POLICE BHAVAN KALABURAGI

POLICE BHAVAN KALABURAGI

19 November 2013

Gulbarga District Reported Crimes

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ರಾಘವೇಂದ್ರ ತಂದೆ ಹಣಮಂತಪ್ಪಾ ದೇಸಾಯಿ   ಸಾ: ಪ್ಲಾಟ ನಂ 34 ಭಗವತಿ ನಗರ ಗುಲಬರ್ಗಾ ರವರು ದಿನಾಂಕ 18-11-2013 ರಂದು ರಾತ್ರಿ 11 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಅಂಜಲಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮನೆಯ ಪಡಸಾಲೆಯಲ್ಲಿ  ಮಲಗಿದ್ದು  ಇಂದು ಬೆಳಗಿನ ಜಾವ 5 ಗಂಟೆಗೆ ಎದ್ದು ನೋಡಲು ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಹಿಂದುಗಡೆ ಅಡುಗೆ ಮನೆಯ ಬಾಗಿಲು ಕೊಂಡಿ ಮತ್ತು ಅಡ್ಡ ರಾಡ  ತೆಗೆದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಅಲಮಾರ ತೆರೆದು ಬಂಗಾರದ ಆಭರಣ ಹಾಗು ನಗದು ಹಣ ಹೀಗೆ ಒಟ್ಟು  76,000/- ರೂ ಮೌಲ್ಯದ ಬಂಗಾರ ಬೆಳ್ಳಿ ನಗದು ಹಣ ವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ನಾಗಪ್ಪ ತಂದೆ ನರಸಪ್ಪ  ಮಡಿವಾಳ ಸಾ|| ಸಿರಸಿ (ಎ) ತಾ|| ಜೀ|| ಬೀದರ ರವರು ದಿನಾಂಕ, 18.11.2013 ರಂದು ಸಾಯಾಂಕಾಲ 06.00 ಗಂಟೆಯ ಸುಮಾರಿಗೆ ನಮ್ಮೂರಿನಿಂದ ಪಟಪಳ್ಳಿ ಗ್ರಾದಲ್ಲಿರುವ ಮ್ಮ ಅತ್ತೆ-ಮಾವರ ಮನೆಗೆ ಬಂದು ನನ್ನ ಹೆಂಡತಿಯನ್ನು ಇವತತ್ಉ ಕರೆದುಕೊಂಡು ಹೋಗುತ್ತೆನೆ ಅಂತಾ ಹೇಳಿದ್ದು  ನನ್ನ ಅತ್ತೆ ಮತ್ತು ಮಾವ ಇಬ್ಬರೂ ಇನ್ನೂ 2-3 ದಿವಸಗಳವರೆಗೆ ಇಲ್ಲೇ ಇರಲಿ ಅವಳಿಗೆ ಕರೆದುಕೊಂಡು ಹೋಗಬೇಡ ನಾವು ಕಳುಹಿಸಿಕೊಡುವುದಿಲ್ಲಾ ಅಂತಾ ಹೇಳಿದ್ದು ನಾನು ನಮ್ಮ ಅತ್ತೆ ಮಾವರ ಮನೆಯ ಪಕ್ಕದಲ್ಲಿರುವ ಶ್ರೀ ನಾಗಪ್ಪ ತಂಧೆ ಭಿಮಶಾ ಎಂಬುವವರ ಮನೆಯಂಗಳದಲ್ಲಿ ಅವರೋಂದಿಗೆ ಮಾತಾನಾಡುತ್ತಾ ನಿಂತಿದ್ದೆನು ಆಗ ನನ್ನ ಹೆಂಡತಿಯಾದ ದ್ರೌಪದಿ, ಮಾವನಾದ ಸುಭಾಸ ,ಅತ್ತೆಯಾದ ಪದ್ಮಾವತಿ ಮತ್ತು ಭಾವ –ಮೈದುನನಾದ ಸೂರ್ಯಕಾಂತ ನಾಲ್ಕುಜನರು ಕೂಡಿಕೊಂಡು ಬಂದವರೆ  ಏ ರಂಡಿ ಸೂಳಿ ಮಗನೇ ಇನ್ನೂ 2-3 ದಿವಸಗಳ ನಂತರ ಕರೆದುಕೊಂಡು ಹೋಗು ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೊಡಲಿ ಮತ್ತು ಕಲ್ಲಿನಿಂದ ನನ್ನ ತಲೆಗೆ ಹೋಡೆದು ಭಾರಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

No comments: