POLICE BHAVAN KALABURAGI

POLICE BHAVAN KALABURAGI

21 October 2012

GULBARGA DISTRICT REPORTED CRIME


ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸರಕಾರಕ್ಕೆ ವಂಚನೆ ಮಾಡಿದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ:20/10/2012 ರಂದು ಸಾಯಂಕಾಲ 6-00 ಗಂಟೆಗೆ ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿರ್ದೇನಾಲಯ ಗುಲಬರ್ಗಾರವರು ಮಹಾದೇವಪ್ಪ ತಂದೆ ವೀರಯ್ಯಾ ಮಠಪತಿ ಉಪನ್ಯಾಸಕರು ಉಡಚಣ ಕಾಲೇಜ ತಾ|| ಅಫಜಲಪೂರ ಜಿ|| ಗುಲಬರ್ಗಾ ಇವರು ಮೂಲತಃ ಲಿಂಗಾಯತ ಜಂಗಮ ಜಾತಿಯವನಿದ್ದು, ದಿನಾಂಕ:09-04-1990 ರಂದು ಪರಿಶಿಷ್ಟ ಜಾತಿಯ ಬೇಡ ಜಂಗಮ ಜಾತಿಯನ್ನು ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಇಂಗ್ಲೀಷ ಉಪನ್ಯಾಸಕ ಅಂತ ಹುದ್ದೆಯನ್ನು ನೇಮಕಾತಿ ಹೊಂದಿ ಪರಿಶಿಷ್ಟ ಜಾತಿ ಯವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿರುತ್ತಾರೆ, ಸದರಿಯವರ ಮೇಲೆ ದೂರು ದಾಖಲಿಸಲು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 111/2012 ಕಲಂ, 198, 420 ಐಪಿಸಿ ಮತ್ತು  3 (1) (9) ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989 ನೇದ್ದರ ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು, ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಪಿರ್ಯಾದಿದಾದರಿಗೆ ಒಪ್ಪಿಸಲಾಗಿದೆ. 

No comments: