POLICE BHAVAN KALABURAGI

POLICE BHAVAN KALABURAGI

29 September 2013

ಮಾಂಗಲ್ಯ ಸರ ಕಿತ್ತುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಸುರೇಖಾ ಗಂಡ ವಿಜಯಕುಮಾರ ಸೂನಕೌಡೆ ಸಾಃ ಮನೆ ನಂ. 2-834/5, ಭಾಗ್ಯ ನಿವಾಸ ಭರತ ನಗರ ತಾಂಡ ಗುಲಬರ್ಗಾ ಇವರು ಠಾಣೆಗೆ ದಿನಾಂಕ 28-09-2013 ರಂದು 02:00 ಪಿ.ಎಂ. ಸುಮಾರಿಗೆ ಆಕೆಯ ನೆಗಣೀ ಅನಿತಾ ಇಬ್ಬರೂ ಕೂಡಿಕೊಂಡು ತಮ್ಮ ಮನೆಯಲ್ಲಿಕೆಲಸ ಮಾಡುವ ಗೌಸಿಯಾ ಇವಳ ಮಗಳ ಲಗ್ನಗೋಸ್ಕರ ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ಅಜೀಜ್ ಮಿಯಾಂ ಇವರ ಮನೆಯ ಎದುರುಗಡೆ ಕಚ್ಚಾ ರೋಡಿನ ಮೇಲೆ ಫಿರ್ಯಾದಿದಾರಳ ಎದುರುಗಡೆಯಿಂದ ಒಂದು ಎಫ್.ಜೆಡ್ ಮೋಟಾರ ಸೈಕಲ್ ಮೇಲೆ 02 ಜನರು ಬಂದವರೇ ಮೋಟಾರ ಸೈಕಲ ಹಿಂದುಗಡೆ ಕುಳಿತುಕೊಂಡವನು ಫಿರ್ಯಾದಿದಾರಳ ಕೊರಳಿಗೆ ಕೈ ಹಾಕಿ ಕೊರಳ್ಳಿದ್ದ 04 ಗುಂಡು ಮತ್ತು 02 ತಾಳಿ ಕರಿಮಣಿ ಸಮೇತ ಒಟ್ಟು 5.1/2 ತೊಲೆ ಬಂಗಾರದ ಮಂಗಳಸೂತ್ರ ಅಃಕಿಃ 1,50,000/- ರೂ. ಬೆಲೆ ಬಾಳುವುದನ್ನು ಜಬರದಸ್ತಿಯಿಂದ ಕಿತ್ತುಕೊಂಡು ಸೇಡಂ ರೋಡಿನ ಕಡೆಗೆ ಓಡಿ ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: