POLICE BHAVAN KALABURAGI

POLICE BHAVAN KALABURAGI

21 March 2012

GULBARGA DIST REPORTED CRIMES

ದರೋಡೆ ಪ್ರಕರಣ:
ರಾಘವೇಂದ್ರ ನಗರ ಠಾಣೆ:
ಶ್ರೀಮತಿ ದಾನೇಶ್ವರಿ ಗಂಡ ವಿಶ್ವನಾಥ ಹಿರೇಮಠ ವ 22 ವರ್ಷ ಸಾ ಮಹಾಲಿಂಗಪೂರ, ತಾ ಮುಧೋಳ, ಜಿ ಬಾಗಲಕೋಟ, ಹಾ ವ ಸಿದ್ರಾಮೇಶ್ವರ ನಗರ ಅಳಂದ ರೋಡ ಗುಲಬರ್ಗಾರವರು ನಾನು ಮತ್ತು ದೊಡ್ಡಮ್ಮ ಉಮಾದೇವಿ, ಹಾಗು ಸೋದರತ್ತೆ ರೇಣುಕಾ ಮೂವರು ಒಟ್ಟಿಗೆ ಕೂಡಿಕೊಂಡು ಆಸ್ಪತ್ರೆಗೆ ದಿನಾಂಕ 20-03-2012 ರಂದು ಸಾಯಂಕಾಲ ಸಂಜನಾ ಆಸ್ಪತ್ರೆಗೆ ತೋರಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ರಾತ್ರಿ 7-30 ಗಂಟೆಯ ರಾಜ್ಯ ಮಹಿಳಾ ನಿಲಯಕ್ಕೆ ಹೋಗುವ ಮುಖ್ಯ ರಸ್ತೆಯಿಂದ ರೋಡ್ ಕ್ರಾಸ್ ಹತ್ತಿರ ಹೊರಟಾಗ ಒಬ್ಬ ಅಪರಿಚಿತ ಮೊಟಾರ್ ಸೈಕಲ್ ಸವಾರನು ಎದುರಿನಿಂದ ಬಂದವನೇ, ಮೊಟಾರ್ ಸೈಕಲ್ ಹಿಂದೆ ಕುಳಿತ ಇನ್ನೊಬ್ಬ ವ್ಯಕ್ತಿಯು ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿದ್ದ 31 ಗ್ರಾಂ ಬಂಗಾರದ ಮಂಗಳ ಸೂತ್ರ ಅ ಕಿ 85,000/-ರೂ ಬೆಲೆ ಬಾಳುವದನ್ನು ಕಿತ್ತುಕೊಂಡು ಹೋಗಿರುತ್ತಾರೆ. ಅವರು ವಯಸ್ಸು ಅಂದಾಜು 20 ರಿಂದ 25 ವರ್ಷಗಳಿರುತ್ತವೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 24/12 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಸಿವಿನಿಂದ ಮೃತ ಪಟ್ಟ ಅಪರಿಚಿತ ವ್ಯಕ್ತಿ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀ ಗಿರಿಧರ ತಂದೆ ಸಾಯಿಬಣ್ಣಾ ಶಹಾಬಾದ ಸಾ: ಹರಳಯ್ಯಾ ನಗರ ಶಹಾಬಾದ ರವರು ನಾನು ಮತ್ತು ನಮ್ಮ ತಾಯಿ ಭಾಯಮ್ಮಾ ಹಾಗೂ ಬಸಮ್ಮಾ ಕೂಡಿ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಮಿಲತ ನಗರ ದಿಂದ ಒಬ್ಬ ಅಪರಿಚಿತ ವ್ಯಕ್ತಿಯು ಸರ್ಕಾರಿ ಜಾಲಿ ಗಿಡದ ತಪ್ಪಲು ತಿನ್ನುತ್ತಾ ನಮ್ಮ ಮನೆಯ ಎದರುಗಡೆ ಇರುವ ಸರ್ಕಾರಿ ಜಾಲಿ ಗಿಡದ ಹತ್ತಿರ ಬಿದ್ದನ್ನು . ಬಿದ್ದ ನಂತರ ಸದರಿ ವ್ಯಕ್ತಿಯು 2-3 ಸಲ ಬಿಕ್ಕಲಿಕೆ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಸದರಿ ವ್ಯಕ್ತಿಯು ಅಪರಿಚತ ವ್ಯಕ್ತಿಯಾಗಿದ್ದು ವಯಸ್ಸು ಅಂದಾಜು 28 ರಿಂದ 30 ವರ್ಷ ಇರಬಹುದು. ಸದರಿಯವನು ಹಸಿವಿನಿಂದ ಬಳಲಿ ಮೃತ ಪಟ್ಟಿರಬಹುದು ಅಂತಾ ಗೀರಿದರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ: 5/2012 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.

No comments: