POLICE BHAVAN KALABURAGI

POLICE BHAVAN KALABURAGI

23 November 2017

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 22-11-2017 ರಂದು ಶಿರವಾಳ ಗ್ರಾಮದ ಶ್ರೀ ಅಂಬೀಗರ  ಚೌಡಯ್ಯನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿರವಾಳ ಗ್ರಾಮದ ಅಂಬಿಗರ ಚೌಡಯ್ಯನ ಗುಡಿಯ ಹತ್ತಿರ ಸ್ವಲ್ಪ ದೂರು ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಅಂಬಿಗರ ಚೌಡಯ್ಯನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಣ್ಣಾರಾಯ ತಂದೆ ಶಂಕರ ಅಂಜುಟಗಿ ಸಾ|| ಶಿರವಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 960/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ :ದಿನಾಂಕ 22-11-2017 ರಂದು ಸೇಡಂ ಪಟ್ಟಣದ ಉಡಗಿ ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ  ಪಿ.ಎಸ್.ಐ. ಸೇಡಂ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ಮತ್ತು ಅಂಗ ಶೋಧನೆ ಮಾಡಲಾಗಿ 1) ಚಂದರ್ ತಂದೆ ಕೃಷ್ಣಜೀ ಮರಾಠ 2) ಭಾಗಣ್ಣ ತಂದೆ ಚಂದ್ರರೆಡ್ಡಿ ಬೆನಕನಳ್ಳಿ, ಸಾ: ಇಬ್ಬರು ಅಡಕಿ ಗ್ರಾಮ ತಾ: ಸೇಡಂ ಅಂತಾ ತಿಳಿಸಿದ್ದು ಆರೋಪಿತರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 6020/- ರೂ, ಮಟಕಾ ಚೀಟಿ ಮತ್ತು ಪೆನ್ನ ವಶಪಡಿಸಿಕೊಂಡು ಸದರಿಯವರೊಂದಿಗೆ ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಸೇಡಂ ಠಾಣೆ :ದಿನಾಂಕ 22-11-2017 ರಂದು ಸೇಡಂ ಪಟ್ಟಣದ ಚಿಂಚೋಳಿ  ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಮಟಕಾ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ  ಪಿ.ಎಸ್.ಐ. ಸೇಡಂ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಅವರ ಹೆಸರು ಮತ್ತು ಅಂಗ ಶೋಧನೆ ಮಾಡಲಾಗಿ ಸಿದ್ದರಾಮ ತಂದೆ ಶ್ಯಾಮರಾಯ ಪಪ್ಪಾಣಿ  ಸಾ : ಯಡ್ಡಳ್ಳಿ ತಾ : ಸೇಡಂ. ಅಂತಾ ತಿಳಿಸಿದ್ದು ಆರೋಪಿತನಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 4000/- ರೂ, ಮಟಕಾ ಚೀಟಿ ಮತ್ತು ಪೆನ್ನ ವಶಪಡಿಸಿಕೊಂಡು ಸದರಿಯವರೊಂದಿಗೆ ಸೇಡಂ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 22-11-2017 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಧನಗರಗಲ್ಲಿ ಬಡಾವಣೆಯ ಲೌ ಚೌಕ ಹತ್ತಿರ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳಕ್ಕೆ ಹೋಗಿ ನೋಡಲು ಲೌ ಚೌಕ ಪಕ್ಕದಲ್ಲಿರುವ ಒಂದು ಮನೆ ಮುಂದೆ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟು ಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯ ದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಸೋಮಶೇಖರ ತಂದೆ ಹಣಮಂತಪ್ಪ ವಾಗದ್ದರಗಿ ಸಾ: ಲೌ ಚೌಕ ಹತ್ತಿರ ಧನಗರಗಲ್ಲಿ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 1710/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 180 ಎಮ್.ಎಲ್.ದ 8 ಓಲ್ಡ ಟವರಿನ್(ಓಟಿ) ವಿಸ್ಕಿ ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 68.ರೂ 56 ಪೈಸೆ. ಒಟ್ಟು 548 ರೂ.48 ಪೈಸೆ. ಮತ್ತು ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 80 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 2,250/-.ರೂ 40 ಪೈಸೆ. ಹೀಗೆ ಒಟ್ಟು 2798/- ರೂ 88 ಪೈಸೆ ಕಿಮ್ಮತ್ತಿನ ಮಾಲು ಮತ್ತು ನಗದು ಹಣ 1710/- ರೂ ಇದ್ದು ಅವುಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಶಿವಪ್ಪ ತಂದೆ ಹುಚ್ಚಪ್ಪ ಆಲಮೇಲಕರ್ ಸಾ|| ಗೌರ (ಬಿ) ತಾ|| ಅಫಜಲಪೂರ ರವರು ಮಲ್ಲಾಬಾದ ಗ್ರಾಮದಲ್ಲಿ ತಮ್ಮ ತಾಯಿಯ ತಮ್ಮನಾದ ರಮೇಶ ತಂದೆ ಭೀಮಶಾ ದೋಡ್ಡಮನಿ ಎಂಬಾತನಿದ್ದು, ಅವನು ವಕೀಲ ವೃತ್ತಿ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ 22-11-2017 ರಂದು ಬೆಳಿಗ್ಗೆ ನಾನು ನನ್ನ ಹೊಸ ಮೋಟರ ಸೈಕಲ ಹೀರೊ ಸ್ಪೇಂಡರ್ ನೇದ್ದರ ಮೇಲೆ ನನ್ನ ವಯಕ್ತಿಕ ಕೆಲಸದ ಸಲುವಾಗಿ ಕಲಬುರಗಿಗೆ ಹೋಗಿದ್ದೆನು. ಕಲಬುರಗಿಯಲ್ಲಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ನಮ್ಮ ಊರಿಗೆ ಹೋಗಲು ಮದ್ಯಾಹ್ನ ಕಲಬುರಗಿ ಅಫಜಲಪೂರ ರೋಡಿನ ಮೇಲೆ ವರ್ದಮಾನ ರವರ ಹೊಲದ ಹತ್ತಿರದಿಂದ ಹೋಗುತ್ತಿದ್ದೆನು. ಅದೆ ಸಮಯಕ್ಕೆ ನನಗಿಂತ ಮುಂಚೆ ಎರಡು ಟ್ರೈಲಿಗಳಲ್ಲಿ ಕಬ್ಬು ತುಂಬಿದ ಟ್ಯಾಕ್ಟರ ಅಫಜಲಪೂರದ ಕಡೆಗೆ ಹೊರಟಿತ್ತು. ಆಗ ಕಲಬುರಗಿ ಕಡೆಯಿಂದ ಅಫಜಲಪೂರದ ಕಡೆಗೆ ಒಂದು ಕಾರ ನಂ ಕೆಎ-32 ಎಮ್-7903 ನೇದ್ದು ನನ್ನ ಮೋಟರ ಸೈಕಲ ದಾಟಿ ಸ್ವಲ್ಪ ಮುಂದೆ ಹೋದಾಗ, ಕಬ್ಬು ತುಂಬಿಕೊಂಡು ಹೊರಟಿದ್ದ ಟ್ಯಾಕ್ಟರ ಚಾಲಕನು ರೋಡಿನ ಮದ್ಯದಿಂದ ತನ್ನ ಟ್ಯಾಕ್ಟರ ನಡೆಸಿಕೊಂಡು ಹೊರಟಿದ್ದು ಒಮ್ಮೆಲೆ ನಿರ್ಲಕ್ಷತನದಿಂದ ಬ್ರೇಕ್ ಹಾಕಿದಾಗ ಟ್ಯಾಕ್ಟರ ಹಿಂದೆ ಹೊರಟಿದ್ದ ಕಾರು ಹೋಗಿ ಟ್ಯಾಕ್ಟರ ಹಿಂದಿನ ಟ್ರೈಲಿಯ ಹಿಂಬಾಗಕ್ಕೆ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿತು. ಆಗ ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರ ಅಫಘಾತ ಸ್ಥಳದಲ್ಲಿ ಬಿಟ್ಟು ಓಡಿ ಹೊದನು. ನಂತರ ನಾನು ಕಾರಿನಲ್ಲಿ ಇದ್ದವರನ್ನು ನೋಡಲು ನನ್ನ ಸೋದರಮಾವನಾದ ರಮೇಶ ತಂದೆ ಭೀಮಶಾ ದೋಡ್ದಮನಿ ಮು|| ಮಲ್ಲಾಬಾದ ಮತ್ತು ಕಲಬುರಗಿಯ ವಕೀಲರಾದ ಶ್ರೀರಂಗಾ ಖೇಡಗಿಕರ್ ಹಾಗೂ ಕಾರಿನ ಚಾಲಕ ಮತ್ತು ಇನ್ನು ಒಬ್ಬ ವ್ಯೆಕ್ತಿ ಇದ್ದು, ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶ್ರೀರಂಗಾ ಎಂಬುವವರ ಹಣೆಯ ಮದ್ಯಭಾಗದಲ್ಲಿ ಭಾರಿ ರಕ್ತಗಾಯವಾಗಿ ಕುತ್ತಿಗೆ ಕಾರಿನ ಮುಂದಿನ ಡ್ಯಾಸ ಬೋರ್ಡ ಮತ್ತು ಸೀಟಗಳ ಮದ್ಯದಲ್ಲಿ ಸಿಕ್ಕು ಸ್ಥಳದಲ್ಲಿಯೆ ಮೃತಪಟ್ಟಿದ್ದನು. ನನ್ನ ಸೋದರಮಾವ ಶ್ರೀರಂಗಾ ರವರ ಹಿಂದಿನ ಸೀಟಿನಲ್ಲಿ ಕುಳಿತಿದ್ದು, ಅವನ ತಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯವಾಗಿ ಎದೆಗೆ ಒಳಪೆಟ್ಟುಗಳಾಗಿ ಅವರು ಸಹ ಸ್ಥಳದಲ್ಲಿ ಕಾರಿನಲ್ಲಿಯೆ ಮೃತಪಟ್ಟಿದ್ದನು. ಕಾರಿನ ಚಾಲಕನಿಗೂ ಮತ್ತು ಚಾಲಕನ ಹಿಂಬಾಗದಲ್ಲಿ ಕುಳಿತಿದ್ದವನಿಗೂ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾದಂತೆ ಕಂಡು ಬಂದಿರುತ್ತದೆ. ಅಷ್ಟರಲ್ಲಿ ರೋಡಿಗೆ ಹೋಗುವವರು ಯಾರೊ ಒಬ್ಬರು ಅಂಬ್ಯುಲೆನ್ಸ ವಾಹನಕ್ಕೆ ಪೋನ್ ಮಾಡಿದ್ದರಿಂದ ಸ್ಥಳಕ್ಕೆ ಅಂಬ್ಯೂಲೆನ್ಸ ವಾಹನದವರು ಬಂದಾಗ, ನಾನು ಮತ್ತು ಅಂಬ್ಯೂಲೆನ್ಸದವರು ಗಾಯಹೊಂದಿದ ಇಬ್ಬರಿಗೂ ಅಂಬ್ಯೂಲೆನ್ಸದಲ್ಲಿ ಹಾಕಿ ಚಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದು ದಿನಾಂಕ 22-11-2017 ರಂದು ಮದ್ಯಾಹ್ನ ಕಲಬುರಗಿ ಅಫಜಲಪೂರ ರೋಡಿನ ಮೇಲೆ ವರ್ದಮಾನ ರವರ ಹೊಲದ ಹತ್ತಿರ ಟ್ಯಾಕ್ಟರ ನಂ ಕೆಎ-32 ಟಿಎ-3503 ನೇದ್ದರ ಚಾಲಕನು ರೋಡಿನ ಮದ್ಯದಲ್ಲಿ ನಡೆಸಿಕೊಂಡು ಹೊರಟು, ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಕಾರು ಟ್ಯಾಕ್ಟರ ಹಿಂಬಾಗದ ಎರಡನೆ ಟ್ರೈಲಿಗೆ ಹಿಂದೆ ಜೋರಾಗಿ ಡಿಕ್ಕಿ ಹೊಡೆದು ಅಫಘಾತ ಸಂಭವಿಸಿರುತ್ತದೆ. ಈ ಅಫಘಾತಕ್ಕೆಕಾರಣನಾದ ಟ್ಯಾಕ್ಟರ ಚಾಲಕನ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರೂಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡ ಆರೋಪಿತರ ವಿರುದ್ಧ ಕ್ರಮ :
ಅಫಜಲಪೂರ ಠಾಣೆ : ಶ್ರೀ ರುದ್ರಪ್ಪ ಹೆಚ್.ಸಿ- 545 ಅಫಜಲಪೂರ ಠಾಣೆ  ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರ ರವರು ನಮ್ಮ ಠಾಣೆಯ ಪ್ರಕರಣಗಳಲ್ಲಿ ಹೊರಡಿಸುವ ವಾರೆಂಟಗಳನ್ನು ಜಾರಿ ಮಾಡಿ, ಆರೋಪಿತರನ್ನು / ಸಾಕ್ಷೀದಾರರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸುವ ಕರ್ತವ್ಯ ನಿರ್ವಹಿಸುತ್ತಿದ್ದು  ಅಫಜಲಪೂರ ಠಾಣೆಯ ಗುನ್ನೆ ನಂ 221/2016 ಕಲಂ 379 ಐಪಿಸಿ ಸಿಸಿ ನಂ 225/17 ನೇದ್ದರಲ್ಲಿ ಆರೋಪಿತರಾದ 1) ಗಂಗಾಧರ ತಂದೆ ಭೀಮಶಾ ಭಜಂತ್ರಿ ಸಾ|| ದುಧನಿ ಹಾ|| || ಅಫಜಲಪೂರ 2) ಶಿವರಾಜ @ ಸುರೇಶ ತಂದೆ ರೇವಣಸಿದ್ದಪ್ಪ ಹಿರೆಕುರುಬರ ಸಾ|| ನಾಗೂರ  ಹಾ:ವ ಅಫಜಲಪೂರ ಇವರು ಮಾನ್ಯ ನ್ಯಾಯಾಲಯದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಜಾಮೀನು ಪಡೆದುಕೊಂಡಿರುತ್ತಾರೆ. ಸದರಿ ಆರೋಪಿತರು ಜಾಮೀನು ಪಡೆದುಕೊಂಡು ವಿಚಾರಣೆಗಾಗಿ ಮಾನ್ಯ ಜೆ,.ಎಮ್.ಎಫ್.ಸಿ ನ್ಯಾಯಾಲಯ ಅಫಜಲಪೂರದಲ್ಲಿ ಹಾಜರಾಗದ ಕಾರಣ ಸದರಿ ಆರೋಪಿತರನ್ನು ಹಾಜರುಪಡಿಸುವಂತೆ ಆದೇಶಿಸಿ ದಿನಾಂಕ 24-04-2017, 27-05-2017, 23-06-2017, 26-07-2017,13-09-2017, 15-11-2017 ರಂದು ದಸ್ತಗಿರಿ ವಾರೆಂಟ ಹೊರಡಿಸಿರುತ್ತಾರೆ. ಅದರಂತೆ ನಾನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸದರಿ ಪ್ರಕರಣದಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಕುರಿತು ನಾನು ಆರೋಪಿತರ ಸ್ವ ಗ್ರಾಮಕ್ಕೆ ಹಾಗೂ ಆರೋಪಿತರ ಸಂಭಂದಿಕರ ಗ್ರಾಮಗಳಿಗೆ ಹೋಗಿ ಆರೋಪಿತರ ಮನೆಗೆ ಹೋಗಿ ಆರೋಪಿತರ ಬಗ್ಗೆ ವಿಚಾರಿಸಿದ್ದು, ಆರೋಪಿತರು ತಲೆ ಮರೆಸಿಕೊಂಡಿದ್ದು ತಿಳಿದು ಬಂದಿರುತ್ತದೆ. ನಂತರ ಗ್ರಾಮದ ಬಾತ್ಮಿದಾರರಿಗೂ ವಿಚಾರಿಸಿದ್ದು, ಆರೋಪಿತರು ಎಲ್ಲಿ ಇರುತ್ತಾರೊ ಎನೊ ಗೊತ್ತಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಸದರಿ ಆರೋಪಿತರು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜಾ ಬಂಧಿ ಮೃತಪಟ್ಟ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 22-11-2017 ರಂದು ಕೇಂದ್ರ ಕಾರಾಗೃಹದ ಸಜಾ ಬಂಧಿ ಸಂಖ್ಯೆ 108 ಬೀರಪ್ಪ ತಂದೆ ಹಣಮಂತಪ್ಪ ವಃ 27 ವರ್ಷ ಜಾಃ ಕುರುಬ ಸಾಃ ಅಲಬನೂರ ತಾಃ ಸಿಂಧನೂರ ಜಿಃ ರಾಯಚೂರ ಈತನು ಗೌರವಾನ್ವಿತ ಅಪರ ಜಿಲ್ಲಾ ಸತ್ರ ನ್ಯಾಯಾಲಯ ರಾಯಚೂರ ಇವರ ಸ್ಪೇಷಲ್.ಸಿ ಪೋಸ್ಕೋ ನಂ 07/2015( ಸಿಂದನೂರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ) ರಲ್ಲಿ ದಿನಾಂಕ 01/06/2017 ರಂದು ಸಾದಾ ಶಿಕ್ಷೆ ಹಾಗೂ ದಂಡ ರೂ 11000/-ರೂ ದಂಡ ಕಟ್ಟಲು ತಪ್ಪಿದಲ್ಲಿ 01 ವರ್ಷ 05 ತಿಂಗಳು ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶವಿರುತ್ತದೆ. ಸದರಿ ಬಂದಿಯು ರಾಯಚೂರ ಜಿಲ್ಲಾ ಕಾರಾಗೃಹದಿಂದ ವರ್ಗಾವಣೆಯಾಗಿ ದಿನಾಂಕ 28/06/2017 ರಂದು ಈ ಸಂಸ್ಥೆಯಲ್ಲಿ ದಾಖಲಾಗಿ ಶಿಕ್ಷೆ ಅನುಭವಿಸುತ್ತಿದ್ದನು. ಸದರಿ ಬಂದಿಯು ದಿನಾಂಕ 22/11/2017 ರಂದು ಕೋಠಾ ಸಃ 06 ರಲ್ಲಿ ಬೆಳಗಿನ ಜಾವ 5.30ರ ಸಮಯದಲ್ಲಿ ತನಗೆ ತೀವ್ರ ದೆ ನೊವಾಗುತ್ತಿದೆ ಅಂತಾ ಸಹ ಬಂದಿಗಳಿಗೆ ತಿಳಿಸಿದ ಮೇರೆಗೆ ಪಹರೆ ಸಿಬ್ಬಂದಿಯವರು ಕರ್ತವ್ಯ ನಿರತ ಜೈಲರರವರಿಗೆ ವಾಕಿಟಾಕಿ ಮೂಲಕ  ಕುರಿತು ವರದಿ ಮಾಡಿರುತ್ತಾರೆ. ಸದರಿ ವಿಷಯವನ್ನು ವಾಕಿಟಾಕಿ ಮೂಲಕ ಆಲಿಸಿದ ಮುಖ್ಯ ಅಧಿಕ್ಷಕರು ಸದರಿ ಬಂದಿಗೆ ತಕ್ಷಣವೇ ಹೊರ ಆಸ್ಪತ್ರೆಗೆ ಕಳುಹಿಸುವಂತೆ ಜೈಲರ ರವರಿಗೆ ಆದೇಶಿದ ಮೇರೆಗೆ ತಕ್ಷಣವೇ ಹೆಚ್ಚಿನ ಉಪಚಾರ ಕುರಿತುಜೈಲು ಸಿಬ್ಬಂದಿ ಬೆಂಗಾವಲು ಮೂಲಕ ಕಲಬುರಗಿಯ ಜಯದೇವ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ. ಸದರಿ ಬಂದಿಗೆ ತಪಾಸಣೆ ಮಾಡಿರುವ ಜಯದೇವ ಆಸ್ಪತ್ರೆಯ ವೈದ್ಯಾಧಿಕಾರಿಗಳು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದರು. ಸದರಿ ಬಂದಿಯು ಚಿಕಿತ್ಸೆಗೆ ಸ್ಪಂದಿಸದೆ ಸಮಯ 8.30 ಕ್ಕೆ ಮೃತಪಟ್ಟಿರುತ್ತಾನೆಂದು ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಎಂದು ಬೆಂಗಾವಲು ಸಿಬ್ಬಂದಿಯವರು ಸಮಯ 8.35 ಕ್ಕೆ ಈ ಸಂಸ್ಥೆಯ ಮುಖ್ಯ ದ್ವಾರಪಾಲಕರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಸದರಿ ಬಂಧಿಯು ಮೃತಪಟ್ಟ ವಿಷಯವನ್ನು ಮೃತ ಬಂಧಿಯ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆ ಹಾಗೂ ಈ ವಿಷಯವನ್ನು ಸಿಂದನೂರ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳಿಗೂ ಸಹ ದೂರವಾಣಿ ಮೂಲಕ ತಿಳಿಸಲಾಗಿರುತ್ತದೆ. ಮೃತ ಬಂಧಿಯ ಶವವನ್ನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದು, ಶವದ ಮರಣೊತ್ತರ ಪರೀಕ್ಷೆ, ಶವ ಪಂಚನಾಮೆ, ಶವ ತನಿಖೆಯನ್ನು ವಿಡಿಯೋ ಚಿತ್ರಿಕರಣದೊಂದಿಗೆ ಗೌರವಾನ್ವಿತ 2 ನೇ ಅಪರ ಜೆಎಮ್ ಎಫ್ ಸಿ ನ್ಯಾಯಾಲಯ ಕಲಬುರಗಿ ರವರ ಸಮ್ಮುಖದಲ್ಲಿ ಮಾಡಿಸಲು ಹಾಗೂ ಮೆಜೆಸ್ಟ್ರೀಯಲ್ ತನಿಖೆಯನ್ನು ಮಾಡಿಸಿಕೊಡಲು ಸಹ ಕೋರಿದೆ. ಬಂದಿಯ ಹೆಸರಿನ ವಿವರಣಾ ಪಟ್ಟಿ ಈ ಪತ್ರದೊಂದಿಗೆ ಲಗತ್ತಿಸಿದೆ.  ಘನ ಸರ್ಕಾರದ ಪತ್ರ ಸಂಖ್ಯೆ 4ಡಿ/249/ಪಿಆರ್.ಎ/2009 ದಿನಾಂಕ: 09-01-2009 ರ ಹಾಗೂ ಡೈರೆಕ್ಟರ ಜನರಲ್ ಮತ್ತು ಇನ್ಸಪೆಕ್ಟರ ಜನರಲ್ ಆಫ್ ಪೊಲೀಸ ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: ಕಾ ಮತ್ತು ಸು-ಮಿಶ್ರ/01/2008 ದಿನಾಂಕ:25-09-2009 ರಂತೆ  ಸದರಿ ಮೃತ ಬಂದಿಗೆ ಸಂಬಂಧಿಸಿದಂತೆ ವರದಿಗಳಾದ ಶವಪಂಚನಾಮೆ, ಮರಣೋತ್ತರ ಪರೀಕ್ಷೆ ವರದಿ, ಮರಣೊತ್ತರ ಪರೀಕ್ಷೆ ಸಂಧರ್ಭದಲ್ಲಿ ಚಿತ್ರಿಕರಿಸಿದ ವಿಡಿಯೋ, ಚಿತ್ರಿಕರಣದ ಸಿಡಿ ಯನ್ನು  ಹಾಗೂ ಮ್ಯಾಜೆಸ್ಟ್ರೀಯಲ್ ವಿಚಾರಣಾ ವರದಿಯಗಳನ್ನು ನೇರವಾಗಿ ಗೌರವಾನ್ವಿತ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ಇವರಿಗೆ ಒಪ್ಪಿಸಿ ಸದರಿ ಮಾಹಿತಿಯನ್ನು ಈ ಕಛೇರಿಗೆ ಕಳುಹಿಸಿಕೊಡಲು ಕೋರಿದೆ ಅಂತಾ ಶ್ರೀ ಕೃಷ್ಣಕುಮಾರ  ಮುಖ್ಯ ಅಧಿಕ್ಷಕರು  ಕೇಂದ್ರ ಕಾರಾಗೃಹ  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: