POLICE BHAVAN KALABURAGI

POLICE BHAVAN KALABURAGI

16 May 2012

GULBARGA DIST REPORTED CRIMES


ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:15/5/12 ರಂದು ಮಧ್ಯಾಹ್ನ ಸುಮಾರಿಗೆ ಉದನೂರ ಸೀಮೆಯ  ಸಂಜು ಉದನೂರ  ಹೊಲದಲ್ಲಿ ಒಂದು ಬೇವಿನ ಗಿಡದ ಕೆಳಗಡೆ ಹಣ ಪಣಕ್ಕೆ ಜೂಜಾಟ ಆಡುತ್ತಿದ್ದಾರೆ ಅಂತಾ ಭಾತ್ಮಿ ಬಂದಿದ್ದರಿಂದ ಪಿ.ಎಸ.ಐ ಆನಂದರಾವ ರವರು ಮತ್ತು ಸಿಬ್ಬಂದಿಯವರು ಕುಡಿಕೊಂಡು ದಾಳಿ ಮಾಡಿ ವಿರೇಶ ತಂದೆ ಮಹಾರುದ್ರ ಬಡಿಗೇರ ಸಾ|| ಸಂತೋಷ ಕಾಲೋನಿ, ಭಿಮರಾಯ ತಂದೆ ಸಾಬಣ್ಣ ತಳವಾರ ಸಾ|| ಬಿದ್ದಪೂರ ಕಾಲೋನಿ , ಆದರ್ಶ ತಂದೆ ಮದನರಾವ ಪಾಟೀಲ ಸಾ|| ಸಂತೋಷ ಕಾಲೋನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು  ಜೂಜಾಟಕ್ಕೆ ಬಳಸಿದ ನಗದು ಹಣ 4260 /- ರೂ, ಇಸ್ಪೇಟ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 152/2012 ಕಲಂ 87 ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ರಾಜು ತಂದೆ ಗೋಪಾಲ ಜಾಧವ ಸಾ: ಎಕಲೂರ ತಾಂಡಾ ಬಸವ ಕಲ್ಯಾಣ ಜಿ: ಬೀದರ ಹಾ:ವ: ಓಂ ನಗರ ಗುಲಬರ್ಗಾ ರವರು ನಮ್ಮ ತಂದೆಯವರಾದ ಗೋಪಾಲ ತಂದೆ ಲೋಕು ಜಾಧವ ಈತನು  ದೇವಿ ತಾಂಡಾದಲ್ಲಿ ತನ್ನ ಸಂಬಂಧಿಕರು ತೀರಿಕೊಂಡಿದ್ದರಿಂದ  ಅಂತಿಮ ಸಂಸ್ಕಾರಕ್ಕೆಂದು  ಟಿ.ವಿ.ಎಸ. ಸ್ಟಾರ ಸಿಟಿ  ನಂಬರ ಕೆಎ 33 ಜೆ  508  ಮೇಲೆ ಹೋಗಿ ಅಂತಿಮ ಸಂಸ್ಕಾರ ಮುಗಿಸಿಕೊಂಡು  ದೇವಿ ತಾಂಡಾದಿಂದ  ಮರಳಿ ಗುಲಬರ್ಗಾಕ್ಕೆ ಬರುತ್ತಿರುವಾಗ ದಿನಾಂಕ: 15-05-12 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಅವರಾದ (ಬಿ) ಸೀಮೆಯ ಸ್ವಾಮಿ ಸಮರ್ಥ ಆಶ್ರಮ ಹತ್ತಿರ ಇಳುಕಲ್ಲನಲ್ಲಿ  ಹೊರಟಾಗ ಎದುರುನಿಂದ ಯಾವುದೋ ವಾಹನ ಬಂದಿದ್ದರಿಂದ ತನ್ನ ಮೋಟಾರ ಸೈಕಲ ಬದಿಗೆ ತೆಗೆದುಕೊಳ್ಳಲು ಹೋಗಿ ನಿಯಂತ್ರಣ ತಪ್ಪಿ  ರೋಡ ಬದಿಗೆ ಇರುವ ಗೂಟದ ಕಲ್ಲಿಗೆ  ಗುದ್ದಿದ್ದರಿಂದ ಮುಖಕ್ಕೆ, ಮೆಲಕಿಗೆ ಭಾರಿ ರಕ್ತ ಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 153/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: