POLICE BHAVAN KALABURAGI

POLICE BHAVAN KALABURAGI

21 February 2012

GULBARGA DIST REPORTED CRIME

ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಸಿದ್ರಾಮಪ್ಪ ತಂದೆ ಮಲ್ಲೇಶಪ್ಪ ಬನಶೆಟ್ಟಿ ಸಾ: ಬಸವ ನಗರ ಸೇಡಂರವರು ನಾನು ಮತ್ತು ಹೆಂಡತಿ ಗೋದಾವರಿ, ಪರಿಚಯಸ್ಥ ವಿಜಯಕುಮಾರ ಮೊಲಿಮನಿ ಇವರು ಆಳಂದ ತಾಲೂಕಿನ ನಿರುಗಡಿ ಮುತ್ಯಾನ ಜಾತೆ ಇದ್ದ ಪ್ರಯುಕ್ತ ದಿಃ 20-02-12 ರಂದು ಕೆಎ 28 ಎಂ 2548 ನೇದ್ದರಲ್ಲಿ ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಸೇಡಂದಿಂದ ಹೊರಟಿದ್ದು, ಸಂಜೆ 5-30 ಗಂಟೆ ಸುಮಾರಿಗೆ ಆಳಂದ ಚೆಕ್ಕ ಪೋಸ್ಟ ಹತ್ತಿರ ಬಂದಾಗ ಬಸ್ಸಿಗಾಗಿ ಕಾಯುತ್ತಾ ನಿಂತ ಶರಣಪ್ಪ ಹೂಗಾರ ಮತ್ತು ಆತನ ಹೆಂಡತಿ ಗುಂಡಮ್ಮಾ ಇನ್ನೊಬ್ಬ ವ್ಯಕ್ತಿ ಹೆಸರು ಗೊತ್ತಿಲ್ಲಾ ಕಲ್ಲಹಂಗರಗಾ ಗ್ರಾಮದವರು ಬರುತ್ತೇವೆ ಎಂದು ಹೇಳಿದ್ದರಿಂದ ಅವರನ್ನು ಕೂಡಿಸಿಕೊಂಡು ಆಳಂದ ಕಡೆ ಹೊರಟಿದ್ದು, ಪಟ್ಟಣ ಸಿಮಾಂತರ ಭೀಮಶ್ಯಾ ಬಿರಾದಾರ ಹೊಲದ ಎದುರು ರೋಡಿನ ಮೇಲೆ ಚಾಲಕ ಪ್ರಕಾಶ ಇತನು ವಾಹನವನ್ನು ಅತಿವೇಗದಿಂದ ನಡೆಯಿಸಿ ಹಾಲಿನ ಟಾಟಾ ಎಸಿಇ ಗಾಡಿ ಕೆಎ 49 2260 ನೇದ್ದಕ್ಕೆ ಬಲಭಾಗದಿಂದ ಓವರ ಟೇಕ ಮಾಡುತ್ತಿರುವಾಗ ಟಾಟಾ ಎಸಿಇ ಗಾಡಿ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬಲಭಾಗದ ರೋಡಿನ ಬದಿಗೆ ಪಲ್ಟಿಯಾಗಿ ಬಿದ್ದು, ನನಗೆ ಮತ್ತು ನನ್ನ ಹೆಂಡತಿ ಗೋದಾವರಿ, ಶರಣಪ್ಪ ಹೂಗಾರ, ಗುಂಡಮ್ಮಾ ಹೂಗಾರ, ವಿಜಯಕುಮಾರ ಮೊಲಿಮನಿ ಇನ್ನೊಬ್ಬ ವ್ಯಕ್ತಿ ಹೆಸರು ಗೊತ್ತಿಲ್ಲಾ ಚಾಲಕ ಪ್ರಕಾಶ ಇವರಿಗೆ ಮೈಮೇಲೆ ಅಲ್ಲಿಲ್ಲಿ ರಕ್ತಗಾಯ ಮತ್ತು ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 58/2012 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: