POLICE BHAVAN KALABURAGI

POLICE BHAVAN KALABURAGI

21 November 2017

KALABURAGI DISTRICT REPORTED CRIMES

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಚೌಕ ಠಾಣೆ : ಶ್ರೀ ಆಕಾಶ ತಂದೆ ನಾಗಪ್ಪಾ ಧಮ್ಮೂರಕರ್ ಸಾಃ ಬೆಳಕೋಟಾ (ಆರ್.ಸಿ) ಕಮಲಾಪೂರ ತಾಃಜಿಃ ಕಲಬುರಗಿ ಇವರ ಗೆಳೆಯ ಜಗದೀಶ ತಂದೆ ಪ್ರಕಾಶ ಕುಲಕರ್ಣಿ ಇಬ್ಬರು ಮನೆಯಲ್ಲಿ ದಿನಾಂಕ 18.11.2017 ರಂದು ಶನಿವಾರ ರಾತ್ರಿ ಸುಮಾರು 11.00 ಗಂಟೆ ಸುಮಾರಿಗೆಗೆ ಮಲಗಿಕೊಂಡ ವೇಳೆಯಲ್ಲಿ ಬೆಳಕೋಟಾ ಗ್ರಾಮದವರೆ ಆದ ವಿವೇಕ ಪಾಟೀಲ್ ಅವರು ನನ್ನ ಗೆಳೆಯ ಜಗದೀಶ ಈತನಿಗೆ ಫೋನ ಮಾಡಿದನುನಿಮ್ಮ ಜೊತೆ 02 ನಿಮಿಷ ಮಾತಾಡುವುದಿದೆ ಎಂದರು. ಆವಾಗ ನನ್ನ ಗೆಳೆಯ ಜಗದೀಶ ಇವರು 'ನಾವು ಬೇಳಿಗ್ಗೆ ಮಾತಾಡೋಣಾ ಅಂತಾಹೇಳಿದರು. ಇದಾದ ಸ್ವಲ್ಪ ಸಮಯದ ನಂತರ 15-20 ನಿಮಿಷ ನಂತರ ಅವರೆ ನಮ್ಮ ರೂಂಗೆ ಬಂದರು. 'ನಮಗೆ ನೀವು ಬೈದಿರುವಿರಿ' ಅಂತಾ ಅಂದಾಗ, ನಾವು ಬೈದಿಲ್ಲಾ ಅಂತಾ ಹೇಳಿದೆವು. ಆವಾಗ ಅವರು ನಮ್ಮ ಹತ್ತೀರ ಸಾಕ್ಷಿಗಳು ಇವೆ ಅಂತಾ ಹೇಳಿ ನಮಗೆ ಒತ್ತಾಯಪೂರ್ವಕ ನಮ್ಮ ಮನೆಯಿಂದ ಹಳೆ ಬೇಳಕೋಟ ರೋಡಿಗೆ ರೇಲ್ವೆ ಬ್ರೀಜ್ ಹತ್ತೀರ ಕರೆದುಕೊಂಡು ಬಂದು ಆಮೇಲೆ ವಿವೇಕ ಪಾಟೀಲ ಈತನು ' ಆಕಾಶ ನಿನ್ನವನ ತುಲ್ ಬೋಸಡಿ ಮಗನೆ' ಬೈದು ಹಾಗೆ ಮುಖದ ಮೇಲೆ ನನಗೆ ಹೊಡೆದರು. ಆಮೇಲೆ ನನ್ನ ಗೆಳೆಯ ಜಗದೀಶ ಬಿಡಿಸಲು ಬಂದಾಗ ಅವನಿಗೂ ಹೊಡೆಯಲು ಶುರು ಮಾಡಿದರು. ನನಗೆ ಇಬ್ಬರು ಮೂರು ಜನ ಹಿಡಿದಿದ್ದರು. ಅವನಿಗೆ ಬಿರ್ ಬಾಟಲಿಯಿಂದ ಹೊಡೆದರು. ಅವನಿಗೆ ವಿವೇಕ ಪಾಟೀಲ್ ಹಾಗೂ ಅವನ ಜೊತೆಗೆ ಇದ್ದವರು ಮುಖದ ಮೇಲೆ ಹೊಡೆದರು. ನನಗೆ 'ನಿನು ಕೀಳು ಜ್ಯಾತಿಯವ ಗೌಡ್ರ ಸಮನಾ ಎನು' ಎಂದು ಬೈದ್ರು.. 'ನೀವು ಬೇಳಿಗ್ಗೆ ಹಾಕಿದ ಅಂಗಿ ರಾತ್ರಿ ಒಗೆದು ಹಾಕುತ್ತೀರಿ' ನಾವು ಗೌಡ್ರು ಅಂದ್ರೆ ನಮ್ಮ ಹಾಗೆ ಇರುತ್ತಾರೆ ಅಂತಾ ಬೈದು ಇಬ್ಬರಿಗೂ ಹೊಡೆದು ಕೂಡಿಸಿದರು. ನಾವು ಸಮಯ ನೋಡಿ ಅವರಿಗೆ ಸಿಗಲಾರದೆ ಮನೆಗೆ ಬಂದು ಸೇರಿದೇವು. ಮತ್ತೆ ಅವರು ನಮಗೆ ಹುಡುಕುತ್ತಾ ಉರೋಳಗೆ ಬಂದ್ರು, ನಾವು ಅವರಿಗೆ ಸಿಗಲಿಲ್ಲಾ ಅವರು ಹುಡುಕಾಡುತ್ತಾ ಹೋದರು. ನಂತರ ನಾವು ಮನೆಗೆ ಬಂದು ಮಲಗಿದೆವು. ದಿಃ 19.11.2017 ರಂದು ಬೇಳಿಗ್ಗೆ 8.30 ಎದ್ದು ಆಸ್ಪತ್ರೆಗೆ ಬರಲು 120 ಗಂಟೆಗೆ ಊರಿಂದ ಕಲಬುರ್ಗಿಗೆ ಬರಲು ರಡಿಯಾಗಿದ್ದೇವು. ನಾವು ಕಲಬುರ್ಗಿಗೆ ದಿಃ 19.11.2017 ರಂದು ಅಂದಾಜು 3.00 ಪಿ.ಎಂಕ್ಕೆ ಬಂದು ಜಗದೀಶ ಅವರ ಅತ್ತೇಯ ಮನೆಗೆ ಹೋಗುವ ಕುರಿತು ಲಂಗೋಟಿಫೀರ ದರ್ಗಾ ಹತ್ತೀರ 03 ಬೈಕಗಳು ಬಂದವು. ಒಂದು ಬೈಕ್ ನಮ್ಮ ಗಾಡಿಗೆ ಅಡ್ಡ ಹಚ್ಚಿದರು. ಯಾರು ಅಂತಾ ಕೇಳುವ ಸಮಯದಲ್ಲಿ ಇನ್ನು 02 ಬೈಕ ಮೇಲಿದ್ದ ಜನರು ಕೆಳಗಿಳಿದು ಜಗದೀಶಗೆ ಎಳೆದು ಹೊಡೆಯಲು ಶುರು ಮಾಡಿದರು. ಆವಾಗ ಜಗದೀಶಗೆ ತೆಲೆಗೆ ರಾಡದಿಂದ ಹೊಡೆದರು. ಅವನು ಬೈಕನಿಂದ ಕೆಳಗೆ  ಬಿದ್ದಿನು. ಆವಾಗ ನನಗೂ ತೆಲೆಗೆ ಹೊಡೆದರು. ಮತ್ತೆ ಅವರು ' ವಿವೇಕ ಗೌಡ್ರಿಗೆ ಎದುರಾಗಿ ಬದುಕುತ್ತೀರಿ ಎನು' ಅಂತಾ ಅವಾಚ್ಯ ಶಬ್ದಗಳಿಂದ ಬೈದರು. ಜೀವಂತ ಇರಬೇಕೆಂದರೆ ಸುಮ್ನೆ ಇರಬೇಕು ಅಂತಾ ಹೇಳಿದರು. ನಂತರ ಅವರು ಅಲ್ಲಿಂದ ಹೋದರು. ನಂತರ ನಾನು ನನ್ನ ಗೆಳೆಯನಿಗೆ ಫೋನ ಮಾಡಿದೆ ಅವನು ಬಂದನು ಅವನು ಆಸ್ಪತ್ರೆಗೆ ಸೇರಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಟರ ಬಡ್ಡಿ ವ್ಯವಾಹರ ಮಾಡುತ್ತಿದ್ದವನ ವಿರುದ್ಧ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 20.11.2017 ರಂದು ಅಂಬರೀಶ @ ಅಂಬು ತಂದೆ ರಾಯಪ್ಪ ಮಸ್ಕಿ ಸಾ: ಯಲ್ಲಮನ ಗುಡಿ ಹತ್ತಿರ ಗಂಗಾ ನಗರ ಬ್ರಹ್ಮಪೂರ ಕಲಬುರಗಿ ಇತನು ಸರಕಾರ ದಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಹಣಕಾಸಿನ ವ್ಯವಹಾರ ಮಾಡುತ್ತಿದ್ದು ಸದರಿಯವನು ಸರಕಾರ ಮತ್ತು ರಿಜರ್ವ ಬ್ಯಾಂಕ ನಿಗದಿ ಮಾಡಿದ ಬಡ್ಡಿ ದರಕಿಂತಲು ಹೆಚ್ಚಿನ ಬಡ್ಡಿದರಲ್ಲಿ ಮೀಟರ ಬಡ್ಡಿ ವ್ಯವಹಾರ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದಿದ್ದು. ಸದರಿಯವನ ಮನೆ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳಲು ಮಾನ್ಯ ಸಹಾಯಕ ಅಧಿಕ್ಷಕರು (ಎ) ಉಪ ವಿಭಾಗ ಕಲಬುರಗಿ ರವರು ಪರವಾನಿಗೆ ನೀಡಿದ್ದು ಅದರಂತೆ ಮಾನ್ಯ ಎ.ಎಸ್.ಪಿ. ಸಾಹೇಬರು (ಎ) ಉಪ ವಿಭಾಗ ಕಲಬುರಗಿ ಇವರ ಮಾರ್ಗದರ್ಶನದಲ್ಲಿ, ಪ[ಇ.ಎಸ್.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಗಂಗಾ ನಗರದಲ್ಲಿರುವ ಅಂಬರೀಶ ತಂದೆ ರಾಯಪ್ಪ ಮಸ್ಕಿ ಇತನ ಮನೆಯ ಮೇಲೆ ಮಧ್ಯಾನ ದಾಳಿ ಮಾಡಿದ್ದು ಮನೆಯಲ್ಲಿ ಅಂಬರೀಶ ಇತನು ಹಾಜರ ಇದ್ದಿರುವದಿಲ್ಲ ನಂತರ ಸದರಿಯವನ ಮನೆಯನ್ನು ಪರಿಶೀಲಿಸಿ ನೋಡಲು ಮನೆಯಲ್ಲಿ ಲೆಕ್ಕ ಪತ್ರ ಬರೆದ ಲಕ್ಷ್ಮಿ ದೇವರ ಭಾವ ಚಿತ್ರ ಉಳ್ಳ 3 ನೋಟ ಪುಸ್ತಕಗಳು ದೊರೆತಿದ್ದು ಮತ್ತು ನಗದು ಹಣ 80,550/- ರೂ (ಎಂಬತ್ತು ಸಾವೀರ ಐದು ನೂರಾ ಐವತ್ತು ರೂಪಾಯಿ) ದೊರೆತಿದ್ದು ಸದರಿ ಹಣದ ಬಗ್ಗೆ ಮನೆಯಲ್ಲಿದ್ದು ಅಂಬರೇಶನ ಹೆಂಡತಿಯಾದ ಗೀತಾ ಇವಳಿಗೆ ವಿಚಾರಿಸಲು ಸದರಿಯವಳು ಹಣದ ಬಗ್ಗೆ ಯಾವುದೆ ಮಾಹಿತಿಯನ್ನು ನೀಡಿರುವದಿಲ್ಲ. ಸದರಿ ಹಣ ಮತ್ತು ನೋಟ ಪುಸ್ತಕಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಜಪ್ತಿ ಮಾಡಿದ ಮುದ್ದೆ ಮಾಲಿನೊಂದಿಗೆ ಠಾಣೆಗೆ ಹಾಜರಾಗಿದ್ದು ಸದರಿ ಅಂಬರೀಶ ತಂದೆ ರಾಯಪ್ಪ ಮಸ್ಕಿ ಇತನ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: