POLICE BHAVAN KALABURAGI

POLICE BHAVAN KALABURAGI

01 September 2012

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ಮಹದೇವಿ ಗಂಡ ವಿಟ್ಠಲ್ ವಾಲಿಕಾರ್ ಸಾ || ಬೋರಬಾಯಿ ನಗರ ಬ್ರಹ್ಮಪುರ ಗುಲಬರ್ಗಾರವರು ನನ್ನ ಮಗ ವಿಕ್ರಮ ಈತನೊಂದಿಗೆ ನಮ್ಮ  ಬಡಾವಣೆಯ ಪ್ರದೀಪ ಭಾವೆ ಈತನೊಂದಿಗೆ ಕಳೆದ ವರ್ಷ ಬಾಯಿ ಮಾತಿನ ತಕರಾರು ಆಗಿದ್ದು, ಅದೇ ವೈಶಮ್ಯದಿಂದ ಪ್ರದೀಪ ಈತನು ತನ್ನ ಮಗನಿಗೆ ಆಗಾಗ್ಗೆ ಓರೆ ಗಣ್ಣಿನಿಂದ ನೋಡುತ್ತಾ ಹೊರಟಿದ್ದು, ಈ ವಿಷಯ ನನ್ನ ಮಗ ವಿಕ್ರಮ ಈತನು ನನಗೆ ಹೇಳುತ್ತಿದ್ದನು. ದಿನಾಂಕ 30-08-2012 ರಂದು ಸದರಿ ನನ್ನ ಮಗ ರಾತ್ರಿ ಮನೆಯಲ್ಲಿ ಊಟ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದು, ಮರಳಿ ಮನೆಗೆ ಬರದೇ ಇದ್ದುದ್ದರಿಂದ, ಅವಾಗ ನಾನು ಆತನ ಗೆಳೆಯರ ಜೊತೆಯಲ್ಲಿ ಮಾತನಾಡುತ್ತಿರಬಹುದು ಅಂತ ಭಾವಿಸಿ ಮಲಗಿಕೊಂಡಿದ್ದು, ಇಂದು ದಿನಾಂಕ 31-08-2012 ರಂದು 2 ಎ.ಎಮ್ ಕ್ಕೆ ಸದರಿ ಪ್ರದೀಪ ಭಾವೆ ಈತನು ನಮ್ಮ ಮನೆಗೆ ಬಂದು ಮನೆಯ ಬಾಗಿಲು ಬಡೆದು ಎಬ್ಬಿಸಿದ್ದು, ನಾನು ಮತ್ತು ನನ್ನ ಹಿರಿಯ ಮಗ ವಿಜಯಕುಮಾರ ಇಬ್ಬರು ಬಾಗಿಲು ತೆರೆದಾಗ, ಪ್ರದೀಪ ಭಾವೆ ಈತನು ನಿನ್ನ ಮಗ ವಿಕ್ರಮನಿಗೆ ಹೊಡೆ, ಬಡೆ ಮಾಡಿ ಬ್ರಹ್ಮಪೂರ ಬಡಾವಣೆಯ ಸಮತಾ ಕಾಲೋನಿಯ ನೀರಿನ ಟಾಕಿ ಹತ್ತಿರ ಕಂಟಿಯಲ್ಲಿ ಬಿಸಾಕಿರುತ್ತೇವೆ ಅಂತ ಹೇಳಿ ಓಡಿ ಹೋದನು. ನಾನು ಮತ್ತು ನನ್ನ ಹಿರಿಯ ಮಗ ಇಬ್ಬರು ನೋಡಲು, ನನ್ನ ಮಗ ನರಳಾಡುತ್ತಾ ಕಂಟಿಯಲ್ಲಿ ಬಿದ್ದು, ಆತನಿಗೆ ಎಬ್ಬಿಸಿ ಕೇಳಲು ಆತನು, ಸದರಿ ಪ್ರದೀಪ ಭಾವೆ ಈತನು ಹಳೆಯ ವೈಮನಸ್ಸಿನಿಂದ ತನ್ನ ಜೊತೆಯಲ್ಲಿ ತನ್ನ ತಂದೆ ತಾಯಿ ಹಾಗು ಇನ್ನು 5 ಜನರೊಂದಿಗೆ ತನ್ನ ಕೈಯಲ್ಲಿ ಕಟ್ಟಿಗೆ ಹಾಗು ಕಬ್ಬಿಣದ ರಾಡ ಹಿಡಿದುಕೊಂಡು ಬಂದು, ತಾನು ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಪ್ರದೀಪ ಈತನು ನನ್ನ ಎದೆಯ ಮೇಲಿನ ಅಂಗಿ ಹಿಡಿದು, ಈ ಬಡಾವಣೆಯಲ್ಲಿ ನಿನ್ನ ದಾದಾಗಿರಿ ಬಹಳ ಆಗಿದೆ, ಈಗ ನಿನ್ನ ಸುದ್ದಿ ಏನು ಅಂತ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡದಿಂದ ಕಾಳುಗಳಿಗೆ ಹೊಡೆದು ಭಾರಿ ಗಾಯ ಭಾರಿ ಮತ್ತು ಗುಪ್ತಗಾಯಪಡಿಸಿರುತ್ತಾನೆ. ಚನ್ನು,ಅಮರ, ವೈಜನಾಥ ಮತ್ತು ಸರೋಜಾ @ ಸರು ಹೊಡೆಬಡೆ ಮಾಡಿ ಹಾಗು ಕಾಲಿನಿಂದ ಒದ್ದಿರುತ್ತಾರೆ ಅಂತ ತನ್ನ ಮಗ ತಿಳಿಸಿದ್ದು, ನನ್ನ ಮಗನಿಗೆ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 63/12 ಕಲಂ 143, 147, 148, 341, 323, 324, 307, 504, 109 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: