ಕಮಾಂಡೆಂಟ್ 99 ಬಟಾಲಿಯನ್, ಆರ್.ಎ.ಎಫ್/ಸಿ.ಆರ್.ಪಿ.ಎಫ್. ಹಕೀಮಪೇಟ ಸಿಕಂದರಾಬಾದರವರು ರವರು ದಿನಾಂಕ:
20/10/2016 ರಂದು ಕಲಬುರಗಿ (ಬಿ) ಉಪ
ವಿಭಾಗದ ಅಧೀನ ಪೊಲೀಸ್ ಠಾಣೆಗಳಿಗೆ ಬೆಳಗಿನ ಅವಧಿಯಲ್ಲಿ 11-00 ಗಂಟೆಯಿಂದ ಮಧ್ಹ್ಯಾನದವರೆಗೆ ಪೊಲೀಸ್ ಠಾಣೆಗಳಿಗೆ ಭೇಟಿ ನಂತರ ಸಾಯಂಕಾಲ 04-00 ಗಂಟೆಗೆ ಚೌಕ್ ಠಾಣೆಯಿಂದ ರೂಟಮಾರ್ಚ ಪ್ರಾರಂಭಿಸಿ ಜೆ.ಬಿ ಕ್ರಾಸ್, ಚೌಕ್ ಸರ್ಕಲ್, ಪ್ರಕಾಶ ಟಾಕೀಜ್, ಶಹಾಬಜಾರ ನಾಕಾ, ಲಾಲ ಹನುಮಾನ ಗುಡಿ, ಕಾವೇರಿ ನಗರ ಅಯ್ಯರವಾಡಿ, ಹುಮನಾಬಾದ ಬೇಸ್, ಎಮ್.ಎ.ಟಿ ಕ್ರಾಸ್, ಮಿಜಗುರಿ, ರೋಜಾ ಠಾಣೆ, ಬಿ.ಬಿ ರಜಾ ಕಾಲೇಜ್, ರಫೀಕ್ ರೋಡ, ಹಾಗರಗಾ ಕ್ರಾಸ್, ರಾಮಜೀ ನಗರ, ಕಮಠಾನ ಲಾಡ್ಜ್, ಕೆ.ಬಿ.ಎನ್ ದರ್ಗಾ, ಡಂಕಾ ಕ್ರಾಸ್ ಗಣೇಶ ಮಂದಿರ,
ಸರಫ ಬಜಾರ, ಮಾಕೇಟ್ ಮಜೀದ್, ಮಹಿಬಾಸ್ಕ ಮಾಸ್ ಮಜೀದ್, ಚೌಕ್ ಪೊಲೀಸ್ ಠಾಣೆಗೆ ಬಂದು ಮುಕ್ತಾಯಗೊಂಡಿದ್ದು, ಕಾನೂನು ಸುವ್ಯವಸ್ಥೆ ಸಲುವಾಗಿ (ಬಿ) ಉಪ ವಿಭಾಗದ ಮೇಲ್ಕಂಡ ಮುಖ್ಯವಾದ
ರಸ್ತೆಗಳಲ್ಲಿ ರೂಟಮಾರ್ಚ ಮಾಡಿ ಜನರಿಗೆ ಅರಿವು ಮೂಡಿಸಲಾಗಿದೆ
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶಂಕರ
ತಂದೆ ಸಾಯಿಬಣ್ಣ ವಡ್ಡರ ಸಾ; ರಾಜಾಪೂರ ತಾ;ಜಿ;ಕಲಬುರಗಿ ಇವರು ದಿನಾಂಕ. 19-10-2016 ರಂದು ಸಂಜೆ ನನ್ನ ಗೆಳೆಯನಾದ ರಾಚಣಗೌಡ ತಾಳಿಕೋಟೆ ಸಾ;ಪಟ್ಟಣ , ಮಹಿಬೂಬ ಆಳಂದ
ಸಾ;ಸುಂಟನೂರ ಇವರು ಬೀಜ ತೆಗೆದುಕೊಳ್ಳಲು ಕಲಬುರಗಿಗೆ ಬಂದಿದ್ದು ಸಂಜೆಗೆ ಅವರು ನಾವು
ಭೇಟಿಯಾಗಿದ್ದು ನಂತರ ಊಟ ಮಾಡಲು ಪಟ್ಟಣದ ಮುತ್ತ್ಯಾನ ದಾಬಾಕ್ಕೆ ಹೋಗೊಣ ಅಂತಾ ನಾನು ಮತ್ತು ನನ್ನ
ಸಂಗಡ ಸಂತೋಷ ತಂದೆ ನಾಗಪ್ಪಾ ಜಾಪೂರ ಇಬ್ಬರು ಒಂದು ಮೋಟಾರ ಸೈಕಲ್ ಮೇಲೆ ಮತ್ತು ರಾಚಣಗೌಡ
ತಾಳಿಕೋಟೆ ಮತ್ತು ಮಹಿಬೂಬ ಸುಂಟನೂರ ಇವರಿಬ್ಬರು ಒಂದು ಮೋಟಾರ ಸೈಕಲ್ ಮೇಲೆ ಪಟ್ಟಣ ಕ್ರಾಸ ಗೆ
ಹೋಗಿ ಅಲ್ಲಿ ಇರುವ ಮುತ್ತ್ಯಾನ ದಾಬದಲ್ಲಿ ಊಟಕ್ಕೆ ಕುಳಿತಾಗ ರಾತ್ರಿ 10-00 ಗಂಟೆಯ ಸುಮಾರಿಗೆ ಮಲ್ಲಪ್ಪಾ
ವಗ್ಗೆ, ಕಾಂತಪ್ಪಾ ವಗ್ಗೆ, ಗಣೇಶ ವಗ್ಗೆ ಹಾಗೂ ಇನ್ನೂ 5-6 ಜನರು ಕೂಡಿಕೊಂಡು ಕೈಯಲ್ಲಿ
ರಾಡಗಳನ್ನು ಹಿಡಿದುಕೊಂಡು ಬಂದು ಮಲ್ಲಪ್ಪಾ ವಗ್ಗೆ ಇತನು ಬಂದವನೆ “ಎನೋ ವಡ್ಡ ಸೂಳೆಮಗನೆ 20 ಸಾವಿರ ರೂಪಾಯಿ ಕೋಡುವದಕ್ಕೆ
ಬಹಳ ಮಾತಾಡುತ್ಯಾ ಸಣ್ಣಜಾತಿ ಸೂಳೆಮಗನೆ ಅಂತಾ ನನ್ನ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ
ಬೈಯ್ದು ತನ್ನ ಜೇಬಿನಲ್ಲಿದ್ದ ಖಾರ ಪುಡಿಯನ್ನು ನನ್ನ ಮುಖದ ಮೇಲೆ ಎರಚಿ ತನ್ನ ಕೈಯಲಿದ್ದ
ರಾಡದಿಂದ ನನ್ನ ತಲೆಯ ಮೇಲೆ ಹೊಡೆದನು ಮತ್ತು ಅವನ ಸಂಗಡ ಇದ್ದ ಕಾಂತಪ್ಪಾ ವಗ್ಗೆ ಮತ್ತು ಗಣೇಶ
ವಗ್ಗೆ ಇವರು ನನ್ನ ಬಲಗೈ ಮೋಳಕೈ ಮತ್ತು ಎಡಗೈ ಮೋಳಕೈ ಮೇಲೆ ಹೊಡೆದು ಭಾರಿಗಾಗೊಳಿಸಿದ್ದು, ಮತ್ತು
ಅವರ ಸಂಗಡ ಇದ್ದ ಇನ್ನೂ 5-6 ಜನರು ನನಗೆ ಕೆಳಗೆ
ಹಾಕಿ ತಮ್ಮ ಕೈಯಲಿದ್ದ ರಾಡ ಮತ್ತು ಬಡಿಗೆಗಳಿಂದ
ಎರಡು ಮೋಳಕಾಲುಗಳಿಗೆ, ಎದೆಗೆ, ಎರಡು ಪಕ್ಕೆಗಳಿಗೆ ಹೋಡೆಯುತ್ತಾ ಆಗ ಎಲ್ಲರೂ ನನಗೆ ವಡ್ಡ ಸೂಳೆ ಮಗನಿಗೆ ಜೀವಂತ ಬಿಡಬಾರುದು ಖಲಾಸ ಮಾಡೋಣ ಅಂತಾ ರಾಡಗಳಿಂದ ಹೊಡೆದು ಕಾಲುಗಳಿಂದ ಒದ್ದು ಕೊಲೆ
ಮಾಡಲು ಪ್ರಯತ್ನಿಸುತಿದ್ದಾಗ ನಾನು ಚೀರಾಡುವಾಗ
ನನ್ನ ಸಂಗಡ ಇದ್ದ ರಾಚಣಗೌಡ ತಾಳಿಕೋಟೆ, ಮಹಿಬೂಬ ತಂದೆ ಹೈದರಸಾಬ ಅಳಂದ,
ಸಾ;ಸುಂಟನೂರ ,ಸಂತೋಷ ಜಾಪೂರ ಹಾಗೂ ದಾಬಾದ ವರ್ಕರಗಳು ಬಂದು ಹೊಡೆಯುವದನ್ನು ಬಿಡಿಸಿಕೊಂಡು. ಆಗ
ಅವರೆಲ್ಲರೂ ಸೂಳೆ ಮಗನೇ ಈಗ ಬದಕಿಕೋ ಇನ್ನೊಂದು ಬಾರಿ ನಮ್ಮೊಂದಿಗೆ ತಕರಾರು ಮಾಡಿದರೆ ನಿನ್ನನ್ನು ಮುಗಿಸಿಯೇ ಬಿಡುತ್ತೇವೆ
ಎಂದು ಹೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment