POLICE BHAVAN KALABURAGI

POLICE BHAVAN KALABURAGI

19 August 2014

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ  ರಾಜಶ್ರೀ ಗಂಡ ಶಿವರಾಯ ಉಜಳಾಂಬೆ ಸಾ|| ಚಿತಲಿ  ರವರಿಗೆ ದಿನಾಂಕ 24-04-2014 ರಂದು ಚಿತಲಿ ಗ್ರಾಮದಲ್ಲಿ ಧಾರ್ಮಿಕ ಪಧ್ಧತಿಯಂತೆ ಮದುವೆಯಾಗಿದ್ದು ಆಗ 3,51,000/- ರೂಪಾಯಿ ಹಾಗೂ 25 ಗ್ರಾಂ ಬಂಗಾರ ವರದಕ್ಷಿಣೆ ರೂಪದಲ್ಲಿ ಕೊಡಬೇಕು ಅಂತಾ ಮಾತುಕತೆ ಪ್ರಕಾರ 1,51,000/- ರೂಪಾಯಿ ಹಾಗೂ 35 ಗ್ರಾಂ ಬಂಗಾರ ಕೊಟ್ಟಿದ್ದು ಉಳಿದಿದ್ದು ಕೊಡಲಾರದಿಕ್ಕೆ ಸತತವಾಗಿ ಕಿರುಕುಳ ಕೊಡುತ್ತಾ ಬಂದು ನನ್ನ ಗಂಡ ಶಿವರಾಯ ತಂದೆ ಸಿದ್ರಾಮಪ್ಪಾ, ಅತ್ತೆ ಮಹಾದೇವಿ ಗಂಡ ಸಿದ್ರಾಮಪ್ಪಾ, ಮಾವ ಸಿದ್ರಾಮಪ್ಪಾ ತಂದೆ ಈರಣ್ಣಾ, ಮೈದುನ ಶರಣಬಸಪ್ಪಾ ತಂದೆ ಸಿದ್ರಾಮಪ್ಪಾ, ನಾದನಿ ಶ್ರೀದೇವಿ ತಂದೆ ಸಿದ್ರಾಮಪ್ಪಾ, ಮೈದುನ ನಾಗೇಂದ್ರಪ್ಪಾ ತಂದೆ ಸಿದ್ರಾಮಪ್ಪಾ, ರವರು ಸಾ|| ಎಲ್ಲರೂ ಚಿತಲಿ ರವರು ಹೊಡೆಬಡೆ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ವರದಕ್ಷಿಣೆ ತರುವಂತೆ ಪೀಡಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೆಣ್ಣು ಮಗು ಹುಟ್ಟಿದೆ ಅಂತಾ ಕಿರುಕುಳ ಕೊಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಳಖೇಡ ಠಾಣೆ : ದಿನಾಂಕ 18-8-2014 ರಂದು ಸಾಯಂಕಾಲ 6-45 ಗಂಟೆಗೆ ಹಣಮಂತ ಹೋಮಗಾರ್ಡ 293 ಮಳಖೇಡ ಠಾಣೆ ರವರು ಮದ್ಯಾನ 2-00 ಗಂಟೆಯಿಂದ ಮಳಖೇಡ ಎಪಿಎಂಸಿ ಮುಂದುಗಡೆ ಟ್ರಾಪಿಕ ಕಂಟ್ರೋಲ ಕರ್ತವ್ಯ ನಿರ್ವಹಿಸುತ್ತಿರುವಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಿಗೆ ಅಟೋ ತೆಗೆಯಲು ಹೇಳಿದಾಗ ಬೈದಿದ್ದು ನಂತರ ಸ್ವಲ್ಪ ಸಮಯದಲ್ಲಿ ಒಬ್ಬ ಕುಡಿದ ಅಮಲಿನಲ್ಲಿ ಇದ್ದ ಮನುಷ್ಯನು ಬಂದು ರೋಡಿನ ನಡುವೆ ಕುಳಿತಾಗ ಅವನಿಗೆ ರಸ್ತೆಯ ಪಕ್ಕಕ್ಕೆ ಕೂಡಿಸಿದಾಗ ಅವನು ತಾನೆ ಬಿದ್ದು ತಲೆಗೆ ಗಾಯವಾದಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಾದ ನಾಗರಾಜ ಸಂಗಡ 2-3 ಜನರು ಬಂದು ತನಗೆ ನೀನು ನಮ್ಮ ಸಂಬಂಧಿಕರಿಗೆ ಹೊಡೆದಿದ್ದಿ ಮಗನೆ ಅಂತಾ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ತನಗೆ ಕರ್ತವ್ಯ ನಿರ್ವಹಿಸಲು ಅಡೆತಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಶಿವಾನಂದ ತಂದೆ ಶೇಶಪ್ಪ ವಿಶ್ವಕರ್ಮ ಸಾ: ಆಶಾ ನಗರ ಕುರಕುಂಟಾ ತಾ: ಸೇಡಂ ಜಿ:ಗುಲಬರ್ಗಾ ರವರ ತಮ್ಮ ವೀರಭದ್ರ ಇತನು ಸೇಡಂದಲ್ಲಿ ಕಾರ್ಪೆಂಟರ ಕೆಲಸ ಮಾಡುತ್ತಿದ್ದರಿಂದ ದಿನಾಂಕ: 18/08/14 ರಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯ ಠಾಣೆ ಸಿಬ್ಬಂದಿಯವರು ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಗುಲಬರ್ಗಾ-ಸೇಡಂ ಮುಖ್ಯ ರಸ್ತೆಯ ಶ್ರೀನಿವಾಸ ಸರಡಗಿ ಕ್ರಾ ದಾಟಿ 1 km ದೂರದಲ್ಲಿ ನಿಮ್ಮ ತಮ್ಮ ವೀರಭದ್ರ ಅಪಘಾತವಾಗಿ ಮೃತಪಟ್ಟಿರುತ್ತಾನೆ ಬಂದು ನೋಡಲು ತಿಳಿಸಿದ್ದರಿಂದ ನಾನು ಗಾಬರಿಗೊಂಡು ಸಂಗಡ ನಾಗರಾಜ ತಂದೆ ಬಾಲಪ್ಪ ದೇಗಲಮಡಿ ಇವರಿಗೆ ಕರೆದುಕೊಂಡು ಬಂದು ಸ್ಥಳಕ್ಕೆ ಬಂದು ನನ್ನ ತಮ್ಮನಿಗೆ ನೋಡಲು ಅಪಘಾತದಲ್ಲಿ ಮುಖ ಪೂರ್ತಿ ಜಜ್ಜಿ ಹಣೆಯ ಭಾಗ ಹೊಡೆದು ಹೋಗಿದ್ದು. ಎಡಗೈ ಮೊಳಕೈ ಹತ್ತಿರ ರಕ್ತಗಾಯವಾಗಿ ಮುರಿದು ಹೋಗಿರುತ್ತದೆ. ನನ್ನ ತಮ್ಮ ನಮ್ಮ ಮನೆಯ ಬಾಜು ಇರುವ ನಾಗರಾಜ ಇವರ ಮೊಟಾರ ಸೈಕಲ ನಂ. KA-32-EC-3268 ನೇದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ: 17/08/14 ರಂದು ಸಾಯಂಕಾಲ 4-30 ಪಿಎಮಕ್ಕೆ ತೆಗೆದುಕೊಂಡು ನಂತರ ಸೇಡಂದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ರಾತ್ರಿ ಅಂದಾಜು 10:00 ಗಂಟೆಯಿಂದ ದಿನಾಂಕ: 18/08/14 ರಂದು 00:00 ಗಂಟೆಯ ಅವಧಿಯಲ್ಲಿ ಯಾವುದೊ ಭಾರಿ ವಾಹನ ನನ್ನ ತಮ್ಮನಿಗೆ ಡಿಕ್ಕಿಪಡಿಸಿ ಗಾಯಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

No comments: