POLICE BHAVAN KALABURAGI

POLICE BHAVAN KALABURAGI

28 January 2014

Gulbarga District Reported Crimes

ಹಲ್ಲೆ ಪ್ರಕರಣಗಳು :
ಚಿಂಚೋಳಿ ಠಾಣೆ : ಶ್ರೀಮತಿ ಚಂದ್ರಕಲಾ ಗಂಡ ಜಗನ್ನಾಥ ದೇಗಲಮಡಿ ಸಾ|| ಬಡಿದರ್ಗಾ ಚಿಂಚೋಳಿ ರವರು ಒಂದು ವರ್ಷದಿಂದ ನಮ್ಮ ಓಣೆಯ ಜಗನ್ನಾಥ ತಂದೆ ತಿಪ್ಪಣ್ಣ ದೇಗಲಮಡಿ ಎಂಬುವವನೊಂದಿಗೆ ಪ್ರೀತಿ ಮಾಡುತ್ತಾ ಬಂದಿರುತ್ತೆನೆ ಹೀಗಿದ್ದು ನಮ್ಮ ಪ್ರೀತಿಯು ಗಾಢವಾಗಿ ಬೆಳೆದಿದ್ದು ದಿನಾಂಕ 26.01.2014 ರಂದು ನಾನು ಮತ್ತು ನಾನು ಪ್ರೀತಿಸಿದ ಜಗನ್ನಾಥ ಇಬ್ಬರೂ ಕೂಡಿ ಪರಸ್ಪರ ಸ್ವ-ಇಛ್ಚೆಯಿಂದ ಇಬ್ಬರು ಪ್ರೌಢ ವಯಸ್ಕರಾದ್ದರಿಂದ ಪ್ರೇಮ ವಿವಾಹವಾಗಿರುತ್ತೆವೆ. ಹೀಗಿದ್ದು ಇಂದು ದಿನಾಂಕ 28.01.2014 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ನಾನು ನನ್ನ ಗಂಡನ ಮನೆಯಿಂದ ಬಟ್ಟೆಗಳನ್ನು ತೊಳೆದುಕೊಂಡು ಬರಲೆಂದು ನಮ್ಮೂರ ಹತ್ತಿರ ಹರಿಯುವ ಮುಲ್ಲಾಮಾರಿ ಹಳ್ಳಕ್ಕೆ  ಹೋಗಿ ಬಟ್ಟೆಗಳನ್ನು ತೊಳೆಯುತ್ತಿದ್ದೆನು. ನನ್ನಂತೆಯೆ ಲಕ್ಷ್ಮೀ ಗಂಡ ಝರಣಪ್ಪ ಘಾಲಿ ಎಂಬುವವಳು ಸಹ ಬಂದು ಅದೇ ಹಳ್ಳದಲ್ಲಿ ಬಟ್ಟೆಗಳನ್ನು ತೋಳೆಯುತ್ತಿದ್ದಳು ನನಗೆ ಪರಿಚಯಸ್ತನಾದ ಸಂಜೀವಕುಮಾರ ತಂದೆ ಬೀಮಶಾ ಐನೋಳ್ಳಿ ಎಂಬುವವನು ತನ್ನ ಕ್ರೂಸರ ವಾಹನವನ್ನು ಹಳ್ಳದಲ್ಲಿ  ತೊಳೆಯುತಿದ್ದೆನು.. ಹಳ್ಳದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ನನ್ನ ತಂದೆಯಾದ ಸೂರ್ಯಕಾಂತ ತಂದೆ ನಾಗಪ್ಪ ಐನೋಳ್ಳಿ ರವರು ನಾನು ಬಟ್ಟೆ ತೊಳೆಯುವಲ್ಲಿಗೆ ಬಂದು ಏ ರಂಡಿ ಸೂಳೀ ನೀನು ನಮ್ಮ ಇಛ್ಚೆಯ ವಿರುದ್ಧ ನಮಗೆ ಬೇಡವಾದ ಹುಡುಗನೊಂದಿಗೆ ವಿವಾಹ ಆಗಿದ್ದು ಅಂತಾ ಅಂದವನೇ ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲಿದ್ದ ಕೋಯ್ತಾದಿಂದ ಹೊಡೆದನು ಆಗ ನಾನು ತಪ್ಪಿಸಿಕೊಳ್ಳಲು ಹೋದಾಗ ನನ್ನ ಬಲ ಕುಂಡಿಗೆ ಕೋಯ್ತಾದ ಹೊಡೆತ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಚೌಕ ಠಾಣೆ : ಶ್ರೀ ಸಲಿಮ ತಂದೆ ಮತ್ತೆಸಾಬ ಶೇಖ ಸಾಃ ಕೈಲಾಸ ನಗರ ಮಲ್ಲಿಕಾರ್ಜುನ ಗುಡಿಯ ಹತ್ತಿರ ಗುಲಬರ್ಗಾ ರವರು  ದಿನಾಂಕ 27.01.2014 ರಂದು ರಾತ್ರಿ 11.45 ಗಂಟೆಗೆ ಆಸ್ಮಾ ಇವಳು ಪೋನ ಮಾಡಿ ಅರ್ಜಂಟ ಮನೆಗೆ ಬರಬೇಕು ಇಲ್ಲವಾದರೆ ನಾನೆ ನಿಮ್ಮ ಮನೆಗೆ ಬರುತ್ತೇನೆ ಅಂತ ಹೇಳಿದ್ದರಿಂದ ನಾನು ನನ್ನ ಗಳೆಯನಾದ ಶ್ರೀಕಾಂತ ರಡ್ಡಿ ಇವನ ಮನೆಗೆ ಹೋಗಿ ಅವನಿಗೆ ಕರೆದುಕೊಂಡು ಆಸ್ಮಾ ಇವಳ ಮನೆಗೆ ಹೋಗಿ ಶ್ರೀಕಾಂತ ಇತನು ನನಗೆ ಬಿಟ್ಟು ಒಳಗೆ ಹೋದನು. ಆಗ ನಾನು ಅವರ ಮನೆಗೆ ಹೋಗಿ ಯಾಕೆ ಈ ರೀತಿ ಪೋನ ಮಾಡಿ ಕರೆದಿದ್ದಿ ಅಂತ ಕೇಳಲು ಆಸ್ಮಾ ಇವಳು ಏ ರಂಡಿ ಮಗನೆ ರಾಂಡಕೆ ಬೇಟೆ ನನ್ನ ಸಂಗಡ ಪ್ರಿತಿ ಮಾಡಿ ಈಗ ದೂರವಾಗಿದ್ದಿ ಯಾಕೆ ನನ್ನ ಸಂಗಡ ಮಾತನಾಡುವದಿಲ್ಲ ಮನೆಗೆ ಬರುತ್ತಿಲ್ಲ ಬೈಯ್ಯುತ್ತಿದ್ದಾಗ ಅವಳ ಮನೆಯಲ್ಲಿದ್ದ ಆರೋಪಿತರ ಕೂಡಿ ಬಂದು ಅವರಲ್ಲಿ ಮುಸ್ತಫಾ ಇತನು  ಅವಾಚ್ಯವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ಕಪಾಳಕ್ಕೆ ಹೊಡೆದನು. ಅಹ್ಮದ ಇತನು ಬಡಿಗೆಯಿಂದ ಎಡಗಾಲ ಮೊಣಕಾಲ ಕೆಳಗೆ ಎಡಬಲ ಭುಜದ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಸಲ್ಮಾ ಮತ್ತು ಮೆಹರುನ್ನಿಸಾ ಇವರು ಮಾರು ಏ ರಾಂಡಕೆ ಬೆಟೆಕೊ ಅಂತ ಬೈದು ಎಲ್ಲರು ಕೂಡಿ ಹೊಡೆಬಡೆ ಮಾಡುತ್ತಿದ್ದಾಗ ಆಸ್ಮಾ ಇವಳ ಕಡೆಯಿಂದ ವಿನಾಯಕ ಎಂದು ಬರೆದ ಕಾರಿನಲ್ಲಿ 4 ಜನರು ಕೈಯಲ್ಲಿ ತಲ್ವಾರ, ರಾಡ, ಜಂಬ್ಯಾ ಹಿಡಿದುಕೊಂಡು ಬಂದಾಗ ಆಸ್ಮಾ ಇವಳು ಏ ರಾಂಡಕೆ ಬೇಟೆಕೊ ಖತಮ ಕರೊ ಅಂತ ಅಂದಾಗ 4 ಜನರ ಪೈಕಿ ಒಬ್ಬನು ರಾಡಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಮತ್ತೊಬ್ಬನು ರಾಡಿನಿಂದ ಎಡಬಲ ಕೈ, ನಡುವ ಮತ್ತು ಉಂಗುರು ಬೆರಳಿಗೆ ಹೊಡೆದು ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: