POLICE BHAVAN KALABURAGI

POLICE BHAVAN KALABURAGI

13 January 2012

GULBARGA DIST REPORTED CRIMES

ವರದಕ್ಷಿಣೆ ಕಿರುಕುಳದಿಂದ ಗೃಹಿಣೆಯ ಮರಣ :
ಮಹಿಳಾ ಪೋಲಿಸ ಠಾಣೆ.
ಶ್ರೀಮತಿ ಲಕ್ಷ್ಮಿಭಾಯಿ ಗಂಡ ಶಾಂತಪ್ಪ ಬಿರಾದಾರ ಸಾ: ಕದಲಾಬಾದ ತಾ: ಬಾಲ್ಕಿ ಜಿಲ್ಲಾ: ಬೀದರ ರವರು ನನ್ನ ಮಗಳಾದ ಬಸಮ್ಮ ಇವಳಿಗೆ ದಿನಾಂಕ: 10.07.2011 ರಂದು ಗುಲಬರ್ಗಾದ ಬಸವರಾಜ ಸಾ: ದುಬೈ ಕಾಲೋನಿ ಗುಲಬರ್ಗಾ ಇತನೊಂದಿಗೆ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 1 ಲಕ್ಷ ರೂ. ಮತ್ತು 4 ತೊಲೆ ಬಂಗಾರ ನೀಡಲಾಗಿದೆ. ಮದುವೆಯಾದಾಗಿನಿಂದ ಮೃತಳಿಗೆ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಾ ತವರು ಮನೆಯಿಂದ ಇನ್ನೂ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಬಸಮ್ಮನ ಗಂಡ ಮಾವ. ಅತ್ತೆ , ಮೈದುನ, ನಾದಿನಿರವರೆಲ್ಲರೂ ಸೇರಿ ದಿನಾಂಕ: 12.01.2012 ರಂದು ಸಾಯಂಕಾಲ ಮೈಮೇಲೆ ಸೀಮೇ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರಿಂದ ಸುಟ್ಟಗಾಯಗಳಾಗಿ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದಾಗ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 05/12 ಕಲಂ. 498 (ಎ),302, 304(ಬಿ), ಸಂ. 149 ಐ.ಪಿ.ಸಿ & 3, 4, ಡಿ.ಪಿ.ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಅಪಘಾತ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ಶರಣಬಸಪ್ಪ ತಂದೆ ಸಿದ್ರಾಮಪ್ಪ ಬಂಡೆ ಇವರ ಕರೆಂಟ ಮೋಟರ ದುರಸ್ತಿ ಮಾಡುವದಿದೆ ಅಂತಾ ಹೇಳಿದರಿಂದ ನಮ್ಮೂರ ವೆಂಕಟೇಶ @ ವೇಂಕಟಗಿರಿ ತಂದೆ ಬಸಣ್ಣ ಆಲೂರೆ ಈತನು ನಮ್ಮ ಹೊಲಕ್ಕೆ ಹೋಗಲು ಆತನ ಗೆಳೆಯ ಯುವರಾಜ ತಂದೆ ಶಿವಲಿಂಗಪ್ಪ ಖಾರಬಾರಿ ಸಾ:ಬೆಳಂ ಇವನ ಹೊಸದಾದ ಹೋಂಡಾ ಸ್ವಸ್ಟಾರ್ ಮೋಟರ ಸೈಕಲ್ ನೊಂದಣಿ ಆಗಿರುವದಿಲ್ಲ [ಪಾಸಿಂಗ ಆಗದ] ದ್ವಿಚಕ್ರ ವಾಹನ ಚೆಸಿ ನಂ ಎಮ್.ಇ. 4.ಜೆಸಿ 475.ಕೆ.ಬಿ. 7018483.ಇಂಜನ್ ನಂ ಜೆ.ಜಿ. 47ಇ 206079 ನೇದ್ದರ ಮೇಲೆ ಹೊಲಕ್ಕೆ ಹೋಗುವಾಗ ವೇಂಕಟೇಶ ಇತನು ಮೋಟಾರ ಸೈಕಲ್ ಅತೀವೇಗವಾಗಿ ಚಲಾಯಿಸುವಾಗ ಹಿಂದೆ ನಾನು ಸಾವಕಾಶವಾಗಿ ನಡೆಸು ಎಂದು ಹೇಳಿದರು ಕೇಳದೆ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಖಜೂರಿ –ಉಮರ್ಗಾ ರೋಡಿನ ಕೆ.ಇ.ಬಿ. ಖಜಾನಿಯ ಹತ್ತಿರ ರೋಡಿನ ತಿರುವಿನಲ್ಲಿ ಒಮ್ಮಲೇ ಸ್ಕಿಡ ಮಾಡಿದಾಗ ಇಬ್ಬರು ರೋಡಿನ ಮೇಲೆ ಬಿದ್ದು ರಕ್ತಗಾಯ ಮಾಡಿಕೊಂಡಿರುತ್ತಾರೆ. ಅಂತಾ ಶ್ರೀ ಶರಣಬಸಪ್ಪ ತಂದೆ ಕರಬಸಪ್ಪ @ ಸಂಗಪ್ಪ ಪಾಟೀಲ ಸಾ: ಖಜೂರಿ ತಾ: ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: