POLICE BHAVAN KALABURAGI

POLICE BHAVAN KALABURAGI

07 July 2012

Gulbarga District Reported Crimes

20 ವರ್ಷದಿಂದ ತಲೆಮರಿಸಿಕೊಂಡ ಕೊಲೆಗಾರನ ಬಂಧನ :

 ಅಶೋಕ ನಗರ ಠಾಣೆ : 1992 ನೇ ಸಾಲಿನಲ್ಲಿ  ಶ್ರೀಮತಿ ನಾಗಮ್ಮಾ ಗಂಡ ಕರೇಪ್ಪ ಚೌಡಾಪುರ ಸಾ: ದೇಸುಣಗಿ ಗ್ರಾಮ ಇವಳು ಗಂಡ ತೀರಿಕೊಂಡಿದ್ದರಿಂದ ಜೀವನೊಪಾಯಕ್ಕಾಗಿ ಗುಲಬರ್ಗಾದ ಶಕ್ತಿ ನಗರ ಬಡಾವಣೆಯಲ್ಲಿ ವಾಸವಾಗಿರುವಾಗ  ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಸಾ: ದೇಸುಣಗಿ ಎನ್ನುವನು ಅನೈತಿಕ ಸಂಬಂಧ ಬೆಳಸಿ ನಾಗಮ್ಮಾಳ ಗಂಡನ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದು ಬರೆದು ಕೊಡಲಾರದಕ್ಕೆ ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಇತನು ದಿನಾಂಕ 15/03/1992 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಶಕ್ತಿ ನಗರ ಬಡಾವಣೆಯ ಬಾಡಿಗೆ ಮನೆಯಲ್ಲಿರುವಾಗ  ನಾಗಮ್ಮಾಳಿಗೆ ಕುಡಿಗೊಲಿನಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿದ್ದು ಗಾಯಗೊಂಡ ನಾಗಮ್ಮಾಳಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಮೃತ ಪಟ್ಟಿದ್ದರಿಂದ ಮೃತಳ ಮಗಳಾದ ಕುಮಾರಿ: ಸಿದ್ದಮ್ಮಾ ತಂದೆ ಕರೇಪ್ಪ ಚೌಡಾಪುರ ಸಾ: ದೇಸುಣಗಿ ಹಾ.ವ. ಶಕ್ತಿ ನಗರ ಗುಲಬರ್ಗಾ ಇವಳು ನೀಡಿದ ಪಿರ್ಯಾಧಿಯ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 41/1992 ಕಲಂ. 302 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಆರೋಪಿ ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಸಾ: ದೇಸುಣಗಿ ಇತನಿಗೆ ದಿನಾಂಕ 10/04/1992 ರಂದು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಆರೋಪಿತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 20 ವರ್ಷಗಳಿಂದ ತಲೆಮರಿಸಿಕೊಂಡಿದ್ದರಿಂದ ಪ್ರಕರಣ ಎಲ್.ಪಿ.ಆರ್ ಆಗಿದ್ದು ಇರುತ್ತದೆ.   ತಲೆಮರಿಸಿಕೊಂಡಿದ್ದ ಕೊಲೆ ಆರೋಪಿಯ ಪತ್ತೆಗಾಗಿ ಶ್ರೀ ಟಿ.ಹೆಚ್. ಕರೀಕಲ್  ಪಿ.ಐ ಅಶೋಕ ನಗರ ರವರು ಶಿವಪುತ್ರಪ್ಪ ಎ.ಎಸ್.ಐ, ಪರಶುರಾಮ ಹೆಚ್.ಸಿ. 87, ಯೊಗೇಂದ್ರ ಪಿ.ಸಿ. 1258, ಉಮೇಶ ಪಿ.ಸಿ. 30, ರವರನ್ನು ಒಳಗೊಂಡ ತಂಡವನ್ನು ರಚನೆ ಮಾಡಿದ್ದು ಈ ತಂಡವು ಸುಮಾರು 10-15 ದಿವಸಗಳಿಂದ ಸುಮಾರು 20 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಕೊಲೆ ಆರೋಪಿ ಗುರುಸಿದ್ದಪ್ಪ ತಂದೆ ಕಲ್ಲಪ್ಪ ಮೋರಟಗಿ ಸಾ: ದೇಸುಣಗಿ ತಾ: ಸಿಂಧಗಿ ಜಿ: ಬಿಜಾಪುರ ಇತನ ಇರುವಿಕೆಯ ಬಗ್ಗೆ ಸಮರ್ಗ ಮಾಹಿತಿ ಕಲೆಹಾಕಿ ಮಾಹಾರಾಷ್ಟ್ರದ ಸಾತಾರ, ಪುಣೆ, ಮುಂಬೈಯಿಯಲ್ಲಿ ವಾಸ ಮಾಡಿ ಬಿಜಾಪುರ ಜಿಲ್ಲೆಯ ಅರಳಗುಂಡಗಿ ಗ್ರಾಮಕ್ಕೆ ಬಂದಿರುವ ಬಗ್ಗೆ ಮಾಹಿತಿ ಕಲೆಹಾಕಿ  ದಿನಾಂಕ 29/06/2012 ರಂದು ಈ ತಂಡವು ಸುಮಾರು 20 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಕುಖ್ಯಾತ ಕೊಲೆಗಾರನಿಗೆ ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರ ಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ. ಕೊಲೆಗಾರನ ಪತ್ತೆ ಹಚ್ಚಿದ ಸಿಬ್ಬಂದಿಯವರ ಕಾರ್ಯವನ್ನು ಶ್ರೀ ಭೂಷಣ ಬೋರಸೆ ಎ.ಎಸ್.ಪಿ ಗುಲಬರ್ಗಾ ರವರು ಶ್ಲ್ಯಾಘನೆ ಮಾಡಿರುತ್ತಾರೆ.   ಮತ್ತು ಮಾನ್ಯ ಪ್ರವೀಣ ಪವಾರ ಎಸ್.ಪಿ ಗುಲಬರ್ಗಾ ರವರು ಎಲ್.ಪಿ.ಆರ್  ಪ್ರಕರಣ ಪತ್ತೆ ಹಚ್ಚಿದ ಸಿಬ್ಬಂದಿಯವರಿಗೆ  ಸೂಕ್ತ ಬಹುಮಾನ ಘೋಸಿಶಿರುತ್ತಾರೆ. 

No comments: