POLICE BHAVAN KALABURAGI

POLICE BHAVAN KALABURAGI

28 June 2014

Gulbarga District Reported Crimes

ಕೊಲೆ ಪ್ರಕರಣ :
ದೇವಲ ಗಾಣಗಾಪೂರ ಠಾಣೆ : ಶ್ರೀಮತಿ ಪಾರ್ವತಿ ಗಂಡ ನೀಲಪ್ಪ ರುಮ್ಮಗೋಳ ಸಾ|| ಹಸರಗುಂಡಗಿ ರವರ ತಮ್ಮ ಶೇಖಪ್ಪ ಮತ್ತು ಶೇಖಪ್ಪನ ಮನೆಯವರಿಗೂ ಮತ್ತು ಆರೋಪಿ ಸುರೇಶನ ಮನೆಯವರಿಗೂ ಈಗ ಸುಮಾರು ನಾಲ್ಕು ತಿಂಗಳ ಹಿಂದೆ ಜಗಳವಾಗಿದ್ದರಿಂದ ಸುರೇಶನು ಶೇಖಪ್ಪ ಮತ್ತು ಆತನ ಹೆಂಡತಿ ಮಕ್ಕಳು ತನ್ನ ಕೊಲೆಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಕೇಸು ದಾಖಳಿಸಿದ್ದು ಸದರಿ ಕೇಸು ನ್ಯಯಾಲಯದಿಂದ ಬಿಡುಗಡೆ ಆಗಿರುತ್ತದೆ. ಕೇಸ ನ್ಯಾಯಾಲಯದಲ್ಲಿ ಬಿಡುಗಡೆ ಆಗಿದ್ದರಿಂದ ಸುರೇಶ ಮತ್ತು ಆತನ ಮನೆಯವ ರೆಲ್ಲರೂ  ಶೇಖಪ್ಪನ ಮನೆಯವರ ಮೇಲೆ ವೈಮನಸ್ಸು ಹೊಂದಿದ್ದು ಅದೆ ವೈಮನಸ್ಸಿನಿಂದ ದಿನಾಂಕ: 28-06-2014 ರಂದು 01-00 ಗಂಟೆಯ ಸುಮಾರಿಗೆ ಶೆಖಪ್ಪ ಮತ್ತು ಅವನ ಹೆಂಡತಿ ಮಕ್ಕಳೊಂದಿಗೆ ಜಗಳ ಮಾಡಿ ಮುಖದ ಮೇಲೆ ಖಾರದ ಪುಡಿ ಹಾಕಿ ಕೊಡಲಿ, ಕಬ್ಬಿಣದ ರಾಡು, ಬಡಿಗೆ, ಕಲ್ಲುಗಳಿಂದ, ಹೊಡೆದು ಶೇಖಪ್ಪನ ಕೊಲೆ ಮಾಡಿ , ಆತನ ಹೆಂಡತಿ ಮಕ್ಕಳು ಮತ್ತು ಶೇಖಪ್ಪನ ತಂಗಿ ಅನಸುಬಾಯಿಗೆ ಕೊಲೆಗೈಯಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: