POLICE BHAVAN KALABURAGI

POLICE BHAVAN KALABURAGI

01 April 2014

Gulbarga District Reported Crimes

ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ನಾರಾಯಣ ತಂದೆ ಭೀಮರಾವ ಗರಡಕರ  ಸಾ|| ಲಾಲಗೇರಿ ಬ್ರಹ್ಮಪೂರ ಗುಲಬರ್ಗಾ ಇವರು 15 ದಿವಸಗಳ ಹಿಂದೆ ದಿನೇಶ ಇವನು ಮೋಟಾರ ಸೈಕಲನಿಂದ ನಮ್ಮ ಬಡಾವಣೆಯ ಮನಸೂರ ಇವರ ಒಂದು ಕೋಳಿಯ ಮೇಲೆ ಹಾಯಿಸಿದ್ದರಿಂದ ಕೊಳಿ ಸತ್ತಿದಕ್ಕೆ ಮನಸೂರ ಇವನು ನನ್ನ ಅಳಿಯ ದಿನೇಶ ಇವನಿಗೆ 300/- ರೂ. ದಂಡ ತೆಗೆದುಕೊಂಡಿದರು ಆ ಸಮಯದಲ್ಲಿ  ಮನಸೂರ ಮತ್ತು ನನ್ನ ಸಂಗಡ ಬಾಯಿಮಾತಿನ ತಕರಾರು ಆಗಿದ್ದು ದಿನಾಂಕ: 31-03-2014  ರಂದು ರಾತ್ರಿ 11 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಬಂಧಿಕ ವಿಕಾಸ ಮತ್ತು ನಮ್ಮ ಮನೆಯ ಬಾಡಿಗೆಯಲ್ಲಿದ್ದ ನಾಗರಾಜ ನಾವೆಲ್ಲರೂ ಒಬ್ಬರಿಗೊಬ್ಬರು ಮಾತನಾಡುತ್ತ ನಿಂತಿದ್ದರು ಅದೇ ವೇಳೆಯಲ್ಲಿ ಮನಸೂರ ಇವನು ತನ್ನ ಜೊತೆಯಲ್ಲಿ ರಬ್ಬಾನಿ ಇವರೊಂದಿಗೆ ಬಂದವನೆ ಮನಸೂರ ಇವನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಏ ರಾಂಡ ಕೇ ಬೇಟೆ ತುಮ್ ಉಸ್ ದಿನ ಮೇರೆಸಾತ ಜಗಳ ಕ್ಯೂಕರೆ ಅಂದವನೆ ತನ್ನ ಕೈಯಲ್ಲಿದ್ದ ಒಂದು ಚಾಕುವಿನಿಂದ ನನ್ನ ಎಡಗೈ ಮೇಲೆ ಹೊಡೆದು ರಕ್ತಗಾಯ ಮಾಡುತ್ತಾನೆ ರಬ್ಬಾನಿ ಇವನು ಕಲ್ಲಿನಿಂದ ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಬ್ಬೀರ ತಂದೆ ನಬಿ ಸಾಬ ನದಾಫ ಸಾ: ಮದಿಕಾಲೋನಿ ಎಮ್.ಎಸ್.ಕೆ. ಮಿಲ್  ಗುಲಬರ್ಗಾ ರವರು  ದಿನಾಂಕ: 31-03-2014  ರಂದು ಮಧ್ಯಾಹ್ನ 2  ಗಂಟೆಗೆ ಫಿರ್ಯಾದಿಯು ತನ್ನ ದೊಡ್ಡಪ್ಪನ ಮಗನಾದ ಮಹಿಮೊದ್ದಿನ ಈತನ ಅಟೋರೀಕ್ಷಾ ನಂ: ಕೆಎ 32  8636 ನೆದ್ದರಲ್ಲಿ ಕುಳಿತು ಸುಪರ ಮಾರ್ಕೇಟಕ್ಕೆ ಬಂದು ವಾಪಸ ಮನೆಗೆ ಹೋಗುವ ಕುರಿತು ಸುಪರ ಮಾರ್ಕೇಟ ದಿಂದ ಜಗತ ಸರ್ಕಲ್ ಮುಖಾಂತರ ಅಟೋರೀಕ್ಷಾದಲ್ಲಿ ಹೋಗುತ್ತಿದ್ದಾಗ ಮಹಿಮೋದ್ದಿನ ಈತನು ಜಗತ ಸರ್ಕಲ್ ಹತ್ತಿರ ತನ್ನ ಅಟೋರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋ/ಸೈಕಲ್ ಕ್ಕೆ ಕಟ್ ಹೊಡೆಯಲು ಹೋಗಿ ಒಮ್ಮೇಲೆ ಬ್ರೇಕ್ ಹಾಕಿ ಅಟೋರೀಕ್ಷಾ ಪಲ್ಟಿ ಮಾಡಿ ರಕ್ತಗಾಯ ಮಾಡಿ[[ಟರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: