POLICE BHAVAN KALABURAGI

POLICE BHAVAN KALABURAGI

30 June 2012

GULBARGA DIST REPORTED CRIME

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ರಹೇಮಾನ ಪಟೇಲ ತಂದೆ ಬಾಬಾ  ಸಾ:ಅಂಕಲಗಾ ತಾ||ಜೇವರ್ಗಿ ಹಾ|\ವ|| ಸನಾ ಸ್ಕೂಲ ಹತ್ತಿರ ಎಕ್ಬಾಲ ಕಾಲೋನಿ   ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿಯ ತಮ್ಮನಾದ ಮಹಿಬೂಬ ಪಟೇಲ್ ಇತನು ದಿನಾಂಕ: 29-06-2012 ರಂದು ಇಬ್ಬರು ಕೂಡಿಕೊಂಡು ಉದನೂರ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಬಂದು ಉದನೂರ ಕ್ರಾಸ್ ಹೊಸ್ ಜೇವರ್ಗಿ ರೋಡ್ ಮಾಯಾ ವೈನ ಶಾಪ ಸಮೀಪ ಚಹಾ ಕುಡಿದು, ನಾನು ನನ್ನ ಮನೆಗೆ ಹೋಗಲು ಅಟೋರಿಕ್ಷಾ ಕಾಯುತ್ತಾ ನಿಂತಿದ್ದೆನು. ಮಹಿಬೂಬ ಪಟೇಲ ಇತನು ಸಹ ತನ್ನ ಮನೆಗೆ ಹೋಗುವ ಸಲುವಾಗಿ ಮಾಯಾ ವೈನ ಶಾಪ ಸಮೀಪದ ರೋಡ್ ದಾಟುತ್ತಿರುವಾಗ ರಾಷ್ಟ್ರಪತಿ ಸರ್ಕಲ್ ಕಡೆಯಿಂದ ಯಾವದೋ ಒಂದು ಅಟೋರಿಕ್ಷಾ ಚಾಲಕನು ತನ್ನ ಅಟೋವನ್ನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು  ಬಂದು ಮಹಿಬೂಬ ಪಟೇಲ ಇತನಿಗೆ ಡಿಕ್ಕಿ ಪಡಿಸಿ ಅಟೋ ಸಮೇತ ಓಡಿ ಹೋದನು. ಮಹಿಬೂಬ ಪಟೇಲ ಇತನಿಗೆ ನೋಡಲಾಗಿ ಎಡಗಡೆ ಮೂಗಿಗೆ, ಮತ್ತು ಮೂಗಿನ ಪಕ್ಕದಲ್ಲಿ ಭಾರಿ ರಕ್ತಗಾಯ ಎಡಗೈ ಮುಂಗೈಗೆ ಎಡಗಾಲು ಹಿಮ್ಮಡಿ ಹತ್ತಿರ ತರಚಿದ ಗಾಯಹೊಂದಿದ್ದನು. ಇತನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ 108 ಅಂಬುಲೆನ್ಸ ವಾಹನದಲ್ಲಿ ಕರೆದುಕೊಂಡು ಬರುತ್ತಿರುವಾಗ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ . ಡಿಕ್ಕಿ ಪಡಿಸಿದ ಅಟೋ ಚಾಲಕನ ವಿರುದ್ದು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: