POLICE BHAVAN KALABURAGI

POLICE BHAVAN KALABURAGI

29 April 2014

Gulbarga District Reported Crimes

ಅಪ್ನಾ ಬಾರ & ರೆಸ್ಟೋರೆಂನ ಮುಂದುಗಡೆ ಪಿಸ್ತೂಲದಿಂದ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿದವರ ಬಂಧನ :
 
 ದಿನಾಂಕ 27/04/14 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಗುಲಬರ್ಗಾ  ನಗರದ ಅನ್ನಪೂರ್ಣ ಕ್ರಾಸ ಹತ್ತಿರ ಇರುವ ಅಪ್ನಾ ಬಾರ &ರೆಸ್ಟೋರೆಂಟದಲ್ಲಿ ಕ್ಷುಲಕ ವಿಷಯದಲ್ಲಿ ಶರಣಬಸಪ್ಪ ತಂದೆ ವೆಂಕಣ್ಣಾ ಬೊಜ್ಜಾ ಇವರಿಗೆ ಅಯೂಬ ತಂದೆ ಫಕೀರ ಅಹ್ಮದ್  ಬಾಗಬಾನ ಕಾಯ್ದೆ.ತ ಬಡಾವಣೆಯ ಗುಲಬರ್ಗಾ  ಸಾ|| ಮುಸ್ಲಿಂ ಚೌಕ ಚಾಚಾ ಹೊಟೇಲ್ ಹತ್ತಿರ ಗುಲಬರ್ಗಾ  ಬಾಬರ  ತಂದೆ ಹೈದರ ಅಲಿ ಸಿರಸಿ ಸಾ|| ಗೇಸುದರಾಜ ಕಾಲೊನಿ ಬಾಂಬೆ ಹೊಟೇಲ್ ಹತ್ತಿರ ಗುಲಬರ್ಗಾ  ಇವರು ಪಿಸ್ತೂಲದಿಂದ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ. ಗಾಯಾಳು ಶರಣಬಸಪ್ಪ ಬೊಜ್ಜಾ ಇವರು ಸದ್ಯ ಹೈದ್ರಾಬಾದನ ಯಶೋದಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುತ್ತಾರೆ.ಇಂದು ದಿನಾಂಕ 29/04/2014 ರಂದು ಶ್ರೀ. ಅಮಿತ್ ಸಿಂಗ್  ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರುಹಾಗು ಶ್ರೀ.ಸವಿಶಂಕರ ನಾಯಕ ಡಿ.ಎಸ್.ಸ್ಪಿ. '''' ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯ ಶ್ರೀ.ಕೆ.ಎಂ.ಸತೀಶ ಪೊಲೀಸ್ ಇನ್ಸಪೆಕ್ಟರ್ ಮತ್ತು ಶ್ರೀ.ವಿನಾಯಕ ಪಿ.ಎಸ್.ಐ ರವರು ಮತ್ತು ಅವರ ಸಿಬ್ಬಂದಿಯವರಾದ ಶ್ರೀ.ಮಾರುತಿ ಎ.ಎಸ್.ಐಶಿವಲಿಂಗಪ್ಪಉದಯಕುಮಾರಪಂಡಿತ. ಆನಂದಪಿಸಿ ರವರೆಲ್ಲರೂ ಕೂಡಿಕೊಂಡು ಆರೋಪಿತರು ಚಾಚಾ ಹೊಟೇಲ್ ಹತ್ತಿರ ಇರುವ ಅಯೂಬ ಈತನ ಮನೆಯಲ್ಲಿ ಇದ್ದ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಕೃತ್ಯದಲ್ಲಿ ಬಳಿಸಿದ ಪಿಸ್ತೂಲ ಮತ್ತು ಮೂರು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

No comments: