಿ ಹತ್ತಿಕೊಂಡು ಬೆಂಗಳೂರಿಗೆ ಹೋಗಿರುತ್ತೇವೆ. ದಿನಾಂಕ 14/11/2017 ರಂದು ರಾತ್ರಿ ಯಶ್ವಂತಪೂರ- ಸೋಲಾಪೂರ ರೈಲಿನಲ್ಲಿ ಬೆಂಗಳೂರಿನಿಂದ ನಾನು ಮತ್ತು ನನ್ನ ದೊಡ್ಡಮಗ ಅರ್ಜುನ ಇಬ್ಬರು ಹೊರಟು ದಿನಾಂಕ 15/11/2017 ರಂದು ಬೆಳಿಗ್ಗೆ ಕಲಬುರಗಿಗೆ ಬಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ಮರಳಿ ಅಫಜಲಪೂರ ಪಟ್ಟಣದಲ್ಲಿರುವ ನಮ್ಮ ಮನೆಗೆ ಬಂದಿರುತ್ತೇವೆ. ನಮ್ಮ ಮನೆಗೆ ಹಾಕುವ ಕೀಲಿಗೆ ಎರಡು ಚಾವಿಗಳಿದ್ದು ಒಂದು ನನ್ನ ಹತ್ತಿರ ಇನೊಂದು ನನ್ನ ಗಂಡನ ಹತ್ತಿರ ಇರುತ್ತದೆ. ನಾನು ಬೆಂಗಳೂರಿನಿಂದ ನಮ್ಮ ಮನೆಗೆ ಬಂದಾಗ ನಮ್ಮ ಮನೆಯ ಬಾಗಿಲಿಗೆ  ಕೀಲಿ ಹಾಕಿದ್ದು ನಾನು ಮತ್ತು ನನ್ನ ಮಗ ಇಬ್ಬರು ಕೀಲಿ ತಗೆದು ಮನೆಯ ಒಳಗೆ ಹೋಗಿ ನೋಡಲು ಬಟ್ಟೆ ಹೊಲೆಯುವ ಮಶಿನ್ ಮೇಲೆ ನನ್ನ ಗಂಡನ ಒಂದು ಮೊಬೈಲ್ ಪೋನ್  ಮತ್ತು ಪರ್ಸ ಇತ್ತು. ಇನ್ನೊಂದು ಮೋಬೈಲ ಪೋನ ಇದ್ದಿರಲಿಲ್ಲ ನಂತರ ನಾನು ನನ್ನ ಗಂಡನಿಗಾಗಿ ಓಣಿಯಲ್ಲಿ ಮತ್ತು ನನ್ನ ಗಂಡನು ಕೆಲಸ ಮಾಡುವ ಹೊಟೇಲಗಳಲ್ಲಿ ವಿಚಾರಿಸಿದರು ನನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ ಎಲ್ಲಿಗಾದರು ಹೋಗಿರಬಹುದು ನಂತರ ತಾನೇ ಮರಳಿ ಮನೆಗೆ ಬರಬಹುದೆಂದು ಸುಮ್ಮನಿದ್ದೆನು.ದಿನಾಂಕ 18/11/2017 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಮ್ಮ ಓಣಿಯಲ್ಲಿ ಜನರು ಅಫಜಲಪೂರದಿಂದ ಘತ್ತರಗಾ ಕಡೆಗೆ ಹೋಗುವ ರೋಡಿನ ಹತ್ತಿರ ಇರುವ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬಿದ್ದಿದೆ ಅಂತ ಮಾತಾಡುವದನ್ನು ಕೇಳಿ ನಾನು ಮತ್ತು ನನ್ನ ಮಗ ಅರ್ಜುನ ಇಬ್ಬರು ಹೋಗಿ ನೋಡಲು ಕೊಲೆಯಾಗಿ ಬಿದ್ದಿರುವ ವ್ಯಕ್ತಿ ಶವ ಪೂರ್ತಿ ಕೊಳೆತಿದ್ದು ಶವದ ಮೇಲಿನ ಬಟ್ಟೆಗಳು ಮತ್ತು ಕೊಲೆಯಾದ ಸ್ಥಳದಲ್ಲಿ  ಬಿದ್ದಿರುವ ಚಪ್ಪಲಿಗಳು ಹಾಗು  ಪ್ಯಾಂಟಿಗೆ ಕಟ್ಟುವ ಬೆಲ್ಟನೇದ್ದವುಗಳನ್ನು ನೋಡಿ ಗುರುತಿಸಿದ್ದು ಕೊಲೆಯಾಗಿ ಬಿದ್ದ ವ್ಯಕ್ತಿ ನನ್ನ ಗಂಡ ದೇವಿಂದ್ರ@ ಪಾಂಡು ತಂದೆ ಶಂಕರ ಪಂಡಿತ(ಭಜಂತ್ರಿ) ಇರುತ್ತಾನೆ. ನನ್ನ ಗಂಡನಿಗೆ ದಿನಾಂಕ 12/11/2017 ರಿಂದ ದಿನಾಂಕ 18/11/2017 ರ ಬೆಳಗ್ಗಿನ 10.00 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹಮೀದ ಅಫ್ಜಲ್ ತಂದೆ ಅಲಿ ಅಫ್ಜಲ್ ಜಹಾಗೀರದಾರ ರವರ ಹೊಲದಲ್ಲಿನ ತೊಗರಿ ಬೆಳೆ ಇದ್ದ ಹೊಲದ ಬಾಂದಾರಿ ಮೇಲೆ ಇರುವ ಬೇವಿನ ಗಿಡದ ಪಕ್ಕದಲ್ಲಿ ತಲೆಯ ಮೇಲೆ ದೊಡ್ಡ ಬಂಡೆಗಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ಕೊಲೆ ಮಾಡಿದ ಸ್ಥಳದಿಂದ ಎಳೆದುಕೊಂಡು ಹೋಗಿ ತೊಗರಿ ಬೆಳೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲೋಗಿ ಠಾಣೆ : ಶ್ರೀ ಭಗವಂತ್ರಾಯ ತಂದೆ ಸಿದ್ದಪ್ಪ ಗುಜಗೊಂಡ ಸಾ : ನೆಲೋಗಿ ತಾ : ಜೇವರಗಿ ರವರು ದಿನಾಂಕ:18/11/2017 ರಂದು ಸಾಯಂಕಾಲ 4:30 ಘಂಟೆ ಸುಮಾರಿಗೆ ನಮ್ಮ ಹೊಲ ಸರ್ವೇ ನಂ: 165 ನೇದ್ದರಲ್ಲಿ ಕೆಲಸ ಮಾಡುತ್ತಿದ್ದ ಎಂ.ವೀರಾಂಜನೇಯ ಯವರು ನನಗೆ ತಿಳಿಸಿದ್ದೇನೆಂದರೆ. ನೇಲೋಗಿಯಿಂದ ಸೋನ್ನ ಕ್ರಾಸ ಕಡೆಗೆ ಹೋಗುವ ಮಾರ್ಗದಲ್ಲಿ ನಮ್ಮ ಹೋಲದ ಬದಿಗೆ ಯಾವದೋ ಒಂದು ಅಪರಿಚಿತ ಶವ ಕಂಡು ಬಂದಿರುತ್ತದೆ ಅಂತ ತಿಳಿಸಿದ ಮೇರೆಗೆ ನಾನು ಹೋಲಕ್ಕೆ ಹೋಗಿ ನೋಡಲಾಗಿ ಒಂದು ಅಪರಚಿತ ಶವ ಸುಮಾರು ಅಂದಾಜು 25-30 ವರ್ಷದ ಗಂಡು ವ್ಯೆಕ್ತಿಯ ಶವ ಇತ್ತು . ನಾನು ಹಾಗೂ ಅಲ್ಲಿ ಕೆಲಸ ಮಾಡುತ್ತಿರುವ ವ್ಯೆಕ್ತಿಗಳು ಕೂಡಿ ಶವವನ್ನು ನೋಡಲಾಗಿ ದೇಹದ ಮೇಲೆ ಸಣ್ಣ ಪುಟ್ಟಗಾಯಗಳು ಕಂಡು ಬಂದಿರುತ್ತದೆ. ಬಲಗಣ್ಣಿನ ಮೇಲೆ ಬಲವಾಗಿ ಹೋಡೆದು ಗಾಯ ಮಾಡಿದ್ದು ಕಂಡು ಬಂದಿರುತ್ತದೆ. ಯಾವದೋ ಒಂದು ವಸ್ತುವಿನಿಂದ ಕುತ್ತಿಗೆಗೆ ಬಿಗಿದ್ದಿದ್ದು ಕುತ್ತಿಗೆ ಮೇಲೆ ಕಂದು ಬಣ್ಣದ ಗುರುತು ಕಂಡು ಬಂದಿರುತ್ತದೆ, ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಹಾಗೂ ಕಂದುಗಟ್ಟಿದ ಗಾಯಗಳು ಕಂಡು ಬಂದಿರುತ್ತದೆ, ಬಲ ಭುಜದ ಮೇಲೆ ಸೂರ್ಯನ ಆಕಾರಮಚ್ಚೆ ಗುರುತು ಇದ್ದು ಮದ್ಯದಲ್ಲಿ ಓಂ ಅಂತ ಹಣಚೆ ಬಟ್ಟು ಹಾಕಿದ್ದು ಇರುತ್ತದೆ. ಬಲಗೈ ಮೇಲೆ ಬಿರಾದಾರ ಅಂತ ಇಂಗ್ಲೀಷನಲ್ಲಿ ಹಣಚೆ ಬೋಟ್ಟು ಹಾಕಿದ್ದು ಅದೆ. ಎಡ ಭೂಜದ ಮೇಲೆ ಓಂ ಅದರ ಮೇಲೆ ಡಮರುಗದ ಹಣಚೆ ಬೋಟ್ಟು ಹಾಕಿದ್ದು ಇರುತ್ತದೆ. ಮೈಮೇಲೆ ಹಳದಿ ಬಣ್ಣದ ಟೀ ಶರ್ಟ ಹಾಗೂ ಭೂದಿ ಬಣ್ಣದ 1.4 ಭೋರ್ಮಡಾ ಧರಸಿದ್ದು ಇರುತ್ತದೆ,  ಮೃತ ದೇಹವನ್ನು ನೋಡಿದವರು ಯಾರೂ ಕೂಡಾ ಶವವನ್ನು ಗುರುತಿಸಿರುವದಿಲ್ಲಾ. ಯಾರೋ ದುಷ್ಕರ್ಮಿಗಳು ಯಾವದೋ ದುರುದ್ವೇಶದಿಂದ ಕೋಲೆ ಮಾಡಿ ಸಾಕ್ಷಿ ನಾಶ ಮಾಡುವ ಸಲುವಾಗಿ ಈ ಸ್ಥಳದಲ್ಲಿ ಮೃತ ದೇಹವನ್ನು ಎಸೆದು ಹೋಗಿರುತ್ತಾರೆ.ಸದರಿ ಘಟನೆಯು ದಿನಾಂಕ:18/11/2017 ಮದ್ಯ ರಾತ್ರಿಯಿಂದ ಇಲ್ಲಿಯವರೆಗೆ ಜರಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಪ್ರಭಾವತಿ ಗಂಡ ಶಂಕರ ಕಜಾಳೆ ಸಾ : ಪಡಸಾವಳಿ ತಾ : ಆಳಂದ ರವರ ಗಂಡ ಶಂಕರ ತಂದೆ ಬಾಬು ಕಾಜಳೆ ಇವರು ಇಂದು ದಿನಾಂಕ 18/11/2017 ರಂದು ಬೆಳಿಗ್ಗೆ ಉಮರ್ಗಾ ತಾಲೂಕಿನ ಸಾವಳೇಶ್ವರ್ ಗ್ರಾಮದಲ್ಲಿರುವ ಅಕ್ಕಳಾದ ಸುಭಾಬಾಯಿ ಹತ್ತಿರ ಹೋಗಿ ಬರುತ್ತೆನೆ ಅಂತಾ ಹೇಳಿ ನಮ್ಮ ಮೋಟಾರ ಸೈಕಲ್ ನಂಬರ ಕೆಎ 32 ಇಜಿ 2069 ನೆದ್ದರ ಮೇಲೆ ಕುಳಿತು ಚಾಲು ಮಾಡಿಕೊಂಡು ಮನೆಯಿಂದ ಹೋದರು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ನಮ್ಮ ಅಳಿಯ ಶ್ರೀಶೈಲ್ ಘಾಳೆ ಇವರು ಬಂದು ನನಗೆ ವಿಷಯ ತಿಳಿಸಿದ್ದೆನೆಂದರೆ ತಡೋಳಾ ಗ್ರಾಮದ ಪರಿಚಯದ ಬಾಬುರಾವ ತಂದೆ ಉದ್ದರವರಾವ ಪಾಟೀಲ್ ಇವರು ನನಗೆ ಫೋನ್ ಮಾಡಿ ಮಾಮನಾದ ಶಂಕರ ಕಾಜಳೆ ಇವರು ಮೋಟಾರ ಸೈಕಲ್ ಮೇಲೆ ತಡೋಲಾ ಗ್ರಾಮದ ಸರಕಾರಿ ಪ್ರೌಢ ಶಾಲೆ ಹತ್ತಿರ ರೋಡಿನಲ್ಲಿ ಅವರ ಎದುರುಗಡೆಯಿಂದ ಖಜೂರಿ ಬಾರಡರ ಕಡೆಯಿಂದ ಒಂದು ಮೋಟಾರ ಸೈಕಲ್ ನಂ ಎಮ್‌ಹೆಚ್‌ 06 ಎಜೆ 4269 ನೇದ್ದರ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಮಾಮಾನ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ಕೆಳಗೆ ಬಿದ್ದು ಮಾಮಾನ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ, ಡಿಕ್ಕಿ ಪಡಿಸಿದವನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಡಿಕ್ಕಿಪಡಿಸಿದವನ ಹೆಸರು ವಿಚಾರಿಸಲಾಗಿ ನಾರಾಯಣ ತಂದೆ ರಾಮ ವಾಗಮೋಡೆ ಸಾ : ಕುನ್ನಳ್ಳಿ ತಾ : ಉಮರಗಾ ಜಿ : ಉಸ್ಮಾನಾಬಾದ ಅಂತಾ ತಿಳಿದು ಬಂದಿರುತ್ತದೆ, ಅಂತಾ ತಿಳಿಸಿದ್ದು ಆಗ ನಾನು ಗಾಬರಿಯಾಗಿ ನಮ್ಮ ಅಳಿಯ ಶ್ರೀಶೈಲ್ ಘಾಳೆ ಹಾಗೂ ನಮ್ಮೂರಿನ ಮಹಿಬೂಬ ಗುಂಜೋಟಿ, ಮತ್ತು ಇಮಾಮ ಶೇಕ್, ಹಾಗೂ ಇತರರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಅಪಘಾತ ನಡೆದ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ಗಂಡನಿಗೆ ಹಣೆಗೆ ತಲೆಗೆ ಗದ್ದಕ್ಕೆ ಮತ್ತು ಎಡಗೈ ಮುಂಗೈಗೆ ಹಾಗೂ ಇತರ ಕಡೆಗೆ ಭಾರಿ ರಕ್ತ ಮತ್ತು  ಗುಪ್ತ ಗಾಯಗಳಾಗಿದ್ದು ನಾವೆಲ್ಲರೂ ಕೂಡಿ ನನ್ನ ಗಂಡನಿಗೆ ಎತ್ತಿ ನಮ್ಮ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಉಮರ್ಗಾ ದವಾಖಾನೆಗೆ ತೆಗೆದುಕೊಂಡು ಹೋಗುತ್ತಿರುವಾಗ ಉಮರ್ಗಾ ಹತ್ತಿರ ನನ್ನ ಗಂಡ ಶಂಕರ ಕಾಜಳೆ ಇವರು ಅಪಘಾತದಲ್ಲಿ ಹೊಂದಿದ ಗಾಯದಿಂದ ಮೃತಪಟ್ಟಿದ್ದು ಇರುತ್ತದೆ,  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಜೇವರಗಿ ಠಾಣೆ :  ಶ್ರೀ ಸಿದ್ದನಗೌಡ ತಂದೆ ಬಸವಂತರಾಯ ಮಾಲಿ ಪಾಟೀಲ ಸಾ|| ಚನ್ನೂರ ಹಾ:ವ: ಓಂ ನಗರ ಜೇವರಗಿ ಇವರು ಠಾಣೆಗೆ ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ನನ್ನ ಹೆಸರಿನಿಂದ ಬ್ಯಾಂಕ ಖಾತೆ ನಂ 62291009973 ನೇದ್ದು ಇರುತ್ತದೆ.  ನಾನು ಇಂದು ದಿನಾಂಕ 18.11.2017 ರಂದು ಮುಂಜಾನೆ ಮನೆಯಿಂದ ಹಣ ಡ್ರಾಮಾಡಿಕೊಂಡು ಬರಲು ಬ್ಯಾಂಕಿಗೆ  ಬಂದು ಜೇವರಗಿ ಎಸ್.ಬಿ.ಹೆಚ್ (ಎಸ್.ಬಿ.ಐ) ಬ್ಯಾಂಕನಲ್ಲಿ ಮೇಲೆ ನಮೂದಿಸಿದ ನನ್ನ ಖಾತೆಯಿಂದ ಒಟ್ಟು 80,000/- ( ಎಂಭತ್ತು ಸಾವಿರ ರೂಪಾಯಿ) ಹಣ ಡ್ರಾ ಮಾಡಿಕೊಂಡು ಹಣವನ್ನು ಒಂದು ಪ್ಲಾಸ್ಟೀಕ್ ಕೈ ಚೀಲದಲ್ಲಿ ಹಾಕಿಕೊಂಡು ನನ್ನ ಕೈಯಲ್ಲಿ ಹಿಡಿದುಕೊಂಡು ಬ್ಯಾಂಕಿನಿಂದ ಹೊರಗೆ ಬಂದು,  ಮನೆಗೆ ಹೋಗಲು ನಡೆದುಕೊಂಡು ರೊಡಿನಲ್ಲಿ ಬರುತ್ತಿದ್ದೆನು, ಮುಂಜಾನೆ 11.45 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ ಹಳೆಯ ಬಿ.ಇ.ಓ ಕಚೇರಿಯ ಹತ್ತಿರ ರೋಡಿನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ನನ್ನ ಎದುರಿನಿಂದ ಒಂದು ಕಪ್ಪು ಬಣ್ಣದ ಅಪ್ಪಾಚಿ ಮೊಟಾರ್ ಸೈಕಲ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂದಾಜು 25-30 ವರ್ಷ ವಯಸ್ಸಿನವರು ಕುಳಿತುಕೊಂಡು ಬಂದು ನನ್ನ ಕೈಯಲ್ಲಿನ ಹಣ ಇದ್ದ ಪ್ಲಾಷ್ಟೀಕ ಕೈ ಚೀಲ ಹಣ ಸಮೇತ ಜಬರದಸ್ತಿಯಿಂದ ಕಸಿದುಕೊಂಡು ಹೋದರು, ನಾನು ಚಿರ್ಯಾಡುತ್ತಾ ಅವರ ಹಿಂದೆ ಬೇನ್ನು ಹತ್ತಿದ್ದರು ಅವರು ಸಿಕ್ಕಿರುವುದಿಲ್ಲಾ, ಅವರು ತಮ್ಮ ಮೊಟಾರ್ ಸೈಕಲನ್ನು ಜೊರಾಗಿ ನಡೆಯಿಸಿಕೊಂಡು ಹೋದರು ಮೊಟಾರ್ ಸೈಕಲ್ ನಂಬರ ಗುರುತು ಸಿಕ್ಕಿರುವುದಿಲ್ಲಾ. &  ಮೊಟಾರ್ ಸೈಕಲ ನಡೆಯಿಸುತ್ತಿದ್ದವನ ಬಟ್ಟೆಗಳು ಸರಿಯಾಗಿ ಕಂಡಿರುವುದಿಲ್ಲಾ ಅವನು ಕನ್ನಡಕ ಹಾಕಿಕೊಂಡಿದನು,  ಹಿಂದೆ ಕುಳಿತವನು ಬಿಳಿ ಬಣ್ಣದ ಪೂಲ್ ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು. ನಂತರ ನಾನು ನನ್ನ ಗೆಳೆಯರಾದ ನಾಡಗೌಡ ತಂದೆ ಅಪ್ಪಾಸಾಹೇಬಗೌಡ ಮಾಲಿ ಪಾಟೀಲ, ಭೀಮರಾಯ ತಂದೆ ಮಲ್ಲಪ್ಪ ಸೂರಪೂರ ಇವರನ್ನು ಬರಮಾಡಿಕೊಂಡು ಜೇವರಗಿ ಪಟ್ಟಣದಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 November 2017

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 17/11/2017 ರಂದು ಮುತ್ತಾಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ ಐ ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾರಿಯಲ್ಲಿ ಹೋಗುತ್ತಿರುವಾಗ ಅನುಸೂಬಾಯಿ ಇವರ ಹೊಲದ ಹತ್ತಿರ ರೋಡಿನಲ್ಲಿ ಮುತ್ತಾಗಾ ಕಡೆಯಿಂದ ಮರಳು ತುಂಬಿದ ನಂಬರ ಇಲ್ಲದ ಟ್ರಾಕ್ಟರ ಬರುತ್ತಿದ್ದು ಅದರ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ  ಟ್ರಾಕ್ಟರ ಪರೀಶಿಲಿಸಿ ನೋಡಲಾಗಿ ಅದು ಮಶಿ ಫರಗೂಷನ ಕಂಪನಿಯ ಟ್ರಾಕ್ಟರ ಇರುತ್ತದೆ. ಅದರಲ್ಲಿ ಮರಳು ತುಂಬಿದ್ದು ಮರಳು ತುಂಬಿದ ಟ್ರಾಕ್ಟರ ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದಿದ್ದು  ಟ್ರಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಟ್ರಾಕ್ಟರನಲ್ಲಿ ಮರಳು ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 17-11-2017 ರಂದು, ಸುಧಾರಿತ ಗಸ್ತು ಸಂ 26 ಉಡಚಣ ಗ್ರಾಮದ ಬೀಟ್ ಸಿಬ್ಬಂದಿಯಾದ ಪಂಡಿತ ಸಿಪಿಸಿ-1119 ರವರು ಮಾಹಿತಿ ತಿಳಿಸಿದ್ದೆನೆಂದರೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಣ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸವಣ್ಣ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಫೈಗಂಬರ ತಂದೆ ಶೇಖಬಾಬು ಮುಲ್ಲಾ ಸಾ||ಉಡಚಣ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2590/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಸ್ಲಾಂ ತಂದೆ ಅಬ್ದುಲರಸೀದ್ ಕಸಾಬ ಸಾ|| ಶಿವಪೂರಗಲ್ಲಿ ಹುಮನಾಬಾದ ಜಿ|| ಬಿದರ ಇವರು ಕುರಿ ವ್ಯಾಪಾರ ಮಾಡುತ್ತಿದ್ದು. ನಾವು ಕುರಿಗಳನ್ನು ವಿಜಯಪೂರ ಜಿಲ್ಲೆಯ ಆಲಮೇಲ್ ಸಂತೆಯಲ್ಲಿ ಖರೀದಿ ಮಾಡಿ ಹುಮನಾಬಾದಕ್ಕೆ ತಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿರುತ್ತೇವೆ. ದಿನಾಂಕ 17-11-2017 ರಂದು ಆಲಮೇಲ್ ಸಂತೆಯಲ್ಲಿ ಕುರಿಗಳನ್ನು ಖರಿದಿ ಮಾಡಿಕೊಂಡು ಬರಬೆಕೆಂದು ನಾನು ಮತ್ತು ನನ್ನ ಅಣ್ಣನಾದ ಅಲ್ತಾಫ ತಂದೆ ಅಬ್ದುಲರಸೀದ್ ಕಸಾಬ ಇಬ್ಬರು ಕೂಡಿ ನಿನ್ನ ದಿನಾಂಕ 16-11-2017 ರಂದು ರಾತ್ರಿ ಹುಮನಾಬಾದದಿಂದ  ಕಲಬುರಗಿಗೆ ಬಂದು, ಕಲಬುರಗಿಯಲ್ಲಿ ನಾವು ಪ್ರತಿ ಸಲ ಬಾಡಿಗೆ ತಗೆದುಕೊಂಡು ಹೊಗುವ ಅಬುಬಕರ್ ರವರ ಪಿಕಪ್ ನಂಬರ ಕೆಎ-32 ಬಿ-2528 ನೇದ್ದನ್ನು ಬಾಡಿಗೆ ತಗೆದುಕೊಂಡು, ಸದರಿ ಪಿಕಪ್ ವಾಹನದಲ್ಲಿ ನಾನು ಮತ್ತು ನನ್ನ ಅಣ್ಣ ಹಾಗೂ ಪೀಕಪ್ ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಮೂರು ಜನರು ಕೂಡಿ ಕಲಬುರಗಿಯಿಂದ ಅಫಜಲಪೂರ ಮಾರ್ಗವಾಗಿ ಆಲಮೇಲಕ್ಕೆ ಹೋರಟಿದ್ದು. ಸದರಿ ಪೀಕಪ ವಾಹನದಲ್ಲಿ ಮುಂದೆ ಕಿನ್ನರ ಸೈಡಿನಲ್ಲಿ ನನ್ನ ಅಣ್ಣ ಅಲ್ತಾಫ ಕುಳಿತಿದ್ದನು, ನಾನು ಅವನ ಪಕ್ಕದಲ್ಲಿ ಕುಳಿತಿದ್ದೆನು, ಮದ್ಯ ರಾತ್ರಿ 01:30 ಗಂಟೆ ಸುಮಾರಿಗೆ ಅಫಜಲಪೂರ ಇನ್ನು ಅಂದಾಜು 3-4 ಕೀ ಮಿ ದೂರವಿದ್ದಾಗ, ಸದರಿ ಪೀಕಪ್ ವಾಹನದ ಚಾಲಕ ತನ್ನ ಪಿಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ರೋಡಿನ ಪಕ್ಕದಲ್ಲಿ ನಿಂತಿದ್ದ ಕಬ್ಬು ತುಂಬಿದ ಲಾರಿಗೆ ಪೀಕಪನ ಎಡಭಾಗ ಡಿಕ್ಕಿ ಪಡಿಸಿದನು. ಸದರಿ ಡಿಕ್ಕಿಯಿಂದ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಸದರಿ ಘಟನೆಯಲ್ಲಿ ನನಗೂ ಸಹ ಮುಖಕ್ಕೆ ಗದ್ದಕ್ಕೆ ರಕ್ತಗಾಯಗಳು ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಘಟನೆ ಆದ ನಂತರ ಪೀಕಪ್ ವಾಹನದ ಚಾಲಕ ವಾಹನವನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೊಗಿರುತ್ತಾನೆ. ರೋಡಿನ ಸೈಡಿನಲ್ಲಿ ನಿಂತಿದ್ದ ಲಾರಿ ನಂಬರ ನೊಡಿದ್ದು ಅದರ ನಂಬರ ಎಮ್.ಹೆಚ್-31 ಎಪಿ-7402 ಇರುತ್ತದೆ. ಘಟನೆ ಆದ ಸ್ವಲ್ಪ ಸಮಯಕ್ಕೆ ರೋಡಿಗೆ ಹೋಗಿ ಬರುವ ವಾಹನದವರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಬಂದು ನನ್ನ ಅಣ್ಣನ ಶವವನ್ನು ಅಫಜಲಪೂರ ಸರ್ಕಾರಿ ಆಸ್ಪತ್ರೆ ಅಫಜಲಪೂರದ ಶವಗಾರದಲ್ಲಿ ಹಾಕಿ ನನಗೆ ಚಿಕಿತ್ಸೆ ಕೊಡಿಸಿರುತ್ತಾರೆ.ಪೀಕಪ್ದ ನಂಬರ ಕೆಎ-32 ಬಿ-2528 ನೇದ್ದರ ಚಾಲಕನಾದ ಸೈಯದ ಖಾಸಿಂ ಅಲಿ ತಂದೆ ಸೈಯದ್ ಹುಸೇನಸಾಬ ಸಾ|| ಜೋಶಿ ಗಲ್ಲಿ ಹುಮನಾಬಾದ ಜಿ|| ಬಿದರ ಈತನು ತನ್ನ ಪೀಕಪ್ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಾಲಾಯಿಸಿಕೊಂಡು ಹೋಗಿ, ರೋಡಿನ ಪಕ್ಕದಲ್ಲಿ ನಿಲ್ಲಿಸಿದ ಲಾರಿ ನಂಬರ ಎಮ್.ಹೆಚ್-31 ಎಪಿ-7402 ನೇದ್ದರ ಹಿಂದೆ ಡಿಕ್ಕಿ ಪಡಿಸಿದ್ದರಿಂದ, ನನ್ನ ಅಣ್ಣ ಅಲ್ತಾಫನ ತಲೆಗೆ ಹಾಗೂ ಕುತ್ತಿಗೆಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳು ಆಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ವೈಜನಾಥ ತಂದೆ ಭೂತಾಳಿಸಿದ್ದ ನರಸಕ್ಕಿ  ಸಾ|| ನೆಲೋಗಿ ರವರು ತಮ್ಮ ಮನೆಯ ಮುಂದೆ ಕಟ್ಟಿ ಕಟ್ಟಿದ್ದೇವೆ ನಮ್ಮತಾಯಿಯವರು ಮುಂಜಾನೆ ಎದ್ದು ಮನೆಯ ಕಸ ತಗೆಯುತ್ತಿರುವಾಗ ನಮ್ಮ ಮನೆಯ ಮುಂದೆ ಬಸಪ್ಪ ತಂದೆ ಭೀಮರಾಯ ಇವನು KA32EH-2959 ನೇದ್ದರ ಗಾಡಿ ತಗೆದುಕೊಂಡು ಬಂದು ಜೋರಾಗಿ ಅವಾಚ್ಯ ಶಬ್ದಗಳಿಂದ ಬೈವಾಗ ನಾನು ಮನೆಯಿಂದ ಹೋರಗೆ ಬಂದು ನಮ್ಮತಾಯಿಗೆ ಏಕೆ ಬೈಯುತ್ತಿ ಎಂದು ಕೇಳಿದಾಗ ಬಾಬು ತಂದೆ ಭೀಮರಾಯ ನರಸಕ್ಕಿ, ಬಸವರಾಜ ತಂದೆ ಭೀಮರಾಯ ನರಸಕ್ಕಿ ಇವರು ಅಲ್ಲೆ ಬಿದ್ದ ಬಡಿಗೆ ತಗೆದುಕೊಂಡು ನನ್ನ ತಲೆಗೆ ಮತ್ತು ಬೆನ್ನಿಗೆ ಹೋಡೆದು ರಕ್ತಗಾಯ ಮಾಡಿದ್ದಾರೆ ಮತ್ತು ಶರಣು ತಂದೆ ಭೀಮರಾಯ ನರಸಕ್ಕಿ, ಮಲ್ಲು ತಂದೆ ಭೀಮರಾಯ ನರಸಕ್ಕಿ, ಸಂಗಮ್ಮಾ ಗಂಡ ಸೋಮನಾಥ ಇವರೆಲ್ಲರೂ ಈ ಭೋಸಡಿ ಮಕ್ಕಳದು ಬಹಳ ಆಗಿದೆ ಇವರಿಗೆ ಖಲಾಸ ಮಾಡಿರಿ ಎಂದು ನನಗೆ ನನ್ನ ತಾಯಿಗೆ ಕಾಲಿನಿಂದ ಒದ್ದರು ಆಗ ಅಲ್ಲೇ ಇದ್ದ ಭೂತಣ್ಣ ತಂದೆ ಲಕ್ಕಣ್ಣ ಮುದ್ದಾ, ಭೀಮ ತಂದೆ ದೇವಪ್ಪ ನರಸಕ್ಕಿ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.