POLICE BHAVAN KALABURAGI

POLICE BHAVAN KALABURAGI

17 November 2014

Kalaburagi District Reported Crimes

ಅಪಘಾತ ಪ್ರಕರಣ:
ಸಂಚಾರಿ ಠಾಣೆ : ಶ್ರೀ ಸಲೀಮ ಪಟೇಲ ತಂದೆ ಸೇಖ ಮಹಿಬೂಬ ಪಟೇಲ,ಸಾಃ ಮುಸ್ಲಿಂ ಚೌಕ ಕಲಬುರಗಿ ರವರು  ದಿನಾಂಕ 16-11-2014 ರಂದು ಗಂಜ ಬಸ್ ನಿಲ್ದಾಣ ರೋಡಿಗೆ ಇರುವ ಪಿರ್ಯಾದಿಯ ಹಾರ್ಡವೇರ್ ಅಂಗಡಿಯ ಎದರುಗಡೆ ರೋಡಿನ ಪಕ್ಕದಲ್ಲಿ ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಜಿ 3455 ನೇದ್ದನ್ನು ನಿಲ್ಲಿಸಿ ಅಂಗಡಿಯಲ್ಲಿದ್ದಾಗ ಮಹಿಬೂಬಸಾಬ ತಂದೆ ಅನ್ವರ ಹುಸೇನ ಈತನು ತನ್ನ ಕಾರ ನಂ. ಕೆ.ಎ 32 ಎಮ್ 6002 ನೇದ್ದನ್ನು ಎಸ್.ಬಿ.ಎಚ್ ಬ್ಯಾಂಕ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅದೇ ವೇಗದಲ್ಲಿ ಯು ಟರ್ನ ಮಾಡಿಕೊಂಡು ಪಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಹಾನಿ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಸಂತೋಷ ತಂದೆ ವಿಠಲರಾವ ಸಿಂಗೆ  ಸಾ: ಹಿರಾಪುರ ಹಿರಾನಗರ ದಾವುಲ ಮಲೀಕ ಮಜ್ಜೀದ ಹತ್ತಿರ ಕಲಬುರಗಿ ರವರು ದಿನಾಂಕ 12/11/2014 ರಂದು ರಾತ್ರಿ ನನ್ನ ಕಾಕನ ಮಗ ಸಂತೋಷನಿಗೆ ಮನೆಯಿಂದ  ಕರೆತಂದು ಸದರಿ ಹೆಣ್ಣು ಮಗಳೊಂದಿಗೆ ಅನೈತಿಕ ಸಂಬಂಧ ಇಟ್ಟ ವಿಷಯದಲ್ಲಿ ಹೊಡೆದು 20,000/- ರೂ ದಂಡ ಕಟ್ಟಿದ್ದು ಅದರಲ್ಲಿ ನನ್ನ ಕಾಕಾ 10,000/- ರೂ ಭೀಮಾ ಎಂಬುವರ ಕೈಯಲ್ಲಿ ಕೊಟ್ಟಿರುತ್ತಾನೆ. ಸದರಿ ಜನರು ಪುನ: ಆಗಾಗ್ಗೆ ಉಳಿದ ದಂಢದ ಹಣ ಕೊಡು ಅಂತಾ ನನ್ನ ಕಾಕಾನಿಗೆ ಕೇಳುತ್ತಿದ್ದು ದಿನಾಂಕ 15/11/2014 ರಂದು ಸಾಯಂಕಾಲ ವಿನಾಯಕ ಬಾರ ಹತ್ತಿರ ಅವರು ಕೇಳಲು ಬಂದಾಗ ಈ ವಿಷಯ ನಮ್ಮ ಕಾಕಾ ನನಗೆ ಅಣ್ಣ ಅಶೋಕ ಇವರಿಗೆ ತಿಳಿಸಿದ್ದು ಈ ವಿಷಯದಲ್ಲಿ ಅವರಿಗೆ ತೀಳಿ ಹೇಳಿ ನಂತರ ಕೊಡುವುದಾಗಿ ಕಳುಹಿಸಿಕೊಟ್ಟಿದ್ದು ದಿನಾಂಕ 16/11/2014 ರಂದು ಮದ್ಯಾಹ್ನ 12 ಗಂಟೆ ಸಮಯಕ್ಕೆ ನಾನು ಬಸ್ ನಿಲ್ದಾಣ ಹತ್ತಿರ ಇರುವ ವಿನಾಯಕ ಬಾರದ ಪಾನಿ ಪುರಿ ಬಂಡಿ ಹತ್ತಿರ ಇಂದಾಗ ಬಸವನಗರದ ಅರವಿಂದ, ರಾಜು, ಮಾಹಾವೀರ, ಮಡ್ಡಿ ಕ್ವಾಟರ್ಸ ಹುಡುಗ, ಭೀಮಾ ಎಂಬುವವರು ನನ್ನಲಿಗೆ ಬಂದು ಏ ಭೋಸಡಿ ಮಗನೇ ಎಲ್ಲಿ ನಿಮ್ಮ ಕಾಕಾ ಎಲ್ಲಿ ಹಣ ಅಂತಾ ಅಂದವರೇ ನನಗೆ ಅವರ ಕೈಯಲ್ಲಿದ್ದ ಸ್ಟೀಕ ಸ್ಟಂಪ ಇವುಗಳಿಂದ ಹೊಡೆಯಲು ಹತ್ತಿದ್ದು ನಾನು ಎಷ್ಠು ಚಿರಾಡಿದರೂ ಬಿಡದೇ ನನ್ನ ಎಡಗೈ ಹಸ್ತದ ಕೆಳಗೆ ಬೆನ್ನಿನ ಮೇಲೆ, ಹೊಟ್ಟೆ ಮೇಲೆ, ಎಡಗಾಲು ತೊಡೆಯ ಮೇಲೆ. ಹೊಡೆಬಡೆ ಮಾಡಿ ಗುಪ್ತ ಗಾಯಪಡಿಸಿ ನನಗೆ ಜಬದಸ್ತಿಯಿಂದ ಎತ್ತಿ ಅಲ್ಲಿಯೆ ನಿಂತ ಕಾರಿನಲ್ಲಿ ನನಗೆ ಹಾಕಿಕೊಂಡು  ಮಗನೇ ನಿಮ್ಮ ಅಣ್ಣ ಅಶೋಕ ಎಲ್ಲಿ ಆತನಿಗೆ ತೊರಿಸು ಅಂತಾ ನನಗೆ ಹೊಡೆಯುತ್ತಾ ಕಾರಿನಲ್ಲಿ ಹಾಕಿದ್ದು ಕಾರಿನ ಒಳಗೆ ರಾಜು, ಅರವಿಂದ, ಇನ್ನೂ ಇಬ್ಬರೂ ಹುಡುಗರು ಹೆಸರು ಗೊತ್ತಿಲ್ಲಾ ಇವರೆಲ್ಲರೂ ಅಣ್ಣನಿಗೆ ತೊರಿಸು ಅಂತಾ ನನಗೆ ಹೊಡೆಯುತ್ತಾ ನೋವು ತಾಳಲಾರದೇ ಹಿರಾಪುರ ಮನೆಯಲ್ಲಿ ಇರುವುದಾಗಿ ಹೇಳಿ ನಮ್ಮ ಮನೆಗೆ ಕರೆದುಕೊಂಡು ಬರುವಾಗ ನಮ್ಮ ಕಾರಿನ ಹಿಂದುಗಡೆ ಸುಮಾರು 12 ಮೋಟಾರ ಸೈಕಲಗಳು ಹೀಗೆ ಒಟ್ಟು 28-30 ಜನರು ಬಂದವರೇ ನನಗೂ ನನ್ನ ಅಣ್ಣನಿಗೂ ಹಿರಾಪೂರದಲ್ಲಿ ಹಾಕಿ ಸ್ಟೀಕ, ಸ್ಟಂಪದಿಂದ ಹೊಡೆ ಹತ್ತಿದ್ದು  ಅಶೋಕ ಇತನಿಗೆ ಖಲಾಸ ಮಾಡಿ ಅಂತಾ ಆತನ ತಲೆಯ ಮೇಲೆ ಎಡಗಣ್ಣಿನ ಮೇಲೆ , ಬಲಕೈ, ಎಡಕೈ ಮೇಲೆ ಕಾಲುಗಳ ಮೇಲೆ ಹೊಡೆದು ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀಮತಿ ಶಾಣಮ್ಮ ಗಂಡ ರಾಮದಾಸ ರಾಠೋಡ ಸಾ|| ನಿಂಬರ್ಗಾ ತಾಂಡಾ ರವರು ದಿನಾಂಕ 16/11/2014 ರಂದು ತಮ್ಮ ಮನೆಯ ಹತ್ತಿರ ಸಿ.ಸಿ ರಸ್ತೆಯ ಮೇಲೆ ಹಿಂದಿನ ದ್ವೇಶ ಕಟ್ಟಿಕೊಂಡು ತಮ್ಮ ತಾಂಡಾದ ಉಮೇಶ ತಂದೆ ಮೋತಿ ರಾಠೋಡ ಇತನು ತಡೆದು ನಿಲ್ಲಿಸಿ ಏ ರಂಡಿ ಮೊನ್ನೆ ನೀನು ಲಖನ ಪರವಾಗಿ ಬಂದು ಜಗಳ ಬಿಡಸಿ ಅಂತ ಕೈಯಿಂದ ತಲೆಯ ಮೇಲೆ ಹೊಡೆದು ಸೀರೆಯ ಸೆರಗು ಹಿಡಿದು ಕೈಯಿಂದ ನುಗಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: