POLICE BHAVAN KALABURAGI

POLICE BHAVAN KALABURAGI

28 December 2012

RECRUITMENT OF CONSTABLES (GD) IN CAPFS AND RIFLEMAN (GD) IN ASSAM RIFLES-2013


:: ಪತ್ರಿಕಾ ಪ್ರಕಟಣೆ.::
ಸಿಬ್ಬಂದಿ ನೇಮಕಾತಿ ಅಯೋಗ
ಕರ್ನಾಟಕ-ಕೇರಳ ವಲಯ

ಸಿಎಪಿಎಫ್ಎಸ್ ನ  ಕಾನ್ಸ್ ಟೇಬಲಗಳು (ಜಿಡಿ) ಬಿಎಸ್ಎಫ್, ಸಿಐಎಸ್ಎಫ್, ಸಿಆರ್ ಪಿಎಫ್, ಎಸ್ಎಸ್ ಬಿ, ಮತ್ತು ಐಟಿಬಿಪಿ ಮತ್ತು ಅಸ್ಸಾಂ ರೈಫಲ್ ನ  ರೈಫಲ್ ಮನ್ (ಜಿಡಿ)-2013 ಗಳನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ .

     ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ ನ ರೈಫಲ್ ಮನ್ ಗಳ ನೇಮಕಾತಿಗೆ ಸಿಬ್ಬಂದಿ ನೇಮಕಾತಿ ಆಯೋಗ ದೇಶದಾಧ್ಯಂತ ಸ್ಪರ್ಧಾತ್ಮಕ ಪರೀಕ್ಷೆಯನ್ನು    12-05-2013 ರಂದು ನಡೆಸಲಿದೆ. ಈ ಹುದ್ದೆಯ ವೇತನ ಶ್ರೇಣಿ ರೂ. 5200-20200 ಜೊತೆಗೆ ಗ್ರೇಡ್ ಪೇ ರೂ. 2000. ನೇಮಕಾತಿಯು ದೈಹಿಕ ದೇಹದಾಢ್ಯತೆ (ಪಿಎಸ್ ಟಿ), ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) ನಡೆಸಲಾಗುತ್ತದೆ. ಪಿಎಸ್ ಟಿ ಮತ್ತು ಪಿಇಟಿ ಪರೀಕ್ಷೆಗಳಲ್ಲಿ ಪಾಸಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
    ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಣೆಗಳು 2012 ಡಿಸೆಂಬರ್ 15-21 ರ ಎಂಪ್ಲಾಯ್ ಮೆಂಟ ನ್ಯೂಸ್ ನ ಸಂಚಿಕೆಯಲ್ಲಿ ದೊರೆಯುತ್ತದೆ. ಜೊತೆಗೆ ಈ ವಿವರಗಳು http://ssckkr.kar.nic.in and http://ssc.nic.in ದೊರೆಯುತ್ತವೆ. ಈ ಮಾಹಿತಿಯನ್ನು ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಂಡು ಪೇಪರ್ ಅರ್ಜಿಯನ್ನು ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು http://ssconline.nic.in or http://ssconline2.gov.in ವೆಬ್ ಸೈಟಗಳನ್ನು ನೋಡಬಹುದು. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲ ಅರ್ಹತೆಗಳು ತಮಗಿವೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ನಂತರ ಒಬ್ಬ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಅಭ್ಯರ್ಥಿಯು ಮೆರಿಟ್ ಮತ್ತು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಸಿಎಪಿಎಫ್ ನ ಯಾವ ವಿಭಾಗಕ್ಕೆ ನಿಯೋಜಿಸಬೇಕು ಎಂಬ ಪ್ರಕ್ರಿಯೆ ನಡೆಯುತ್ತದೆ. ಮಹಿಳಾ ಅಭ್ಯಥಿಗಳಿಗೆ ಅವರಿಗೆ ನಿಗದಿಪಡಿಸಿದ ಹುದ್ದೆಗಳಿಗೆ ನೇಮಿಸಲಾಗುತ್ತದೆ.
1. ಖಾಲಿ ಇರುವ ಹುದ್ದೆಗಳು: ಒಟ್ಟು 22000 (ಅಂದಾಜು) ಕೊನೆಗೆ ಹುದ್ದೆಗಳ    ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ.. ಕರ್ನಾಟಕಕ್ಕೆ 600 ಹುದ್ದೆಗಳು ಮತ್ತು    ಕೇರಳಕ್ಕೆ  350 ಹುದ್ದೆಗಳು    
2. 11.01.2013 ರಲ್ಲಿ ಇರುವಂತೆ ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್ ಅಥವಾ    ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾನಿಲಯದಿಂದ 10 ನೇ ತರಗತಿ    ಪಾಸಾಗಿರಬೇಕು.
3. 01.01.2013 ಕ್ಕೆ ವಯಸ್ಸು 18-23 ಅಭ್ಯರ್ಥಿ 02.01.1990 ಕ್ಕಿಂತ ಮುಂಚೆ ಮತ್ತು     1.1.1995 ರ ನಂತರ  ಜನಿಸಿರಬಾರದು (ಎಸ್ ಸಿ/ಎಸ್ ಟಿ/ಒಬಿಸಿ/ಮಾಜಿ- ಎಸ್/ಇಲಾಖೆ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ಸಡಿಲಿಕೆ ಇರುವುದರ ಬಗ್ಗೆ ನೋಟೀಸಿನ ಪ್ಯಾರಾ 4 ನ್ನು ನೋಡಬಹದುದು)  
4. ಪೀ : ಪೇಪರಿನಲ್ಲಿ ಅರ್ಜಿ ಸಲ್ಲಿಸುವವರು ಕೇಂದ್ರ ನೇಮಕಾತಿ ಫೀ ಸ್ಟಾಂಪ್     ಮುಖಾಂತರ  50  ರೂಪಾಯಿ ಸಲ್ಲಿಸಬೇಕು.( (crpf). ಆನ್ ಲೈನಿನಲ್ಲಿ ಅರ್ಜಿ     ಸಲ್ಲಿಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖಾಂತರ ಸಲ್ಲಿಸಬೇಕು.(ಎಲ್ಲಾ ಮಹಿಳೆಯರು ಎಸ್ ಸಿ/ಎಸ್ ಟಿ/ಮಾಜಿ-ಎಸ್ ಅಭ್ಯರ್ತಿಗಳಿಗೆ ಫೀ ರಿಯಾಯಿತಿ ಇದೆ. ಮೇಲೆ ತಿಳಿಸಿದಂತೆ ಫೀ ಕಟ್ಟದೆ ಬೇರೆ ರೀತಿಯಲ್ಲಿ ಕಟ್ಟಿದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಮತ್ತು ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
5. ಪರೀಕ್ಷೆಗಳ ವಿವರ: ದೇಹ ದಾಢ್ಯತೆ ಪರೀಕ್ಷೆ. (PST)    ಎತ್ತರ- ಪುರುಷ:170 ಸೆ.ಮೀ, ಮಹಿಳೆ: 157 ಸೆ.ಮೀ. ಎದೆ- ಪುರುಷ-ಉಬ್ಬಿಸದೆ: 80 ಸೆ.ಮೀ. ಉಬ್ಬಿಸಿ ಕನಿಷ್ಠ 5 ಸೆ.ಮೀ.  ತೂಕ: ವೈದ್ಯಕೀಯ ನಿಭಂದನೆಯಂತೆ ಪುರುಷ ಮತ್ತು ಮಹಿಳೆಗೆ ಎತ್ತರ ಮತ್ತು ವಯಸ್ಸಿಗನುಗುಣವಾಗಿ. ದೈಹಿಕ ಕ್ಷಮತೆ ಪರೀಕ್ಷೆ(PET) ಓಟ- ಪುರುಷ:24 ನಿಮಿಷದಲ್ಲಿ 5 ಕಿ.ಮಿ. ಮಹಿಳೆಗೆ  8.3 ನಿಮಿಷದಲ್ಲಿ 1.6 ಕಿ.ಮೀ. ಲಿಖಿತ ಪರೀಕ್ಷೆ: ಪಿಇಟಿ, ಲಿಖಿತ ಪರೀಕ್ಷೆಗಳಲ್ಲಿ ಪಾಸಾದ ಅಭ್ಯಥರ್ಿಗಳಿಗೆ  ಆಬ್ಜಕ್ಟೀವ್ ಮಾದರಿಯ ಬಹು ಆಯ್ಕೆಯ 100 ಅಂಕಗಳ ಎರಡು ಗಂಟೆಗಳ ಅವಧಿಯ ಒಂದು ಪತ್ರಿಕೆ. (ಎ-ಸಾಮಾನ್ಯ ಜ್ಞಾನ ಮತ್ತು  ರೀಜನಿಂಗ್ ಗೆ 25  ಅಂಕ, ಬಿ- ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆ 25 ಅಂಕ, ಸಿ-ಪ್ರಾಥಮಿಕ ಗಣಿತ 25 ಅಂಕ, ಡಿ-ಇಂಗ್ಲಷ್/ಹಿಂದಿಗೆ 25 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು. ಎ,ಬಿ ಮತ್ತು ಸಿ ಭಾಗಗಳ ಪ್ರಶ್ನೆಗಳು ಇಂಗ್ಲೀಷ್/ಹಿಂದಿ ಜೊತೆಗೆ ಮೂರು ಭಾಷೆಗಳಲ್ಲಿರುತ್ತವೆ. ಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ. ಆಯೋಗ ನಿಗದಿ ಪಡಿಸಿದ ಕಟ್ ಆಫ್ ಅಂಕಗಳಿಗಿಂತ ಹೆಚ್ಚಿಗೆ ಪಡೆದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
6. ಕರ್ನಾಟಕ ವಲಯದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಧಾರವಾಡ, ಗುಲ್ಬರ್ಗ, ಮಂಗಳೂರು, ತಿರುವನಂತಪುರ, ಕೋಚಿ, ಕೋಝಿಕೋಡ್ ಮತ್ತು ತ್ರಿಸ್ಸೂರ್. ಇತರೆ ವಲಯಗಳ ಪರೀಕ್ಷಾ ಕೇದ್ರಗಳ ವಿವಿರಗಳನ್ನು ನೋಟೀಸಿನ ಪ್ಯಾರಾ 7 ನ್ನು ನೋಡಬಹುದು.
7. ಅರ್ಜಿಗಳನ್ನು ಸ್ವೀಕರಿಸಲು ಕಡೆಯ ದಿನ: ಆಫ್ ಲೈನ್ ಪೇಪರ್ ಅರ್ಜಿ ಸಲ್ಲಿಸಲು 11.01.2013. ಆನ್ ಲೈನ್ ಅರ್ಜಿಗೆ: ಪಾರ್ಟ-1 ಕ್ಕೆ  01.01.2013 . ಪಾರ್ಟ-2 ಕ್ಕೆ 11.01.2013 ಕ್ಕೆ . ಸೂಚನೆ: (ಕೊನೆ ಗಳಿಗೆಯ ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ಸಮಸ್ಯೆಯನ್ನು ಎದುರಿಸುವ  ಬದಲು ಕೊನೆ ದಿನಾಂಕಕ್ಕೆ ಕಾಯದೆ ಆದಷ್ಟು ಮೊದಲು ಅರ್ಜಿ ಸಲ್ಲಿಸಬೇಕು.)     
8. ಕಾನ್ಸಟೇಬಲ್ (ಜೆಡಿ) ಹುದ್ದೆಗೆ ಪೇರ್ ಅರ್ಜಿಗಳನ್ನು : ವಲಯ ನಿರ್ದೇಶಕರು (ಕೆಕೆಅರ್) ಸಿಬ್ಬಂದಿ ನೇಮಕ ಆಯೋಗ, 1 ನೇ ಮಹಡಿ, ಇ ವಿಂಗ್, ಕೇಂದ್ರೀಯ ಸದನ,ಕೋರಮಂಗಲ,ಬೆಂಗಳೂರು- 560034. ನಿಗದಿ ಪಡಿಸಿದ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಹಲವು ಅರ್ಜಿಗಳನ್ನು ಸಲ್ಲಿಸದರೆ ತಿರಸ್ಕರಿಸಲಾಗುತ್ತದೆ.
9. ತಾತ್ಕಾಲಿಕ ವೇಳಾ ಪಟ್ಟಿ :ಪಿಎಸ್ ಟಿ/ ಪಿಇಟಿ: ಫ್ರೆಬ್ರುವರಿ-ಮಾರ್ಚ 2013  ಲಿಖಿತ ಪರೀಕ್ಷೆ :ಮೇ 12,  2013 ವೈದ್ಯಕೀಯ ಪರೀಕ್ಷೆ: ಜೂನ್-ಆಗಸ್ಟ್  2013. 
10.ಸಹಾಯಕ್ಕೆ ಹೆಲ್ಪಲೈನ್:       ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪಗಳಿಗೆ: 09483862020  &   08025502520 (ಬೆಳಿಗ್ಗೆ  10 ರಿಂದ ಸಂಜೆ 5 ಗಂಟೆ ವರೆಗೆ, ಸೋಮವಾರದಿಂದ ಶುಕ್ರವಾರದ ವರೆಗೆ.)     

Recruitment Notification of CASFs Constables (GD) & Assam Rifleman (GD)-2013 in Assam Rifles-2013

ಸಿಬ್ಬಂದಿ ನೇಮಕಾತಿ ಆಯೋಗ
                    ಸಿಬ್ಬಂದಿ ನೇಮಕಾತಿ ಆಯೋಗ
      (ಕರ್ನಾಟಕ ಕೇರಳ ವಲಯ) ಬೆಂಗಳೂರು
ಪತ್ರಿಕಾ ಪ್ರಕಟಣೆ
ಸಿಎಪಿಎಫ್ಎಸ್ ನ ಕಾನ್ಸಟೇಬಲಗಳು (ಜೆಡಿ) ಮತ್ತು ಆಸ್ಸಾಂ ರೈಪಲ್ಸ್ ನ ರೈಫಲ್ ಮನ್ (ಜೆಡ)-2013 ಗಳನ್ನು ನೇಮಕ ಮಾಡಿಕೊಳ್ಳುವದರ ಬಗ್ಗೆ ಪತ್ರಿಕಾ ಪ್ರಕಟಣೆ.

ಸಿಬ್ಬಂದಿ ನೇಮಕಾತಿ ಆಯೋಗವು ಭಾರತ ಸರ್ಕಾರದ ಸಚಿವಾಲಯಗಳು/ ಇಲಾಖೆಗಳು, ಅವುಗಳಿಗೆ ಹೊಂದಿಕೊಂಡಿರುವ ಅಧೀನ ಕಛೇರಿಗಳು,ಸಿ &ಎಜಿ ಮತ್ತು ಅದರ ಅಕೌಂಟೆಂಟ್ ಜನರಲ್ ಕಛೇರಿಗಳು,ಚುನಾವಣಾ ಆಯೋಗ ಮತ್ತು ಕೇಂದ್ರ ವಿಚಕ್ಷಣಾ ಆಯೋಗಳಿಗೆ ಗ್ರೂಪ್ಬಿ( ನಾನ್ ಗೆಜೆಟೆಡ್) ಮತ್ತು ಗ್ರೂಪ್ಸಿ(ನಾನ್ ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ
ಸಿಬ್ಬಂದಿ ನೇಮಕಾತಿ ಆಯೋಗದ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಪ್ರಸಕ್ತ  ಶ್ರೀ ಎನ್.ಕೆ.ರಘುಪತಿಅವರು ಅದರ ಅಧ್ಯಕ್ಷರಾಗಿದ್ದಾರೆ. ಆಯೋಗವು ಏಳು ವಲಯ ಮತ್ತು ಎರಡು ಉಪ ವಲಯಗಳ ಕಚೇರಿಗಳನ್ನು ಹೊಂದಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಕಚೇರಿಗಳು ದೇಶದ ವಿವಿಧ ಭಾಗಗಳಲ್ಲಿರುವ ಪರೀಕ್ಷಾ ಕೇಂದ್ರಗಳ ಜಾಲದ ಮುಖಾಂತರ ಆಯೋಗವು ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ.
ಬೆಂಗಳೂರಿನ ವಲಯ ಕಚೇರಿಯನ್ನು (ಕರ್ನಾಟಕ ಕೇರಳ ವಲಯ) 1990 ರಲ್ಲಿ ಸ್ಥಾಪಿಸಲಾಯಿತು. ಕರ್ನಾಟಕಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷ ದ್ವೀಪ ಈ ಕಚೇರಿಯ ವ್ಯಾಪ್ತಿಗೊಳಪಟ್ಟಿವೆ.
ಆಯೋಗದ ಪರೀಕ್ಷೆಗಳು ಕರ್ನಾಟಕಕ ಮತ್ತು ಕೇರಳದ ಕೆಳಕಂಡ ಕೇಂದ್ರಗಳಲ್ಲಿ ನಡೆಯುತ್ತವೆ.
(ಎ)               (ಬಿ)
ಕರ್ನಾಟಕ             ಕೇರಳ
ಬೆಂಗಳೂರು           ತಿರುವನಂತಪುರ
ಧಾರವಾಡ             ಕೋಚಿ
ಮಂಗಳೂರು         ತ್ರಿಶೂರು
ಗುಲ್ಬರ್ಗ              ಕೋಝಿಕೋಡ್
ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಸಿಎಪಿಎಫ್ ನ (ಬಿಎಸ್ಎಫ್ಸಿಐಎಸ್ಎಫ್ಸಿ,ಅರ್,ಪಿ.ಎಫಐಟಿಬಿಪಿಎಸ್ಎಸ್ ಬಿ) ಕಾನ್ಸಟೇಬಲಗಳು (ಜನರಲ್ ಡ್ಯೂಟಿ) ಮತ್ತು ರೈಫಲ್ಮನ್(ಜಿಡಿ) ಅಸ್ಸಾಂ ರೈಫಲ್ಸ್-2013ಗೆ ನೇಮಕ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ವೇತನ ಶ್ರೇಣಿ ರೂ.5200-20200 ಇದ್ದು ಜೊತೆಗೆ ರೂ.2000 ಗ್ರೇಡ್ ಪೇ ಇರುತ್ತದೆ. ವಯೋಮಿತಿ 18-23 ವರ್ಷಗಳು. ಹೆಚ್ಚು ಕಡಿಮೆ 22,000 ಹುದ್ದೆಗಳಿದ್ದುನಿರ್ಧಿಷ್ಟವಾದ ಸಂಖ್ಯೆಯನ್ನು ನಂತರ ಖಚಿತಪಡಿಸಲಾಗುತ್ತದೆ. ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಮೆಟ್ರಿಕ್ಯುಲೇಷನ್.
ಈ ನೇಮಕ್ಕೆ ಸಂಬಂಧಿಸಿದ ಪ್ರಕಟಣೆಯನ್ನುಪ್ಲಾಯಮೆಂಟ್ನ್ಯೂಸ್/ ರೋಜ್ಗಾರ್ ಸಮಾಚಾರ್ ನ ಡಿಸೆಂಬರ್ 15-21 ರ ಸಂಚಿಕೆಯಲ್ಲಿ ಆಯೋಗವು ಪ್ರಕಟಿಸುತ್ತದೆ ಮತ್ತು ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಹುದ್ದೆಗಳಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಾಸ ವಿರುವ ಅಭ್ಯರ್ಥಿಗಳು ಮಾತ್ರ ಅರ್ಹರು. ದೈಹಿಕಾರ್ಹತೆ/ದೈಹಿಕ ದಕ್ಷತೆಯ ಪರೀಕ್ಷೆ 2013 ರ ಫೆಬ್ರುವರಿ-ಮಾರ್ಚ ತಿಂಗಳುಗಳಲ್ಲಿ ನಡೆಯುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆಯನ್ನು 12.05.2013 ರಂದು ನಡೆಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಪರೀಕ್ಷೆಯ ಪಾರ್ಟ್-ಎಬಿ ಮತ್ತು ಸಿ ಪ್ರಶ್ನೆಗಳು ಮೂರು ಭಾಷೆಗಳಲ್ಲಿದ್ದುಕರ್ನಾಟಕದಲ್ಲಿ ಕನ್ನಡ ಮತ್ತು ಕೇರಳದಲ್ಲಿ ಮಲಯಾಳಂ ನಲ್ಲಿರುತ್ತವೆ. ವಿವಿಧ ಸಿಎಪಿಎಫ್ ಗಳಿಗೆ ಅರ್ಹತೆ-ಕಂ-ಆಧ್ಯತೆ ಆಧಾರದ ಮೇಲೆ ಅಲಾಟ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳು ಯಾವ ವಲಯ ಮತ್ತು ಉಪ ವಲಯಗಳ ಸಿಬ್ಬಂದಿ ನೇಮಕಾತಿ ಆಯೋಗದ ವ್ಯಾಪಿಗೊಳಪಡುತ್ತವೆಯೋ ಅಲ್ಲಿಗೆ ನೇಮಕಾತಿ ಅರ್ಜಿಗಳನ್ನು ಅಭ್ಯರ್ಥಿಗಳು ಕಳಿಸಿಕೊಡಬೇಕು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯಲ್ಲಿರುವ ಪರೀಕ್ಷಾ ಕೇದ್ರಗಳಲ್ಲಿ ಪರೀಕ್ಷೆ ಬರೆಯಲಿಚ್ಛಿಸುವವರು,

ರೀಜನ್ ಡೈರೆಕ್ಟರ್
ಸಿಬ್ಬಂದಿ ನೇಮಕಾತಿ ಆಯೋಗ(ಕೆಕೆಆರ್)
1 ನೇ ಮಹಡಿಇ ವಿಂಗ್
ಕೇಂದ್ರೀಯ ಸದನ
ಕೋರಮಂಗಲ
ಬೆಂಗಳೂರು-560034

ಇಲ್ಲಿಗೆ ಕಳಿಸಿಕೊಡಬೇಕು.

 ಆನ್ ಲೈನ್ಮುಖಾಂತರ ಅರ್ಜಿ ಸಲ್ಲಿಸುವವರುhttp://ssconline.nic.in or http://ssconline2.gov.in ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಅರ್ಜಿ  ಸಲ್ಲಿಸುವವರಿಗೆ ಪಾರ್ಟ-1 ರಿಜಿಸ್ಟ್ರೇಷನ ಗೆ 09-01-2013 ಕೊನೆ ದಿನ. ಪಾರ್ಟ-2 ಕ್ಕೆ ಅರ್ಜಿ ಸಲ್ಲಿಸಲು 11.01.2013 ಕೊನೆ ದಿನ. ಕೊನೆ ದಿನ ಹತ್ತಿರವಾದಂತೆ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದಅಭ್ಯರ್ಥಿಗಳು ತಮ್ಮ ಹಿತದೃಷ್ಟಿಯಿಂದ ಕೊನೆಯ ದಿನದ ವರೆಗೆ ಕಾಯದೆ ಅದಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳ ಮಾರ್ಗ ದರ್ಶನಕ್ಕೆ ಈ ಕೆಳ ಕಂಡ ಹೆಲ್ಪ್ ಲೈನಗಳು ಬೆಳಿಗ್ಗೆ 10 ರಿಂದ  ಸಂಜೆ 5 ಗಂಟೆ ವರೆಗೆ ಕಾರ್ಯ ನಿರ್ವಹಿಸುತ್ತವೆ. ಹೆಲ್ಪ್ ಲೈನ್ : 9483862020,    080 25502520.
ನೇಮಕಾತಿಯ ಮುಖ್ಯಾಂಶಗಳು ಈ ರೀತಿ ಇವೆ.
ಸಿಪಿಒ ದ ರಾಜ್ಯ/ಕೇಂದ್ರಾಡಳಿತಗಳಿಗೆ ಅಲಾಟ್ ಮಾಡಿದ ಖಾಲಿ ಹುದ್ದೆಗಳನ್ನು ಅಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಆದ್ದರಿಂದ ಇದು ದೇಶ ಸೇವೆ ಮಾಡುವುದರ ಜೊತೆಗೆ ಸರ್ಕಾರದ ಖಾತರಿ ಉದ್ಯೋಗದ ಅತ್ಯುತ್ತಮ ಅವಕಾಶವನ್ನು ಕರ್ನಾಟಕಕೇರಳ ಮತ್ತು ಲಕ್ಷ ದ್ವೀಪಗಳ ಯುವಕರಿಗೆ ಒದಗಿಸಿಕೊಡುತ್ತದೆ.
ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಗಡಿ ಜಿಲ್ಲೆಗಳು ಮತ್ತು ನಕ್ಸಲೈಟ್/ಉಗ್ರವಾದಿ ಪೀಡಿತ ಪ್ರದೇಶಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಆಯ್ಕೆಯು ದೇಹದಾಢ್ಯತೆ(ಪಿಎಸ್ ಟಿ) / ದೈಹಿಕ ಕ್ಷಮತೆ(ಪಿಇಟಿ) ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಾಸಾದವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಲಿಖಿತ ಪರೀಕ್ಷೆಯು ಮುಗಿಯುವ ವೇಳೆಗೆ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಿ ಅಂತಿಮಗೊಳಿಸಲಾಗುತ್ತದೆ.
ಲಿಖಿತ ಪರೀಕ್ಷೆಯು ಮೆಟ್ರಿಕ್ಯುಲೇಷನ್ ಮಟ್ಟದಲ್ಲಿದ್ದುಸಮಾನ್ಯ ಜ್ಞಾನ ಮತ್ತು ತಾರ್ಕಿಕ ಜ್ಞಾನಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆಪ್ರಾಥಮಿಕ ಗಣಿತ ಮತ್ತು ಇಂಗ್ಲಿಷ್ ಅಥವಾ ಹಿಂದಿ ವಿಷಯಗಳಿಗೆ ಸಂಬಂಧಿಸಿರುತ್ತದೆ.
ಒಬ್ಬ ಅಭ್ಯರ್ಥಿ ಒಂದು ಅರ್ಜಿ ಮಾತ್ರ ಸಲ್ಲಿಸಬಹುದು. ಅರ್ಜಿಯಲ್ಲಿ ಯಾವ ವಿಭಾಗದಲ್ಲಿ ಸೇವೆ ಸಲ್ಲಿಸಲು (ಆದ್ಯತೆ ಮೇರೆಗೆ) ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರೆ ಎಲ್ಲ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.
ಎಸ್ ಸಿ/ಎಸ್ ಟಿ/ಒಬಿಸಿ ವರ್ಗಗ ಮೀಸಲಾತಿಯ ಸೌಲಭ್ಯವನ್ನು ಪಡೆಯುವವರು ಆ ವರ್ಗಗಳಿಗೆ ನೀಡುವ ದಾಖಲೆ ಪತ್ರವನ್ನು ನಿಗದಿತ ನಮೂನೆಯಲ್ಲಿ ದಾಖಲೆ ಪತ್ರಗಳನ್ನು ಸಲ್ಲಿಸುವಾಗ ಸಲ್ಲಿಸಬೇಕು.
ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಳು ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ ಸೈಟ್ http://ssc.nic.in  ಮತ್ತು ಆಯೋಗದ (ಕೆಕೆಆರ್) ವೆಬ್ ಸೈಟ್ http://ssckkr.kar.nic.in  ಗಳಲ್ಲಿ 15.12.2012 ರ ನಂತರ ದೊರೆಯುತ್ತವೆ.

GULBARGA DISTRICT REPORTED CRIMES


ಕೊಲೆಗೆ ಪ್ರಯತ್ನ:
ಬ್ರಹ್ಮಪೂರ ಪೊಲೀಸ್ ಠಾಣೆ: ಪ್ರದೀಪ ತಂದೆ ರತನಸಿಂಗ ರಿಡ್ಲಾನ ವಯ|| 21 ವರ್ಷ ಜಾ||ವಾಲ್ಮಿಕಿ ಸಾ|| ಗಾಜಿಪೂರ ಗುಲಬರ್ಗಾ ರವರು ನಾನು ದಿನಾಂಕ:27/12/2012 ರಂದು ಮದ್ಯಾಹ್ನ 12-30 ಗಂಟೆಗೆ ನಮ್ಮ ಬಡಾವಣೆಯ ಸಚೀನ ತಂದೆ  ಭಗವಾನದಾಸ ಸೌದಾಗರ, ರೋಹಿತ ತಂದೆ ಸತೀಶ ಕೂಡಿಕೊಂಡು ಸಿಟಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿರುವಾಗ ಬಾಂಬೆ ಸಂಜು, ಸತೀಶ, ಮೂಗ ಮಲ್ಯಾ, ಚನ್ನು, ದಾದು, ಬಟರ ನವಾಬ, ದಂಡೋತಿ ಸುರೇಶ, ಹಾಗೂ ಇತರರು ಸೇರಿಕೊಂಡು ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈದು ನನ್ನನ್ನು ಬಸವ ನಗರದ ನೀರಿನ ಟ್ಯಾಂಕಿನ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಬಾಂಬೆ ಸಂಜು, ಇತನು ತನ್ನ ಮನೆಯಿಂದ ಹಾಕಿ ಸ್ಟಿಕ ತಗೆದುಕೊಂಡು ಬಂದು ನಿನಗೆ ಕೋಲೆ ಮಾಡಿಯೆ ಬಿಡುತ್ತೇನೆ ಅಂತಾ ಅನ್ನುತ್ತಾ ತಲೆಯ ಮೇಲೆ ಹೋಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಸತೀಶ ಇವನು ಕೂಡಾ ಅಲ್ಲೆ ಬಿದ್ದ ಬಡಿಗೆ ತಗೆದುಕೊಂಡು ನನ್ನ ಹೊಟ್ಟೆಯ ಬಲ ಮಗ್ಗಲಲ್ಲಿ ಮತ್ತು ಬಲಗಾಲಿನ ಮೊಳಕಾಲ ಕೆಳಗೆ ಹೊಡೆದಿರುತ್ತಾನೆ ಮೂಗ ಮಲ್ಯಾ ಮತ್ತು ಚನ್ನು ಕೈಮುಷ್ಠಿ ಮಾಡಿ ಬಾಯಿ ಮೇಲೆ ಮತ್ತು ಎರಡು ಗಲ್ಲದ ಮೇಲೆ ಹೊಡೆದಿದ್ದು ಅಲ್ಲದೆ ಉಳಿದ ಜನರು ಸಹ ಖಲಾಸ ಮಾಡಬಿಡು ಅಂತಾ ಪ್ರಚೋದನೆ ಮಾಡುತ್ತಿದ್ದರು ಸದರಿ ಜಗಳವನ್ನು ಸಚೀನ ಮತ್ತು ರೋಹಿತ ನೋಡಿ ಬಿಡಿಸಿರುತ್ತಾರೆ. ಇಲ್ಲದಿದ್ದರೆ ಅವರು ನನಗೆ ಕೊಲೆ ಮಾಡಿಯೆ ಬಿಡುತ್ತಿದ್ದರು,ನಾನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿದ್ದು ಇರುತ್ತದೆ.ನನಗೆ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:142/2012 ಕಲಂ: 143,147,148,323,324,307,114,504,506 ಸಂಗಡ 149 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಒಂದೆ ಕುಟುಂಬದ ಮೂವರ ದುರ್ಮರಣ:
ನರೋಣಾ ಪೊಲೀಸ್ ಠಾಣೆ: ಶ್ರೀ, ವೆಂಕಟರತ್ನಂ ತಂದೆ ವೆಂಕಟ ಶಾಸ್ತ್ರಿ ವಯ:74 ವರ್ಷ ಸಾ: ಹಬಿಸಿಗುಡ್ಡ ಕಾಕಟ ನಗರ ಜಿ:ರಂಗಾರಡ್ಡಿ ರಾ|| ಆಂದ್ರಪ್ರದೇಶ ರವರು ನಾನು ಮತ್ತು ನನ್ನ ಹೆಂಡತಿ ಮಹಾಲಕ್ಷ್ಮಿ, ಮಗ ಸುರೇಶ, ಸೊಸೆಯಾದ ರಮಾ ಹಾಗೂ ಮಮ್ಮೊಕ್ಕಳಾದ ಸುಷ್ಮಾ ಮತ್ತು ಸ್ವೇತಾ ಹೀಗೆ ಎಲ್ಲರು ಕೂಡಿಕೊಂಡು ದಿನಾಂಕ:24/12/2012 ರಂದು ಬೆಳ್ಳಿಗ್ಗೆ ನಮ್ಮೂರಿನಿಂದ ಶಿರಡಿಗೆ ಹೋಗಿ ಅಲ್ಲಿಂದ ದಿನಾಂಕ:27/12/2012 ರಂದು ತುಳಜಾಪುರ ದೇವಿ ದರ್ಶನ ಮಾಡಿಕೊಂಡು ಗಾಣಗಾಪೂರ ದತ್ತ ದರ್ಶನಕ್ಕೆ ಹೋಗಲು ಆಳಂದ ಗುಲಬರ್ಗಾ ಮಾರ್ಗವಾಗಿ ಹೋಗುತ್ತಿದ್ದು, ನನ್ನ ಮಗ ಸುರೇಶ  ಕಾರ ಚಲಾಯಿಸತ್ತಿದ್ದನು. ಕಡಗಂಚಿ ಸಮೀಪ ಎದುರುಗಡೆಯಿಂದ ಎಮ್.ಎಚ.-20 / ಸಿಟಿ-256 ನೇದ್ದರ ಲಾರಿ ಚಾಲಕನು ಅತೀ ವೇಗ ಮತ್ತು ನಿಷ್ಕಾಲಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಬಂದು ಡಿಕ್ಕಿಪಡಿಸಿದನು. ಡಿಕ್ಕಿ ಪಡಿಸಿದ ರಭಸಕ್ಕೆ ಸುರೇಶ ಇತನು ಸ್ಥಳದಲ್ಲಿಯೇ ಮೃತಪಟಟಿದ್ದು, ಸೊಸೆ ಉಪಚಾರ ಕುರಿತು ಬರುತ್ತಿರುವಾಗ ದಾರಿಯಲ್ಲಿ ಮೃತ ಪಟ್ಟಿದ್ದು, ಅಲ್ಲದೇ ನನ್ನ ಹೆಂಡತಿ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ. ಉಳಿದವರಿಗೆ ಗಾಯಗಳಾಗಿರುತ್ತವೆ ಸದರಿ ಲಾರಿ ಚಾಲಕನ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:139/2012 ಕಲಂ 279 337 304[ಎ] ಐಪಿಸಿ ಮತ್ತು 187 ಐಎಂವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.